ETV Bharat / state

ಹಂಪಿಯ ಐತಿಹಾಸಿಕ ಕಲ್ಲಿನ ರಥದ ಸಂರಕ್ಷಣೆಗೆ ಸರಪಳಿ ಅಳವಡಿಕೆ

author img

By

Published : Dec 6, 2020, 7:52 PM IST

ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಮುಂಭಾಗದಲ್ಲಿರುವ ಐತಿಹಾಸಿಕ ಕಲ್ಲಿನ ರಥವನ್ನು ಸಂರಕ್ಷಿಸಲು ಭಾರತೀಯ ಪುರಾತತ್ವ ಇಲಾಖೆ ರಥದ ಸುತ್ತಲೂ ಸರಪಳಿ ಅಳವಡಿಸಿದೆ.

hampi stone chariot
ಹಂಪಿಯ ಕಲ್ಲಿನ ರಥ

ಹೊಸಪೇಟೆ: ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಮುಂಭಾಗದ ವಿಶ್ವ ಪ್ರಸಿದ್ಧ ಕಲ್ಲಿನ ರಥದ ಸುತ್ತಲೂ ಸಂರಕ್ಷಣಾ ಸರಪಳಿಯನ್ನು ಅಳವಡಿಸಲಾಗಿದೆ.

ಇದಕ್ಕೂ ಮುನ್ನ ರಥವನ್ನು ಮುಟ್ಟದಂತೆ ಸುತ್ತಲೂ ಗೆರೆಗಳನ್ನು ಎಳೆಯಲಾಗಿತ್ತು. ಆದರೆ ಪ್ರವಾಸಿಗರು ಗೆರೆ ದಾಟಿ ಸ್ಮಾರಕವನ್ನು ಮುಟ್ಟುತ್ತಿದ್ದರು. ಹೀಗಾಗಿ ಇಲಾಖೆ ಈ ವ್ಯವಸ್ಥೆ ಮಾಡಿದೆ.

ಓದಿ: ಗತಕಾಲದ ಸಂಬಂಧ ಕಳೆದುಕೊಳ್ಳಲಿದೆ 'ಕಂಪ್ಲಿ': ಬಳ್ಳಾರಿ ಜಿಲ್ಲೆ ವಿಭಜನೆಯಿಂದ ದೂರವಾಯ್ತು 'ವಿಜಯನಗರ'ದ ನಂಟು

ಈ ಬಗ್ಗೆ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಅಧೀಕ್ಷಕ ಕಾಳಿಮುತ್ತು ಪ್ರತಿಕ್ರಿಯಿಸಿ, 'ಇಲ್ಲಿನ ಕಲ್ಲಿನ ಸ್ಮಾರಕವನ್ನು ಪ್ರವಾಸಿಗರು ಮುಟ್ಟುತ್ತಿದ್ದರು. ಅಲ್ಲದೇ, ಸ್ಮಾರಕದ ಮೇಲೆ ಕುಳಿತುಕೊಂಡು‌ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದು, ಇದರಿಂದ ಸ್ಮಾರಕಕ್ಕೆ ಹಾನಿಯಾಗುವ ಸಂಭವವಿತ್ತು.‌ ಈ ಚಟುವಟಿಕೆಗಳನ್ನು ಈಗ ತಪ್ಪಿಸಲಾಗಿದೆ. ಮುಂದೆಯೂ ಸ್ಮಾರಕಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ಹೊಸಪೇಟೆ: ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಮುಂಭಾಗದ ವಿಶ್ವ ಪ್ರಸಿದ್ಧ ಕಲ್ಲಿನ ರಥದ ಸುತ್ತಲೂ ಸಂರಕ್ಷಣಾ ಸರಪಳಿಯನ್ನು ಅಳವಡಿಸಲಾಗಿದೆ.

ಇದಕ್ಕೂ ಮುನ್ನ ರಥವನ್ನು ಮುಟ್ಟದಂತೆ ಸುತ್ತಲೂ ಗೆರೆಗಳನ್ನು ಎಳೆಯಲಾಗಿತ್ತು. ಆದರೆ ಪ್ರವಾಸಿಗರು ಗೆರೆ ದಾಟಿ ಸ್ಮಾರಕವನ್ನು ಮುಟ್ಟುತ್ತಿದ್ದರು. ಹೀಗಾಗಿ ಇಲಾಖೆ ಈ ವ್ಯವಸ್ಥೆ ಮಾಡಿದೆ.

ಓದಿ: ಗತಕಾಲದ ಸಂಬಂಧ ಕಳೆದುಕೊಳ್ಳಲಿದೆ 'ಕಂಪ್ಲಿ': ಬಳ್ಳಾರಿ ಜಿಲ್ಲೆ ವಿಭಜನೆಯಿಂದ ದೂರವಾಯ್ತು 'ವಿಜಯನಗರ'ದ ನಂಟು

ಈ ಬಗ್ಗೆ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಅಧೀಕ್ಷಕ ಕಾಳಿಮುತ್ತು ಪ್ರತಿಕ್ರಿಯಿಸಿ, 'ಇಲ್ಲಿನ ಕಲ್ಲಿನ ಸ್ಮಾರಕವನ್ನು ಪ್ರವಾಸಿಗರು ಮುಟ್ಟುತ್ತಿದ್ದರು. ಅಲ್ಲದೇ, ಸ್ಮಾರಕದ ಮೇಲೆ ಕುಳಿತುಕೊಂಡು‌ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದು, ಇದರಿಂದ ಸ್ಮಾರಕಕ್ಕೆ ಹಾನಿಯಾಗುವ ಸಂಭವವಿತ್ತು.‌ ಈ ಚಟುವಟಿಕೆಗಳನ್ನು ಈಗ ತಪ್ಪಿಸಲಾಗಿದೆ. ಮುಂದೆಯೂ ಸ್ಮಾರಕಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.