ETV Bharat / state

ಬಳ್ಳಾರಿ: ನಿರಾಶ್ರಿತರ ಕೇಂದ್ರಗಳಲ್ಲಿದ್ದ ವಿವಿಧ ಜಿಲ್ಲೆಗಳ 357 ವಲಸೆ ಕಾರ್ಮಿಕರ ಬಿಡುಗಡೆ - ಬಳ್ಳಾರಿ ನಿರಾಶ್ರಿತ ಕೇಂದ್ರ

ಬಳ್ಳಾರಿ ಜಿಲ್ಲೆಯ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ವಿವಿಧ ಜಿಲ್ಲೆಯ 357 ಕಾರ್ಮಿಕರನ್ನು ಅವರ ಮನೆಗೆ ಕಳುಹಿಸಲಾಗಿದೆ.

MIGRANT SHIFTED THERE HOME
ನಿರಾಶ್ರಿತರ ಕೇಂದ್ರಗಳಲ್ಲಿದ್ದ 357 ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರ ಬಿಡುಗಡೆ
author img

By

Published : Apr 25, 2020, 9:09 AM IST

ಬಳ್ಳಾರಿ: ಕೊರೊನಾ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಜಿಲ್ಲಾಡಳಿತ ಆರಂಭಿಸಿದ್ದ ತಾತ್ಕಾಲಿಕ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿದ್ದ ರಾಜ್ಯದ ವಿವಿಧ ಜಿಲ್ಲೆಗಳ 357 ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಶುಕ್ರವಾರ ಕಳುಹಿಸಲಾಯಿತು.

ನಗರದ ಮಯೂರ ಹೋಟೆಲ್ ಹಿಂಭಾಗದಲ್ಲಿರುವ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿದ್ದ ನಿರಾಶ್ರಿತರ ‌ಪರಿಹಾರ ಕೇಂದ್ರದಲ್ಲಿದ್ದ 44 ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಸ್ಥಳಗಳಿಗೆ ಕಳಿಸಲಾಗಿದೆ.

MIGRANT SHIFTED THERE HOME
ನಿರಾಶ್ರಿತರ ಕೇಂದ್ರಗಳಲ್ಲಿದ್ದ ವಿವಿಧ ಜಿಲ್ಲೆಗಳ 357 ವಲಸೆ ಕಾರ್ಮಿಕರ ಬಿಡುಗಡೆ

ಲಿಂಗಸೂಗೂರು, ಸಿಂಧನೂರು, ಮಾನ್ವಿ, ಗಂಗಾವತಿ, ಸಿರುಗುಪ್ಪ ಸೇರಿದಂತೆ ವಿವಿಧ ಸ್ಥಳಗಳಿಗೆ ಕೆಎಸ್ಆರ್ ಟಿಸಿ ಬಸ್​​ಗಳ ಮೂಲಕ ಸಾಮಾಜಿಕ ಅಂತರದಲ್ಲಿ ಕೂರಿಸಿ ಕಳುಹಿಸಲಾಯಿತು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್. ರಾಜಪ್ಪ, ಸಹಾಯಕ ನಿರ್ದೇಶಕಿ ಮಮತಾ ಉಪಸ್ಥಿತರಿದ್ದರು.

ಹಡಗಲಿಯಲ್ಲಿ 38, ಹಗರಿಬೊಮ್ಮನಹಳ್ಳಿಯಲ್ಲಿ 140, ಹೊಸಪೇಟೆಯಲ್ಲಿ 34, ಕೂಡ್ಲಿಗಿಯಲ್ಲಿ 05, ಸಿರುಗುಪ್ಪದಲ್ಲಿ 16, ಸಂಡೂರಿನಲ್ಲಿ 08 ಮತ್ತು ಹರಪನಹಳ್ಳಿಯಲ್ಲಿ 72 ಜನ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಬಸ್​ಗಳ ಮೂಲಕ ರಾಜ್ಯ ಸರ್ಕಾರದ ಸೂಚನೆಯಂತೆ ಕಳಿಸಲಾಗಿದೆ.

ಸದ್ಯ ನಮ್ಮಲ್ಲಿ ಅನ್ಯರಾಜ್ಯಗಳ 115 ವಲಸೆ ಕಾರ್ಮಿಕರು ಮಾತ್ರ ಇದ್ದು, ಅವರಿಗೆ ಸಕಲ‌ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ಸೂಚನೆ ಬಂದರೇ ಅವರನ್ನು ಸಹ ಬಿಡುಗಡೆಗೆ ಕ್ರಮ ವಹಿಸಲಾಗುವುದು.

ಬಳ್ಳಾರಿ: ಕೊರೊನಾ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಜಿಲ್ಲಾಡಳಿತ ಆರಂಭಿಸಿದ್ದ ತಾತ್ಕಾಲಿಕ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿದ್ದ ರಾಜ್ಯದ ವಿವಿಧ ಜಿಲ್ಲೆಗಳ 357 ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಶುಕ್ರವಾರ ಕಳುಹಿಸಲಾಯಿತು.

ನಗರದ ಮಯೂರ ಹೋಟೆಲ್ ಹಿಂಭಾಗದಲ್ಲಿರುವ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿದ್ದ ನಿರಾಶ್ರಿತರ ‌ಪರಿಹಾರ ಕೇಂದ್ರದಲ್ಲಿದ್ದ 44 ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಸ್ಥಳಗಳಿಗೆ ಕಳಿಸಲಾಗಿದೆ.

MIGRANT SHIFTED THERE HOME
ನಿರಾಶ್ರಿತರ ಕೇಂದ್ರಗಳಲ್ಲಿದ್ದ ವಿವಿಧ ಜಿಲ್ಲೆಗಳ 357 ವಲಸೆ ಕಾರ್ಮಿಕರ ಬಿಡುಗಡೆ

ಲಿಂಗಸೂಗೂರು, ಸಿಂಧನೂರು, ಮಾನ್ವಿ, ಗಂಗಾವತಿ, ಸಿರುಗುಪ್ಪ ಸೇರಿದಂತೆ ವಿವಿಧ ಸ್ಥಳಗಳಿಗೆ ಕೆಎಸ್ಆರ್ ಟಿಸಿ ಬಸ್​​ಗಳ ಮೂಲಕ ಸಾಮಾಜಿಕ ಅಂತರದಲ್ಲಿ ಕೂರಿಸಿ ಕಳುಹಿಸಲಾಯಿತು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಎನ್. ರಾಜಪ್ಪ, ಸಹಾಯಕ ನಿರ್ದೇಶಕಿ ಮಮತಾ ಉಪಸ್ಥಿತರಿದ್ದರು.

ಹಡಗಲಿಯಲ್ಲಿ 38, ಹಗರಿಬೊಮ್ಮನಹಳ್ಳಿಯಲ್ಲಿ 140, ಹೊಸಪೇಟೆಯಲ್ಲಿ 34, ಕೂಡ್ಲಿಗಿಯಲ್ಲಿ 05, ಸಿರುಗುಪ್ಪದಲ್ಲಿ 16, ಸಂಡೂರಿನಲ್ಲಿ 08 ಮತ್ತು ಹರಪನಹಳ್ಳಿಯಲ್ಲಿ 72 ಜನ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಬಸ್​ಗಳ ಮೂಲಕ ರಾಜ್ಯ ಸರ್ಕಾರದ ಸೂಚನೆಯಂತೆ ಕಳಿಸಲಾಗಿದೆ.

ಸದ್ಯ ನಮ್ಮಲ್ಲಿ ಅನ್ಯರಾಜ್ಯಗಳ 115 ವಲಸೆ ಕಾರ್ಮಿಕರು ಮಾತ್ರ ಇದ್ದು, ಅವರಿಗೆ ಸಕಲ‌ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ಸೂಚನೆ ಬಂದರೇ ಅವರನ್ನು ಸಹ ಬಿಡುಗಡೆಗೆ ಕ್ರಮ ವಹಿಸಲಾಗುವುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.