ETV Bharat / state

'ನನಗಿಷ್ಟವಾದ ಮುಜರಾಯಿ ಖಾತೆಯನ್ನೇ ನೀಡಿದ್ದಾರೆ, ಯಾವುದೇ ಅಸಮಾಧಾನವಿಲ್ಲ'

author img

By

Published : Aug 15, 2021, 5:49 PM IST

Updated : Aug 15, 2021, 6:50 PM IST

ಸಿಎಂ ಬೊಮ್ಮಾಯಿಯವರ ಸಂಪುಟದಲ್ಲಿ ನನಗೆ ಇಷ್ಟವಾದ ಮುಜರಾಯಿ ಖಾತೆಯನ್ನು ನೀಡಿದ್ದಾರೆ. ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

Minister Sasikala Jolle
ಸಚಿವೆ ಶಶಿಕಲಾ ಜೊಲ್ಲೆ

ಅಥಣಿ: ಮಾಜಿ ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸಿದ್ದೆ. ಇದೀಗ ಬೊಮ್ಮಾಯಿಯವರ ಸಂಪುಟದಲ್ಲಿ ನನಗಿಷ್ಟವಾದ ಮುಜರಾಯಿ ಖಾತೆಯನ್ನು ನೀಡಿದ್ದಾರೆ. ಈ ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ

ಅಥಣಿ ಪಟ್ಟಣದ ಗಚ್ಚಿನ ಮಠದ ಶ್ರೀ ಶಿವಯೋಗಿಗಳ ದರ್ಶನ ಪಡೆದ ಬಳಿಕ ಸಚಿವೆ ಮಾಧ್ಯಮಗಳೊಂದಿಗೆ ಮಾತನಾಡಿದರು. ನನಗೆ ಮುಜರಾಯಿ ಖಾತೆ ನೀಡಿದ್ದಾರೆ. ನಾಳೆ ಬೆಂಗಳೂರಿಗೆ ತೆರಳಿ ಅಧಿಕಾರ ವಹಿಸಿಕೊಳ್ಳುತ್ತೇನೆ. ಶ್ರೀಶೈಲ, ಪಂಢರಪುರ, ಗುಡ್ಡಾಪೂರ ಇನ್ನಿತರ ಪ್ರದೇಶಗಳಿಗೆ ಕರ್ನಾಟಕದಿಂದ ಜನರು ದರ್ಶನಕ್ಕೆ ಹೋಗುತ್ತಾರೆ. ಆಯಾ ಪುಣ್ಯ ಕ್ಷೇತ್ರಗಳಲ್ಲಿ ರಾಜ್ಯದ ಭಕ್ತರಿಗೆ ತೊಂದರೆ ಉಂಟಾಗದಂತೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಚಿವೆ ಜೊಲ್ಲೆ ಭರವಸೆ ನೀಡಿದರು.

ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾತೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದೇನೆ. ಹಲವು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಪೋಷಣೆ ಮಾಸಾಚರಣೆ 26 ಸ್ಥಾನದಲ್ಲಿ ಇತ್ತು. ಸದ್ಯ ಒಂದನೇ ಸ್ಥಾನಕ್ಕೆ ಬಂದಿದ್ದೇವೆ. ಮಾತೃ ವಂದನಾ ಯೋಜನೆ 15 ಸ್ಥಾನದಲ್ಲಿ ಇತ್ತು. ಇವತ್ತು ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಹಳೆ ಖಾತೆಯಲ್ಲಿ ಹಲವಾರು ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಸದ್ಯ ಮುಜರಾಯಿ ಖಾತೆ ನೀಡಿದ್ದಾರೆ. ನನಗೆ ಈ ಖಾತೆಯಲ್ಲಿ ಸಂತೋಷ ಇದೆ ಎಂದರು.

ಧ್ವಜಾರೋಹಣ ವೇಳೆ ಗಲಾಟೆ ವಿಚಾರ:

ಇವತ್ತು ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರೋತ್ಸವ ಸಮಯದಲ್ಲಿ, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ವಿನಾಕಾರಣ ಗಲಾಟೆ ಮಾಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ. ವಿರೋಧಿಗಳು ಪ್ರತಿಭಟನೆ ಮಾಡುವುದು ಸಹಜವಾಗಿದೆ ಎಂದು ಪ್ರತಿಕ್ರಿಯಿಸಿದರು.

ಮೊಟ್ಟೆ ಟೆಂಡರ್​​​ನಲ್ಲಿ ಅವ್ಯವಹಾರ ಆರೋಪ ವಿಚಾರ:

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಚಿವ ಸಂಪುಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೊಟ್ಟೆ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ಎಸಗಿದ್ದೆ ಎಂದು ಕಾಂಗ್ರೆಸ್ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ನಾನು ಯಾವ ತಪ್ಪೂ ಮಾಡಿಲ್ಲ. ದೇವರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಮಾತನಾಡುತ್ತಾರೆ : ಸಚಿವ ಹಾಲಪ್ಪ ಆಚಾರ್

ಅಥಣಿ: ಮಾಜಿ ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸಿದ್ದೆ. ಇದೀಗ ಬೊಮ್ಮಾಯಿಯವರ ಸಂಪುಟದಲ್ಲಿ ನನಗಿಷ್ಟವಾದ ಮುಜರಾಯಿ ಖಾತೆಯನ್ನು ನೀಡಿದ್ದಾರೆ. ಈ ಖಾತೆ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ

ಅಥಣಿ ಪಟ್ಟಣದ ಗಚ್ಚಿನ ಮಠದ ಶ್ರೀ ಶಿವಯೋಗಿಗಳ ದರ್ಶನ ಪಡೆದ ಬಳಿಕ ಸಚಿವೆ ಮಾಧ್ಯಮಗಳೊಂದಿಗೆ ಮಾತನಾಡಿದರು. ನನಗೆ ಮುಜರಾಯಿ ಖಾತೆ ನೀಡಿದ್ದಾರೆ. ನಾಳೆ ಬೆಂಗಳೂರಿಗೆ ತೆರಳಿ ಅಧಿಕಾರ ವಹಿಸಿಕೊಳ್ಳುತ್ತೇನೆ. ಶ್ರೀಶೈಲ, ಪಂಢರಪುರ, ಗುಡ್ಡಾಪೂರ ಇನ್ನಿತರ ಪ್ರದೇಶಗಳಿಗೆ ಕರ್ನಾಟಕದಿಂದ ಜನರು ದರ್ಶನಕ್ಕೆ ಹೋಗುತ್ತಾರೆ. ಆಯಾ ಪುಣ್ಯ ಕ್ಷೇತ್ರಗಳಲ್ಲಿ ರಾಜ್ಯದ ಭಕ್ತರಿಗೆ ತೊಂದರೆ ಉಂಟಾಗದಂತೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಸಚಿವೆ ಜೊಲ್ಲೆ ಭರವಸೆ ನೀಡಿದರು.

ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾತೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದೇನೆ. ಹಲವು ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ. ಪೋಷಣೆ ಮಾಸಾಚರಣೆ 26 ಸ್ಥಾನದಲ್ಲಿ ಇತ್ತು. ಸದ್ಯ ಒಂದನೇ ಸ್ಥಾನಕ್ಕೆ ಬಂದಿದ್ದೇವೆ. ಮಾತೃ ವಂದನಾ ಯೋಜನೆ 15 ಸ್ಥಾನದಲ್ಲಿ ಇತ್ತು. ಇವತ್ತು ಎರಡನೇ ಸ್ಥಾನಕ್ಕೆ ಬಂದಿದ್ದೇವೆ. ಹಳೆ ಖಾತೆಯಲ್ಲಿ ಹಲವಾರು ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಸದ್ಯ ಮುಜರಾಯಿ ಖಾತೆ ನೀಡಿದ್ದಾರೆ. ನನಗೆ ಈ ಖಾತೆಯಲ್ಲಿ ಸಂತೋಷ ಇದೆ ಎಂದರು.

ಧ್ವಜಾರೋಹಣ ವೇಳೆ ಗಲಾಟೆ ವಿಚಾರ:

ಇವತ್ತು ವಿಜಯಪುರ ಜಿಲ್ಲೆಯಲ್ಲಿ ಸ್ವಾತಂತ್ರೋತ್ಸವ ಸಮಯದಲ್ಲಿ, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ವಿನಾಕಾರಣ ಗಲಾಟೆ ಮಾಡಿದ್ದಾರೆ. ಇದು ರಾಜಕೀಯ ಷಡ್ಯಂತ್ರ. ವಿರೋಧಿಗಳು ಪ್ರತಿಭಟನೆ ಮಾಡುವುದು ಸಹಜವಾಗಿದೆ ಎಂದು ಪ್ರತಿಕ್ರಿಯಿಸಿದರು.

ಮೊಟ್ಟೆ ಟೆಂಡರ್​​​ನಲ್ಲಿ ಅವ್ಯವಹಾರ ಆರೋಪ ವಿಚಾರ:

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಚಿವ ಸಂಪುಟ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಮೊಟ್ಟೆ ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ ಎಸಗಿದ್ದೆ ಎಂದು ಕಾಂಗ್ರೆಸ್ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ನಾನು ಯಾವ ತಪ್ಪೂ ಮಾಡಿಲ್ಲ. ದೇವರು ಎಲ್ಲವನ್ನೂ ನೋಡುತ್ತಿದ್ದಾರೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಬಾಯಿ ಚಪಲಕ್ಕೆ ಮಾತನಾಡುತ್ತಾರೆ : ಸಚಿವ ಹಾಲಪ್ಪ ಆಚಾರ್

Last Updated : Aug 15, 2021, 6:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.