ETV Bharat / state

ಭಗವಂತನ ಕೃಪೆಯಿಂದ ಸಚಿವ ಸ್ಥಾನ ಸಿಕ್ಕರೆ ನಿಭಾಯಿಸುವೆ: ಶಾಸಕ ಸೋಮಶೇಖರ ರೆಡ್ಡಿ

author img

By

Published : Aug 13, 2019, 2:01 PM IST

ಸಿಎಂ ಬಿ.ಎಸ್.ಯಡಿಯೂರಪ್ಪನವರು ನೆರೆ ಹಾವಳಿ ಪ್ರದೇಶಕ್ಕೆ ಬೆಂಬಿಡದೇ ಓಡಾಡುತ್ತಿದ್ದಾರೆ. ಅವರಿಗೆ ಬಿಡುವೇ ಇಲ್ಲ. ಸಿಎಂ ಅವರಿಗೆ ಸಚಿವರ ಸಾಥ್ ಅಗತ್ಯವಿತ್ತಾದ್ರೂ, ನೆರೆ ಹಾವಳಿಯ ವೇಳೆ ಸಚಿವ ಸಂಪುಟ ರಚನೆಯಾದ್ರೆ ರಾಜ್ಯದ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ಹಿನ್ನೆಲೆ ಸಂಪುಟ ರಚನೆ ಮಾಡಿಲ್ಲ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ತಿಳಿಸಿದ್ದಾರೆ.

ಶಾಸಕ ಸೋಮಶೇಖರ ರೆಡ್ಡಿ

ಬಳ್ಳಾರಿ: ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆ ಭಗವಂತನ ಕೃಪೆಯಿಂದ ನನಗೆ ಸಚಿವ ಸ್ಥಾನ ಕರುಣಿಸಿದ್ರೆ ನಿಭಾಯಿಸುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯ ಕಪ್ಪಗಲ್ಲು ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿಂದು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ನೆರೆ ಹಾವಳಿಯಿಂದಾಗಿ ಸಚಿವ ಸಂಪುಟ ರಚನೆಯಲ್ಲಿ ವಿಳಂಬ ಆಗುತ್ತಿದೆ. ಆಗಸ್ಟ್ 18 ರಂದು ಸಚಿವ ಸಂಪುಟ ರಚನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೊದಲ ಪಕ್ಷದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರ ಪಕ್ಷದ ಹೈಕಮಾಂಡ್ ಮುಂದಿದೆ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹಾಗೊಂದು ವೇಳೆ ದೊರೆತರೆ ಅದನ್ನ ಸಮರ್ಥವಾಗಿ ನಿಭಾಯಿಸುವೆ ಎಂದರು.

ಶಾಸಕ ಸೋಮಶೇಖರ ರೆಡ್ಡಿ

ಸಿಎಂ ಬಿ.ಎಸ್.ಯಡಿಯೂರಪ್ಪನವರು ನೆರೆ ಹಾವಳಿ ಪ್ರದೇಶಕ್ಕೆ ಬೆಂಬಿಡದೇ ಓಡಾಡುತ್ತಿದ್ದಾರೆ. ಅವರಿಗೆ ಬಿಡುವೇ ಇಲ್ಲ. ಸಿಎಂ ಅವರಿಗೆ ಸಚಿವರ ಸಾಥ್ ಅಗತ್ಯವಿತ್ತಾದ್ರೂ, ನೆರೆ ಹಾವಳಿಯ ವೇಳೆ ಸಚಿವ ಸಂಪುಟ ರಚನೆಯಾದ್ರೆ ರಾಜ್ಯದ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ದಟ್ಟವಾಗಿರೋದರ ಕಾರಣ ಸಂಪುಟ ರಚನೆ ಅಷ್ಟೊಂದು ಸಮಂಜಸವಲ್ಲ ಎಂಬ ಅಭಿಪ್ರಾಯಕ್ಕೆ ಹೈಕಮಾಂಡ್ ಬಂದಿದೆ ಎಂದು ತಿಳಿಸಿದರು.

ಕರುಣಾಕರರೆಡ್ಡಿ ನನ್ನ ಸಹೋದರ:
ರಾಜಕೀಯ ಹೊರತುಪಡಿಸಿ ಗಾಲಿ ಕರುಣಾಕರ ರೆಡ್ಡಿ ಅವರು ನನ್ನ ಸಹೋದರ. ಕೆಲ ಕಾರಣಗಳಿಂದ ಅವರು ನಮ್ಮ ಕುಟುಂಬದಿಂದ ದೂರ ಉಳಿದಿದ್ದರು. ಆದ್ರೆ, ಯಾವುದೇ ವೈಯಕ್ತಿಕ ವೈಮನಸ್ಸುಗಳಿಲ್ಲ. ಅವರಿಗೂ ಸಚಿವ ಸ್ಥಾನ ಸಿಕ್ಕರೆ ನನಗೆ ಸಂತೋಷ. ನಾನಂತೂ ಹೈಕಮಾಂಡ್ ಬಳಿ ಯಾವುದೇ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ. ಶ್ರೀರಾಮುಲು ಕೂಡ ನನ್ನ ಕುಟುಂಬದ ಸದಸ್ಯರು.‌ಅವರಿಗೂ ಸಚಿವ ಸ್ಥಾ‌ನ ದೊರತರೆ ಖುಷಿ ಪಡೋರಲ್ಲಿ ನಾನೊಬ್ಬ ಎಂದು ಹೇಳಿದರು.

ಬಳ್ಳಾರಿ: ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆ ಭಗವಂತನ ಕೃಪೆಯಿಂದ ನನಗೆ ಸಚಿವ ಸ್ಥಾನ ಕರುಣಿಸಿದ್ರೆ ನಿಭಾಯಿಸುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯ ಕಪ್ಪಗಲ್ಲು ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿಂದು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ನೆರೆ ಹಾವಳಿಯಿಂದಾಗಿ ಸಚಿವ ಸಂಪುಟ ರಚನೆಯಲ್ಲಿ ವಿಳಂಬ ಆಗುತ್ತಿದೆ. ಆಗಸ್ಟ್ 18 ರಂದು ಸಚಿವ ಸಂಪುಟ ರಚನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೊದಲ ಪಕ್ಷದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರ ಪಕ್ಷದ ಹೈಕಮಾಂಡ್ ಮುಂದಿದೆ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹಾಗೊಂದು ವೇಳೆ ದೊರೆತರೆ ಅದನ್ನ ಸಮರ್ಥವಾಗಿ ನಿಭಾಯಿಸುವೆ ಎಂದರು.

ಶಾಸಕ ಸೋಮಶೇಖರ ರೆಡ್ಡಿ

ಸಿಎಂ ಬಿ.ಎಸ್.ಯಡಿಯೂರಪ್ಪನವರು ನೆರೆ ಹಾವಳಿ ಪ್ರದೇಶಕ್ಕೆ ಬೆಂಬಿಡದೇ ಓಡಾಡುತ್ತಿದ್ದಾರೆ. ಅವರಿಗೆ ಬಿಡುವೇ ಇಲ್ಲ. ಸಿಎಂ ಅವರಿಗೆ ಸಚಿವರ ಸಾಥ್ ಅಗತ್ಯವಿತ್ತಾದ್ರೂ, ನೆರೆ ಹಾವಳಿಯ ವೇಳೆ ಸಚಿವ ಸಂಪುಟ ರಚನೆಯಾದ್ರೆ ರಾಜ್ಯದ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ದಟ್ಟವಾಗಿರೋದರ ಕಾರಣ ಸಂಪುಟ ರಚನೆ ಅಷ್ಟೊಂದು ಸಮಂಜಸವಲ್ಲ ಎಂಬ ಅಭಿಪ್ರಾಯಕ್ಕೆ ಹೈಕಮಾಂಡ್ ಬಂದಿದೆ ಎಂದು ತಿಳಿಸಿದರು.

ಕರುಣಾಕರರೆಡ್ಡಿ ನನ್ನ ಸಹೋದರ:
ರಾಜಕೀಯ ಹೊರತುಪಡಿಸಿ ಗಾಲಿ ಕರುಣಾಕರ ರೆಡ್ಡಿ ಅವರು ನನ್ನ ಸಹೋದರ. ಕೆಲ ಕಾರಣಗಳಿಂದ ಅವರು ನಮ್ಮ ಕುಟುಂಬದಿಂದ ದೂರ ಉಳಿದಿದ್ದರು. ಆದ್ರೆ, ಯಾವುದೇ ವೈಯಕ್ತಿಕ ವೈಮನಸ್ಸುಗಳಿಲ್ಲ. ಅವರಿಗೂ ಸಚಿವ ಸ್ಥಾನ ಸಿಕ್ಕರೆ ನನಗೆ ಸಂತೋಷ. ನಾನಂತೂ ಹೈಕಮಾಂಡ್ ಬಳಿ ಯಾವುದೇ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ. ಶ್ರೀರಾಮುಲು ಕೂಡ ನನ್ನ ಕುಟುಂಬದ ಸದಸ್ಯರು.‌ಅವರಿಗೂ ಸಚಿವ ಸ್ಥಾ‌ನ ದೊರತರೆ ಖುಷಿ ಪಡೋರಲ್ಲಿ ನಾನೊಬ್ಬ ಎಂದು ಹೇಳಿದರು.

Intro:ನಾನಂತೂ ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಶಾಸಕ ಸೋಮ ಶೇಖರರೆಡ್ಡಿ
ಬಳ್ಳಾರಿ: ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಆ ಭಗವಂತನ ಕೃಪೆಯಿಂದ ನನಗೆ ಸಚಿವ ಸ್ಥಾನ ಕರುಣಿಸಿದ್ರೆ. ನಿಭಾಯಿಸುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮ ಶೇಖರರೆಡ್ಡಿ ಎಂಬ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ಕಪ್ಪಗಲ್ಲು ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಆವರಣದಲ್ಲಿಂದು ಮೂರ್ನಾಲ್ಕು ಸಸಿ ನೆಟ್ಟು, ಬಳಿಕ ನೀರುಣಿಸುವ ಮುಖೇನ ಚಾಲನೆ ನೀಡಿ ಅವರು ಮಾತನಾಡಿ ದರು.
ನೆರೆ ಹಾವಳಿಯಿಂದಾಗಿ ಸಚಿವ ಸಂಪುಟ ರಚನೆಯಲ್ಲಿ
ವಿಳಂಬ ಆಗುತ್ತಿದೆ. ಆಗಸ್ಟ್ 18 ರಂದು ಸಚಿವ ಸಂಪುಟ ರಚನೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೊದಲ ಪಕ್ಷದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಚಾರ ಪಕ್ಷದ ಹೈಕಮಾಂಡ್ ಮುಂದಿದೆ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಹಾಗೊಂದು ವೇಳೆ ದೊರೆತರೆ ಅದನ್ನ ಸಮರ್ಥವಾಗಿ ನಿಭಾಯಿಸುವೆ ಎಂದರು.
ಸಿಎಂ ಬಿ.ಎಸ್.ಯಡಿಯೂರಪ್ಪನವ್ರು ನೆರೆ ಹಾವಳಿ ಪ್ರದೇಶಕ್ಕೆ ಬೆಂಬಿಡದೇ ಓಡಾಡುತ್ತಿದ್ದಾರೆ. ಅವರಿಗೆ ಬಿಡುವೇ ಇಲ್ಲ. ಸಿಎಂ ಅವರಿಗೆ ಸಚಿವರ ಸಾಥ್ ಅಗತ್ಯವಿತ್ತಾದ್ರೂ, ನೆರೆ ಹಾವಳಿಯ ವೇಳೆ ಸಚಿವ ಸಂಪುಟ ರಚನೆಯಾದ್ರೆ ರಾಜ್ಯದ ಕೆಂಗಣ್ಣಿಗೆ ಗುರಿ ಆಗುವ ಸಾಧ್ಯತೆ ದಟ್ಟವಾಗಿರೋದರ ಕಾರಣ ಸಂಪುಟ ರಚನೆ ಅಷ್ಟೊಂದು ಸಮಂಜಸವಲ್ಲ ಎಂಬ ಅಭಿಪ್ರಾಯಕ್ಕೆ ಹೈಕಮಾಂಡ್ ಬಂದಿದೆ ಎಂದರು.
ಹೀಗಾಗಿ, ಸಚಿವ ಸಂಪುಟದ ರಚನೆ ತಡವಾಗಿದೆ. ಮುಂಬರುವ ದಿನಗಳಲ್ಲಿ ರಚನೆಯಾಗಲಿದೆ.‌ ತುಂಗಭದ್ರಾ ಜಲಾಶಯ ಭರ್ತಿ ಆಗಿರೋದು ಗಣಿ ಜಿಲ್ಲೆಯ ರೈತರ ಮೊಗದಲಿ ಮಂದಹಾಸದ ಚಿಲುಮೆ ಗರಿಗೆದರಿದೆ. ಎರಡು ಬೆಳೆಗೂ ಜಲಾಶಯದ ನೀರು ಆಗಲು ಎಂಬ ಪ್ರಾರ್ಥನೆಯನ್ನು ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿಯಲ್ಲಿ ಮಾಡುವೆ. ಶ್ರಾವಣ ಮಾಸದ
ಕಡೆ ಶನಿವಾರದಂದು ಹನುಮಾನ್ ಚಾಲಿಸ್ ಓದುವ ಮುಖೇನ ವ್ರತಾಚರಣೆಯನ್ನು ಮೊಟಕುಗೊಳಿಸುವೆ ಎಂದರು.





Body:ಕರುಣಾಕರರೆಡ್ಡಿ ನನ್ನ ಸಹೋದರ: ರಾಜಕೀಯ ಹೊರತುಪಡಿಸಿ ಗಾಲಿ ಕರುಣಾಕರರೆಡ್ಡಿ ಅವರು
ನನ್ನ ಸಹೋದರ. ಕೆಲ ಕಾರಣಗಳಿಂದ ಅವರು ನಮ್ಮ ಕುಟುಂಬದಿಂದ ದೂರುಳಿದಿದ್ದರು. ಆದ್ರೆ, ಯಾವುದೇ ವೈಯಕ್ತಿಕ ವೈಮನಸ್ಸುಗಳಿದ್ದಿಲ್ಲ. ಅವರಿಗೂ ಸಚಿವ ಸ್ಥಾನ ನನಗೆ ಸಂತೋಷ. ನಾನಂತೂ ಹೈಕಮಾಂಡ್ ಬಳಿ ಯಾವುದೇ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ. ಶ್ರೀರಾಮುಲು ಕೂಡ ನನ್ನ ಕುಟುಂಬದ ಸದಸ್ಯರು.‌ಅವರಿಗೂ ಸಚಿವ ಸ್ಥಾ‌ನ ದೊರತರೆ ಖುಷಿ ಪಡೋದರಲ್ಲಿ ನಾನೊಬ್ಬ. ಗಾಲಿ ಜನಾರ್ದನರೆಡ್ಡಿಯೂ ಕೂಡ ನನ್ನ ಸಹೋದರ. ನಮ್ಮ ಕುಟುಂಬದಲ್ಲಿ ಯಾವುದೇ ವೈಮನಸ್ಸಿಲ್ಲ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_2_MLA_SOMASHEKAR_REDY_BYTE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.