ETV Bharat / state

ಹೊಸಪೇಟೆಯಲ್ಲಿ 45 ಕೋಟಿ ರೂ.‌ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣ : ಡಿ ಎಸ್​ ವೀರಯ್ಯ - ಹೊಸಪೇಟೆಯಲ್ಲಿ 45 ಕೋಟಿ ರೂ.‌ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣ

ಟ್ರಕ್ ಟರ್ಮಿನಲ್​ಗಳು ಈ ದೇಶದಲ್ಲಿ ಅತ್ಯಗತ್ಯವಾಗಿವೆ. ಸುಸಜ್ಜಿತ ಸಂಚಾರಕ್ಕೆ ಟರ್ಮಿನಲ್​ಗಳು ಅವಕಾಶ ಕಲ್ಪಿಸಿ‌ಕೊಡಲಿವೆ. ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಹಾಗೂ ಹೊಸಪೇಟೆಯಲ್ಲಿ ಭೂಮಿ ಇದ್ದು, ಟರ್ಮಿನಲ್ ಸ್ಥಾಪನೆ ಮಾಡಬೇಕಾಗಿದೆ..

construction
ಡಿಎಸ್​ ವೀರಯ್ಯ ಹೇಳಿಕೆ
author img

By

Published : Jan 29, 2021, 4:31 PM IST

ಹೊಸಪೇಟೆ : ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 38 ಎಕೆರೆ ಭೂಮಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಟರ್ಮಿನಲ್ ನಿರ್ಮಿಸುವ ಆಲೋಚನೆ ಇದೆ ಎಂದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಅಧ್ಯಕ್ಷ ಡಿ ಎಸ್​ ವೀರಯ್ಯ ಹೇಳಿದರು.

ಡಿಎಸ್​ ವೀರಯ್ಯ ಹೇಳಿಕೆ

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರೊಂದಿಗೆ ಮಾತಾನಡಿದ ಅವರು‌, ಈ ಹಿಂದೆ ಟರ್ಮಿನಲ್‌ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಕಾರಣಗಳಿಂದ ಟೆಂಡರ್ ರದ್ದುಗೊಳಿಸಲಾಗಿತ್ತು.

ಈಗ ಮತ್ತೆ ಟೆಂಡರ್ ಕರೆಯಲಾಗುತ್ತಿದೆ. 45 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣವಾಗಲಿದೆ‌. 6 ತಿಂಗಳ ಬಳಿಕ ಟರ್ಮಿನಲ್ ಶಂಕು ಸ್ಥಾಪನೆ ನೆರವೇರಲಿದೆ ಎಂದು ಹೇಳಿದರು‌. ಟ್ರಕ್ ಟರ್ಮಿನಲ್​ಗಳು ಈ ದೇಶದಲ್ಲಿ ಅತ್ಯಗತ್ಯವಾಗಿವೆ. ಸುಸಜ್ಜಿತ ಸಂಚಾರಕ್ಕೆ ಟರ್ಮಿನಲ್​ಗಳು ಅವಕಾಶ ಕಲ್ಪಿಸಿ‌ಕೊಡಲಿವೆ. ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಹಾಗೂ ಹೊಸಪೇಟೆಯಲ್ಲಿ ಭೂಮಿ ಇದ್ದು, ಟರ್ಮಿನಲ್ ಸ್ಥಾಪನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಟ್ರ್ಯಾಕ್ಟರ್‌ ರ್ಯಾಲಿ ವೇಳೆ ನಡೆದ ಘಟನೆ ಖಂಡನೀಯ : ಗಣರಾಜ್ಯೋತ್ಸವದಂದು ರಾಷ್ಟ್ರರಾಜಧಾನಿಯಲ್ಲಿ ನಡೆದ ಘಟನೆ ಖಂಡನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್​ ವೀರಯ್ಯ ಹೇಳಿದ್ರು. ನವದೆಹಲಿಯಲ್ಲಿ ದುಷ್ಕರ್ಮಿಗಳು ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದಾರೆ.‌ ಈ ಬಗ್ಗೆ ಈಗಾಗಲೇ ಸರ್ಕಾರ ತನಿಖೆ‌ ಮಾಡುತ್ತಿದೆ.

ತಪ್ಪಿಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು. ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಬಾರದು. ಅದು ಮುಷ್ಕರದ ಭಾಗವಲ್ಲ. ಪ್ರತಿಭಟನಾಕಾರರು ಹಿಂಸಾ ಮಾರ್ಗ ಹಿಡಿಯಬಾರದು. ಸರ್ಕಾರ ರೈತರೊಂದಿಗೆ ಸಭೆ ನಡೆಸುತ್ತಿದೆ. ಸಂಧಾನದ ಮೂಲಕ ರೈತರು ಪರಿಹಾರ ಕಂಡುಕೊಳ್ಳಬೇಕು ಎಂದರು.‌

ಇದನ್ನೂ ಓದಿ:ಡ್ರಗ್ಸ್ ಪಟ್ಟಿಯಲ್ಲಿ ಅಡಿಕೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆಡಳಿತ ಪಕ್ಷದ ಶಾಸಕರು

ಹೊಸಪೇಟೆ : ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 38 ಎಕೆರೆ ಭೂಮಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ಟರ್ಮಿನಲ್ ನಿರ್ಮಿಸುವ ಆಲೋಚನೆ ಇದೆ ಎಂದು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ಅಧ್ಯಕ್ಷ ಡಿ ಎಸ್​ ವೀರಯ್ಯ ಹೇಳಿದರು.

ಡಿಎಸ್​ ವೀರಯ್ಯ ಹೇಳಿಕೆ

ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರೊಂದಿಗೆ ಮಾತಾನಡಿದ ಅವರು‌, ಈ ಹಿಂದೆ ಟರ್ಮಿನಲ್‌ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಕಾರಣಗಳಿಂದ ಟೆಂಡರ್ ರದ್ದುಗೊಳಿಸಲಾಗಿತ್ತು.

ಈಗ ಮತ್ತೆ ಟೆಂಡರ್ ಕರೆಯಲಾಗುತ್ತಿದೆ. 45 ಕೋಟಿ ರೂ. ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣವಾಗಲಿದೆ‌. 6 ತಿಂಗಳ ಬಳಿಕ ಟರ್ಮಿನಲ್ ಶಂಕು ಸ್ಥಾಪನೆ ನೆರವೇರಲಿದೆ ಎಂದು ಹೇಳಿದರು‌. ಟ್ರಕ್ ಟರ್ಮಿನಲ್​ಗಳು ಈ ದೇಶದಲ್ಲಿ ಅತ್ಯಗತ್ಯವಾಗಿವೆ. ಸುಸಜ್ಜಿತ ಸಂಚಾರಕ್ಕೆ ಟರ್ಮಿನಲ್​ಗಳು ಅವಕಾಶ ಕಲ್ಪಿಸಿ‌ಕೊಡಲಿವೆ. ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಹಾಗೂ ಹೊಸಪೇಟೆಯಲ್ಲಿ ಭೂಮಿ ಇದ್ದು, ಟರ್ಮಿನಲ್ ಸ್ಥಾಪನೆ ಮಾಡಬೇಕಾಗಿದೆ ಎಂದು ತಿಳಿಸಿದರು.

ಟ್ರ್ಯಾಕ್ಟರ್‌ ರ್ಯಾಲಿ ವೇಳೆ ನಡೆದ ಘಟನೆ ಖಂಡನೀಯ : ಗಣರಾಜ್ಯೋತ್ಸವದಂದು ರಾಷ್ಟ್ರರಾಜಧಾನಿಯಲ್ಲಿ ನಡೆದ ಘಟನೆ ಖಂಡನೀಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್​ ವೀರಯ್ಯ ಹೇಳಿದ್ರು. ನವದೆಹಲಿಯಲ್ಲಿ ದುಷ್ಕರ್ಮಿಗಳು ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿದ್ದಾರೆ.‌ ಈ ಬಗ್ಗೆ ಈಗಾಗಲೇ ಸರ್ಕಾರ ತನಿಖೆ‌ ಮಾಡುತ್ತಿದೆ.

ತಪ್ಪಿಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು. ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಬಾರದು. ಅದು ಮುಷ್ಕರದ ಭಾಗವಲ್ಲ. ಪ್ರತಿಭಟನಾಕಾರರು ಹಿಂಸಾ ಮಾರ್ಗ ಹಿಡಿಯಬಾರದು. ಸರ್ಕಾರ ರೈತರೊಂದಿಗೆ ಸಭೆ ನಡೆಸುತ್ತಿದೆ. ಸಂಧಾನದ ಮೂಲಕ ರೈತರು ಪರಿಹಾರ ಕಂಡುಕೊಳ್ಳಬೇಕು ಎಂದರು.‌

ಇದನ್ನೂ ಓದಿ:ಡ್ರಗ್ಸ್ ಪಟ್ಟಿಯಲ್ಲಿ ಅಡಿಕೆ: ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಆಡಳಿತ ಪಕ್ಷದ ಶಾಸಕರು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.