ETV Bharat / state

ತೆಲಂಗಾಣ ಮಾದರಿ ಏತ ನೀರಾವರಿ ಯೋಜನೆ ಜಾರಿಗೆ ರೈತರ ಆಗ್ರಹ

author img

By

Published : Nov 2, 2019, 8:43 PM IST

ತೆಲಂಗಾಣ ಮಾದರಿಯ ಏತ ನೀರಾವರಿ ಯೋಜನೆಯನ್ನು ಹೊಸಪೇಟೆ ತಾಲೂಕಿನ ಅನ್ನದಾತರಿಗೆ ಕೂಡಲೇ ಜಾರಿ ಮಾಡಬೇಕು, ಕಬ್ಬಿನ ಕಾರ್ಖಾನೆಯನ್ನು ಪ್ರಾರಂಭಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.

ತೆಲಂಗಾಣ ಮಾದರಿಯ ಏತನೀರಾವರಿ ಯೋಜನೆಯನ್ನು ಜಾರಿಮಾಡಿ: ಹೊಸಪೇಟೆ ತಾಲೂಕಿನ ರೈತರ ಅಳಲು

ಹೊಸಪೇಟೆ : ನಗರದ ತಾಲೂಕು ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.


ಹೊಸಪೇಟೆ ತಾಲೂಕು ಕಚೇರಿ ಮುಂದೆ ರೈತರ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರಕಾರವು ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಕೂಡಲೇ ಪರಿಹರಿಸಬೇಕೆಂದು ರೈತರು ಒತ್ತಾಯಿಸಿದರು.

ತಾಲೂಕಿನಲ್ಲಿ ತುಂಗಭದ್ರಾ ಜಲಾಶಯ ಇದ್ದರೂ ಸಹ ಹೊಸಪೇಟೆಯ ರೈತರು ನೀರಿಗಾಗಿ ಹೋರಾಟವನ್ನು ಮಾಡುವ ಸಂದರ್ಭ ಸೃಷ್ಟಿಯಾಗಿದೆ. ಸರಕಾರಕ್ಕೆ ಸುಮಾರು ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ಸಾಕಷ್ಟು ಬಾರಿ ಮನವಿಯನ್ನು ನೀಡಿದರು ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜವಾಗಿಲ್ಲ. ರೈತರ ಪರವಾಗಿದ್ದೇವೆ ಎಂದು‌ ಎಲ್ಲಾ ಸರಕಾರಗಳು ಚುನಾವಣೆಯಲ್ಲಿ ಗೆಲ್ಲುವವರೆಗೂ ಹೇಳುತ್ತಾರೆ. ಆದರೆ ಇಲ್ಲಿಯವರೆಗೂ ನಾವು ಹೋರಾಟವನ್ನು ಮಾಡುತ್ತಾ ಬಂದಿದ್ದೇವೆ ಯಾವ ಸರಕಾರವೂ ಏತ ನೀರಾವರಿ ಯೋಜನೆ ಜಾರಿ ಮಾಡುತ್ತಿಲ್ಲವೆಂದು ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ತಾಲೂಕಿನ ಇಂಗಳಿಗಿ ವಡ್ಡರ ಹಳ್ಳಿ, ಪಿ.ಕೆ.ಹಳ್ಳಿ, ಬೈಲುವದ್ದುಗೇರಿ, ಕಾಕುಬಾಳು, ಧರ್ಮಸಾಗರ, ಗುಂಡ್ಲವದ್ದಿಗೇರಿ, ಜಿ.ಜಿ.ಕ್ಯಾಂಪ್, ಕೊಟಿಗನಾಳ್, ಗಾದಿಗನೂರು, ಭುವನಹಳ್ಳಿಯ ತನಕ ತೆಲಂಗಾಣ ಮಾದರಿ ಏತನೀರಾವರಿ ಯೋಜನೆಯನ್ನು ಕೂಡಲೇ ಜಾರಿ ಮಾಡಬೇಕು. ತಾಲೂಕಿನ ‌ಎಲ್ಲಾ ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬೇಕು ಎಂದರು. ಕಬ್ಬಿನ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಾಶವಾದ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ‌ ಪರಿಹಾರವನ್ನು ಒದಗಿಸಿಕೊಡಬೇಕು. ರೈತರಿಗೆ ಸಾಲ ಮನ್ನಾದ ಶ್ವೇತ‌ಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಹೊಸಪೇಟೆ : ನಗರದ ತಾಲೂಕು ಕಚೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.


ಹೊಸಪೇಟೆ ತಾಲೂಕು ಕಚೇರಿ ಮುಂದೆ ರೈತರ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರಕಾರವು ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಕೂಡಲೇ ಪರಿಹರಿಸಬೇಕೆಂದು ರೈತರು ಒತ್ತಾಯಿಸಿದರು.

ತಾಲೂಕಿನಲ್ಲಿ ತುಂಗಭದ್ರಾ ಜಲಾಶಯ ಇದ್ದರೂ ಸಹ ಹೊಸಪೇಟೆಯ ರೈತರು ನೀರಿಗಾಗಿ ಹೋರಾಟವನ್ನು ಮಾಡುವ ಸಂದರ್ಭ ಸೃಷ್ಟಿಯಾಗಿದೆ. ಸರಕಾರಕ್ಕೆ ಸುಮಾರು ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ಸಾಕಷ್ಟು ಬಾರಿ ಮನವಿಯನ್ನು ನೀಡಿದರು ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜವಾಗಿಲ್ಲ. ರೈತರ ಪರವಾಗಿದ್ದೇವೆ ಎಂದು‌ ಎಲ್ಲಾ ಸರಕಾರಗಳು ಚುನಾವಣೆಯಲ್ಲಿ ಗೆಲ್ಲುವವರೆಗೂ ಹೇಳುತ್ತಾರೆ. ಆದರೆ ಇಲ್ಲಿಯವರೆಗೂ ನಾವು ಹೋರಾಟವನ್ನು ಮಾಡುತ್ತಾ ಬಂದಿದ್ದೇವೆ ಯಾವ ಸರಕಾರವೂ ಏತ ನೀರಾವರಿ ಯೋಜನೆ ಜಾರಿ ಮಾಡುತ್ತಿಲ್ಲವೆಂದು ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ತಾಲೂಕಿನ ಇಂಗಳಿಗಿ ವಡ್ಡರ ಹಳ್ಳಿ, ಪಿ.ಕೆ.ಹಳ್ಳಿ, ಬೈಲುವದ್ದುಗೇರಿ, ಕಾಕುಬಾಳು, ಧರ್ಮಸಾಗರ, ಗುಂಡ್ಲವದ್ದಿಗೇರಿ, ಜಿ.ಜಿ.ಕ್ಯಾಂಪ್, ಕೊಟಿಗನಾಳ್, ಗಾದಿಗನೂರು, ಭುವನಹಳ್ಳಿಯ ತನಕ ತೆಲಂಗಾಣ ಮಾದರಿ ಏತನೀರಾವರಿ ಯೋಜನೆಯನ್ನು ಕೂಡಲೇ ಜಾರಿ ಮಾಡಬೇಕು. ತಾಲೂಕಿನ ‌ಎಲ್ಲಾ ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬೇಕು ಎಂದರು. ಕಬ್ಬಿನ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಾಶವಾದ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ‌ ಪರಿಹಾರವನ್ನು ಒದಗಿಸಿಕೊಡಬೇಕು. ರೈತರಿಗೆ ಸಾಲ ಮನ್ನಾದ ಶ್ವೇತ‌ಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು.

Intro:ತೆಲಂಗಾಣ ಮಾದರಿಯ ಏತನೀರಾವರಿ ಯೋಜನೆಯನ್ನು ಜಾರಿಮಾಡಿ: ಹೊಸಪೇಟೆ ತಾಲೂಕಿನ ರೈತರ ಅಳಲು
ಹೊಸಪೇಟೆ : ನಗರದ ತಾಲೂಕು ಕಛೇರಿಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲೆ, ಇಂದು ರೈತರು ಸರಕಾರದ ವಿರುದ್ಧ ಘೋಷಣೆಯನ್ನು ಕೂಗುತ್ತಾ ತೆಲಂಗಾಣ ಮಾದರಿಯ ಏತಾನೀರಾವರಿ ಯೋಜನೆಯನ್ನು ಹೊಸಪೇಟೆ ತಾಲೂಕಿನ ಅನ್ನದಾತರಿಗೆ ಕೂಡಲೇ ಜಾರಿಮಾಡಬೇಕು .ಕಬ್ಬಿನ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷರು ಮಾತನಾಡಿದರು.



Body:ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರವು ರೈತರಿಗೆ ಅನ್ಯಾವನ್ನು ಮಾಡುತ್ತಿದೆ. ರೈತರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಕೂಡಲೇ ಪರಿ ಹರಿಸಬೇಕೆಂದು ನಗರದ ರಿಡಿಂಗ್ ರೂಂನಿಂದ ಹಿಡಿದು ಶಾನಭಾಗ್ ವೃತ್ತದ ವರೆಗೆ ಮಾನವ ಸರಪಳಿಯ ಮುಖಾಂತರ ರೈತರು ಸರಕಾರಕ್ಕೆ ಬೇಡಿಕೆಗಳನ್ನು ಹಿಡೆರಿಸಬೇಕೆಂದು ಒತ್ತಾಯಿಸಿದರು.
ತಾಲೂಕಿನಲ್ಲಿ ತುಂಗಭದ್ರಾ ಜಲಾಶಯ ಇದ್ದರು ಸಹ ಹೊಸಪೇಟೆಯ ರೈತರು ನೀರಿಗಾಗಿ ಹೋರಾಟವನ್ನು ಮಾಡುವ ಸಂದರ್ಭ ತಾಲೂಕಿನಲ್ಲಿ ಸೃಷ್ಟಿಯಾಗಿದೆ. ಸರಕಾರಕ್ಕೆ ಸುಮಾರು ವರ್ಷಗಳಿಂದ ನಮ್ಮ ಬೇಡಿಕೆಗಳನ್ನು ಪೂರೈಸಬೇಕೆಂದು ಸಾಕಷ್ಟು ಬಾರಿ ಮನವಿಯನ್ನು ನೀಡಿದರು ಇಲ್ಲಿಯವರೆಗೂ ಯಾವುದೇ ರೀತಿಯ ಪ್ರಯೋಜನೆಯಾಗಿಲ್ಲ. ರೈತರ ಪರವಾಗಿದ್ದೇವೆ ಎಂದು‌ ಎಲ್ಲಾ ಸರಕಾರಗಳು ಚುನಾವಣೆಯಲ್ಲಿ ಗೆಲ್ಲುವರೆಗೂ ಹೇಳುತ್ತಾರೆ. ಆದರೆ ಇಲ್ಲಿಯವರೆಗೂ ನಾವು ಹೋರಾಟವನ್ನು ಮಾಡುತ್ತ ಬಂದಿದ್ದೇವೆ ಯಾವ ಸರಕಾರವು ನಮ್ಮ ಏತನೀರಾವರಿ ಯೋಜನೆ ಜಾರಿ ಮಾಡುತ್ತಿಲ್ಲ ಎಂದು ಹೋರಾಟವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ತಾಲೂಕಿನ ಇಂಗಳಿಗಿ ವಡ್ಡರ ಹಳ್ಳಿ ,ಪಿ.ಕೆ.ಹಳ್ಳಿ, ಬೈಲುವದ್ದುಗೇರಿ, ಕಾಕುಬಾಳು, ಧರ್ಮಸಾಗರ,ಗುಂಡ್ಲವದ್ದಿಗೇರಿ, ಜಿ.ಜಿ.ಕ್ಯಾಂಪ್,ಕೊಟಿಗನಾಳ್,ಗಾಧಿಗನೂರು, ಭುವನಹಳ್ಳಿಯ ತನಕ ತೆಲಂಗಾಣ ಏತನೀರಾವರಿ ಯೋಜನೆಯನ್ನು ಕೂಡಲೇ ಜಾರಿಮಾಡಬೇಕು. ತಾಲೂಕಿನ ‌ಎಲ್ಲಾ ಗ್ರಾಮಗಳ ಕೆರೆಗಳಿಗೆ ನೀರನ್ನು ತುಂಬಿಸಬೇಕು ಎಂದರು. ಕಬ್ಬಿನ ಕಾರ್ಖಾನೆಯನ್ನು ಪ್ರಾರಂಭಿಸಬೇಕು. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ನಾಶವಾದ ಬೆಳೆಗಳಿಗೆ ಸೂಕ್ತ ರೀತಿಯಲ್ಲಿ‌ ಪರಹಾರವನ್ನು ಒದಗಿಸಿಕೊಡಬೇಕು. ರೈತರಿಗೆ ಸಾಲ ಮನ್ನಾದ ಶ್ವೇತ‌ಪತ್ರವನ್ನು ನೀಡಬೇಕು ಎಂದು ಮಾತನಾಡಿದರು.


Conclusion:KN_HPT_3_FARMERS_FROTEST_ VISUALS_KA10028
BITE : ಗೋಣಿಬಸಪ್ಪ ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ರೈತ ಸಂಘದ ಬಳ್ಳಾರಿ ಜಿಲ್ಲಾ ಅಧ್ಯಕ್ಷ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.