ETV Bharat / state

ಅನ್​ಲಾಕ್​​ ಬಳಿಕವೂ ಹೋಟೆಲ್​​​-ರೆಸ್ಟೋರೆಂಟ್​ಗಳಿಗೆ ಬರುವ ಗ್ರಾಹಕರ ಸಂಖ್ಯೆ ವಿರಳ - Restaurant owners

ಲಾಕ್​​​​ಡೌನ್​​​ನಿಂದಾಗಿ ಹಲವು ಉದ್ಯಮಗಳು ಸಂಕಷ್ಟಕ್ಕೆ ಒಳಗಾಗಿವೆ. ಅದರಲ್ಲೂ ಹೋಟೆಲ್​ ಹಾಗೂ ರೆಸ್ಟೋರೆಂಟ್​​ ಉದ್ಯಮ ಲಾಕ್​​​​​ಡೌನ್​​ನಿಂದಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದು, ಲಾಕ್​​​​ಡೌನ್ ಸಡಲಿಕೆ ಬಳಿಕವೂ ಜನರ ಆಗಮನವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ.

Customers don't get into restaurants after unlock from lockdown
ಅನ್​ಲಾಕ್​​ ಬಳಿಕವೂ ರೆಸ್ಟೋರೆಂಟ್​ಗಳತ್ತ ಸುಳಿಯದ ಗ್ರಾಹಕರು
author img

By

Published : Sep 1, 2020, 5:40 PM IST

ಬಳ್ಳಾರಿ: ಅನ್​​​​ಲಾಕ್ 3.0 ಜಾರಿಗೊಂಡ ಬಳಿಕ ಗಣಿನಾಡಿನ ರೆಸ್ಟೋರೆಂಟ್​​​ಗಳೆಲ್ಲಾ ಗ್ರಾಹಕರಿಲ್ಲದೇ ಬಣಗುಡುತ್ತಿವೆ.‌ ಕೋವಿಡ್ ಸೋಂಕಿನ ಭಯದಿಂದಲೇ ರೆಸ್ಟೋರೆಂಟ್​​​​ಗಳತ್ತ ಗ್ರಾಹಕರು ಸುಳಿದಾಡುತ್ತಿಲ್ಲ. ಇದರಿಂದ ಶೇ.60ರಷ್ಟು ಪ್ರಮಾಣದ ವ್ಯವಹಾರ ಕಡಿಮೆಯಾಗಿದೆ.

‌ಹೌದು, ಅನ್​​​ಲಾಕ್ 3.0 ಜಾರಿಗೊಂಡ ಬಳಿಕ ಜಿಲ್ಲೆಯ ರೆಸ್ಟೋರೆಂಟ್​ಗಳ ಮಾಲೀಕರು ವ್ಯವಹಾರ ಯಥಾಸ್ಥಿತಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಇದರಿಂದ ಆರ್ಥಿಕ ಸಂಕಷ್ಟ ದೂರಾಗಲಿದೆ ಎಂಬೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.

ಆದರೆ ಪ್ರಸ್ತುತ ಸ್ಥಿತಿ ಬೇರೆಯದ್ದೇ ಕಥೆ ಹೇಳುತ್ತಿದ್ದು, ಶೇ 60ರಷ್ಟು ವ್ಯವಹಾರ ಕುಸಿದಿದೆ. ಸದ್ಯ ಆನ್​​ಲೈನ್ ಮಾರುಕಟ್ಟೆಯಲ್ಲಿ 20 ರಿಂದ 30 ರಷ್ಟು ವ್ಯವಹಾರ ನಡೆಯುತ್ತಿದೆ. ಅದರಲ್ಲೂ ಮಾಂಸಾಹಾರ ಸೇವನೆಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಶಾಖಾಹಾರ ಪದಾರ್ಥಗಳ ಮಾರಾಟ ಸಹ ಕಡಿಮೆಯಾಗಿದೆ.

ಅನ್​ಲಾಕ್​​ ಬಳಿಕವೂ ರೆಸ್ಟೋರೆಂಟ್​ಗಳಿಗೆ ಬರುವ ಗ್ರಾಹಕರ ಸಂಖ್ಯೆ ವಿರಳ

ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಪೋಲಾ ರೆಸ್ಟೋರೆಂಟ್ ಮಾಲೀಕ ವಿಕ್ರಮ್ ಪೋಲಾ, ಶೇ. 100ರಷ್ಟು ಬ್ಯುಸಿನೆಸ್ ಇರುವ ನಿರೀಕ್ಷೆಯಲ್ಲಿ ನಾವಂತೂ ಇರಲಿಲ್ಲ. ಅದರ ಅರ್ಧದಷ್ಟು ಬ್ಯುಸಿನೆಸ್ ನಿರೀಕ್ಷೆಯಲ್ಲಿ ನಾವಿದ್ದೆವು. ಆದ್ರೆ, ಅದೆಲ್ಲಾ ಉಲ್ಟಾ ಆಗಿದೆ.‌ ಶೇ. 40ರಷ್ಟು ಮಾತ್ರ ಬ್ಯುಸಿನೆಸ್ ಆಗುತ್ತಿದೆ‌.‌ ಆನ್​ಲೈನ್ ಮಾರುಕಟ್ಟೆಯೂ ಕೂಡ ಮಂದಗತಿಯಲ್ಲಿ ಸಾಗುತ್ತಿದೆ ಎಂದಿದ್ದಾರೆ.

ಈ ಹಿಂದೆ ಐಸ್​​​ ಕ್ರೀಮ್ ಐಟಮ್​​ಗಳಿಗೆ ಬೇಡಿಕೆ ಇರುತ್ತಿತ್ತು. ಆದರೀಗ ಗಣನೀಯ ಸಂಖ್ಯೆಯಲ್ಲಿ ಬೇಡಿಕೆ ಇಳಿಮುಖವಾಗಿದೆ. ಇನ್ನು ರೆಸ್ಟೋರೆಂಟ್​​​ಗಳತ್ತ ಜನ ಮುಖಮಾಡುತ್ತಿಲ್ಲ. ಹೀಗಾಗಿ ಶೇಕಡಾವಾರು ಬಾಣಸಿಗರು, ಕಾರ್ಮಿಕರನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯ ಎಲ್ಲಾ ರೆಸ್ಟೋರೆಂಟ್​​ಗಳ ಮಾಲೀಕರ ಗೋಳು ಇದಾಗಿದೆ ಎಂದರು.

ಬಳ್ಳಾರಿ: ಅನ್​​​​ಲಾಕ್ 3.0 ಜಾರಿಗೊಂಡ ಬಳಿಕ ಗಣಿನಾಡಿನ ರೆಸ್ಟೋರೆಂಟ್​​​ಗಳೆಲ್ಲಾ ಗ್ರಾಹಕರಿಲ್ಲದೇ ಬಣಗುಡುತ್ತಿವೆ.‌ ಕೋವಿಡ್ ಸೋಂಕಿನ ಭಯದಿಂದಲೇ ರೆಸ್ಟೋರೆಂಟ್​​​​ಗಳತ್ತ ಗ್ರಾಹಕರು ಸುಳಿದಾಡುತ್ತಿಲ್ಲ. ಇದರಿಂದ ಶೇ.60ರಷ್ಟು ಪ್ರಮಾಣದ ವ್ಯವಹಾರ ಕಡಿಮೆಯಾಗಿದೆ.

‌ಹೌದು, ಅನ್​​​ಲಾಕ್ 3.0 ಜಾರಿಗೊಂಡ ಬಳಿಕ ಜಿಲ್ಲೆಯ ರೆಸ್ಟೋರೆಂಟ್​ಗಳ ಮಾಲೀಕರು ವ್ಯವಹಾರ ಯಥಾಸ್ಥಿತಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಇದರಿಂದ ಆರ್ಥಿಕ ಸಂಕಷ್ಟ ದೂರಾಗಲಿದೆ ಎಂಬೆಲ್ಲಾ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು.

ಆದರೆ ಪ್ರಸ್ತುತ ಸ್ಥಿತಿ ಬೇರೆಯದ್ದೇ ಕಥೆ ಹೇಳುತ್ತಿದ್ದು, ಶೇ 60ರಷ್ಟು ವ್ಯವಹಾರ ಕುಸಿದಿದೆ. ಸದ್ಯ ಆನ್​​ಲೈನ್ ಮಾರುಕಟ್ಟೆಯಲ್ಲಿ 20 ರಿಂದ 30 ರಷ್ಟು ವ್ಯವಹಾರ ನಡೆಯುತ್ತಿದೆ. ಅದರಲ್ಲೂ ಮಾಂಸಾಹಾರ ಸೇವನೆಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಶಾಖಾಹಾರ ಪದಾರ್ಥಗಳ ಮಾರಾಟ ಸಹ ಕಡಿಮೆಯಾಗಿದೆ.

ಅನ್​ಲಾಕ್​​ ಬಳಿಕವೂ ರೆಸ್ಟೋರೆಂಟ್​ಗಳಿಗೆ ಬರುವ ಗ್ರಾಹಕರ ಸಂಖ್ಯೆ ವಿರಳ

ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಪೋಲಾ ರೆಸ್ಟೋರೆಂಟ್ ಮಾಲೀಕ ವಿಕ್ರಮ್ ಪೋಲಾ, ಶೇ. 100ರಷ್ಟು ಬ್ಯುಸಿನೆಸ್ ಇರುವ ನಿರೀಕ್ಷೆಯಲ್ಲಿ ನಾವಂತೂ ಇರಲಿಲ್ಲ. ಅದರ ಅರ್ಧದಷ್ಟು ಬ್ಯುಸಿನೆಸ್ ನಿರೀಕ್ಷೆಯಲ್ಲಿ ನಾವಿದ್ದೆವು. ಆದ್ರೆ, ಅದೆಲ್ಲಾ ಉಲ್ಟಾ ಆಗಿದೆ.‌ ಶೇ. 40ರಷ್ಟು ಮಾತ್ರ ಬ್ಯುಸಿನೆಸ್ ಆಗುತ್ತಿದೆ‌.‌ ಆನ್​ಲೈನ್ ಮಾರುಕಟ್ಟೆಯೂ ಕೂಡ ಮಂದಗತಿಯಲ್ಲಿ ಸಾಗುತ್ತಿದೆ ಎಂದಿದ್ದಾರೆ.

ಈ ಹಿಂದೆ ಐಸ್​​​ ಕ್ರೀಮ್ ಐಟಮ್​​ಗಳಿಗೆ ಬೇಡಿಕೆ ಇರುತ್ತಿತ್ತು. ಆದರೀಗ ಗಣನೀಯ ಸಂಖ್ಯೆಯಲ್ಲಿ ಬೇಡಿಕೆ ಇಳಿಮುಖವಾಗಿದೆ. ಇನ್ನು ರೆಸ್ಟೋರೆಂಟ್​​​ಗಳತ್ತ ಜನ ಮುಖಮಾಡುತ್ತಿಲ್ಲ. ಹೀಗಾಗಿ ಶೇಕಡಾವಾರು ಬಾಣಸಿಗರು, ಕಾರ್ಮಿಕರನ್ನು ಕಡಿತಗೊಳಿಸಲಾಗಿದೆ. ಜಿಲ್ಲೆಯ ಎಲ್ಲಾ ರೆಸ್ಟೋರೆಂಟ್​​ಗಳ ಮಾಲೀಕರ ಗೋಳು ಇದಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.