ಬೆಳಗಾವಿ: ನಗರದ ರಾಷ್ಟ್ರೀಯ ಮಿಲಿಟರಿ ಶಾಲಾ ಮೈದಾನದಲ್ಲಿ ನಡೆಯುವ ಸೈನಿಕ ಭರ್ತಿ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ಎದುರಿಸಲು ಬಂದ ಯುವಕರಿಗೆ ಜಿಲ್ಲಾಡಳಿ ಕನಿಷ್ಠ ವಸತಿ ಸೌಲಭ್ಯವನ್ನೂ ನೀಡದ ಕಾರಣ, ಯುವಕರು ಕಳೆದ ರಾತ್ರಿ ರಸ್ತೆ ಬದಿ ಮಲಗಿ ಕಾಲ ಕಳೆಯುವಂತಾಗಿತ್ತು.
ದೇಶ ಕಾಯೋ ಆಕಾಂಕ್ಷಿಗಳಿಗಿಲ್ಲ ಸೌಲಭ್ಯ..ಸೇನಾ ದೈಹಿಕ ಪರೀಕ್ಷೆಗೆ ಬಂದು ಬೀದಿಯಲ್ಲಿ ಮಲಗಿದ ಯುವಕರು
ನಗರದ ರಾಷ್ಟ್ರೀಯ ಮಿಲಿಟರಿ ಶಾಲಾ ಮೈದಾನದಲ್ಲಿ ನಡೆಯುವ ಸೈನಿಕ ಭರ್ತಿ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ಎದುರಿಸಲು ಬಂದ ಯುವಕರಿಗೆ ಜಿಲ್ಲಾಡಳಿ ಕನಿಷ್ಠ ವಸತಿ ಸೌಲಭ್ಯವನ್ನೂ ನೀಡದ ಕಾರಣ, ಯುವಕರು ಕಳೆದ ರಾತ್ರಿ ರಸ್ತೆ ಬದಿ ಮಲಗಿ ಕಾಲ ಕಳೆಯುವಂತಾಗಿತ್ತು.
![ದೇಶ ಕಾಯೋ ಆಕಾಂಕ್ಷಿಗಳಿಗಿಲ್ಲ ಸೌಲಭ್ಯ..ಸೇನಾ ದೈಹಿಕ ಪರೀಕ್ಷೆಗೆ ಬಂದು ಬೀದಿಯಲ್ಲಿ ಮಲಗಿದ ಯುವಕರು](https://etvbharatimages.akamaized.net/etvbharat/prod-images/768-512-4904552-thumbnail-3x2-sow.jpg?imwidth=3840)
ಈ ರ್ಯಾಲಿ ಇಂದಿನಿಂದ ಆರಂಭವಾಗಿ ನವೆಂಬರ್ 9ರ ವರೆಗೆ ಒಟ್ಟು 11 ದಿನಗಳ ಕಾಲ,ಮಹಾರ್ ಬಟಾಲಿಯನ್, ಪ್ಯಾರಾ ಬಟಾಲಿಯನ್ ಮತ್ತು ಮದ್ರಾಸ್ ಬಟಾಲಿಯನ್ ಅಡಿಯಲ್ಲಿ ನಡೆಯಲಿದೆ.
ನಾವು ಸಾವಿರಾರು ಕಿಲೋಮೀಟರ್ ದೂರದಿಂದ ಬಂದಿದ್ದೇವೆ. ನಮಗೆ ಬೆಳಗಾವಿ ಜಿಲ್ಲಾಡಳಿತ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ ಎಂದು ರ್ಯಾಲಿಯಲ್ಲಿ ಭಾಗವಹಿಸಲು ಬಂದ ಯುವಕರು ತಮ್ಮ ನೋವು ತೋಡಿಕೊಂಡಿದ್ದಾರೆ.
ಬೆಳಗಾವಿ: ನಗರದ ರಾಷ್ಟ್ರೀಯ ಮಿಲಿಟರಿ ಶಾಲಾ ಮೈದಾನದಲ್ಲಿ ನಡೆಯುವ ಸೈನಿಕ ಭರ್ತಿ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ಎದುರಿಸಲು ಬಂದ ಯುವಕರಿಗೆ ಜಿಲ್ಲಾಡಳಿ ಕನಿಷ್ಠ ವಸತಿ ಸೌಲಭ್ಯವನ್ನೂ ನೀಡದ ಕಾರಣ, ಯುವಕರು ಕಳೆದ ರಾತ್ರಿ ರಸ್ತೆ ಬದಿ ಮಲಗಿ ಕಾಲ ಕಳೆಯುವಂತಾಗಿತ್ತು.
ಈ ರ್ಯಾಲಿ ಇಂದಿನಿಂದ ಆರಂಭವಾಗಿ ನವೆಂಬರ್ 9ರ ವರೆಗೆ ಒಟ್ಟು 11 ದಿನಗಳ ಕಾಲ,ಮಹಾರ್ ಬಟಾಲಿಯನ್, ಪ್ಯಾರಾ ಬಟಾಲಿಯನ್ ಮತ್ತು ಮದ್ರಾಸ್ ಬಟಾಲಿಯನ್ ಅಡಿಯಲ್ಲಿ ನಡೆಯಲಿದೆ.
ನಾವು ಸಾವಿರಾರು ಕಿಲೋಮೀಟರ್ ದೂರದಿಂದ ಬಂದಿದ್ದೇವೆ. ನಮಗೆ ಬೆಳಗಾವಿ ಜಿಲ್ಲಾಡಳಿತ ಕನಿಷ್ಠ ಸೌಲಭ್ಯವನ್ನೂ ನೀಡಿಲ್ಲ ಎಂದು ರ್ಯಾಲಿಯಲ್ಲಿ ಭಾಗವಹಿಸಲು ಬಂದ ಯುವಕರು ತಮ್ಮ ನೋವು ತೋಡಿಕೊಂಡಿದ್ದಾರೆ.
ಬೆಳಗಾವಿ : ದೇಶದಲ್ಲಿ ಕೆಲವರು ಮಾತನಾಡುತ್ತಾರೆ. ಸೈನ್ಯ ಸೇರುವವರು ಕೇವಲ ಬಡತನದಿಂದ ಸೇರುತ್ತಾರೆ. ಇನ್ನೂ ಕೆಲವರು ಹಣಕ್ಕಾಗಿ ಸೈನ್ಯ ಸೇರುತ್ತಾರೆ ಎಂದು ಹೇಳುವ ದೇಶದ್ರೋಹಿಗಳು ಈ ವಿಡಿಯೋ ನೋಡಿದರೆ ಸಾಕು. ಈ ಯುವಕರ ದೇಶಭಕ್ತಿಗೆ ಸಾಟಿ ಯಾವುದು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿಯೂ ಮೂಡುವುದು ಸಹಜ.
Body:ಹೌದು ಇವರೆಲ್ಲರೂ ಭಾರತೀಯ ಸೈನ್ಯ ಸೇರಲು ಬಂದಿರುವ ಉತ್ಸಾಹಿ ದೇಶಭಕ್ತ ಯುವಕರು. ಆದರೆ ಇವರೆಲ್ಲರು ರಾತ್ರಿ ಕಳೆಯುತ್ತಿರುವುದು ರಸ್ತೆ ಬದಿಯಲ್ಲಿರುವ ಚರಂಡಿ ಪಕ್ಕ. ಸಾವಿರಾರು ಸಂಖ್ಯೆಯ ಯುವಕರು ಮಳೆ, ಚಳಿ ಲೆಕ್ಕಿಸದೆ ಬೀದಿಯ ಬಳಿ ಮಲಗಿದ್ದು ತಮ್ಮ ಸ್ವಾರ್ಥಕ್ಕಲ್ಲ. ಅವರಲ್ಲಿ ಒಂದು ಹಟವಿದೆ. ದೇಶದ ಸೇವೆ ಮಾಡಬೇಕೆಂಬ ಛಲವಿದೆ. ಈ ಕಾರಣಕ್ಕಾಗಿ ಅವರಿಗೆ ಮಲಗಿರುವ ನೆಲವೇ ಅರಮನೆ.
ಬೆಳಗಾವಿ ನಗರದಲ್ಲಿ ಈ ತಿಂಗಳ ದಿನಾಂಕ 30 ರಿಂದ ನವೆಂಬರ್ 9 ರ ವರೆಗೆ 11 ದಿನಗಳ ಕಾಲ. ರಾಷ್ಟ್ರೀಯ ಮಿಲಿಟರಿ ಶಾಲೆಯ ಮೈದಾನದಲ್ಲಿ ಸೈನಿಕ ಭರ್ತಿ ನಡೆಯಲಿದೆ. ಮಹಾರ್ ಬಟಾಲಿಯನ್, ಪ್ಯಾರಾ ಬಟಾಲಿಯನ್ ಮತ್ತು ಮದ್ರಾಸ್ ಬಟಾಲಿಯನ್ ಅಡಿಯಲ್ಲಿ ಈ ಸೇನಾ ಭರ್ತಿ ನಡೆಯಲಿದ್ದು ದೇಶ ನಾನಾ ಭಾಗಗಳಿಂದ ಸಾವಿರಾರು ಯುವಕರು ಪಾಲ್ಗೊಂಡಿದ್ದಾರೆ. ನಾಳೆ ನಡೆಯಲಿರುವ ಈ ರ್ಯಾಲಿಯಲ್ಲಿ ದೈಹಿಕ ಪರೀಕ್ಷೆ ಎದುರಿಸಲಿರುವ ಈ ಯುವಕರು ಮಾತ್ರ ಇಂದು ರಾತ್ರಿ ರಸ್ತೆ ಬದಿಯ ಚರಂಡಿ ಮೇಲೆ ಮಲಗಿ ದಿನ ಕಳೆಯುತ್ತಿದ್ದಾರೆ.
Conclusion:ಹಣವಂತರ ಮಕ್ಕಳು ಆರಾಮವಾಗಿ ಮನೆಯಲ್ಲಿ ಮಲಗಿರುವಾಗ ಈ ಬಡ ದೇಶಭಕ್ತ ಯುವಕರು ಮಾತ್ರ, ದೇಶ ಸೇವೆಯ ಹಂಬಲದಲ್ಲಿ ಸೈನ್ಯ ಸೇರಲು ಬಂದಿದ್ದು ರಸ್ತೆ ಪಕ್ಕದಲ್ಲಿ ಮಲಗಿ ದೈಹಿಕ ಪರೀಕ್ಷೆ ಎದುರಿಸುವ ಉತ್ಸಾಹದಲ್ಲಿದ್ದಾರೆ. ರಾತ್ರಿ ಉಳಿದುಕೊಳ್ಳಲು ಲಾಡ್ಜ್ ಗಳಿಗೆ ಹಣ ಕಟ್ಟಲಾಗದಂತಹ ಬಡ ಯುವಕರಿಗೆ ಜಿಲ್ಲಾಕೇಂದ್ರ ಕನಿಷ್ಠ ಪಕ್ಷ ಯಾವುದಾದರೊಂದು ಒಂದು ಸರ್ಕಾರಿ ಕ್ರೀಡಾಂಗಣದ ವ್ಯವಸ್ಥೆಯಾದರು ಮಾಡಬಹುದಿತ್ತು. ಆದರೆ ಇಲ್ಲಿ ಯಾವುದೇ ವ್ಯವಸ್ಥೆ ನೀಡದೆ ಸಾವಿರಕ್ಕೂ ಅಧೀಕ ಯುವಕರು ಪ್ರಾಣದ ಹಂಗು ತೊರೆದು ರಸ್ತೆಯ ಪಕ್ಕ ಮಲಗಿರುವುದು ವಿಪರ್ಯಾಸವೇ ಸರಿ.
ಬೈಟ್ : ವೈಭವ್ ಮಹರಾಷ್ಟ್ರ (ಸೈನ್ಯ ಸೇರಲು ಬಂದ ಯುವಕ)
ವಿನಾಯಕ ಮಠಪತಿ
ಬೆಳಗಾವಿ