ETV Bharat / state

ಶ್ರಾವಣ ಸೋಮವಾರ: ಹಳೇ ಕೋಟೆ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ

author img

By

Published : Aug 5, 2019, 9:17 AM IST

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಹಳೇ ಕೋಟೆ ವೀರಭದ್ರೇಶ್ವರ ದೇಗುಲದಲ್ಲಿ ಶ್ರಾವಣ ಮಾಸದ ಮೊದಲನೇ ಸೋಮವಾರದ ಪ್ರಯುಕ್ತ ನೂರಾರು ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಹಳೇ ಕೋಟೆ ವೀರಭದ್ರೇಶ್ವರ ಸ್ವಾಮಿ

ಬಳ್ಳಾರಿ: ಶ್ರಾವಣ ಮಾಸದ ಮೊದಲನೇಯ ಸೋಮವಾರದ ನಿಮಿತ್ತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇ ಕೋಟೆ ವೀರಭದ್ರೇಶ್ವರ ದೇಗುಲಕ್ಕಿಂದು ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಹಳೇ ಕೋಟೆ ವೀರಭದ್ರೇಶ್ವರ ದೇಗುಲದ ಆವರಣದಲ್ಲೇ ಭಾನುವಾರದ ರಾತ್ರಿ ಕಳೆದ ನೂರಾರು ಭಕ್ತರು, ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಎದ್ದು, ಮಡೆಸ್ನಾನ ಪೂರೈಸಿ ಕುಟುಂಬ ಸದಸ್ಯರ ಹೆಸರಲ್ಲಿ ರುದ್ರಾಭಿಷೇಕ ನೆರವೇರಿಸಿದರು.

ಓಂ ನಮಃ ಶಿವಾಯ ಮಂತ್ರ ಜಪ:

ಹಾಲು, ಮೊಸರು, ತುಪ್ಪ ಮಿಶ್ರಿತ ನೀರಿನಿಂದ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಿದ ಭಕ್ತರು, ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿದರು. ನೆರೆಯ ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ ಹಾಗೂ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ರಾಯಚೂರು, ಕೊಪ್ಪಳ ಜಿಲ್ಲೆಯ ನಾನಾ ಗ್ರಾಮಗಳಿಂದ ಬಂದ ನೂರಾರು ಭಕ್ತರು ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದರು.

ವೀರಭದ್ರೇಶ್ವರ ಸ್ವಾಮಿಯ ದೇಗುಲದಲ್ಲಿ ವಿಶೇಷ ಪೂಜೆ

ಮೂರನೇ ಸೋಮವಾರ ವಿಶೇಷ ಅಲಂಕಾರ:

ಶ್ರಾವಣ ಮಾಸದ ಮೂರನೇಯ ಸೋಮವಾರದಂದು ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಆಭರಣಗಳ ಅಲಂಕಾರ ಇರಲಿದೆ ಎಂದು ದೇವಸ್ಥಾನ ಅರ್ಚಕರಾದ ಎಸ್.ವೀರಭದ್ರಯ್ಯ ಸ್ವಾಮಿ ತಿಳಿಸಿದ್ದಾರೆ. ಆ ದಿನದಂದು ತಾಲೂಕಿನ ಯರಕಲ್ಲು ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಗಂಗೆ ಸ್ನಾನ ಮಾಡಿಕೊಂಡು ವೀರಭದ್ರ ದೇವರ ಒಡಪು ಹೇಳಿಕೊಂಡೇ ಹಳೇಕೋಟೆ ಗ್ರಾಮಕ್ಕೆ ವೀರಭದ್ರೇಶ್ವರ ಮೂರ್ತಿಯನ್ನು ತರಲಾಗುವುದು. ಯರಕಲ್ಲು ಮತ್ತು ಹಳೇಕೋಟೆ ಗ್ರಾಮದ ರಾಜಬೀದಿಯಲ್ಲಿ ವೀರಭದ್ರ ದೇವರ ಮೂರ್ತಿಯ ಮೆರವಣಿಗೆ ನಡೆಸಲಾಗುವು ಎಂದರು.

ಬಳ್ಳಾರಿ: ಶ್ರಾವಣ ಮಾಸದ ಮೊದಲನೇಯ ಸೋಮವಾರದ ನಿಮಿತ್ತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇ ಕೋಟೆ ವೀರಭದ್ರೇಶ್ವರ ದೇಗುಲಕ್ಕಿಂದು ನೂರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಹಳೇ ಕೋಟೆ ವೀರಭದ್ರೇಶ್ವರ ದೇಗುಲದ ಆವರಣದಲ್ಲೇ ಭಾನುವಾರದ ರಾತ್ರಿ ಕಳೆದ ನೂರಾರು ಭಕ್ತರು, ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಎದ್ದು, ಮಡೆಸ್ನಾನ ಪೂರೈಸಿ ಕುಟುಂಬ ಸದಸ್ಯರ ಹೆಸರಲ್ಲಿ ರುದ್ರಾಭಿಷೇಕ ನೆರವೇರಿಸಿದರು.

ಓಂ ನಮಃ ಶಿವಾಯ ಮಂತ್ರ ಜಪ:

ಹಾಲು, ಮೊಸರು, ತುಪ್ಪ ಮಿಶ್ರಿತ ನೀರಿನಿಂದ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಿದ ಭಕ್ತರು, ಓಂ ನಮಃ ಶಿವಾಯ ಮಂತ್ರವನ್ನು ಜಪಿಸಿದರು. ನೆರೆಯ ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ ಹಾಗೂ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು, ಮಾನ್ವಿ, ರಾಯಚೂರು, ಕೊಪ್ಪಳ ಜಿಲ್ಲೆಯ ನಾನಾ ಗ್ರಾಮಗಳಿಂದ ಬಂದ ನೂರಾರು ಭಕ್ತರು ವೀರಭದ್ರೇಶ್ವರ ಸ್ವಾಮಿಯ ದರ್ಶನ ಪಡೆದರು.

ವೀರಭದ್ರೇಶ್ವರ ಸ್ವಾಮಿಯ ದೇಗುಲದಲ್ಲಿ ವಿಶೇಷ ಪೂಜೆ

ಮೂರನೇ ಸೋಮವಾರ ವಿಶೇಷ ಅಲಂಕಾರ:

ಶ್ರಾವಣ ಮಾಸದ ಮೂರನೇಯ ಸೋಮವಾರದಂದು ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಆಭರಣಗಳ ಅಲಂಕಾರ ಇರಲಿದೆ ಎಂದು ದೇವಸ್ಥಾನ ಅರ್ಚಕರಾದ ಎಸ್.ವೀರಭದ್ರಯ್ಯ ಸ್ವಾಮಿ ತಿಳಿಸಿದ್ದಾರೆ. ಆ ದಿನದಂದು ತಾಲೂಕಿನ ಯರಕಲ್ಲು ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಗಂಗೆ ಸ್ನಾನ ಮಾಡಿಕೊಂಡು ವೀರಭದ್ರ ದೇವರ ಒಡಪು ಹೇಳಿಕೊಂಡೇ ಹಳೇಕೋಟೆ ಗ್ರಾಮಕ್ಕೆ ವೀರಭದ್ರೇಶ್ವರ ಮೂರ್ತಿಯನ್ನು ತರಲಾಗುವುದು. ಯರಕಲ್ಲು ಮತ್ತು ಹಳೇಕೋಟೆ ಗ್ರಾಮದ ರಾಜಬೀದಿಯಲ್ಲಿ ವೀರಭದ್ರ ದೇವರ ಮೂರ್ತಿಯ ಮೆರವಣಿಗೆ ನಡೆಸಲಾಗುವು ಎಂದರು.

Intro:ಶ್ರಾವಣ ಸೋಮವಾರ: ಹಳೇಕೋಟೆ ವೀರಭದ್ರೇಶ್ವರ ಸ್ವಾಮಿಯ ದೇಗುಲಕ್ಕೆ ಭಕ್ತರ ವಿಶೇಷಪೂಜೆ
ಬಳ್ಳಾರಿ: ಶ್ರಾವಣ ಮಾಸದ ಮೊದಲನೇಯ ಸೋಮ
ವಾರದ ನಿಮಿತ್ತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇ
ಕೋಟೆ ವೀರಭದ್ರೇಶ್ವರ ದೇಗುಲಕ್ಕಿಂದು ನೂರಾರು ಭಕ್ತರು ವಿಶೇಷಪೂಜೆ ಸಲ್ಲಿಸುವ ಮುಖೇನ ಭಕ್ತಿ ಮೆರೆದರು.
ಹಳೇಕೋಟೆ ವೀರಭದ್ರೇಶ್ವರ ದೇಗುಲದ ಆವರಣದಲ್ಲೇ ಭಾನುವಾರದ ರಾತ್ರಿ ಕಳೆದ ನೂರಾರು ಭಕ್ತರು ಸೋಮ
ವಾರ ನಸುಕಿನಜಾವ 3 ಗಂಟೆಯ ಸುಮಾರಿಗೆ ಮೇಲೆದ್ದು, ಮಡೆಸ್ನಾನ ಪೂರೈಸಿ ಕುಟುಂಬ ಸದಸ್ಯರ ಹೆಸರಲ್ಲಿ ರುದ್ರಾಭಿಷೇಕ ನೆರವೇರಿಸಿದರು.
ದೀರ್ಘದಂಡ ನಮಸ್ಕಾರ: ಶ್ರಾವಣ ಮಾಸದ ಆರಂಭವಾಗಿದ್ದರಿಂದ ವೀರಭದ್ರೇಶ್ವರ ದೇಗುಲದ
ದ್ವಾರದ ಬಾಗಿಲಿನಿಂದ ಭಕ್ತೆಯೋರ್ವಳು ಮಡೆಸ್ನಾನ ಕೈಗೊಳ್ಳುವ ಮುಖೇನ ದೇಗುಲದ ಸುತ್ತಲೂ ದೀರ್ಘದಂಡ ನಮಸ್ಕಾರ ಮಾಡುವ ಮುಖೇನ ಹರಕೆಯನ್ನು ತೀರಿಸಿದರು.


Body:ದಂಪತಿ ಲಿಂಗಪೂಜೆ: ಈ ದೇಗುಲದ ದ್ವಾರದ ಬಾಗಿಲಿನ ಬಳಿ ದಂಪತಿಗಳು ಲಿಂಗಪೂಜೆ ಮಾಡಿಕೊಂಡು ಕಾಯಕ ತತ್ವವನ್ನು ಪಾಲಿಸುವ ಸಂದೇಶ ಸಾರುವ ಮುಖೇನ ಬಸವಾದಿ ಶರಣರ ಮೆಲುಕು ಹಾಕಿದರು.
ಅಂಗೈಯಲ್ಲಿ ಲಿಂಗವನ್ನಿಟ್ಟುಕೊಂಡ ಆ ದಂಪತಿಗಳು ವಿಭೂತಿ, ಬಿಲ್ವಪತ್ರೆ ಹಾಗೂ ಕುಂಕುಮಾರ್ಚನೆ ಮತ್ತು ನೈವೇದ್ಯ ಮಾಡಿ ಪೂಜೆ ಸಲ್ಲಿಸಿರೋದು ವಿಶೇಷವೆನಿಸಿತು.
ಓಂ ನಮಃ ಶಿವಾಯ ಮಂತ್ರಜಪ: ಹಾಲಿನ, ಮೊಸರು, ತುಪ್ಪ ಮಿಶ್ರಿತ ನೀರಿನಿಂದ ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಿದ ಭಕ್ತರು, ಓಂ ನಮಃ ಶಿವಾಯ ಮಂತ್ರದ ಜಪವು ಘೋಷಿಸಿದರು.
ನೆರೆಯ ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ಹೊಸಪೇಟೆ, ಸಿರುಗುಪ್ಪ ಹಾಗೂ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಯ ಸಿಂಧನೂರು, ಮಾನವಿ, ರಾಯಚೂರು, ಕೊಪ್ಪಳ ಜಿಲ್ಲೆಯ ನಾನಾ ಗ್ರಾಮಗಳಿಂದ ನೂರಾರು ಭಕ್ತರು ವೀರಭದ್ರೇಶ್ವರ ಸ್ವಾಮಿಯ ದರುಶನ ಭಾಗ್ಯ ಪಡೆದರು.
ಮೂರನೇ ಸೋಮವಾರ ವಿಶೇಷ ಅಲಂಕಾರ: ಶ್ರಾವಣ ಮಾಸದ ಮೂರನೇಯ ಸೋಮವಾರದಂದು ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಆಭರಣಗಳ ಅಲಂಕಾರ ಇರಲಿದೆ ಎಂದು ದೇವಸ್ಥಾನ ಅರ್ಚಕರಾದ ಎಸ್.ವೀರಭದ್ರಯ್ಯಸ್ವಾಮಿ ತಿಳಿಸಿ ದ್ದಾರೆ.
ಆ ದಿನದಂದು ತಾಲೂಕಿನ ಯರಕಲ್ಲು ಗ್ರಾಮದ ಬಳಿಯ ತುಂಗಭದ್ರಾ ನದಿಯಿಂದ ಗಂಗೆ ಸ್ಥಾನ ಮಾಡಿಕೊಂಡು ವೀರಭದ್ರದೇವರ ಒಡಪು ಹೇಳಿಕೊಂಡೇ ಹಳೇಕೋಟೆ ಗ್ರಾಮಕ್ಕೆ ವೀರಭದ್ರೇಶ್ವರ ಮೂರ್ತಿಯನ್ನು ತರಲಾಗುವುದು. ಯರಕಲ್ಲು ಮತ್ತು ಹಳೇಕೋಟೆ ಗ್ರಾಮದ ರಾಜಬೀದಿಯಲ್ಲಿ ವೀರಭದ್ರದೇವರ ಮೂರ್ತಿಯ ಮೆರವಣಿಗೆ ನಡೆಸಲಾಗುವು ದೆಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.




Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.