ETV Bharat / state

ಅಧಿಕಾರದಲ್ಲಿದ್ದಾಗ ಮಲಗುತ್ತಾರೆ, ಅಧಿಕಾರ ಕಳೆದುಕೊಂಡ ಮೇಲೆ ಅಳುತ್ತಾರೆ: ಕಟೀಲ್​​​

author img

By

Published : Nov 28, 2019, 5:06 PM IST

ನಗರದ ಚಿತ್ತವಾಡಿಯಲ್ಲಿ ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್, ಆನಂದ್​ ಸಿಂಗ್ ಪರವಾಗಿ ರೋಡ್ ಶೋ ನಡೆಸಿದ್ದಾರೆ.

Naveen kumar kateel
ನವೀನ್​ ಕುಮಾರ್​ ಕಟೀಲ್

ಹೊಸಪೇಟೆ: ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅಧಿಕಾರವನ್ನು ಬಿಟ್ಟು ಆಡಳಿತ ​ಪಕ್ಷಕ್ಕೆ ರಾಜೀನಾಮೆ ಕೊಟ್ಟ ಇತಿಹಾಸ ಇದ್ರೆ ಅದು ಆನಂದ್​ ಸಿಂಗ್​ ಮತ್ತು 17 ಶಾಸಕರದ್ದು. ಅದಕ್ಕಾಗಿ ಕಾರ್ಯಕರ್ತರು ಮತ್ತು ಹೊಸಪೇಟೆ ಜನರು ಆನಂದ್​ ಸಿಂಗ್​ ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಮನವಿ ಮಾಡಿಕೊಂಡರು.

ಆನಂದ್​ ಸಿಂಗ್​ ಪರವಾಗಿ ರೋಡ್​ ಶೋ ನಡೆಸಿದ ಕಟೀಲ್​

ನಗರದ ಚಿತ್ತವಾಡಿಯಲ್ಲಿ ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್, ಆನಂದ್​ ಸಿಂಗ್ ಪರವಾಗಿ ರೋಡ್ ಶೋ ನಡೆಸಿ, ಮಹಿಳಾ ಮೋರ್ಚಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧಿಕಾರವಿದ್ದಾಗ ನಮ್ಮ ನಾಯಕರು ನಿದ್ದೆ ಮಾಡುತ್ತಾರೆ. ಅಧಿಕಾರ ಕಳೆದುಕೊಂಡ ಮೇಲೆ ಜನರ ಮುಂದೆ ಕುಳಿತು ಕಣ್ಣೀರು ಹಾಕುತ್ತಾರೆ. ಇಂತಹ ನಾಯಕರು ಮತ್ತು ರಾಜಕೀಯ ಮುಖಂಡರು ನಮಗೆ ಬೇಕಾ ಎಂದು ಮಹಿಳಾ ಕಾರ್ಯಕರ್ತರಲ್ಲಿ ಪ್ರಶ್ನೆ ಮಾಡಿದರು.

ಆನಂದ ಸಿಂಗ್ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ನಡೆಸುತ್ತಿದೆ. ಅದಕ್ಕಾಗಿ ಬಹುಮತದಿಂದ ಅವರನ್ನು ಗೆಲ್ಲಿಸಬೇಕಿದೆ. ಹೆಚ್​ಡಿಕೆ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜನರು ಯಾವುದೇ ರೀತಿಯ ಬೆಂಬಲ ನೀಡಿಲ್ಲ. ಅವರ ಪಕ್ಷವನ್ನು ಮತದಾರರು ಅನರ್ಹ ಮಾಡಿದ್ದಾರೆ. ಅವರು ಉಪ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಬೇಕಾದರೂ ಕಷ್ಟ ಪಡಬೇಕಿದೆ ಎಂದರು.

ರಾಜ್ಯದಲ್ಲಿ ಅನರ್ಹರು ಯಾರು? ಎನ್ನುವುದನ್ನ ಸಿದ್ದರಾಮಯ್ಯ ಅವರು ತಿಳಿದುಕೊಳ್ಳಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ತಾಜ್ ಹೋಟೆಗಳಲ್ಲಿ ಮಲಗಿದ್ದರು. ಜನರ ಸಮಸ್ಯಗಳಿಗೆ ಮತ್ತು ಶಾಸಕರಿಗೆ ಅಗೌರವ ತೋರಿಸಿದರು.17 ಜನ ಶಾಸಕರಿಗೆ ಕುಮಾರಸ್ವಾಮಿ ಸರ್ಕಾರದಲ್ಲಿ ಮಾನ್ಯತೆ ನೀಡಲಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸಲಿಲ್ಲ. ಅದಕ್ಕಾಗಿ ಇವರೆಲ್ಲ ರಾಜೀನಾಮೆ ನೀಡಿದ್ದಾರೆ. ಇವರೆಲ್ಲ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದರು.

ಹೊಸಪೇಟೆ: ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅಧಿಕಾರವನ್ನು ಬಿಟ್ಟು ಆಡಳಿತ ​ಪಕ್ಷಕ್ಕೆ ರಾಜೀನಾಮೆ ಕೊಟ್ಟ ಇತಿಹಾಸ ಇದ್ರೆ ಅದು ಆನಂದ್​ ಸಿಂಗ್​ ಮತ್ತು 17 ಶಾಸಕರದ್ದು. ಅದಕ್ಕಾಗಿ ಕಾರ್ಯಕರ್ತರು ಮತ್ತು ಹೊಸಪೇಟೆ ಜನರು ಆನಂದ್​ ಸಿಂಗ್​ ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಮನವಿ ಮಾಡಿಕೊಂಡರು.

ಆನಂದ್​ ಸಿಂಗ್​ ಪರವಾಗಿ ರೋಡ್​ ಶೋ ನಡೆಸಿದ ಕಟೀಲ್​

ನಗರದ ಚಿತ್ತವಾಡಿಯಲ್ಲಿ ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್, ಆನಂದ್​ ಸಿಂಗ್ ಪರವಾಗಿ ರೋಡ್ ಶೋ ನಡೆಸಿ, ಮಹಿಳಾ ಮೋರ್ಚಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧಿಕಾರವಿದ್ದಾಗ ನಮ್ಮ ನಾಯಕರು ನಿದ್ದೆ ಮಾಡುತ್ತಾರೆ. ಅಧಿಕಾರ ಕಳೆದುಕೊಂಡ ಮೇಲೆ ಜನರ ಮುಂದೆ ಕುಳಿತು ಕಣ್ಣೀರು ಹಾಕುತ್ತಾರೆ. ಇಂತಹ ನಾಯಕರು ಮತ್ತು ರಾಜಕೀಯ ಮುಖಂಡರು ನಮಗೆ ಬೇಕಾ ಎಂದು ಮಹಿಳಾ ಕಾರ್ಯಕರ್ತರಲ್ಲಿ ಪ್ರಶ್ನೆ ಮಾಡಿದರು.

ಆನಂದ ಸಿಂಗ್ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ನಡೆಸುತ್ತಿದೆ. ಅದಕ್ಕಾಗಿ ಬಹುಮತದಿಂದ ಅವರನ್ನು ಗೆಲ್ಲಿಸಬೇಕಿದೆ. ಹೆಚ್​ಡಿಕೆ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜನರು ಯಾವುದೇ ರೀತಿಯ ಬೆಂಬಲ ನೀಡಿಲ್ಲ. ಅವರ ಪಕ್ಷವನ್ನು ಮತದಾರರು ಅನರ್ಹ ಮಾಡಿದ್ದಾರೆ. ಅವರು ಉಪ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಬೇಕಾದರೂ ಕಷ್ಟ ಪಡಬೇಕಿದೆ ಎಂದರು.

ರಾಜ್ಯದಲ್ಲಿ ಅನರ್ಹರು ಯಾರು? ಎನ್ನುವುದನ್ನ ಸಿದ್ದರಾಮಯ್ಯ ಅವರು ತಿಳಿದುಕೊಳ್ಳಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ತಾಜ್ ಹೋಟೆಗಳಲ್ಲಿ ಮಲಗಿದ್ದರು. ಜನರ ಸಮಸ್ಯಗಳಿಗೆ ಮತ್ತು ಶಾಸಕರಿಗೆ ಅಗೌರವ ತೋರಿಸಿದರು.17 ಜನ ಶಾಸಕರಿಗೆ ಕುಮಾರಸ್ವಾಮಿ ಸರ್ಕಾರದಲ್ಲಿ ಮಾನ್ಯತೆ ನೀಡಲಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸಲಿಲ್ಲ. ಅದಕ್ಕಾಗಿ ಇವರೆಲ್ಲ ರಾಜೀನಾಮೆ ನೀಡಿದ್ದಾರೆ. ಇವರೆಲ್ಲ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದರು.

Intro: ಅಧಿಕಾರದಲ್ಲಿದ್ದಾಗ ಮಲಗುತ್ತಾರೆ. ಅಧಿಕಾರ ಕಳೆದುಕೊಂಡ ಮೇಲೆ ಅಳುತ್ತಾರೆ: ನವೀನ ಕುಮಾರ ಕಟೀಲ್

ಹೊಸಪೇಟೆ : ವಿಜಯ ನಗರದ ಅಭಿವೃದ್ಧಿಗಾಗಿ ತ್ಯಾಗವನ್ನು ಮಾಡಿದ್ದಾರೆ. ಆನಂದ ಸಿಂಗ್ ಅವರನ್ನು ಬಿಜೆಪಿಯ ಪಕ್ಷದ ಆಡಳಿತಕ್ಕಾಗಿ ತ್ಯಾಗಮಾಡಿದ್ದಾರೆ. ಅದಕ್ಕಾಗಿ ಕಾರ್ಯಕರ್ತರು ಮತ್ತು ಹೊಸಪೇಟೆ ಜನರು ಗೆಲ್ಲಿಸಬೇಕು ಎಂದು ಮನವಿಯನ್ನು ಮಾಡಿಕೊಂಡರು.


Body: ನಗರದ ಚಿತ್ತವಾಡಿಯಲ್ಲಿ ಇಂದು ಬೆಳಗ್ಗೆ ಬಿಜೆಪಿ ಪಕ್ಷದ ರಾಜ್ಯ ಅಧ್ಯಕ್ಷ ನವೀನ್ ಕುಮಾರ ಕಟೀಲ್ ಅವರು ಆನಂದ ಸಿಂಗ್ ಪರವಾಗಿ ರೋಡ್ ಶೋ ಮಾಡಿದರು. ಮಹಿಳಾ ಮೋರ್ಚಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಮತ್ತು ಜನತಾದಳ ಪಕ್ಷವು ಅಧಿಕಾರವಿದ್ದಾಗ ನಿದ್ದಾಯನ್ನು ಮಾಡುತ್ತಾರೆ. ಸರಕಾರ ಬಿದ್ದ ಮೇಲೆ ಅಧಿಕಾರಕ್ಕಾಗಿ ಜನರ ಮುಂದೆ ಅಳುತ್ತಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನವೀನ ಕುಮಾರ ಕಟೀಲ್ ಮಾತನಾಡಿದರು.
ಆನಂದ ಸಿಂಗ್ ರಾಜೀನಾಮೆಯಿಂದ ಬಿಜೆಪಿ ಸರಕಾರವನ್ನು ನಡೆಸುತ್ತಿದೆ.ಅದಕ್ಕಾಗಿ ಬಹುಮತದಿಂದ ಅವರನ್ನು ಗೆಲ್ಲಿಸಬೇಕಿದೆ. ಹೆಚ್‌ಡಿ ಕುಮಾರ ಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಜನರು ಯಾವುದೇ ರೀತಿಯ ಬೆಂಬಲವನ್ನು ನೀಡಿಲ್ಲ. ಅವರ ಪಕ್ಷವನ್ನು ಮತದಾರರು ಅನರ್ಹ ಮಾಡಿದ್ದಾರೆ. ಅವರು ಉಪಚುನಾವಣೆಯಲ್ಲಿ ಒಂದು ಸಿಟನ್ನು ಗೆಲ್ಲಬೇಕಾದರು ಕಷ್ಟ ಪಡಬೇಕಿದೆ ಎಂದರು. ಅಧಿಕಾರವಿದ್ದಾಗ ನಮ್ಮ ನಾಯಕರು ನಿದ್ದೆಯನ್ನು ಮಾಡುತ್ತಾರೆ. ಅಧಿಕಾರ ಕಳೆದುಕೊಂಡ ಮೇಲೆ ಜನರ ಮುಂದೆ ಕುಳಿತು ಕಣ್ಣೀರನ್ನು ಹಾಕುತ್ತಾರೆ. ಇಂತಹ ನಾಯಕರು ಮತ್ತು ರಾಜಕೀಯ ಮುಖಂಡರು ನಮಗೆ ಬೇಕಾ ಎಂದು ಮಹಿಳಾ ಕಾರ್ಯಕರ್ತರಲ್ಲಿ ಪ್ರಶ್ನೆಯನ್ನು ಮಾಡಿದರು.

ರಾಜ್ಯದಲ್ಲಿ ಅನರ್ಹರು ಯಾರು? ಎಂಬುವುದನ್ನು ಸಿದ್ದರಾಮಯ್ಯ ಅವರು ತಿಳಿದುಕೊಳ್ಳಬೇಕು. ಸಮ್ಮಿಶ್ರ ಸರಕಾರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳು ತಾಜ್ ಹೋಟೆಗಳಲ್ಲಿ ಮಲಗಿದ್ದರು ಜನರ ಸಮಸ್ಯಗಳಿಗೆ ಮತ್ತು ಶಾಸಕರಿಗೆ ಅಗೌರವವನ್ನು ತೋರಿಸಿದರು.17 ಜನ ಶಾಸಕರಿಗೆ ಕುಮಾರಿಸ್ವಾಮಿ ಸರಕಾರದಲ್ಲಿ ಮಾನ್ಯತೆಯನ್ನು ನೀಡಲಿಲ್ಲ ಅವರ ಬೇಡಿಕೆಗಳನ್ನು ಇಡೇರಿಸಲಿಲ್ಲ ಅದಕ್ಕಾಗಿ ಇವರೆಲ್ಲ ರಾಜೀನಾಮೆಯನ್ನು ನೀಡಿದ್ದಾರೆ. ಇವರೆಲ್ಲ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆಯನ್ನು ನೀಡಿಲ್ಲ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆಯನ್ನು ನೀಡಿದ್ದಾರೆ ಎಂದು ಮಾತನಾಡಿದರು. ವಿಜಯ ನಗರದ ಉಪಚುನಾವಣೆಯಲ್ಲಿ ಗೆಲ್ಲುವು ಆನಂದ ಸಿಂಗ್ ಎಂದು ಭವಿಷ್ಯವನ್ನು ನುಡಿದರು.



Conclusion:KN_HPT_1_NAVINA KUMARA_KATEEL_ROAD_SHOW_SCRIPT_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.