ETV Bharat / state

ಜಿಂದಾಲ್ ಪಕ್ಕದಲ್ಲೇ ಕುರಿ ಸಾಕಾಣಿಕೆಗೆ 50 ಎಕರೆ ಭೂಮಿ ಕೊಡಿ... ಸಿಎಂಗೆ ಪತ್ರ ಬರೆದ ವಕೀಲ!

ನೂತನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಮುಖೇನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಗಣಿನಾಡಿನ ವಕೀಲರೊಬ್ಬರು ಕುರಿ ಸಾಕಾಣಿಕೆಗೆ ಭೂಮಿ ಕೊಡಿ ಎಂದು ಪತ್ರ ಬರೆದಿದ್ದಾರೆ.

author img

By

Published : Jun 28, 2019, 11:38 AM IST

ಟಿ.ಕೆ.ಕಾಮೇಶ

ಬಳ್ಳಾರಿ: ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿ ಪರಭಾರೆ ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಗಣಿನಾಡಿನ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುರಿ ಸಾಕಾಣಿಕೆಗೆ ತಮಗೂ ಭೂಮಿ ಕೊಡಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಜಿಲ್ಲೆಯ ಕುಡಿತಿನಿ ಪಟ್ಟಣದ ನಿವಾಸಿಯಾಗಿರುವ ವಕೀಲ ಟಿ.ಕೆ. ಕಾಮೇಶ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ನೂತನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಮುಖೇನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರವಾನಿಸಿದ್ದಾರೆ.

farming beside Jindal
ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದ ಪತ್ರ

ಈ ಕುರಿತು 'ಈಟಿವಿ ಭಾರತ'​ನೊಂದಿಗೆ ಮಾತನಾಡಿದ ಕಾಮೇಶ ಅವರು, ಕೇವಲ 1.20 ಲಕ್ಷ ರೂ.ಗೆ ಎಕರೆಯಂತೆ ಜಿಂದಾಲ್​​​ಗೆ ಭೂಮಿ ಪರಭಾರೆ ಮಾಡಿರೋದಕ್ಕೆ ನನ್ನ ವಿರೋಧವಿದೆ. ನೂರಾರು ಕೋಟಿ ರೂ.ಗಳ ತೆರಿಗೆಯನ್ನು ಜಿಂದಾಲ್ ಕಂಪನಿ ವಂಚಿಸಿದೆ. ಅದರ ವಸೂಲಿಗೂ ಈ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಜಿಂದಾಲ್ ಕಂಪನಿಯಂತೆ ನಾನೇನು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲ್ಲ. ಜನರನ್ನ ಅಕ್ರಮವಾಗಿ ಒಕ್ಕಲೆಬ್ಬಿಸೋಲ್ಲ.

ರಾಜ್ಯ ಸರ್ಕಾರವು ಎಕರೆಗೆ 1.20 ಲಕ್ಷ ರೂ.ಗೆ ಕೊಡ್ತಿದ್ದೀರಿ. ನಾನು ಎಕರೆಗೆ 2 ಲಕ್ಷ ರೂಪಾಯಿ ಕೊಡ್ತೀನಿ‌. ನನಗೂ 50 ಎಕರೆ ಭೂಮಿ ಕೊಡಿ. ಅಲ್ಲಿ ಕುರಿ ಸಾಕಾಣಿಕೆ ಮಾಡ್ತೀನಿ ಎಂದು ಕಾಮೇಶ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿ ಪರಭಾರೆ ಮಾಡುವ ಸರ್ಕಾರದ ನಿರ್ಧಾರ ಪ್ರಕಟ ಆದಾಗಿನಿಂದ ಜನರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ.

50 ಎಕರೆ ಭೂಮಿಗಾಗಿ ಸಿಎಂ ಪತ್ರ ಬರೆದ ಕುಡಿತಿನಿ ಪಟ್ಟಣದ ವಕೀಲ ಟಿ.ಕೆ. ಕಾಮೇಶ

ನಾನು ನಿಯತ್ತಾಗಿ ಕೆಲಸ ಮಾಡ್ತೀನಿ. 50 ಎಕರೆ ಭೂಮಿಯಲ್ಲಿ ಕುರಿ ಸಾಕಾಣಿಕೆ ಮಾಡೋದರಿಂದ ಇಲ್ಲಿನ ನೂರಾರು ಜನಕ್ಕೆ ಉದ್ಯೋಗ ಸಿಕ್ಕಂತಾಗುತ್ತೆ. ಹೀಗಾಗಿ ನನಗೂ ಭೂಮಿ ಕೊಡಿ ಅಂತಾ ಕಾಮೇಶ ಅವರು ಮೈತ್ರಿ ಸರ್ಕಾರಕ್ಕೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

ಬಳ್ಳಾರಿ: ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿ ಪರಭಾರೆ ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಗಣಿನಾಡಿನ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುರಿ ಸಾಕಾಣಿಕೆಗೆ ತಮಗೂ ಭೂಮಿ ಕೊಡಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.

ಜಿಲ್ಲೆಯ ಕುಡಿತಿನಿ ಪಟ್ಟಣದ ನಿವಾಸಿಯಾಗಿರುವ ವಕೀಲ ಟಿ.ಕೆ. ಕಾಮೇಶ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ನೂತನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಮುಖೇನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರವಾನಿಸಿದ್ದಾರೆ.

farming beside Jindal
ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಬರೆದ ಪತ್ರ

ಈ ಕುರಿತು 'ಈಟಿವಿ ಭಾರತ'​ನೊಂದಿಗೆ ಮಾತನಾಡಿದ ಕಾಮೇಶ ಅವರು, ಕೇವಲ 1.20 ಲಕ್ಷ ರೂ.ಗೆ ಎಕರೆಯಂತೆ ಜಿಂದಾಲ್​​​ಗೆ ಭೂಮಿ ಪರಭಾರೆ ಮಾಡಿರೋದಕ್ಕೆ ನನ್ನ ವಿರೋಧವಿದೆ. ನೂರಾರು ಕೋಟಿ ರೂ.ಗಳ ತೆರಿಗೆಯನ್ನು ಜಿಂದಾಲ್ ಕಂಪನಿ ವಂಚಿಸಿದೆ. ಅದರ ವಸೂಲಿಗೂ ಈ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಜಿಂದಾಲ್ ಕಂಪನಿಯಂತೆ ನಾನೇನು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲ್ಲ. ಜನರನ್ನ ಅಕ್ರಮವಾಗಿ ಒಕ್ಕಲೆಬ್ಬಿಸೋಲ್ಲ.

ರಾಜ್ಯ ಸರ್ಕಾರವು ಎಕರೆಗೆ 1.20 ಲಕ್ಷ ರೂ.ಗೆ ಕೊಡ್ತಿದ್ದೀರಿ. ನಾನು ಎಕರೆಗೆ 2 ಲಕ್ಷ ರೂಪಾಯಿ ಕೊಡ್ತೀನಿ‌. ನನಗೂ 50 ಎಕರೆ ಭೂಮಿ ಕೊಡಿ. ಅಲ್ಲಿ ಕುರಿ ಸಾಕಾಣಿಕೆ ಮಾಡ್ತೀನಿ ಎಂದು ಕಾಮೇಶ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿ ಪರಭಾರೆ ಮಾಡುವ ಸರ್ಕಾರದ ನಿರ್ಧಾರ ಪ್ರಕಟ ಆದಾಗಿನಿಂದ ಜನರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ.

50 ಎಕರೆ ಭೂಮಿಗಾಗಿ ಸಿಎಂ ಪತ್ರ ಬರೆದ ಕುಡಿತಿನಿ ಪಟ್ಟಣದ ವಕೀಲ ಟಿ.ಕೆ. ಕಾಮೇಶ

ನಾನು ನಿಯತ್ತಾಗಿ ಕೆಲಸ ಮಾಡ್ತೀನಿ. 50 ಎಕರೆ ಭೂಮಿಯಲ್ಲಿ ಕುರಿ ಸಾಕಾಣಿಕೆ ಮಾಡೋದರಿಂದ ಇಲ್ಲಿನ ನೂರಾರು ಜನಕ್ಕೆ ಉದ್ಯೋಗ ಸಿಕ್ಕಂತಾಗುತ್ತೆ. ಹೀಗಾಗಿ ನನಗೂ ಭೂಮಿ ಕೊಡಿ ಅಂತಾ ಕಾಮೇಶ ಅವರು ಮೈತ್ರಿ ಸರ್ಕಾರಕ್ಕೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

Intro:ಜಿಂದಾಲ್ ಪಕ್ಕದಲ್ಲೇ ಕುರಿ ಸಾಕಾಣಿಕೆಗೆ 50 ಎಕರೆ ಭೂಮಿ ಕೊಡಿ!
ಬಳ್ಳಾರಿ: ಜಿಂದಾಲ್ ಸಂಸ್ಥೆಗೆ ಅಂದಾಜು 3,667 ಎಕರೆ ಭೂಮಿ ಪರಭಾರೆ ಮಾಡಲು ಹೊರಟ ರಾಜ್ಯ ಸರ್ಕಾರಕ್ಕೆ ಗಣಿನಾಡಿನ ವಕೀಲರೊಬ್ಬರು ಕುರಿ ಸಾಕಾಣಿಕೆಗೆ ಭೂಮಿ ಕೊಡಿ ಎಂದಿದ್ದಾರೆ.
ಜಿಲ್ಲೆಯ ಕುಡಿತಿನಿ ಪಟ್ಟಣದ ನಿವಾಸಿಯಾದ ಟಿ.ಕೆ.ಕಾಮೇಶ ಅವರು ನಿನ್ನೆಯ ದಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ನೂತನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮುಖೇನ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದಾರೆ.
ಈ ಸಂಬಂಧ ಈ ಟಿವಿ ಭಾರತ್ ಪ್ರತಿನಿಧಿಯೊಂದಿಗೆ ಮಾತ
ನಾಡಿದ ಕಾಮೇಶ ಅವರು, ಕೇವಲ 1.20 ಲಕ್ಷ ರೂ.ಗೆ ಎಕರೆ
ಯಂತೆ ಜಿಂದಾಲ್ ಗೆ ಭೂಮಿ ಪರಭಾರೆ ಮಾಡಿರೋದು ನನ್ನ ವಿರೋಧವಿದೆ. ನೂರಾರು ಕೋಟಿ ರೂ.ಗಳ ತೆರಿಗೆಯನ್ನು ಜಿಂದಾಲ್ ಕಂಪನಿ ವಂಚಿಸಿದೆ. ಅದರ ವಸೂಲಿಗೂ ಈ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಜಿಂದಾಲ್ ಕಂಪನಿಯಂತೆ ನಾನೇನು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲ್ಲ. ಜನರನ್ನ ಅಕ್ರಮವಾಗಿ ಒಕ್ಕಲೆಬ್ಬಿಸೋಲ್ಲ. ರಾಜ್ಯ ಸರ್ಕಾರವು ಎಕರೆಗೆ 1.20 ಲಕ್ಷ ರೂ.ಗೆ ಕೊಡ್ತಿದ್ದೀರಿ. ನಾನು ಎಕರೆಗೆ 2 ಲಕ್ಷ ಕೊಡ್ತೀನಿ‌. ನನಗೆ 50 ಎಕರೆ ಭೂಮಿ ಕೊಡಿ. ಅಲ್ಲಿ ಕುರಿ ಸಾಕಾಣಿಕೆ ಮಾಡ್ತೀನಿ ಎಂದು ಕುಡಿತಿನಿ ಗ್ರಾಮದ ಕಾಮೇಶ ಎಂಬುವವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Body:ಜಿಂದಾಲ್ ಸಂಸ್ಥೆಗೆ 3667 ಎಕರೆ ಭೂಮಿ ಪರಭಾರೆ ಮಾಡುವ ಸರ್ಕಾರದ ನಿರ್ಧಾರ ಪ್ರಕಟ ಆದಾಗಿನಿಂದ ಜನರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ. ನಾನು ನಿಯತ್ತಾಗಿ ಕೆಲಸ ಮಾಡ್ತೀನಿ. 50 ಎಕರೆ ಭೂಮಿಯಲ್ಲಿ ಕುರಿ ಸಾಕಾಣಿಕೆ ಮಾಡೋದ್ರಿಂದ ಇಲ್ಲಿನ ನೂರಾರು ಜನಕ್ಕೆ ಉದ್ಯೋಗ ಸಿಕ್ಕಂತಾಗುತ್ತೆ. ಹೀಗಾಗಿ ನನಗೂ ಭೂಮಿ ಕೊಡಿ ಅಂತಾ ಕಾಮೇಶ ಅವರು ಮೈತ್ರಿ ಸರ್ಕಾರಕ್ಕೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_28_JINDAL_BESIDE_LAND_DEMAND_7203310

KN_BLY_01a_28_JINDAL_BESIDE_LAND_DEMAND_7203310

ರಿಪೋರ್ಟರ್ ಆ್ಯಪ್ ಮೂಲಕ ಎರಡು ಬೈಟ್ ಕಳಿಸಿರುವೆ.

KN_BLY_01b_28_JINDAL_BESIDE_LAND_DEMAND_BYTE_7203310

KN_BLY_01c_28_JINDAL_BESIDE_LAND_DEMAND_BYTE_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.