ETV Bharat / state

ರವೀಂದ್ರ ಹಾರೋಹಳ್ಳಿಗೆ ಜಾಮೀನು ಮಂಜೂರು - ಕಾಗವಾಡ ನ್ಯಾಯಾಲಯದಿಂದ ಜಾಮೀನು

ರವೀಂದ್ರ ಹಾರೋಹಳ್ಳಿಗೆ ಮೇ 11ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಕಾಗವಾಡ ನ್ಯಾಯಾಲಯವು ಯಾವುದೇ ಷರತ್ತನ್ನು ವಿಧಿಸದೇ ಜಾಮೀನು ನೀಡಿದೆ.

ravindra harohalli get bail
ರವೀಂದ್ರ ಹಾರೋಹಳ್ಳಿಗೆ ಜಾಮೀನು ಮಂಜೂರು
author img

By

Published : Apr 30, 2022, 10:57 PM IST

ಚಿಕ್ಕೋಡಿ(ಬೆಳಗಾವಿ): ಸಾಮಾಜಿಕ ಜಾಲತಾಣದಲ್ಲಿ ಅವನಹೇಳನಕಾರಿ ಪೋಸ್ಟ್​ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾದ ದಲಿತ ಹೋರಾಟಗಾರ ರವೀಂದ್ರ ಹಾರೋಹಳ್ಳಿಗೆ ಯಾವುದೇ ಷರತ್ತು ವಿಧಿಸದೇ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಹಿಂದೂ ಧರ್ಮ ಹಾಗೂ ಹಿಂದೂ ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ರವೀಂದ್ರ ಹಾರೋಹಳ್ಳಿ ವಿರುದ್ಧ 2017ರಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಗೆ ಚಂದ್ರಶೇಖರ್​ ಮುಂಡೆ ಎಂಬುವರು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೋರ್ಟ್​ಗೆ ರವೀಂದ್ರ ಹಾರೋಹಳ್ಳಿ ಹಾಜರಾಗಿರಲಿಲ್ಲ.

ಹೀಗಾಗಿ ಕೋರ್ಟ್​ನಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಅಂತೆಯೇ ಚಿಕ್ಕೋಡಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿ ಶನಿವಾರ ಕಾಗವಾಡ ಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಕೋರ್ಟ್ ರವೀಂದ್ರಗೆ ಮೇ 11ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಯಾವುದೇ ಷರತ್ತನ್ನು ವಿಧಿಸದೇ ಜಾಮೀನು ನೀಡಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಆರೋಪ​​: ರವೀಂದ್ರ ಹಾರೋಹಳ್ಳಿ ಬಂಧನ

ಚಿಕ್ಕೋಡಿ(ಬೆಳಗಾವಿ): ಸಾಮಾಜಿಕ ಜಾಲತಾಣದಲ್ಲಿ ಅವನಹೇಳನಕಾರಿ ಪೋಸ್ಟ್​ ಹಾಕಿದ ಆರೋಪದ ಮೇಲೆ ಬಂಧನಕ್ಕೊಳಗಾದ ದಲಿತ ಹೋರಾಟಗಾರ ರವೀಂದ್ರ ಹಾರೋಹಳ್ಳಿಗೆ ಯಾವುದೇ ಷರತ್ತು ವಿಧಿಸದೇ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಹಿಂದೂ ಧರ್ಮ ಹಾಗೂ ಹಿಂದೂ ದೇವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಲಾಗಿದೆ ಎಂದು ಆರೋಪಿಸಿ ರವೀಂದ್ರ ಹಾರೋಹಳ್ಳಿ ವಿರುದ್ಧ 2017ರಲ್ಲಿ ಚಿಕ್ಕೋಡಿ ಪೊಲೀಸ್ ಠಾಣೆಗೆ ಚಂದ್ರಶೇಖರ್​ ಮುಂಡೆ ಎಂಬುವರು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೋರ್ಟ್​ಗೆ ರವೀಂದ್ರ ಹಾರೋಹಳ್ಳಿ ಹಾಜರಾಗಿರಲಿಲ್ಲ.

ಹೀಗಾಗಿ ಕೋರ್ಟ್​ನಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಅಂತೆಯೇ ಚಿಕ್ಕೋಡಿ ಪೊಲೀಸರು ಮೈಸೂರಿನಲ್ಲಿ ಬಂಧಿಸಿ ಶನಿವಾರ ಕಾಗವಾಡ ಪಟ್ಟಣದಲ್ಲಿರುವ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ಕೋರ್ಟ್ ರವೀಂದ್ರಗೆ ಮೇ 11ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಯಾವುದೇ ಷರತ್ತನ್ನು ವಿಧಿಸದೇ ಜಾಮೀನು ನೀಡಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಆರೋಪ​​: ರವೀಂದ್ರ ಹಾರೋಹಳ್ಳಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.