ETV Bharat / state

ಪೋಷಕರೇ ಮಗುವನ್ನು ಎಮರ್ಜೆನ್ಸಿ ವಾರ್ಡ್​ನಿಂದ ಶಿಫ್ಟ್​ ಮಾಡಿದ ವಿಡಿಯೋ ವೈರಲ್: ಬಿಮ್ಸ್​​​ ನಿರ್ದೇಶಕರು ಹೇಳಿದ್ದೇನು? - belgavi latest news

ಜಿಲ್ಲಾಸ್ಪತ್ರೆಯಲ್ಲಿ ಸ್ಟ್ರೆಚರ್​​​ ಕೊರತೆ ಇದೆ ಎಂಬ ಕಾರಣಕ್ಕೆ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಕುಟುಂಬಸ್ಥರೇ ಹೊತ್ತುಕೊಂಡು ಹೋಗಿರುವ ಘಟನೆ ನಡೆದಿರುವುದು ತಪ್ಪು. ಆದ್ರೆ, ಆಸ್ಪತ್ರೆಯಲ್ಲಿ ಸ್ಟ್ರೆಚರ್​ ಸೇರಿದಂತೆ ಯಾವುದೇ ಕೊರತೆಯೂ ಇಲ್ಲವೆಂದು ಬಿಮ್ಸ್​ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

parents shifted  a child fro emergency to children ward
ತನಿಖೆ ನಡೆಸಲಾಗುವುದು ಎಂದ ಬೀಮ್ಸ್​​​ ನಿರ್ದೇಶಕ
author img

By

Published : Jun 30, 2020, 4:49 PM IST

ಬೆಳಗಾವಿ: ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಪೋಷಕರೇ ಎಮರ್ಜೆನ್ಸಿ ವಾರ್ಡ್​​​ನಿಂದ ಮಕ್ಕಳ ವಾರ್ಡ್​​​ಗೆ ಸ್ಥಳಾಂತರಿಸಿದ ವಿಡಿಯೋ ವೈರಲ್ ಆಗಿರುವ ಕುರಿತು ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಸ್ಟ್ರೆಚರ್​​​ ಕೊರತೆ ಇದೆ ಎಂಬ ಕಾರಣಕ್ಕೆ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಕುಟುಂಬಸ್ಥರೇ ಹೊತ್ತುಕೊಂಡು ಹೋಗಿರುವುದು ತಪ್ಪು. ಆದ್ರೆ, ಆಸ್ಪತ್ರೆಯಲ್ಲಿ ಸ್ಟ್ರೆಚರ್​ ಸೇರಿದಂತೆ ಯಾವುದೇ ಕೊರತೆಯೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಪೋಷಕರೇ ಮಗುವನ್ನು ಹೊತ್ತುಕೊಂಡು ಹೋದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಬಿಮ್ಸ್​​​ ನಿರ್ದೇಶಕ

ಮಕ್ಕಳ ವಾರ್ಡ್​ಗೆ ಹೋಗುವ ಮಾರ್ಗದಲ್ಲಿ ಒಳ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಅಲ್ಲಿ ಸ್ಟ್ರೆಚರ್ ಹೋಗದ ಕಾರಣ ಮಗುವನ್ನು ಹೊತ್ತುಕೊಂಡು ಹೋಗಿರಬಹದು. ಹೀಗಾಗಿ ಆ ಮಗುವಿನೊಂದಿಗಿರುವ ಡಾಕ್ಟರ್​​ನ್ನು ಕರೆದು ಮಾಹಿತಿ ಪಡೆಯುತ್ತೇನೆ. ಯಾವ ಕಾರಣಕ್ಕೆ ಮಗುವನ್ನು ಹೊತ್ತೊಯ್ಯಲಾಗಿದೆ ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಈ ವಿಚಾರದಲ್ಲಿ ಏನಾದರೂ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು‌ ಎಂದು ಬಿಮ್ಸ್​ ನಿರ್ದೇಶಕ ದಾಸ್ತಿಕೊಪ್ಪ ತಿಳಿಸಿದರು.

ಬೆಳಗಾವಿ: ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಪೋಷಕರೇ ಎಮರ್ಜೆನ್ಸಿ ವಾರ್ಡ್​​​ನಿಂದ ಮಕ್ಕಳ ವಾರ್ಡ್​​​ಗೆ ಸ್ಥಳಾಂತರಿಸಿದ ವಿಡಿಯೋ ವೈರಲ್ ಆಗಿರುವ ಕುರಿತು ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಸ್ಟ್ರೆಚರ್​​​ ಕೊರತೆ ಇದೆ ಎಂಬ ಕಾರಣಕ್ಕೆ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಕುಟುಂಬಸ್ಥರೇ ಹೊತ್ತುಕೊಂಡು ಹೋಗಿರುವುದು ತಪ್ಪು. ಆದ್ರೆ, ಆಸ್ಪತ್ರೆಯಲ್ಲಿ ಸ್ಟ್ರೆಚರ್​ ಸೇರಿದಂತೆ ಯಾವುದೇ ಕೊರತೆಯೂ ಇಲ್ಲವೆಂದು ಸ್ಪಷ್ಟಪಡಿಸಿದರು.

ಪೋಷಕರೇ ಮಗುವನ್ನು ಹೊತ್ತುಕೊಂಡು ಹೋದ ಬಗ್ಗೆ ತನಿಖೆ ನಡೆಸಲಾಗುವುದು ಎಂದ ಬಿಮ್ಸ್​​​ ನಿರ್ದೇಶಕ

ಮಕ್ಕಳ ವಾರ್ಡ್​ಗೆ ಹೋಗುವ ಮಾರ್ಗದಲ್ಲಿ ಒಳ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಅಲ್ಲಿ ಸ್ಟ್ರೆಚರ್ ಹೋಗದ ಕಾರಣ ಮಗುವನ್ನು ಹೊತ್ತುಕೊಂಡು ಹೋಗಿರಬಹದು. ಹೀಗಾಗಿ ಆ ಮಗುವಿನೊಂದಿಗಿರುವ ಡಾಕ್ಟರ್​​ನ್ನು ಕರೆದು ಮಾಹಿತಿ ಪಡೆಯುತ್ತೇನೆ. ಯಾವ ಕಾರಣಕ್ಕೆ ಮಗುವನ್ನು ಹೊತ್ತೊಯ್ಯಲಾಗಿದೆ ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಈ ವಿಚಾರದಲ್ಲಿ ಏನಾದರೂ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು‌ ಎಂದು ಬಿಮ್ಸ್​ ನಿರ್ದೇಶಕ ದಾಸ್ತಿಕೊಪ್ಪ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.