ETV Bharat / state

ದೆಹಲಿ ಪ್ರವಾಸ? "ಎಲ್ಲಿಯೂ ಹೋಗಿಲ್ಲ ಇಲ್ಲೆ ಇರುವೆ‌": ಈಟಿವಿ ಭಾರತದ ಜತೆ ಮಾತನಾಡಿದ ಆನಂದ್​ ಸಿಂಗ್​

author img

By

Published : Aug 18, 2021, 6:22 PM IST

Updated : Aug 18, 2021, 7:20 PM IST

ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿರುವ ಸಚಿವ ಆನಂದ್​ ಸಿಂಗ್​ ದೆಹಲಿ ಪ್ರಯಾಣದ ಕುರಿತು ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತಾನಡಿದ್ದಾರೆ. ಆದರೆ, ಸಚಿವ ಆನಂದ ಸಿಂಗ್ ತಾವು ಇರುವ ಸ್ಥಳದ ಹೆಸರನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಅವರ ನಡೆ ಸಾಕಷ್ಟು ಕುತೂಹಲ ‌ಮೂಡಿಸಿದ್ದು, ಮುಂದಿನ ನಡೆ ಕುರಿತು ಕಾದು‌ ನೋಡಬೇಕಾಗಿದೆ.

ಕುತೂಹಲ ಮೂಡಿಸಿರುವ ಸಚಿವ ಆನಂದ್ ಸಿಂಗ್ ನಡೆ
ಕುತೂಹಲ ಮೂಡಿಸಿರುವ ಸಚಿವ ಆನಂದ್ ಸಿಂಗ್ ನಡೆ

ಹೊಸಪೇಟೆ (ವಿಜಯನಗರ): ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿರುವ ಸಚಿವ ಆನಂದ್​ ಸಿಂಗ್​ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಈ ಕುರಿತು ಈಟಿವಿ ಭಾರತದ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿರುವ ಆನಂದ್​ ಸಿಂಗ್, ಈ ಬಗ್ಗೆ​ ಸ್ಪಷ್ಟನೆ ನೀಡಿದ್ದಾರೆ.

ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, "ನಾನು ಎಲ್ಲಿಯೂ ಹೋಗಿಲ್ಲ ಇಲ್ಲೆ ಇರುವೆ‌. ನಾನೆಲ್ಲಿಯೂ ಹೋಗುತ್ತಿಲ್ಲ. ದೆಹಲಿಗೆ ಹಾಗೂ ಬೆಂಗಳೂರಿಗೆ ಹೋಗುವುದಾದರೆ ಬಹಿರಂಗವಾಗಿ ಹೇಳಿ ಹೋಗುವೆ. ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಈಟಿವಿ ಭಾರತದ ಜತೆ ಮಾತನಾಡಿದ ಆನಂದ್​ ಸಿಂಗ್​

ಆದರೆ, ಸಚಿವ ಆನಂದ ಸಿಂಗ್ ತಾವು ಇರುವ ಸ್ಥಳದ ಹೆಸರನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. "ಇಲ್ಲೆ ಇರುವೆ" ಎಂದು ಹೇಳಿದ ಅವರ ಮಾತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ನಡೆ ಸಾಕಷ್ಟು ಕುತೂಹಲ ‌ಮೂಡಿಸಿದ್ದು, ಮುಂದಿನ ನಡೆ ಕುರಿತು ಕಾದು‌ ನೋಡಬೇಕಾಗಿದೆ.

ಓದಿ: ಹೆಜ್ಜೆ ಹೆಜ್ಜೆಗೂ ಉಗ್ರರ ಬಂದೂಕಿನ ಸಪ್ಪಳ..ಅಫ್ಘಾನ್​ ಜನರ ಜೀವನ ನರಕ ಸದೃಶ!!

ಹೊಸಪೇಟೆ (ವಿಜಯನಗರ): ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿರುವ ಸಚಿವ ಆನಂದ್​ ಸಿಂಗ್​ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹಬ್ಬಿದೆ. ಈ ಕುರಿತು ಈಟಿವಿ ಭಾರತದ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿರುವ ಆನಂದ್​ ಸಿಂಗ್, ಈ ಬಗ್ಗೆ​ ಸ್ಪಷ್ಟನೆ ನೀಡಿದ್ದಾರೆ.

ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, "ನಾನು ಎಲ್ಲಿಯೂ ಹೋಗಿಲ್ಲ ಇಲ್ಲೆ ಇರುವೆ‌. ನಾನೆಲ್ಲಿಯೂ ಹೋಗುತ್ತಿಲ್ಲ. ದೆಹಲಿಗೆ ಹಾಗೂ ಬೆಂಗಳೂರಿಗೆ ಹೋಗುವುದಾದರೆ ಬಹಿರಂಗವಾಗಿ ಹೇಳಿ ಹೋಗುವೆ. ಸುಳ್ಳು ಹೇಳಿ ದಾರಿ ತಪ್ಪಿಸುವ ಕೆಲಸ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಈಟಿವಿ ಭಾರತದ ಜತೆ ಮಾತನಾಡಿದ ಆನಂದ್​ ಸಿಂಗ್​

ಆದರೆ, ಸಚಿವ ಆನಂದ ಸಿಂಗ್ ತಾವು ಇರುವ ಸ್ಥಳದ ಹೆಸರನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. "ಇಲ್ಲೆ ಇರುವೆ" ಎಂದು ಹೇಳಿದ ಅವರ ಮಾತು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅವರ ನಡೆ ಸಾಕಷ್ಟು ಕುತೂಹಲ ‌ಮೂಡಿಸಿದ್ದು, ಮುಂದಿನ ನಡೆ ಕುರಿತು ಕಾದು‌ ನೋಡಬೇಕಾಗಿದೆ.

ಓದಿ: ಹೆಜ್ಜೆ ಹೆಜ್ಜೆಗೂ ಉಗ್ರರ ಬಂದೂಕಿನ ಸಪ್ಪಳ..ಅಫ್ಘಾನ್​ ಜನರ ಜೀವನ ನರಕ ಸದೃಶ!!

Last Updated : Aug 18, 2021, 7:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.