ETV Bharat / state

ರೈಲ್ವೆ ಇಲಾಖೆ ಪರೀಕ್ಷೆ ಎದುರಿಸಲು ಕನ್ನಡಿಗರು ಸಿದ್ಧರಿಲ್ಲ: ಸಚಿವ ಸುರೇಶ ಅಂಗಡಿ.. - ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ ಅಂಗಡಿ

ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ ವಿಫುಲವಾಗಿದ್ದರೂ ಕನ್ನಡಿಗರು ಮಾತ್ರ ರೈಲ್ವೆ ಪರೀಕ್ಷೆ ಎದುರಿಸಲು ಸಿದ್ಧರಿಲ್ಲ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ವಿಷಾದಿಸಿದ್ದಾರೆ.

ರೈಲ್ವೇ ಇಲಾಖೆ ಪರೀಕ್ಷೆ ಎದುರಿಸಲು ಕನ್ನಡಿಗರು ಸಿದ್ಧರಿಲ್ಲ: ಸಚಿವ ಸುರೇಶ ಅಂಗಡಿ
author img

By

Published : Oct 17, 2019, 3:36 PM IST

ಬಳ್ಳಾರಿ: ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ ವಿಫುಲವಾಗಿದ್ದರೂ ಕನ್ನಡಿಗರು ಮಾತ್ರ ರೈಲ್ವೆ ಪರೀಕ್ಷೆ ಎದುರಿಸಲು ಸಿದ್ಧರಿಲ್ಲ ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ ಅಂಗಡಿ ವಿಷಾದಿಸಿದ್ದಾರೆ.

ರೈಲ್ವೇ ಇಲಾಖೆ ಪರೀಕ್ಷೆ ಎದುರಿಸಲು ಕನ್ನಡಿಗರು ಸಿದ್ಧರಿಲ್ಲ: ಸಚಿವ ಸುರೇಶ ಅಂಗಡಿ

ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ರೈಲ್ವೆ ನಿಲ್ದಾಣದಲ್ಲಿಂದು ಹೊಸಪೇಟೆ - ಕೊಟ್ಟೂರು, ದಾವಣಗೆರೆ, ಹರಿಹರ ಮಾರ್ಗದ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿ, ನಾನು ಮಂತ್ರಿಯಾದ ಬಳಿಕ ನನ್ನ ಬಳಿ ಬಹಳಷ್ಟು ಮಂದಿ ಯುವ ಜನರು ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡುವಂತೆ ಕೋರಿದ್ದರು. ಆಗ ನಾನು ಆ ಯುವಜನರಿಗೆ ತಿಳಿಸಿ ಹೇಳಿದೆ. ನೇರ ನೇಮಕಾತಿಯ ಪ್ರಕ್ರಿಯೆ ರೈಲ್ವೇ ಇಲಾಖೆಯಲ್ಲಿಲ್ಲ. ರೈಲ್ವೇ ಪರೀಕ್ಷೆಯನ್ನು ಎದುರಿಸಿ ಬಂದವರಿಗೆ ಮಾತ್ರ ಇಲ್ಲಿ ಅವಕಾಶ ಇದೆ ಎಂದು ತಿಳಿಹೇಳಿ ಕಳಿಸಿದೆ ಎಂದರು.

ಗೋವಾ, ಮಹಾರಾಷ್ಟ್ರ, ಬಿಹಾರ, ಓಡಿಶಾ, ಗುಜರಾತ್ ಹಾಗೂ‌ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯದ ಯುವಜನರು ನೇರವಾಗಿ ರೈಲ್ವೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉದ್ಯೋಗಕ್ಕೆ ಬರುತ್ತಾರೆ. ಆದರೆ, ನಮ್ಮ ಕರ್ನಾಟಕ ರಾಜ್ಯದ ಯುವಜನರು ಮಾತ್ರ ರೈಲ್ವೆ ಪರೀಕ್ಷೆ ಸಮರ್ಥ ವಾಗಿ ಎದುರಿಸುತ್ತಿಲ್ಲ. ಪದವಿ ಸರ್ಟಿಫಿಕೇಟ್ ಹಿಡಿದುಕೊಂಡು ರಾಜಕಾರಣಿಗಳ ಮನೆ ಬಾಗಿಲಿಗೆ ಬರುವುದನ್ನು ಮೊದ್ಲು ಕರ್ನಾಟಕ ರಾಜ್ಯದ ಯುವಜನರು ಬಿಡಬೇಕು.‌ ನಿಮಗೆ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಇದ್ದರೆ ಮಾತ್ರ ರೈಲ್ವೆ ಇಲಾಖೆಯು ಆಯೋಜಿಸುವ ಪರೀಕ್ಷೆ ಸಮರ್ಥವಾಗಿ ನಿಭಾಯಿಸಬೇಕು.‌ ರೈಲ್ವೆ ಇಲಾಖೆಯಲ್ಲಿ ಚಾಕ ಚಕ್ಯತೆಯಿಂದ ಉದ್ಯೋಗ ಪಡೆದುಕೊಳ್ಳಬೇಕು ಎಂದರು.

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೊಪ್ಪಳ ಜಿಲ್ಲೆಯ ಮಾಜಿ ಸಚಿವ ಬಸವರಾಜ ರಾಯರೆಡ್ಡಿಯವರು ಬರೀ ಅಡಿಗಲ್ಲು ಹಾಕೋದನ್ನೇ ಮಾಡಿದ್ರು. ಆದರೆ, ಅಗತ್ಯ ಅನುದಾನ ಮೀಸಲಿಡುವ ಕೆಲಸ ಮಾಡಲಿಲ್ಲ . ಅದಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು ಎಂದರು. ರೈಲ್ವೆ ಇಲಾಖೆಯಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ 50 ಲಕ್ಷ ಕೋಟಿ ರೂ. ಅನುದಾನವನ್ನ ಮೀಸಲಿರಿಸಲಾಗಿದೆ. ಮುಂದಿನ 2022 ರೊಳಗೆ ರೈಲ್ವೆ ಇಲಾಖೆಯ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದರು.

ಬಳ್ಳಾರಿ: ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶ ವಿಫುಲವಾಗಿದ್ದರೂ ಕನ್ನಡಿಗರು ಮಾತ್ರ ರೈಲ್ವೆ ಪರೀಕ್ಷೆ ಎದುರಿಸಲು ಸಿದ್ಧರಿಲ್ಲ ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ ಅಂಗಡಿ ವಿಷಾದಿಸಿದ್ದಾರೆ.

ರೈಲ್ವೇ ಇಲಾಖೆ ಪರೀಕ್ಷೆ ಎದುರಿಸಲು ಕನ್ನಡಿಗರು ಸಿದ್ಧರಿಲ್ಲ: ಸಚಿವ ಸುರೇಶ ಅಂಗಡಿ

ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ರೈಲ್ವೆ ನಿಲ್ದಾಣದಲ್ಲಿಂದು ಹೊಸಪೇಟೆ - ಕೊಟ್ಟೂರು, ದಾವಣಗೆರೆ, ಹರಿಹರ ಮಾರ್ಗದ ನೂತನ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿ, ನಾನು ಮಂತ್ರಿಯಾದ ಬಳಿಕ ನನ್ನ ಬಳಿ ಬಹಳಷ್ಟು ಮಂದಿ ಯುವ ಜನರು ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡುವಂತೆ ಕೋರಿದ್ದರು. ಆಗ ನಾನು ಆ ಯುವಜನರಿಗೆ ತಿಳಿಸಿ ಹೇಳಿದೆ. ನೇರ ನೇಮಕಾತಿಯ ಪ್ರಕ್ರಿಯೆ ರೈಲ್ವೇ ಇಲಾಖೆಯಲ್ಲಿಲ್ಲ. ರೈಲ್ವೇ ಪರೀಕ್ಷೆಯನ್ನು ಎದುರಿಸಿ ಬಂದವರಿಗೆ ಮಾತ್ರ ಇಲ್ಲಿ ಅವಕಾಶ ಇದೆ ಎಂದು ತಿಳಿಹೇಳಿ ಕಳಿಸಿದೆ ಎಂದರು.

ಗೋವಾ, ಮಹಾರಾಷ್ಟ್ರ, ಬಿಹಾರ, ಓಡಿಶಾ, ಗುಜರಾತ್ ಹಾಗೂ‌ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯದ ಯುವಜನರು ನೇರವಾಗಿ ರೈಲ್ವೆ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉದ್ಯೋಗಕ್ಕೆ ಬರುತ್ತಾರೆ. ಆದರೆ, ನಮ್ಮ ಕರ್ನಾಟಕ ರಾಜ್ಯದ ಯುವಜನರು ಮಾತ್ರ ರೈಲ್ವೆ ಪರೀಕ್ಷೆ ಸಮರ್ಥ ವಾಗಿ ಎದುರಿಸುತ್ತಿಲ್ಲ. ಪದವಿ ಸರ್ಟಿಫಿಕೇಟ್ ಹಿಡಿದುಕೊಂಡು ರಾಜಕಾರಣಿಗಳ ಮನೆ ಬಾಗಿಲಿಗೆ ಬರುವುದನ್ನು ಮೊದ್ಲು ಕರ್ನಾಟಕ ರಾಜ್ಯದ ಯುವಜನರು ಬಿಡಬೇಕು.‌ ನಿಮಗೆ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಇದ್ದರೆ ಮಾತ್ರ ರೈಲ್ವೆ ಇಲಾಖೆಯು ಆಯೋಜಿಸುವ ಪರೀಕ್ಷೆ ಸಮರ್ಥವಾಗಿ ನಿಭಾಯಿಸಬೇಕು.‌ ರೈಲ್ವೆ ಇಲಾಖೆಯಲ್ಲಿ ಚಾಕ ಚಕ್ಯತೆಯಿಂದ ಉದ್ಯೋಗ ಪಡೆದುಕೊಳ್ಳಬೇಕು ಎಂದರು.

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೊಪ್ಪಳ ಜಿಲ್ಲೆಯ ಮಾಜಿ ಸಚಿವ ಬಸವರಾಜ ರಾಯರೆಡ್ಡಿಯವರು ಬರೀ ಅಡಿಗಲ್ಲು ಹಾಕೋದನ್ನೇ ಮಾಡಿದ್ರು. ಆದರೆ, ಅಗತ್ಯ ಅನುದಾನ ಮೀಸಲಿಡುವ ಕೆಲಸ ಮಾಡಲಿಲ್ಲ . ಅದಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು ಎಂದರು. ರೈಲ್ವೆ ಇಲಾಖೆಯಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ 50 ಲಕ್ಷ ಕೋಟಿ ರೂ. ಅನುದಾನವನ್ನ ಮೀಸಲಿರಿಸಲಾಗಿದೆ. ಮುಂದಿನ 2022 ರೊಳಗೆ ರೈಲ್ವೆ ಇಲಾಖೆಯ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದರು.

Intro:ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ ವಿಫುಲವಾಗಿದ್ದರೂ ಕನ್ನಡಿಗರು ಪರೀಕ್ಷೆ ಎದುರಿಸಲು ಸಿದ್ಧರಿಲ್ಲ: ಸಚಿವ ಸುರೇಶ ಅಂಗಡಿ
ಬಳ್ಳಾರಿ: ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ ವಿಫುಲ ವಾಗಿದ್ದರೂ ಕನ್ನಡಿಗರು ಮಾತ್ರ ರೈಲ್ವೇ ಪರೀಕ್ಷೆ ಎದುರಿಸಲು ಸಿದ್ಧರಿಲ್ಲ ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ಸುರೇಶ ಅಂಗಡಿ ವಿಷಾದಿಸಿದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ರೈಲ್ವೇ ನಿಲ್ದಾಣದಲ್ಲಿಂದು ಹೊಸಪೇಟೆ-ಕೊಟ್ಟೂರು -ದಾವಣಗೆರೆ, ಹರಿಹರ ಮಾರ್ಗದ ನೂತನ ರೈಲು ಸಂಚಾರಕ್ಕೆ ಹಸಿರು
ನಿಶಾನೆ ತೋರಿ ಅವರು ಮಾತನಾಡಿ, ನಾನು ಮಂತ್ರಿಯಾದ ಬಳಿಕ ನನ್ನ ಬಳಿ ಬಹಳಷ್ಟು ಮಂದಿ ಯುವಜನರು ರೈಲ್ವೇ ಇಲಾಖೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಿಕೊಡುವಂತೆ ಕೋರಿದ್ದರು. ಆಗ ನಾನು ಆ ಯುವಜನರಿಗೆ ತಿಳಿಸಿ ಹೇಳಿದೆ. ನೇರ ನೇಮಕಾತಿಯ ಪ್ರಕ್ರಿಯೆ ರೈಲ್ವೇ ಇಲಾಖೆಯಲ್ಲಿಲ್ಲ. ರೈಲ್ವೇ ಪರೀಕ್ಷೆಯನ್ನು ಎದುರಿಸಿ ಬಂದೋರಿಗೆ ಮಾತ್ರ ಇಲ್ಲಿ ಅವಕಾಶ ಇದೆ ಎಂದು ತಿಳಿಹೇಳಿ ಕಳಿಸಿದೆ ಎಂದರು.



Body:ಗೋವಾ, ಮಹಾರಾಷ್ಟ್ರ, ಬಿಹಾರ, ಓಡಿಸ್ಸಾ, ಗುಜರಾತ್ ಹಾಗೂ‌ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯದ ಯುವಜನರು ನೇರವಾಗಿ ರೈಲ್ವೇ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉದ್ಯೋಗಕ್ಕೆ ಬರುತ್ತಾರೆ. ಆದರೆ, ನಮ್ಮ ಕರ್ನಾಟಕ ರಾಜ್ಯದ ಯುವಜನರು ಮಾತ್ರ ರೈಲ್ವೇ ಪರೀಕ್ಷೆಯನ್ನು ಸಮರ್ಥ ವಾಗಿ ಎದುರಿಸುತ್ತಿಲ್ಲ. ಪದವಿ ಸರ್ಟಿಫಿಕೇಟ್ ಹಿಡಿದುಕೊಂಡು ರಾಜಕಾರಣಿಗಳ ಮನೆಬಾಗಿಲಿಗೆ ಎಡತಾಕೋದನ್ನು ಮೊದ್ಲು ಕರ್ನಾಟಕ ರಾಜ್ಯದ ಯುವಜನರು ಬಿಡಬೇಕು.‌ ನಿಮಗೆ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳುವ ಸಾಮರ್ಥ್ಯ ಇದ್ದರೆ
ಮಾತ್ರ ರೈಲ್ವೇ ಇಲಾಖೆಯು ಆಯೋಜಿಸುವ ಪರೀಕ್ಷೆಯನ್ನು ಸಮರ್ಥವಾಗಿ ನಿಭಾಯಿಸಬೇಕು.‌ ರೈಲ್ವೇ ಇಲಾಖೆಯಲ್ಲಿ ಚಾಕ ಚಕ್ಯತೆಯಿಂದ ಉದ್ಯೋಗ ಪಡೆದುಕೊಳ್ಳಬೇಕೆಂದರು.
ಅಡಿಗಲ್ಲು ಹಾಕೋದನ್ನೇ ಮಾಡಿದ್ರೂ ಅವರು: ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕೊಪ್ಪಳ ಜಿಲ್ಲೆಯ ಮಾಜಿ ಸಚಿವ ಬಸವ ರಾಜ ರಾಯರೆಡ್ಡಿಯವ್ರು ಬರೀ ಅಡಿಗಲ್ಲು ಹಾಕೋದನ್ನೇ ಮಾಡಿದ್ರು. ಆದರೆ, ಅಗತ್ಯ ಅನುದಾನ ಮೀಸಲಿಡುವ ಕೆಲ್ಸ ಮಾಡಲಿಲ್ಲ ಅವರು. ಅದಕ್ಕೆ ಮತ್ತೆ ಪ್ರಧಾನಿ ನರೇಂದ್ರ ಮೋದಿಯವ್ರೇ ಬರಬೇಕಾಯಿತೆಂದರು.
ರೈಲ್ವೇ ಇಲಾಖೆಯಲ್ಲಿನ ಸರ್ವಾಂಗೀಣ ಅಭಿವೃದ್ಧಿಗಾಗಿ 50
ಲಕ್ಷ ಕೋಟಿ ರೂ.ಗಳ ಅನುದಾನವನ್ನ ಮೀಸಲಿರಿಸಲಾಗಿದೆ. ಮುಂದಿನ 2022 ರೊಳಗೆ ರೈಲ್ವೇ ಇಲಾಖೆಯ ಎಲ್ಲ ಯೋಜನೆ ಗಳನ್ನು ಪೂರ್ಣಗೊಳಿಸುವ ಗುರಿಯನ್ನು ನಮ್ಮ ಸರ್ಕಾರ ಹೊಂದಿದೆ ಎಂದಿದ್ದಾರೆ ಸಚಿವ ಸುರೇಶ ಅಂಗಡಿ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.






Conclusion:KN_BLY_3_NEW_TRAIN_INGRATION_VISUALS_7203310

KN_BLY_3a_RAILWAY_MINISTER_SPEECH_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.