ETV Bharat / state

ಆನಂದಯ್ಯ ನಾಟಿ ಔಷಧಿ ಕೊರೊನಾ ನಿಯಂತ್ರಿಸೋಲ್ಲ ಎಂದ ಆಯುಷ್ ಇಲಾಖೆ.. ಆದ್ರೂ ಗೋವಿಂದ ಸರಸ್ವತಿ ಶ್ರೀಗಳಿಂದ ವಿತರಣೆ.. - ಆನಂದಯ್ಯ ನಾಟಿ ಔಷಧಿ ವಿತರಿಸಿದ ಗೋವಿಂದ ಸರಸ್ವತಿ ಸ್ವಾಮೀಜಿ

ಕರ್ನಾಟಕ ಸರ್ಕಾರದ ಸಹಕಾರ ಮತ್ತು ಅನುಮತಿ ಕಡ್ಡಾಯವಾಗಿ ನಮಗೆ ಬೇಕಿದೆ. ಈ ದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಈ ಮಾಹಿತಿಯನ್ನ ಶೇರ್ ಮಾಡಿರುವೆ. ಇದಲ್ಲದೇ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆಯೋದಾಗಿ ತಿಳಿಸಿದ್ದಾರೆ..

govinda-saraswathi-swamiji
ಗೋವಿಂದ ಸರಸ್ವತಿ ಸ್ವಾಮೀಜಿ
author img

By

Published : Jun 29, 2021, 4:53 PM IST

ಬಳ್ಳಾರಿ : ನೆರೆಯ ಆಂಧ್ರಪ್ರದೇಶ ರಾಜ್ಯದ ಹೈಕೋರ್ಟ್ ಹಾಗೂ ಆಯುಷ್ ಇಲಾಖೆಯು ಆನಂದಯ್ಯ ನಾಟಿ ಔಷಧಿಯಿಂದ ಕೊರೊನಾ ನಿಯಂತ್ರಿಸೋಲ್ಲ. ಅದರ ಹೆಸರಿನಲ್ಲಿ ಈ ನಾಟಿ ಔಷಧಿ ವಿತರಣೆ ಮಾಡೋದು ಸರಿಯಾದುದಲ್ಲ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ. ಆದರೂ ಕೂಡ ರಾಜ್ಯದ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕಳೆದ ಐದಾರು ದಿನಗಳಿಂದಲೂ ಕೂಡ ಈ ಔಷಧಿಯನ್ನ ಹೊಸ ಹಂಪಿಯ ಗೋವಿಂದ ಸರಸ್ವತಿ ಸ್ವಾಮೀಜಿ ಅವರು ವಿತರಣೆಗೆ ಮುಂದಾಗಿದ್ದಾರೆ.

ನೆರೆಯ ಆಂಧ್ರಪ್ರದೇಶ ರಾಜ್ಯದ ಹೈಕೋರ್ಟ್​ನ ತೀರ್ಪನ್ನು ಗಾಳಿಗೆ ತೂರಿದ್ದಲ್ಲದೇ, ಕರ್ನಾಟಕ ರಾಜ್ಯದ ಆಯುಷ್ ಇಲಾಖೆಯ ಪರವಾನಿಗೆ ಪಡೆಯದೇ ಪ್ರಾಯೋಗಿಕವಾಗಿ ನಾಟಿ ಔಷಧಿ ಕಿಟ್ ವಿತರಣೆಗೆ ಮುಂದಾಗಿದ್ದಾರೆ. ಕಳೆದ ಐದಾರು ದಿನಗಳಲ್ಲಿ ಸರಿ ಸುಮಾರು 3000 ಸಾವಿರ ಕುಟುಂಬಗಳಿಗೆ ಅಂದರೆ 12,000- 17,000 ಮಂದಿಗೆ ಈ ನಾಟಿ ಔಷಧಿ ವಿತರಣೆ ಮಾಡಲಾಗಿದೆಂದು ಹೊಸ ಹಂಪಿಯ ಗೋವಿಂದ ಸರಸ್ವತಿ ಸ್ವಾಮೀಜಿ ಈ ದಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆನಂದ್ಯ ನೌಟಿ ಔಷಧಿ ಬಗೆಗೆ ಗೋವಿಂದ ಸರಸ್ವತಿ ಸ್ವಾಮೀಜಿ ಮಾತನಾಡಿರುವುದು..

ಅಂದಾಜು 5 ಲಕ್ಷ ರೂ.ಗಳ ಮೌಲ್ಯದ ಆನಂದಯ್ಯ ನಾಟಿ ಔಷಧಿಯನ್ನ ಕರ್ನಾಟಕ ರಾಜ್ಯಕ್ಕೆ ಉಚಿತವಾಗಿ ಆನಂದಯ್ಯನವರು ಕಳಿಸಿಕೊಟ್ಟಿದ್ದಾರೆ. ಈ ನಾಟಿ ಔಷಧಿ ಸೇವನೆಯಿಂದ ಕೊರೊನಾ ಮುಕ್ತ ಅಥವಾ ಕೊರೊನಾ ಪಾಸಿಟಿವ್ ಮುಕ್ತ ರಾಜ್ಯ ಆಗಲಿದೆ ಎಂದು ಗೋವಿಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಪತ್ರ : ಕರ್ನಾಟಕ ಸರ್ಕಾರದ ಸಹಕಾರ ಮತ್ತು ಅನುಮತಿ ಕಡ್ಡಾಯವಾಗಿ ನಮಗೆ ಬೇಕಿದೆ. ಈ ದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಈ ಮಾಹಿತಿಯನ್ನ ಶೇರ್ ಮಾಡಿರುವೆ. ಇದಲ್ಲದೇ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆಯೋದಾಗಿ ತಿಳಿಸಿದ್ದಾರೆ.

ಔಷಧಿ ಸಹಕಾರಿಯಾಗಲಿದೆ : ಈ ನಾಟಿ ಔಷಧಿ ಐದು ವಿಧದ ಮಹತ್ವದ ಕುರಿತು ಮಾತನಾಡಿರುವ ಗೋವಿಂದ ಸರಸ್ವತಿ ಸ್ವಾಮೀಜಿ, 'ಪಿ' ಎಂದರೆ ಪ್ರಿವೆಂಟೀವ್. ಎಫ್ ಆ್ಯಂಡ್ ಎಲ್ ಹಾಗೂ ಕಣ್ಣಿನೊಳಗೆ ಹಾಕುವ ಡ್ರಾಫ್ಸ್ ಎಂದು ತೋರಿಸೋ ಮುಖೇನ ಕೊರೊನಾ ಪಾಸಿಟಿವ್ ಆಗಿರುವವರಿಗೆ ಮತ್ತು ಆಕ್ಸಿಜನ್ ಸಮಸ್ಯೆಯನ್ನ ಎದುರಿಸೋರಿಗೆ ಈ ಆನಂದಯ್ಯ ನಾಟಿ ಔಷಧಿ ಸಹಕಾರಿಯಾಗಲಿದೆಂದು ವಿವರಣೆ ನೀಡಿದ್ದಾರೆ.

ಮೂರನೇ ಅಲೆಗೂ ಈ ನಾಟಿ ಔಷಧಿ ಉಪಯುಕ್ತ ಆಗಲಿದೆಯಂತೆ : ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ವದಂತಿ ಇದೆ. ಅದರ ನಿಯಂತ್ರಣಕ್ಕೆ ಈ ಆನಂದಯ್ಯ ನಾಟಿ ಔಷಧಿ ಸಹಕಾರಿಯಾಗಲಿದೆ ಎಂದು ಗೋವಿಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಓದಿ: ರಾಜ್ಯದಲ್ಲಿ Corona ಲಸಿಕೆ ಕೊರತೆ ಇಲ್ಲ: ಸಚಿವ ಸುಧಾಕರ್​ ಸ್ಪಷ್ಟನೆ

ಬಳ್ಳಾರಿ : ನೆರೆಯ ಆಂಧ್ರಪ್ರದೇಶ ರಾಜ್ಯದ ಹೈಕೋರ್ಟ್ ಹಾಗೂ ಆಯುಷ್ ಇಲಾಖೆಯು ಆನಂದಯ್ಯ ನಾಟಿ ಔಷಧಿಯಿಂದ ಕೊರೊನಾ ನಿಯಂತ್ರಿಸೋಲ್ಲ. ಅದರ ಹೆಸರಿನಲ್ಲಿ ಈ ನಾಟಿ ಔಷಧಿ ವಿತರಣೆ ಮಾಡೋದು ಸರಿಯಾದುದಲ್ಲ ಎಂಬ ಅಭಿಪ್ರಾಯವನ್ನ ವ್ಯಕ್ತಪಡಿಸಿದೆ. ಆದರೂ ಕೂಡ ರಾಜ್ಯದ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕಳೆದ ಐದಾರು ದಿನಗಳಿಂದಲೂ ಕೂಡ ಈ ಔಷಧಿಯನ್ನ ಹೊಸ ಹಂಪಿಯ ಗೋವಿಂದ ಸರಸ್ವತಿ ಸ್ವಾಮೀಜಿ ಅವರು ವಿತರಣೆಗೆ ಮುಂದಾಗಿದ್ದಾರೆ.

ನೆರೆಯ ಆಂಧ್ರಪ್ರದೇಶ ರಾಜ್ಯದ ಹೈಕೋರ್ಟ್​ನ ತೀರ್ಪನ್ನು ಗಾಳಿಗೆ ತೂರಿದ್ದಲ್ಲದೇ, ಕರ್ನಾಟಕ ರಾಜ್ಯದ ಆಯುಷ್ ಇಲಾಖೆಯ ಪರವಾನಿಗೆ ಪಡೆಯದೇ ಪ್ರಾಯೋಗಿಕವಾಗಿ ನಾಟಿ ಔಷಧಿ ಕಿಟ್ ವಿತರಣೆಗೆ ಮುಂದಾಗಿದ್ದಾರೆ. ಕಳೆದ ಐದಾರು ದಿನಗಳಲ್ಲಿ ಸರಿ ಸುಮಾರು 3000 ಸಾವಿರ ಕುಟುಂಬಗಳಿಗೆ ಅಂದರೆ 12,000- 17,000 ಮಂದಿಗೆ ಈ ನಾಟಿ ಔಷಧಿ ವಿತರಣೆ ಮಾಡಲಾಗಿದೆಂದು ಹೊಸ ಹಂಪಿಯ ಗೋವಿಂದ ಸರಸ್ವತಿ ಸ್ವಾಮೀಜಿ ಈ ದಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಆನಂದ್ಯ ನೌಟಿ ಔಷಧಿ ಬಗೆಗೆ ಗೋವಿಂದ ಸರಸ್ವತಿ ಸ್ವಾಮೀಜಿ ಮಾತನಾಡಿರುವುದು..

ಅಂದಾಜು 5 ಲಕ್ಷ ರೂ.ಗಳ ಮೌಲ್ಯದ ಆನಂದಯ್ಯ ನಾಟಿ ಔಷಧಿಯನ್ನ ಕರ್ನಾಟಕ ರಾಜ್ಯಕ್ಕೆ ಉಚಿತವಾಗಿ ಆನಂದಯ್ಯನವರು ಕಳಿಸಿಕೊಟ್ಟಿದ್ದಾರೆ. ಈ ನಾಟಿ ಔಷಧಿ ಸೇವನೆಯಿಂದ ಕೊರೊನಾ ಮುಕ್ತ ಅಥವಾ ಕೊರೊನಾ ಪಾಸಿಟಿವ್ ಮುಕ್ತ ರಾಜ್ಯ ಆಗಲಿದೆ ಎಂದು ಗೋವಿಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಆರೋಗ್ಯ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಪತ್ರ : ಕರ್ನಾಟಕ ಸರ್ಕಾರದ ಸಹಕಾರ ಮತ್ತು ಅನುಮತಿ ಕಡ್ಡಾಯವಾಗಿ ನಮಗೆ ಬೇಕಿದೆ. ಈ ದಿನ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಈ ಮಾಹಿತಿಯನ್ನ ಶೇರ್ ಮಾಡಿರುವೆ. ಇದಲ್ಲದೇ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಇಲಾಖೆ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆಯೋದಾಗಿ ತಿಳಿಸಿದ್ದಾರೆ.

ಔಷಧಿ ಸಹಕಾರಿಯಾಗಲಿದೆ : ಈ ನಾಟಿ ಔಷಧಿ ಐದು ವಿಧದ ಮಹತ್ವದ ಕುರಿತು ಮಾತನಾಡಿರುವ ಗೋವಿಂದ ಸರಸ್ವತಿ ಸ್ವಾಮೀಜಿ, 'ಪಿ' ಎಂದರೆ ಪ್ರಿವೆಂಟೀವ್. ಎಫ್ ಆ್ಯಂಡ್ ಎಲ್ ಹಾಗೂ ಕಣ್ಣಿನೊಳಗೆ ಹಾಕುವ ಡ್ರಾಫ್ಸ್ ಎಂದು ತೋರಿಸೋ ಮುಖೇನ ಕೊರೊನಾ ಪಾಸಿಟಿವ್ ಆಗಿರುವವರಿಗೆ ಮತ್ತು ಆಕ್ಸಿಜನ್ ಸಮಸ್ಯೆಯನ್ನ ಎದುರಿಸೋರಿಗೆ ಈ ಆನಂದಯ್ಯ ನಾಟಿ ಔಷಧಿ ಸಹಕಾರಿಯಾಗಲಿದೆಂದು ವಿವರಣೆ ನೀಡಿದ್ದಾರೆ.

ಮೂರನೇ ಅಲೆಗೂ ಈ ನಾಟಿ ಔಷಧಿ ಉಪಯುಕ್ತ ಆಗಲಿದೆಯಂತೆ : ಕೊರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ವದಂತಿ ಇದೆ. ಅದರ ನಿಯಂತ್ರಣಕ್ಕೆ ಈ ಆನಂದಯ್ಯ ನಾಟಿ ಔಷಧಿ ಸಹಕಾರಿಯಾಗಲಿದೆ ಎಂದು ಗೋವಿಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಓದಿ: ರಾಜ್ಯದಲ್ಲಿ Corona ಲಸಿಕೆ ಕೊರತೆ ಇಲ್ಲ: ಸಚಿವ ಸುಧಾಕರ್​ ಸ್ಪಷ್ಟನೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.