ಅಥಣಿ: ಉಪಚುಣಾವಣೆ ದಿನೇ ದಿನೆ ರಂಗೇರುತ್ತಿದ್ದು, ರಾಷ್ಟ್ರೀಯ ಪಕ್ಷದ ಜೊತೆ, ಪಕ್ಷೇತರ ಅಭ್ಯರ್ಥಿ ಶ್ರೀಶೈಲ ಹಳ್ಳದಮಳ್ಳ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಅಥಣಿ ತಾಲೂಕಿನ 23 ಹಳ್ಳಿಗಳು ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿವೆ. ರಾಜಕೀಯ ಪಕ್ಷಗಳ ಕಚ್ಚಾಟದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ವಿಫಲರಾಗಿದ್ದಾರೆ. ಅಥಣಿ ಪುರಸಭೆಯ ಸದಸ್ಯನಾಗಿ ಹಲವಾರು ಕೆಲಸವನ್ನು ಮಾಡಿದ್ದೇನೆ. ನನ್ನ ಹೆಲಿಕ್ಯಾಪ್ಟರ್ ಚಿನ್ನೆಗೆ ಮತ ನೀಡಿ ಬೆಂಬಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.