ETV Bharat / state

ವಿಜಯದಶಮಿಯಂದು ಸಾವಿನಲ್ಲೂ ಒಂದಾದ ರೈತ ದಂಪತಿ!

author img

By

Published : Oct 8, 2019, 11:15 PM IST

ರೈತಾಪಿ ಕುಟುಂಬದ ದಂಪತಿ ಒಂದೇ ದಿನ ಇಹಲೋಕ ತ್ಯಜಿಸಿದ ಘಟನೆ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ನಡೆದಿದೆ.

ಸಾವಿನಲ್ಲೂ ಒಂದಾದ ರೈತ ದಂಪತಿ

ಬಳ್ಳಾರಿ: ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿಂದು ರೈತಾಪಿ ಕುಟುಂಬದ ದಂಪತಿ ಒಂದೇ ದಿನ ಸಾವನ್ನಪ್ಪಿದ್ದು, ಸಾವಿನಲ್ಲೂ ಒಂದಾಗಿದ್ದಾರೆ.

ವಿಜಯದಶಮಿ ಸಂಭ್ರಮದಲ್ಲಿದ್ದ ಇಡೀ ಶ್ರೀಧರಗಡ್ಡೆ ಗ್ರಾಮವೇ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಗ್ರಾಮದ ಕೊಟ್ಟೂರುಸ್ವಾಮಿ ಮಠದ ಬಳಿಯ ನಿವಾಸಿ ಕಟ್ಟೆಬಸಪ್ಪ (60) ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ನಂತರ ಪತಿಯ ಸಾವಿನ ದುಃಖ ತಾಳಲಾಗದೇ ಪತ್ನಿ ಈರಮ್ಮ(52) ಕೂಡ ಪ್ರಾಣ ಬಿಟ್ಟಿದ್ದಾರೆ.

ಹಲವು ದಿನಗಳಿಂದ ಪತಿ ಕಟ್ಟೆಬಸಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೊನೆಯುಸಿರೆಳಿದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಪತಿಯ ಶವಮುಂದೆ ರೋಧಿಸುತ್ತಿದ್ದ ಪತ್ನಿ ಈರಮ್ಮ ಅಳುತ್ತಲೇ ಪ್ರಾಣ ಬಿಟ್ಟಿದ್ದಾರೆ.

ಬಳ್ಳಾರಿ: ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿಂದು ರೈತಾಪಿ ಕುಟುಂಬದ ದಂಪತಿ ಒಂದೇ ದಿನ ಸಾವನ್ನಪ್ಪಿದ್ದು, ಸಾವಿನಲ್ಲೂ ಒಂದಾಗಿದ್ದಾರೆ.

ವಿಜಯದಶಮಿ ಸಂಭ್ರಮದಲ್ಲಿದ್ದ ಇಡೀ ಶ್ರೀಧರಗಡ್ಡೆ ಗ್ರಾಮವೇ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಗ್ರಾಮದ ಕೊಟ್ಟೂರುಸ್ವಾಮಿ ಮಠದ ಬಳಿಯ ನಿವಾಸಿ ಕಟ್ಟೆಬಸಪ್ಪ (60) ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ನಂತರ ಪತಿಯ ಸಾವಿನ ದುಃಖ ತಾಳಲಾಗದೇ ಪತ್ನಿ ಈರಮ್ಮ(52) ಕೂಡ ಪ್ರಾಣ ಬಿಟ್ಟಿದ್ದಾರೆ.

ಹಲವು ದಿನಗಳಿಂದ ಪತಿ ಕಟ್ಟೆಬಸಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಕೊನೆಯುಸಿರೆಳಿದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಪತಿಯ ಶವಮುಂದೆ ರೋಧಿಸುತ್ತಿದ್ದ ಪತ್ನಿ ಈರಮ್ಮ ಅಳುತ್ತಲೇ ಪ್ರಾಣ ಬಿಟ್ಟಿದ್ದಾರೆ.

Intro:ಸಾವಿನಲ್ಲೂ ಒಂದಾದ ರೈತ ದಂಪತಿಗಳು
ಜೊತೆಯಲ್ಲಿದ್ದ ಪತಿರಾಯನ ಶವಮಂದೆ ಅಳುತ್ತಲೇ ಪ್ರಾಣ
ಬಿಟ್ಟ ಪತ್ನಿ!
ಬಳ್ಳಾರಿ: ಗಣಿನಾಡು ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿಂದು ರೈತಾಪಿ ಕುಟುಂಬದ ದಂಪತಿಗಳಿಬ್ಬರು ಸಾವಿನಲ್ಲೂ ಒಂದಾದ ಅಪರೂಪದ ಘಟನೆಯು ವಿಜಯ
ದಶಮಿ ಹಬ್ಬದಂದೇ ನಡೆದಿದೆ.
ವಿಜಯದಶಮಿ ಸಂಭ್ರಮದಲ್ಲಿದ್ದ ಇಡೀ ಶ್ರೀಧರಗಡ್ಡೆ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಗ್ರಾಮದ ಕೊಟ್ಟೂರುಸ್ವಾಮಿ ಮಠದ ಬಳಿಯ ನಿವಾಸಿ ಕಟ್ಟೆಬಸಪ್ಪ (60) ಅವರು ಈ ದಿನ ಬೆಳಿಗ್ಗೆ ತಾನೇ ಸಾವನ್ನಪ್ಪಿದರೆ, ಪತಿಯ ಸಾವಿಗೆ ಕಂಗಾಲಾಗಿದ್ದ ಪತ್ನಿ ಈರಮ್ಮ(52) ಅವರು ಅಳುತ್ತಲೇ ಪ್ರಾಣ ಬಿಟ್ಟಿದ್ದಾರೆ.
ರೈತಾಪಿ ಕುಟುಂಬದ ಹಿನ್ನಲೆ ಹೊಂದಿರುವ ಈ ದಂಪತಿಗಳು ಜೊತೆಯಲ್ಲೇ ಪ್ರಾಣಬಿಟ್ಟು ಇತರರಿಗೆ ಮಾದರಿಯಾಗಿದ್ದಾರೆ.
Body:ಹಲವು ದಿನಗಳಿಂದ ಪತಿ ಕಟ್ಟೆಬಸಪ್ಪನವ್ರು ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಈ ದಿನ ಅವರು ಕೊನೆಯುಸಿರು ಎಳೆದಿದ್ದರು. ಪತಿಯ ಶವಮುಂದೆ ರೋದಿಸುತ್ತಿರುವ ಪತ್ನಿ ಈರಮ್ಮನವ್ರು ಅಳುತ್ತಲೇ ಸಾವನ್ನಪ್ಪಿದ್ದು, ಮುತ್ತೈದೆಯಾಗಿ ಪ್ರಾಣಬಿಟ್ಟಿದ್ದಾಳೆ.
ಮೃತ ದಂಪತಿಗಳಿಗೆ ಪುತ್ರರು, ಪುತ್ರಿಯರು ಇದ್ದಾರೆ. ಕೃಷಿ ಚಟುವಟಿಕೆಯನ್ನೇ ಇಡೀ ಕುಟುಂಬ ನೆಚ್ಚಿಕೊಂಡಿದೆ ಎಂದು ಗ್ರಾಮದ ಮೂಲಗಳು ತಿಳಿಸಿವೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_3_SRIDHARGADDE_OLD_AGE_COUPLE_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.