ETV Bharat / state

ನಾ ಮಂತ್ರಿ ಸ್ಥಾನ ಕೇಳಿರಲಿಲ್ಲ, ನನ್ನ ನಿರೀಕ್ಷೆ ಬೇರೆಯದ್ದೇ ಇತ್ತು.. ಸಚಿವ ಸಿ ಟಿ ರವಿ

ನಾನು ಮಂತ್ರಿ ಸ್ಥಾನ ಕೇಳಿರಲಿಲ್ಲ. ನನ್ನ ನಿರೀಕ್ಷೆಯೇ ಬೇರೆ ಇತ್ತು ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಪರೋಕ್ಷವಾಗಿ ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

author img

By

Published : Jan 11, 2020, 7:29 PM IST

ct-ravi
ಸಿ.ಟಿ ರವಿ

ಬಳ್ಳಾರಿ: ನಾನು ಮಂತ್ರಿ ಸ್ಥಾನ ಕೇಳಿರಲಿಲ್ಲ. ನನ್ನ ನಿರೀಕ್ಷೆ ಬೇರೆ ಇತ್ತು ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಪರೋಕ್ಷವಾಗಿ ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಹಂಪಿಯ ಮಲಪನ ಗುಡಿ ಮೈದಾನದಲ್ಲಿಂದು ನಡೆದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮನೆಗೆ ಬಿಡಲು ಬಂದಿದ್ದ ಸರ್ಕಾರಿ ವಾಹನವನ್ನು ವಾಪಸ್ ಕಳಿಸಿರೋದನ್ನ ಕೆಲ ಮಾಧ್ಯಮಗಳು ತಪ್ಪಾಗಿ ಬಿತ್ತರಿಸಿದ್ದವು.

ಸಚಿವ ಸಿ ಟಿ ರವಿ..

ಮಂತ್ರಿಗಿರಿ ಪಡೆಯೋದೊಂದೇ ನನ್ನ ಗುರಿಯಾಗಿದ್ದಿಲ್ಲ. ಅದರಾಚೆಗೂ ನನ್ನ ನಿರೀಕ್ಷೆಯಿತ್ತು. ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಬಿಎಸ್​ವೈಗೆ ಬಿಟ್ಟದ್ದು, ಆ ಕುರಿತು ನಾನೇನು ಹೇಳಲಾರೆ. ಒಂದಂತೂ ನಿಜ. ಸಚಿವ ಸಂಪುಟ ವಿಸ್ತರಣೆ ಆಗುವುದು ಮಾತ್ರ ಖಚಿತ. ಅದು ಯಾವಾಗ ಆಗುತ್ತೆ ಎಂದು ಹೇಳುವುದು ಕಷ್ಟ ಎಂದರು. ಬಹುಶಃ ಇದೇ ತಿಂಗಳಲ್ಲಿ ಅಥವಾ ದೆಹಲಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಬಹುದು ಎಂದರು.

ಹಂಪಿ ಉತ್ಸವದ ಯಶಸ್ಸಿಗೆ ಸ್ಥಳೀಯರ ಸಹಭಾಗಿತ್ವ ಕೂಡ ಅಗತ್ಯ.‌ ಈ ಉತ್ಸವ ಜನೋತ್ಸವ ಆಗಬೇಕು. ಅದಕ್ಕೆ ಸ್ಥಳೀಯರ ಸಹಭಾಗಿತ್ವ ಬಹುಪಾಲು ಬೇಕಿದೆ. ಹಂಪಿ ಉತ್ಸವಕ್ಕೆ ಅಗತ್ಯ ಅನುದಾನ ಕೂಡ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದರು.

ಬಳ್ಳಾರಿ: ನಾನು ಮಂತ್ರಿ ಸ್ಥಾನ ಕೇಳಿರಲಿಲ್ಲ. ನನ್ನ ನಿರೀಕ್ಷೆ ಬೇರೆ ಇತ್ತು ಎಂದು ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಪರೋಕ್ಷವಾಗಿ ಉನ್ನತ ಹುದ್ದೆಯ ಆಕಾಂಕ್ಷಿಯಾಗಿದ್ದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಹಂಪಿಯ ಮಲಪನ ಗುಡಿ ಮೈದಾನದಲ್ಲಿಂದು ನಡೆದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಮನೆಗೆ ಬಿಡಲು ಬಂದಿದ್ದ ಸರ್ಕಾರಿ ವಾಹನವನ್ನು ವಾಪಸ್ ಕಳಿಸಿರೋದನ್ನ ಕೆಲ ಮಾಧ್ಯಮಗಳು ತಪ್ಪಾಗಿ ಬಿತ್ತರಿಸಿದ್ದವು.

ಸಚಿವ ಸಿ ಟಿ ರವಿ..

ಮಂತ್ರಿಗಿರಿ ಪಡೆಯೋದೊಂದೇ ನನ್ನ ಗುರಿಯಾಗಿದ್ದಿಲ್ಲ. ಅದರಾಚೆಗೂ ನನ್ನ ನಿರೀಕ್ಷೆಯಿತ್ತು. ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಬಿಎಸ್​ವೈಗೆ ಬಿಟ್ಟದ್ದು, ಆ ಕುರಿತು ನಾನೇನು ಹೇಳಲಾರೆ. ಒಂದಂತೂ ನಿಜ. ಸಚಿವ ಸಂಪುಟ ವಿಸ್ತರಣೆ ಆಗುವುದು ಮಾತ್ರ ಖಚಿತ. ಅದು ಯಾವಾಗ ಆಗುತ್ತೆ ಎಂದು ಹೇಳುವುದು ಕಷ್ಟ ಎಂದರು. ಬಹುಶಃ ಇದೇ ತಿಂಗಳಲ್ಲಿ ಅಥವಾ ದೆಹಲಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಬಹುದು ಎಂದರು.

ಹಂಪಿ ಉತ್ಸವದ ಯಶಸ್ಸಿಗೆ ಸ್ಥಳೀಯರ ಸಹಭಾಗಿತ್ವ ಕೂಡ ಅಗತ್ಯ.‌ ಈ ಉತ್ಸವ ಜನೋತ್ಸವ ಆಗಬೇಕು. ಅದಕ್ಕೆ ಸ್ಥಳೀಯರ ಸಹಭಾಗಿತ್ವ ಬಹುಪಾಲು ಬೇಕಿದೆ. ಹಂಪಿ ಉತ್ಸವಕ್ಕೆ ಅಗತ್ಯ ಅನುದಾನ ಕೂಡ ಮೀಸಲಿರಿಸಲು ನಿರ್ಧರಿಸಲಾಗಿದೆ ಎಂದರು.

Intro:ನಾನು ಮಂತ್ರಿ ಸ್ಥಾನವನ್ನೇ ಕೇಳಿರಲಿಲ್ಲ; ನನ್ನ ನಿರೀಕ್ಷೆ ಬೇರೆ ಇತ್ತು: ಸಚಿವ ಸಿ.ಟಿ.ರವಿ
ಬಳ್ಳಾರಿ: ನಾನು ಮಂತ್ರಿ ಸ್ಥಾನವನ್ನೇ ಕೇಳಿರಲಿಲ್ಲ. ನನ್ನ ನಿರೀಕ್ಷೆಯೇ ಬೇರೆ ಇತ್ತೆಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಯವರು ಪರೋಕ್ಷವಾಗಿ ಉನ್ನತ ಹುದ್ದೆಯ
ಆಕಾಂಕ್ಷಿಯಾಗಿದ್ದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ
ದ್ದಾರೆ.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಹಂಪಿಯ ಮಲಪನ
ಗುಡಿ ಮೈದಾನದಲ್ಲಿಂದು ನಡೆದ ಕುಸ್ತಿ ಪಂದ್ಯಾವಳಿಗೆ
ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನಾನು ಮಂತ್ರಿಗಿರಿಯಿಂದ ಕೆಳಗೆ ಇಳಿದು
ಮನೆಗೆ ಬಿಡಲು ಬಂದಿದ್ದ ಸರ್ಕಾರಿ ವಾಹನವನ್ನು
ವಾಪಾಸ್ ಕಳಿಸಿರೋದನ್ನ ಕೆಲ ಮಾಧ್ಯಮಗಳು ತಪ್ಪಾಗಿ ಬಿತ್ತರಿಸಿದ್ದವು. ಆಗಾಗಿ, ಮಂತ್ರಿಗಿರಿ ಪಡೆಯೋದೊಂದೇ
ನನ್ನ ಗುರಿಯಾಗಿದ್ದಿಲ್ಲ. ಅದರಾಚೆಗೂ ನನ್ನ ನಿರೀಕ್ಷೆಯಿತ್ತು. ಹೀಗಾಗಿ, ನಿನ್ನೆಯ ದಿನ ಡಿಸಿಎಂ ಲಕ್ಷ್ಮಣ ಸವದಿಯವ್ರು ಆ ರೀತಿಯಾಗಿ ಹೇಳಿದ್ದಾರೆ. ಅವರು ನನ್ನ ಆತ್ಮೀಯ ಸ್ನೇಹಿತರು‌. ಆಗಾಗಿ, ಪ್ರವಾಸೋದ್ಯಮ ಖಾತೆಯನ್ನು ಮುಂದುವರಿಸುವಂತೆ ಹೇಳಿದ್ದಾರೆ ಎಂದ್ರು ಸಚಿವ ರವಿ.



Body:ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಬಿಎಸ್ ವೈಗೆ ಬಿಟ್ಟದ್ದು: ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರ ಸಿಎಂ ಬಿಎಸ್ ಯಡಿಯೂರಪ್ಪನವ್ರಿಗೆ ಬಿಟ್ಟದ್ದು.‌ ಆ ಕುರಿತು ನಾನೇನು ಹೇಳಲಾರೆ. ಒಂದಂತೂ ನಿಜ. ಸಚಿವ ಸಂಪುಟ ವಿಸ್ತರಣೆ ಆಗೋದು ಮಾತ್ರ ಖಚಿತ. ಅದು ಯಾವಾಗ ಆಗುತ್ತೆ
ಎಂಬುದು ಹೇಳೋದು ಕಷ್ಟ ಎಂದ್ರು. ದೇಶದ ಜಾರ್ಖಂಡ್ ಉಪಚುನಾವಣೆ, ಸದ್ಯ ದೆಹಲಿ ಚುನಾವಣೆ ನಡೆದಿದೆ. ಬಹುಶಃ ದೆಹಲಿ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆಗಬಹುದು ಎಂದ್ರು.
ಹಂಪಿ ಉತ್ಸವದ ಯಶಸ್ವಿಗೆ ಸ್ಥಳೀಯರ ಸಹಭಾಗಿತ್ವ ಕೂಡ ಬೇಕು: ಹಂಪಿ ಉತ್ಸವದ ಯಶಸ್ವಿಗೆ ಸ್ಥಳೀಯರ ಸಹಭಾಗಿತ್ವ ಕೂಡ ಅಗತ್ಯವಿದೆ.‌ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಸ್ಥಳೀಯ ಶಾಸಕರ ಬೆಂಬಲ ಕೂಡ ಇದ್ದೇ ಇದೆ. ಆಗಾಗಿ, ನಿನ್ನೆಯ ದಿನ ಶಾಸಕ ಆನಂದಸಿಂಗ್ ವೇದಿಕೆ ಹಂಚಿಕೊಂಡಿ ದ್ದಾರೆ‌.
ಅಲ್ಲದೇ, ಈ ಉತ್ಸವ ಜನೋತ್ಸವ ಆಗಬೇಕು. ಅದಕ್ಕೆ ಸ್ಥಳೀಯರ ಸಹಭಾಗಿತ್ವ ಬಹುಪಾಲು ಬೇಕಿದೆ. ಹಂಪಿ
ಉತ್ಸವಕ್ಕೆ ಅಗತ್ಯ ಅನುದಾನವನ್ನು ಕೂಡ ಮೀಸಲಿರಿ
ಸಲು ನಿರ್ಧರಿಸಲಾಗಿದೆ. ದಿನಾಂಕ‌ ನಿಗದಿಯಿಂದಲೂ
ಹಿಡಿದು ದೇಶ- ವಿದೇಶಿಯರನ್ನ ಈ ಹಂಪಿ ಉತ್ಸವದತ್ತ ಮುಖಮಾಡುವಂತೆ ಮಾಡಲು ರಾಜ್ಯ ಸರ್ಕಾರ ಶ್ರಮಿ
ಸಲಿದೆ ಎಂದ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.





Conclusion:KN_BLY_4_MINISTER_CT_RAVI_BYTE_VSL_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.