ETV Bharat / state

ಯುವಕನಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿತ: ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದೇ ತಪ್ಪಾ!? ವಿಡಿಯೋ

author img

By

Published : Dec 13, 2020, 4:58 PM IST

Updated : Dec 13, 2020, 5:30 PM IST

ಯುವತಿಯ ಕಡೆಯವರು ಯುವಕನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಲ್ಲೆಗೊಳಗಾಗಿರುವ ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.

An attack on young man
ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

ಬಳ್ಳಾರಿ: ಯುವತಿಯ ಜೊತೆ ಸ್ನೇಹ ಮಾಡಿದ್ದ ಯುವಕನಿಗೆ ಧರ್ಮದೇಟು ನೀಡಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.

ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಯುವಕ -ಯುವತಿ ಒಂದೇ ಧರ್ಮಕ್ಕೆ ಸೇರಿದವರಾಗಿದ್ದಾರೆ. ಯುವಕನ‌ ಮೇಲೆ ಕಬ್ಬಿಣದ ಚೇರ್ ಹಾಗೂ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಯುವಕನಿಗೆ ಹಿಗ್ಗಾಮುಗ್ಗಾ ಥಳಿತದ ವಿಡಿಯೋ ವೈರಲ್

ಘಟನೆಯ ವಿವರ ಹೀಗಿದೆ: ನಗರದ ಕೌಲ್ ಬಜಾರ್ ನ ಯುವಕ ಫಜಲ್ ಹಾಗೂ ಯುವತಿ ಸ್ನೇಹಿತರಾಗಿದ್ದರು. ಈ ಹಿಂದೆ ಹುಡುಗಿ ಮನೆ ಕಡೆಯವರು ಅವರಿಬ್ಬರಿಗೂ ಮಾತನಾಡದಂತೆ ವಾರ್ನಿಂಗ್ ಮಾಡಿದ್ದರು‌. ಇಷ್ಟಾದ್ರೂ ಸ್ನೇಹ ಮುಂದುವರೆಸಿದ್ದರಿಂದ ಆಕೆಯ ಮನೆ ಕಡೆಯವರಿಂದ ನಡುರಸ್ತೆಯಲ್ಲೇ ಯುವಕ‌ ಫಜಲ್ ಹಾಗೂ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿರೋದು ಬೆಳಕಿಗೆ ಬಂದಿದೆ.

ಬಳ್ಳಾರಿಯಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿತದ ವಿಡಿಯೋ ವೈರಲ್

ಯುವತಿ ತಂದೆ ಆರೀಫ್ ಮತ್ತು‌ ಚಿಕ್ಕಪ್ಪ ಇದಾಯತ್ ಸೇರಿ ಎಂಟು ಮಂದಿಯ ಗುಂಪೊಂದು ಫಜಲ್ ಹಾಗೂ ಆತನ ತಂದೆ ವಲಿಬಾಷಾ ಹಾಗೂ ಚಿಕ್ಕಪ್ಪ ನಿಸಾರ್ ಅಹಮದ್​ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ಯುವಕನಿಗೆ ಗಂಭೀರ ಗಾಯಗಳಾಗಿದ್ದು,‌ ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ: ಬನ್ನಂಜೆ ಗೋವಿಂದಾಚಾರ್ಯ ನಿಧ‌ನಕ್ಕೆ ಬಿಜೆಪಿ ನಾಯಕರಿಂದ ಸಂತಾಪ

ಈ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಇದಾಯತ್ ಸರ್ಕಾರಿ ನೌಕರರಾಗಿದ್ದಾರೆ. ಇದಾಯತ್ ಸೇರಿ ಎಂಟು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಘಟನೆ ನಡೆದು ಐದು ದಿನ ಕಳೆದ್ರೂ ಕೂಡ ಆರೋಪಿಗಳನ್ನ ಈವರೆಗೂ ಬಂಧಿಸಿಲ್ಲ‌ ಎಂಬ ಆರೋಪವೂ ಕೂಡ ಕೇಳಿಬಂದಿದೆ.

ಬಳ್ಳಾರಿ: ಯುವತಿಯ ಜೊತೆ ಸ್ನೇಹ ಮಾಡಿದ್ದ ಯುವಕನಿಗೆ ಧರ್ಮದೇಟು ನೀಡಿರುವ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ.

ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಯುವಕ -ಯುವತಿ ಒಂದೇ ಧರ್ಮಕ್ಕೆ ಸೇರಿದವರಾಗಿದ್ದಾರೆ. ಯುವಕನ‌ ಮೇಲೆ ಕಬ್ಬಿಣದ ಚೇರ್ ಹಾಗೂ ಕಲ್ಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಯುವಕನಿಗೆ ಹಿಗ್ಗಾಮುಗ್ಗಾ ಥಳಿತದ ವಿಡಿಯೋ ವೈರಲ್

ಘಟನೆಯ ವಿವರ ಹೀಗಿದೆ: ನಗರದ ಕೌಲ್ ಬಜಾರ್ ನ ಯುವಕ ಫಜಲ್ ಹಾಗೂ ಯುವತಿ ಸ್ನೇಹಿತರಾಗಿದ್ದರು. ಈ ಹಿಂದೆ ಹುಡುಗಿ ಮನೆ ಕಡೆಯವರು ಅವರಿಬ್ಬರಿಗೂ ಮಾತನಾಡದಂತೆ ವಾರ್ನಿಂಗ್ ಮಾಡಿದ್ದರು‌. ಇಷ್ಟಾದ್ರೂ ಸ್ನೇಹ ಮುಂದುವರೆಸಿದ್ದರಿಂದ ಆಕೆಯ ಮನೆ ಕಡೆಯವರಿಂದ ನಡುರಸ್ತೆಯಲ್ಲೇ ಯುವಕ‌ ಫಜಲ್ ಹಾಗೂ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆಗೆ ಮುಂದಾಗಿರೋದು ಬೆಳಕಿಗೆ ಬಂದಿದೆ.

ಬಳ್ಳಾರಿಯಲ್ಲಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿತದ ವಿಡಿಯೋ ವೈರಲ್

ಯುವತಿ ತಂದೆ ಆರೀಫ್ ಮತ್ತು‌ ಚಿಕ್ಕಪ್ಪ ಇದಾಯತ್ ಸೇರಿ ಎಂಟು ಮಂದಿಯ ಗುಂಪೊಂದು ಫಜಲ್ ಹಾಗೂ ಆತನ ತಂದೆ ವಲಿಬಾಷಾ ಹಾಗೂ ಚಿಕ್ಕಪ್ಪ ನಿಸಾರ್ ಅಹಮದ್​ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇದರಿಂದ ಯುವಕನಿಗೆ ಗಂಭೀರ ಗಾಯಗಳಾಗಿದ್ದು,‌ ನಗರದ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಓದಿ: ಬನ್ನಂಜೆ ಗೋವಿಂದಾಚಾರ್ಯ ನಿಧ‌ನಕ್ಕೆ ಬಿಜೆಪಿ ನಾಯಕರಿಂದ ಸಂತಾಪ

ಈ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ಇದಾಯತ್ ಸರ್ಕಾರಿ ನೌಕರರಾಗಿದ್ದಾರೆ. ಇದಾಯತ್ ಸೇರಿ ಎಂಟು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಘಟನೆ ನಡೆದು ಐದು ದಿನ ಕಳೆದ್ರೂ ಕೂಡ ಆರೋಪಿಗಳನ್ನ ಈವರೆಗೂ ಬಂಧಿಸಿಲ್ಲ‌ ಎಂಬ ಆರೋಪವೂ ಕೂಡ ಕೇಳಿಬಂದಿದೆ.

Last Updated : Dec 13, 2020, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.