ಬಳ್ಳಾರಿ: ನಗರದ ಜಿಲ್ಲಾಸ್ಪತ್ರೆಯಲ್ಲಿ ಇಂದು ಏಕಕಾಲಕ್ಕೆ ಏಡ್ಸ್ ಜಾಗೃತಿ ಕಾರ್ಯಕ್ರಮ ಮತ್ತು ರಾಜ್ಯಮಟ್ಟದ ವಿಶೇಷ ಶಾಲಾ ಲಸಿಕಾ ಅಭಿಯಾನವನ್ನ ಹಮ್ಮಿಕೊಳ್ಳಲಾಗಿತ್ತು. ಏಡ್ಸ್ ಜಾಗೃತಿ ಕಾರ್ಯಕ್ರಮ ಮತ್ತು ಬೈಕ್ ಜಾಥಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಂಕಜ್ ಪಾಂಡೆ ಮತ್ತು ಶಾಸಕ ಜಿ. ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.
ಈ ಲಸಿಕಾ ಕಾರ್ಯಕ್ರಮಕ್ಕೆ ಸರ್ಕಾರಿ ಅಧಿಕಾರಿಗಳೇ ತಡವಾಗಿ ಬಂದಿದ್ದು,ಜನರಿಗೆ ಬೇಸರವನ್ನುಂಟುಮಾಡಿತು.
ಜಾಗೃತಿ ಬದಲಿ ಮೊಬೈಲ್ ಸೆಲ್ಫಿ ಮತ್ತು ಡ್ಯಾನ್ಸ್ :
ಏಡ್ಸ್ ಜಾಗೃತಿಯ ಬದಲು ಕೆಲವರು ಡೋಲು ಮತ್ತು ತಮಟೆಗಳ ಶಬ್ಧಕ್ಕೆ ಡ್ಯಾನ್ಸ್ ಮಾಡಿದರೆ, ಇನ್ನೂ ಕೆಲವರು ಮೊಬೈಲ್ ಸೆಲ್ಫಿಗಳ ಮೊರೆ ಹೋದ್ರು.