ETV Bharat / state

ಸಚಿವ ಸ್ಥಾನಕ್ಕಾಗಿ ಬಿಎಸ್​ವೈ ಮೇಲೆ ಒತ್ತಡ ಹೇರಿಲ್ಲ: ಸೋಮಶೇಖರ ರೆಡ್ಡಿ

author img

By

Published : Feb 21, 2020, 7:59 PM IST

ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿಲ್ಲ. ಬಹಳ ಮುಖ್ಯವಾಗಿ ನಮಗೆ ಈ ಸರ್ಕಾರ ಇರಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

MLA Somashekhar reddy talking about minister post
ಸೋಮಶೇಖರರೆಡ್ಡಿ

ಬಳ್ಳಾರಿ: ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿಲ್ಲ. ಬಹಳ ಮುಖ್ಯವಾಗಿ ನಮಗೆ ಈ ಸರ್ಕಾರ ಇರಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದರೆ ಅಭಿವೃದ್ಧಿ ಕಾರ್ಯಗಳು ಆಗುತ್ತವೆ ಎಂಬುದು ನಮ್ಮೆಲ್ಲರ ಅಭಿಲಾಷೆಯಾಗಿದೆ ಎಂದರು.

ಶಾಸಕ ಸೋಮಶೇಖರ ರೆಡ್ಡಿ

ಸಿಎಂ ಬಿಎಸ್​​ವೈಗೆ ಟೆನ್ಷನ್​ ಕೊಡಲ್ಲ:

ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆಯ ಕನಸು ನಮ್ಮದಾಗಿತ್ತು. ಹೀಗಾಗಿ ಸಿಎಂ ಬಿಎಸ್​​ವೈ ನೇತೃತ್ವದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದೆ. ಸಚಿವ ಸ್ಥಾನ ಕೊಡೋದು, ಬಿಡೋದು ಹೈಕಮಾಂಡ್​ಗೆ​ ಬಿಟ್ಟ ವಿಚಾರ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಗಣನೀಯ ಪ್ರಮಾಣದಲ್ಲಿ ಸಚಿವ ಸ್ಥಾನ‌ ದೊರಕಿಲ್ಲ ಎಂಬ ಕೂಗನ್ನಿಟ್ಟುಕೊಂಡು ಈ ಭಾಗದ ಶಾಸಕರೆಲ್ಲರೂ ಒಗ್ಗೂಡಿ ನಿಗೂಢವಾದ ಸಭೆ ಕರೆದಿದ್ದರು ಎಂಬ ವದಂತಿ ಹಬ್ಬಿದೆ. ಶಾಸಕ ರಾಜು ಗೌಡರ ನೇತೃತ್ವದಲ್ಲಿ ಈ ಸಭೆ ನಡೆದಿದೆ ಎನ್ನಲಾಗುತ್ತಿದೆ. ಅದಕ್ಕೆ ತಾವು ಕೂಡ ಹೋಗಿದ್ದೀರಿ ಎಂಬ ಮಾಹಿತಿ ಇದೆ ಎಂಬ ಪ್ರಶ್ನೆಯೊಂದಕ್ಕೆ, ಅದೆಲ್ಲ ಸುಳ್ಳು. ಯಾವ ಸಭೆ ಕೂಡ ನಡೆದಿಲ್ಲ. ನಾವು ಹಾಗೆಲ್ಲ ಹೋಗುವುದಿಲ್ಲ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.

ಬಳ್ಳಾರಿ: ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿಲ್ಲ. ಬಹಳ ಮುಖ್ಯವಾಗಿ ನಮಗೆ ಈ ಸರ್ಕಾರ ಇರಬೇಕು ಎಂದು ಶಾಸಕ ಸೋಮಶೇಖರ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಬಳ್ಳಾರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರಗಳಿದ್ದರೆ ಅಭಿವೃದ್ಧಿ ಕಾರ್ಯಗಳು ಆಗುತ್ತವೆ ಎಂಬುದು ನಮ್ಮೆಲ್ಲರ ಅಭಿಲಾಷೆಯಾಗಿದೆ ಎಂದರು.

ಶಾಸಕ ಸೋಮಶೇಖರ ರೆಡ್ಡಿ

ಸಿಎಂ ಬಿಎಸ್​​ವೈಗೆ ಟೆನ್ಷನ್​ ಕೊಡಲ್ಲ:

ರಾಜ್ಯದಲ್ಲಿ ಸುಭದ್ರ ಸರ್ಕಾರ ರಚನೆಯ ಕನಸು ನಮ್ಮದಾಗಿತ್ತು. ಹೀಗಾಗಿ ಸಿಎಂ ಬಿಎಸ್​​ವೈ ನೇತೃತ್ವದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದೆ. ಸಚಿವ ಸ್ಥಾನ ಕೊಡೋದು, ಬಿಡೋದು ಹೈಕಮಾಂಡ್​ಗೆ​ ಬಿಟ್ಟ ವಿಚಾರ ಎಂದರು.

ಕಲ್ಯಾಣ ಕರ್ನಾಟಕ ಭಾಗದ ಶಾಸಕರಿಗೆ ಗಣನೀಯ ಪ್ರಮಾಣದಲ್ಲಿ ಸಚಿವ ಸ್ಥಾನ‌ ದೊರಕಿಲ್ಲ ಎಂಬ ಕೂಗನ್ನಿಟ್ಟುಕೊಂಡು ಈ ಭಾಗದ ಶಾಸಕರೆಲ್ಲರೂ ಒಗ್ಗೂಡಿ ನಿಗೂಢವಾದ ಸಭೆ ಕರೆದಿದ್ದರು ಎಂಬ ವದಂತಿ ಹಬ್ಬಿದೆ. ಶಾಸಕ ರಾಜು ಗೌಡರ ನೇತೃತ್ವದಲ್ಲಿ ಈ ಸಭೆ ನಡೆದಿದೆ ಎನ್ನಲಾಗುತ್ತಿದೆ. ಅದಕ್ಕೆ ತಾವು ಕೂಡ ಹೋಗಿದ್ದೀರಿ ಎಂಬ ಮಾಹಿತಿ ಇದೆ ಎಂಬ ಪ್ರಶ್ನೆಯೊಂದಕ್ಕೆ, ಅದೆಲ್ಲ ಸುಳ್ಳು. ಯಾವ ಸಭೆ ಕೂಡ ನಡೆದಿಲ್ಲ. ನಾವು ಹಾಗೆಲ್ಲ ಹೋಗುವುದಿಲ್ಲ ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.