ETV Bharat / state

ಅಸಮರ್ಪಕ ಚರಂಡಿ ವ್ಯವಸ್ಥೆ: ಕೆರೆಯಂತಾದ ಸಂತೆ, ತರಕಾರಿ ನೀರು ಪಾಲು

author img

By

Published : Aug 18, 2019, 12:43 PM IST

ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಬಾರಿ ಮಳೆಗೆ ತಗ್ಗು ಪ್ರದೇಶದಲ್ಲಿದ್ದ ಸಂತೆಯೊಂದಕ್ಕೆ ನೀರು ನುಗ್ಗಿ ಅಪಾರ ಪ್ರಮಾಣದ ತರಕಾರಿ, ಧವಸ- ಧಾನ್ಯಗಳು ನೀರು ಪಾಲಾಗಿವೆ.

ಬಳ್ಳಾರಿ

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಾರದ ಸಂತೆ ಮೈದಾನವು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ತರಕಾರಿ, ಧವಸ- ಧಾನ್ಯಗಳು ನೀರಲ್ಲಿ ಕೊಚ್ಚಿಹೋಗಿವೆ.

ಅರ್ಧಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಮಳೆ ಬಿದ್ದ ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ವಾರದ ಸಂತೆ ಮೈದಾನಕ್ಕೆ ಎತ್ತರದ ಪ್ರದೇಶದಿಂದ ಮಳೆಯ ನೀರಿನ ಕೋಡಿ ಹರಿದು ಬಂದಿದೆ.‌ ಇತ್ತೀಚೆಗೆ ಸಂತೆ ನಡೆಯುವ ಪ್ರದೇಶದ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರೂ ಮಳೆಯ ನೀರು ಹರಿದು ಹೋಗುವುದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ಕೆಲವೇ ಕ್ಷಣಗಳಲ್ಲಿ ಸಂತೆ ಮೈದಾನ ಕೆರೆಯ ಸ್ವರೂಪ ತಾಳಿದೆ.

ಕೆಲವೇ ಕ್ಷಣಗಳಲ್ಲಿ ಕೆರೆಯಂತಾದ ಮಾರ್ಕೆಟ್​​

ಮಳೆ ನೀರಿನಿಂದ ತರಕಾರಿಗಳು, ಧವಸ-ಧಾನ್ಯ, ಸೊಪ್ಪು, ಮಸಾಲೆ ಪದಾರ್ಥಗಳು ಹಾಳಾಗಿವೆ. ಇನ್ನೊಂದೆಡೆ ಸಂತೆ ವಹಿವಾಟಿಗೆ ಅಡಚಣೆ ಉಂಟಾಗಿ ವ್ಯಾಪಾರಿಗಳು ನಷ್ಟ ಅನುಭವಿಸಿದ್ರು.

ತಗ್ಗು ಪ್ರದೇಶಕ್ಕೆ ಭಾರೀ ಪ್ರಮಾಣದ ಮಳೆ ನೀರು ನುಗ್ಗಿ ಬರುತ್ತಿದ್ದರೂ ಅದನ್ನು ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ವ್ಯಾಪಾರಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಾರದ ಸಂತೆ ಮೈದಾನವು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ತರಕಾರಿ, ಧವಸ- ಧಾನ್ಯಗಳು ನೀರಲ್ಲಿ ಕೊಚ್ಚಿಹೋಗಿವೆ.

ಅರ್ಧಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಮಳೆ ಬಿದ್ದ ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ವಾರದ ಸಂತೆ ಮೈದಾನಕ್ಕೆ ಎತ್ತರದ ಪ್ರದೇಶದಿಂದ ಮಳೆಯ ನೀರಿನ ಕೋಡಿ ಹರಿದು ಬಂದಿದೆ.‌ ಇತ್ತೀಚೆಗೆ ಸಂತೆ ನಡೆಯುವ ಪ್ರದೇಶದ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರೂ ಮಳೆಯ ನೀರು ಹರಿದು ಹೋಗುವುದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ಕೆಲವೇ ಕ್ಷಣಗಳಲ್ಲಿ ಸಂತೆ ಮೈದಾನ ಕೆರೆಯ ಸ್ವರೂಪ ತಾಳಿದೆ.

ಕೆಲವೇ ಕ್ಷಣಗಳಲ್ಲಿ ಕೆರೆಯಂತಾದ ಮಾರ್ಕೆಟ್​​

ಮಳೆ ನೀರಿನಿಂದ ತರಕಾರಿಗಳು, ಧವಸ-ಧಾನ್ಯ, ಸೊಪ್ಪು, ಮಸಾಲೆ ಪದಾರ್ಥಗಳು ಹಾಳಾಗಿವೆ. ಇನ್ನೊಂದೆಡೆ ಸಂತೆ ವಹಿವಾಟಿಗೆ ಅಡಚಣೆ ಉಂಟಾಗಿ ವ್ಯಾಪಾರಿಗಳು ನಷ್ಟ ಅನುಭವಿಸಿದ್ರು.

ತಗ್ಗು ಪ್ರದೇಶಕ್ಕೆ ಭಾರೀ ಪ್ರಮಾಣದ ಮಳೆ ನೀರು ನುಗ್ಗಿ ಬರುತ್ತಿದ್ದರೂ ಅದನ್ನು ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ವ್ಯಾಪಾರಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಹೂವಿನಹಡಗಲಿ: ವಿಪರೀತ ಮಳೆಯಿಂದ ವಾರದ ಸಂತೆ ಮೈದಾನ ಜಲಾವೃತ…!
ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಾರದ ಸಂತೆ ಮೈದಾನವು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ತರಕಾರಿ, ದವಸ- ಧಾನ್ಯಗಳು ನೀರು ಪಾಲಾಗಿವೆ.
ಶನಿವಾರ ಸಂಜೆ ಸರಿಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ತಗ್ಗುಪ್ರದೇಶದಲ್ಲಿದ್ದ
ಈ ವಾರದ ಸಂತೆ ಮೈದಾನಕ್ಕೆ ಎತ್ತರದ ಪ್ರದೇಶದಿಂದ ಮಳೆಯ ನೀರಿನ ಕೋಡಿ ಹರಿದುಬಂದಿದೆ.‌ ಇತ್ತೀಚೆಗೆ ಸುತ್ತಲೂ ಕಂಪೌಂಡ್ ನಿರ್ಮಿಸಿದ್ದರೂ ಮಳೆಯ ನೀರು ಹರಿದು ಹೋಗುವ ಮಾರ್ಗ ಮಾತ್ರ ನಿರ್ಮಿಸದೇ ಇರೋದರಿಂದ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ಕೆಲವೇ ಕ್ಷಣಗಳಲ್ಲಿ ಸಂತೆ ಮೈದಾನ ಕೆರೆಯಂತಾಗಿದೆ.
ಈ ಸಂತೆ ಮೈದಾನದಲ್ಲಿ ಮಳೆಯಿಂದ ರಕ್ಷಣೆ ಪಡೆಯಲು ಯಾವುದೇ ಕಟ್ಟಡ, ಗಿಡಮರಗಳು ಇಲ್ಲದ ಕಾರಣ ವ್ಯಾಪಾರಿಗಳು ತಮ್ಮ ಸರಕು, ಸಾಮಗ್ರಿಗಳನ್ನು ರಕ್ಷಿಸಿಕೊಳ್ಳಲು ಪರದಾಡಿದ ಪ್ರಸಂಗ ನಡೆಯಿತು.
ಅಪಾರ ಪ್ರಮಾಣದ ತರಕಾರಿಗಳು ನೀರಿನಲ್ಲಿ ತೇಲಿ ಹೋದವು. ದವಸ, ಧಾನ್ಯ, ಸೊಪ್ಪು, ಮಸಾಲೆ ಪದಾರ್ಥಗಳು ನೀರು ಪಾಲಾದವು. ಮಳೆ ನೀರಿನಿಂದ ತರಕಾರಿಗಳು ಹಾಳಾಗಿದ್ದು ಒಂದೆಡೆಯಾದರೆ, ಸಂತೆವಹಿವಾಟಿಗೆ ಅಡಚಣೆ ಉಂಟಾಗಿ ವ್ಯಾಪಾರಿಗಳು ನಷ್ಟ ಅನುಭವಿಸಿದರು. ಮೈದಾನದ ತುಂಬ
ನೀರು ನಿಂತಿದ್ದರಿಂದ ಸಂತೆಗೆ ಬಂದಿದ್ದ ಸಾರ್ವಜನಿಕರು ತೊಂದರೆ ಅನುಭವಿಸು
ವಂತಾಯಿತು.
Body:ಮಳೆಗಾಲದ ಸಂದರ್ಭ ಪ್ರತಿವಾರದ ಸಂತೆ ಮೈದಾನ ಜಲಾವೃತ ಗೊಳ್ಳುತ್ತದೆ. ತಗ್ಗು ಪ್ರದೇಶಕ್ಕೆ ಭಾರೀ ಪ್ರಮಾಣದ ಮಳೆ ನೀರು ನುಗ್ಗಿ ಬರುತ್ತಿದ್ದರೂ ಅದನ್ನು ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ವ್ಯಾಪಾರಿಗಳು ಪುರಸಭೆ ವಿರುದ್ಧ ಅತೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆಯವರು ತಪ್ಪದೇ ಜಕಾತಿ ವಸೂಲಿ ಮಾಡುತ್ತಾರೆ.
ಆದರೆ, ಸಂತೆ ಮೈದಾನದಲ್ಲಿ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಿಲ್ಲ. ಸಂತೆ ಮೈದಾನಕ್ಕೆ ಕಾಂಕ್ರೀಟ್ ಹಾಕಿ ಅಭಿವೃದ್ಧಿಪಡಿಸಿ, ಮಳೆ
ನೀರು ನುಗ್ಗದಂತೆ ಸೂಕ್ತಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_HADAGALI_HEAVY_RAIN_VISUALS_7203310

KN_BLY_1a_HADAGALI_HEAVY_RAIN_VISUALS_7203310

KN_BLY_1b_HADAGALI_HEAVY_RAIN_VISUALS_7203310

KN_BLY_1c_HADAGALI_HEAVY_RAIN_VISUALS_7203310

KN_BLY_1d_HADAGALI_HEAVY_RAIN_VISUALS_7203310

KN_BLY_1e_HADAGALI_HEAVY_RAIN_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.