ETV Bharat / state

ಯಮಕನಮರಡಿ ಗ್ರಾಮದಲ್ಲಿ ಗುಂಡಿನ ದಾಳಿ ಪ್ರಕರಣ: ಆರೋಪಿಯ ಬಂಧನ

author img

By

Published : Jan 1, 2021, 9:21 PM IST

ಡಿ.16ರಂದು ರಾತ್ರಿ ಹುಕ್ಕೇರಿಯ ಯಮಕನಮರಡಿ ಗ್ರಾಮದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Yamakanamaradi Shoot out case accused arrest
ಯಮಕನಮರಡಿ ಗ್ರಾಮದಲ್ಲಿ ಗುಂಡಿನ ದಾಳಿ ಪ್ರಕರಣ

ಚಿಕ್ಕೋಡಿ: ಡಿಸೆಂಬರ್ 16ರಂದು ಯಮಕನಮರಡಿಯಲ್ಲಿ ವ್ಯಕ್ತಿಯ ಮೇಲೆ ಗುಂಡಿನ‌ ದಾಳಿ ನಡೆಸಿದ ಆರೋಪಿಯ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜೈನ ಬಸದಿಯ ಬಳಿ ಡಿ.16ರಂದು ರಾತ್ರಿ ಭರಮಾ ದುಬದಾಳಿ ಎಂಬಾತ ಗೆಳೆಯರೊಂದಿಗೆ ಮಾತನಾಡುತ್ತಾ ಕುಳಿತಾಗ ಗುಂಡಿನ ದಾಳಿ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ನಾದ ಗ್ರಾಮದ ಗಣಪತಿ ಕಾಲನಿಯ ವಿನಾಯಕ ಸೋಮಶೇಖರ ಹೊರಕೇರಿ (26)ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದರು, ಇಂದು ಬಂಧಿಸಿದ್ದಾರೆ.

ಓದಿ : ಬೆಳಗಾವಿ: ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಯತ್ನ

ದಾಳಿಗೆ ಕಾರಣವೇನು..? ಆರೋಪಿ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಹುಡುಗಿಯ ದೂರದ ಸಂಬಂಧಿಯಾಗಿದ್ದ ಭರಮಾ ದುಪದಾಳಿ ಆಕೆಗೆ ಇನ್ನೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಆರೋಪಿ ವಿನಾಯಕ, ನನ್ನ ಪ್ರೀತಿಗೆ ಅಡ್ಡ ಬಂದಿದ್ದಾನೆ ಎಂದು ಭರಮಾ ದುಪದಾಳಿಯನ್ನು ಕೊಲೆ ಮಾಡಲು ಗುಂಡಿನ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಚಿಕ್ಕೋಡಿ: ಡಿಸೆಂಬರ್ 16ರಂದು ಯಮಕನಮರಡಿಯಲ್ಲಿ ವ್ಯಕ್ತಿಯ ಮೇಲೆ ಗುಂಡಿನ‌ ದಾಳಿ ನಡೆಸಿದ ಆರೋಪಿಯ ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಜೈನ ಬಸದಿಯ ಬಳಿ ಡಿ.16ರಂದು ರಾತ್ರಿ ಭರಮಾ ದುಬದಾಳಿ ಎಂಬಾತ ಗೆಳೆಯರೊಂದಿಗೆ ಮಾತನಾಡುತ್ತಾ ಕುಳಿತಾಗ ಗುಂಡಿನ ದಾಳಿ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ನಾದ ಗ್ರಾಮದ ಗಣಪತಿ ಕಾಲನಿಯ ವಿನಾಯಕ ಸೋಮಶೇಖರ ಹೊರಕೇರಿ (26)ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದರು, ಇಂದು ಬಂಧಿಸಿದ್ದಾರೆ.

ಓದಿ : ಬೆಳಗಾವಿ: ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಯತ್ನ

ದಾಳಿಗೆ ಕಾರಣವೇನು..? ಆರೋಪಿ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆ ಹುಡುಗಿಯ ದೂರದ ಸಂಬಂಧಿಯಾಗಿದ್ದ ಭರಮಾ ದುಪದಾಳಿ ಆಕೆಗೆ ಇನ್ನೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಆರೋಪಿ ವಿನಾಯಕ, ನನ್ನ ಪ್ರೀತಿಗೆ ಅಡ್ಡ ಬಂದಿದ್ದಾನೆ ಎಂದು ಭರಮಾ ದುಪದಾಳಿಯನ್ನು ಕೊಲೆ ಮಾಡಲು ಗುಂಡಿನ ದಾಳಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.