ಬೆಳಗಾವಿ : ಹಿಂಬದಿ ಟೈರ್ ಪಂಚರ್ ಆಗಿ ಕಬ್ಬು ಸಾಗಿಸುತ್ತಿದ್ದ ಲಾರಿ ಮಗುಚಿ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಣೆಬೈಲ ಗ್ರಾಮದ ಬಳಿ ನಡೆದಿದೆ.
ಬೆಳಗಾವಿ-ಪಣಜಿ ಹೆದ್ದಾರಿ ಮೂಲಕ ದೂದ್ ಗಂಗಾ ಸಕ್ಕರೆ ಕಾರ್ಖಾನೆಗೆ ಈ ಲಾರಿ ತೆರಳುತ್ತಿತ್ತು. ಟೈರ್ ಪಂಚರ್ ಆದ ಹಿನ್ನೆಲೆಯಲ್ಲಿ ಲಾರಿ ನಿಲ್ಲಿಸಿದ ಚಾಲಕ ತಕ್ಷಣವೇ ತಾನು ಕೆಳಗಿಳಿದರು. ಚಾಲಕ ಕೆಳಗಿಳಿಯುತ್ತಿದ್ದಂತೆ ಲಾರಿ ಮಗುಚಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಬೀಡಿ ಗ್ರಾಮದಿಂದ ಕಬ್ಬು ತುಂಬಿಸಿಕೊಂಡು ಲಾರಿ ಬೆಳಗಾವಿ ಮಾರ್ಗವಾಗಿ ಹೊರಟಿತ್ತು. ಘಟನೆಯಿಂದ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಲಾರಿ ಮಗುಚಿ ಬಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಪುನೀತ್ ರಾಜ್ಕುಮಾರ್ ಸಮಾಧಿಗೆ ಹಾಲು-ತುಪ್ಪ ಕಾರ್ಯ; ಕುಟುಂಬಸ್ಥರು ಭಾಗಿ - ವಿಡಿಯೋ