ETV Bharat / state

ಹಗರಿಬೊಮ್ಮನಹಳ್ಳಿ ಬಂದ್: ಪ್ರತಿಭಟನೆಗೆ ಕ್ರೂಸರ್​ನಲ್ಲಿ ಕಾರ್ಯಕರ್ತರನ್ನು ಕರೆತಂತಾ ಬಿಜೆಪಿ?

author img

By

Published : Nov 11, 2020, 12:08 PM IST

ಶಾಸಕ ಭೀಮಾನಾಯ್ಕ ದೂಂಡಾವರ್ತನೆ ಖಂಡಿಸಿ, ಬಿಜೆಪಿಯಿಂದ ಹಗರಿಬೊಮ್ಮನಹಳ್ಳಿ ಬಂದ್​ಗೆ ನೀಡಲಾಗಿದೆ. ಬಂದ್​ಗಾಗಿ ಕ್ರೂಸರ್ ಮೂಲಕ ನೂರಾರು ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಕರೆತಂದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

FILLING NEWS
ಶಾಸಕ ಭೀಮಾನಾಯ್ಕ

ಹಗರಿಬೊಮ್ಮನಹಳ್ಳಿ(ಬಳ್ಳಾರಿ): ಶಾಸಕ ಭೀಮಾನಾಯ್ಕ ಅವರ ದುಂಡಾವರ್ತನೆ ಖಂಡಿಸಿ ಇಂದು ಕರೆ ನೀಡಿರುವ ಹಗರಿಬೊಮ್ಮನಹಳ್ಳಿ ಬಂದ್​ಗೆ ಕ್ರೂಸರ್​ನಲ್ಲಿ ನೂರಾರು ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಕರೆ ತಂದಿದ್ದಾರೆ ಎನ್ನಲಾಗ್ತಿದೆ.

ಹಗರಿಬೊಮ್ಮನಹಳ್ಳಿಯ ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಂದ್​​ಗೆ ತಾಲೂಕಿನ ನಾನಾ ಗ್ರಾಮಗಳ ಕಾರ್ಯಕರ್ತರನ್ನು ಕ್ರೂಸರ್ ವಾಹನಗಳಲ್ಲಿ ಕರೆ ತರಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ವರದಾಪುರ ಗ್ರಾಮ ಹೊರವಲಯದ ಪೆಟ್ರೋಲ್ ಬಂಕ್ ಬಳಿ ನೂರಾರು ಕಾರ್ಯಕರ್ತರನ್ನ ಹೊತ್ತು ತಂದಿದ್ದ ವಾಹನಗಳು ಡೀಸೆಲ್ ತುಂಬಿಸಿಕೊಳ್ಳಲು ಕಿಕ್ಕಿರಿದು ಜಮಾಯಿಸಿದ್ದವು.‌

ಬಂದ್​ಗೆ ಕ್ರೂಸರ್ ಮೂಲಕ ಕಾರ್ಯಕರ್ತರನ್ನು ಕರೆತಂದ್ರಾ ಬಿಜೆಪಿ ಮುಖಂಡರು
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ವೇಳೆ ನಡೆದ ಕಾಂಗ್ರೆಸ್ - ಬಿಜೆಪಿಗರ ಬೀದಿ ಕಾಳಗವು ಇದೀಗ ಪ್ರತಿಷ್ಠೆಗೆ ಸಾಕ್ಷಿಯಾಗಿದೆ.

ಕೋವಿಡ್ ಬಿಕ್ಕಟ್ಟು ಹಾಗೂ ಆರ್ಥಿಕತೆ ಸಂಕಷ್ಟದಲ್ಲಿಯೂ ಬಿಜೆಪಿ ಹಣ ವ್ಯಯಿಸಿ ಬಂದ್ ಆಚರಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಹಗರಿಬೊಮ್ಮನಹಳ್ಳಿ(ಬಳ್ಳಾರಿ): ಶಾಸಕ ಭೀಮಾನಾಯ್ಕ ಅವರ ದುಂಡಾವರ್ತನೆ ಖಂಡಿಸಿ ಇಂದು ಕರೆ ನೀಡಿರುವ ಹಗರಿಬೊಮ್ಮನಹಳ್ಳಿ ಬಂದ್​ಗೆ ಕ್ರೂಸರ್​ನಲ್ಲಿ ನೂರಾರು ಕಾರ್ಯಕರ್ತರನ್ನು ಬಿಜೆಪಿ ಮುಖಂಡರು ಕರೆ ತಂದಿದ್ದಾರೆ ಎನ್ನಲಾಗ್ತಿದೆ.

ಹಗರಿಬೊಮ್ಮನಹಳ್ಳಿಯ ಮಾಜಿ ಶಾಸಕ ಕೆ.ನೇಮಿರಾಜ ನಾಯ್ಕ ನೇತೃತ್ವದಲ್ಲಿ ನಡೆಯುತ್ತಿರುವ ಈ ಬಂದ್​​ಗೆ ತಾಲೂಕಿನ ನಾನಾ ಗ್ರಾಮಗಳ ಕಾರ್ಯಕರ್ತರನ್ನು ಕ್ರೂಸರ್ ವಾಹನಗಳಲ್ಲಿ ಕರೆ ತರಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ವರದಾಪುರ ಗ್ರಾಮ ಹೊರವಲಯದ ಪೆಟ್ರೋಲ್ ಬಂಕ್ ಬಳಿ ನೂರಾರು ಕಾರ್ಯಕರ್ತರನ್ನ ಹೊತ್ತು ತಂದಿದ್ದ ವಾಹನಗಳು ಡೀಸೆಲ್ ತುಂಬಿಸಿಕೊಳ್ಳಲು ಕಿಕ್ಕಿರಿದು ಜಮಾಯಿಸಿದ್ದವು.‌

ಬಂದ್​ಗೆ ಕ್ರೂಸರ್ ಮೂಲಕ ಕಾರ್ಯಕರ್ತರನ್ನು ಕರೆತಂದ್ರಾ ಬಿಜೆಪಿ ಮುಖಂಡರು
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ವೇಳೆ ನಡೆದ ಕಾಂಗ್ರೆಸ್ - ಬಿಜೆಪಿಗರ ಬೀದಿ ಕಾಳಗವು ಇದೀಗ ಪ್ರತಿಷ್ಠೆಗೆ ಸಾಕ್ಷಿಯಾಗಿದೆ.

ಕೋವಿಡ್ ಬಿಕ್ಕಟ್ಟು ಹಾಗೂ ಆರ್ಥಿಕತೆ ಸಂಕಷ್ಟದಲ್ಲಿಯೂ ಬಿಜೆಪಿ ಹಣ ವ್ಯಯಿಸಿ ಬಂದ್ ಆಚರಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.