ETV Bharat / state

ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಪತ್ರ ಚಳುವಳಿಗೆ ಮುಂದಾದ ತಳವಾರ ಸಮಾಜ

author img

By

Published : Sep 4, 2020, 11:52 PM IST

ಸರ್ಕಾರ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದರು ರಾಜ್ಯ ಸರ್ಕಾರ ಎಸ್​ಟಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿಲ್ಲ. ಹೀಗಾಗಿ ಹಳ್ಳಿಯಿಂದ ದಿಲ್ಲಿವರಿಗೆ ಪತ್ರ ಚಳುವಳಿ ನಡೆಸಲು ಅಥಣಿ ತಾಲೂಕಿನ ತಳವಾರ ಸಮಾಜ ಮುಂದಾಗಿದೆ.

Letter Movement
ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಪತ್ರ ಚಳುವಳಿ ಮುಂದಾದ ಅಥಣಿ, ತಳವಾರ ಸಮಾಜ.

ಅಥಣಿ : ಕೇಂದ್ರ ಸರ್ಕಾರ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದರು ರಾಜ್ಯ ಸರ್ಕಾರ ಎಸ್​ಟಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿಲ್ಲ ಎಂದು ಹಳ್ಳಿಯಿಂದ ದಿಲ್ಲಿವರಿಗೆ ಪತ್ರ ಚಳುವಳಿಗೆ ಮಾಡಲು ಅಥಣಿ ತಾಲೂಕಿನ ತಳವಾರ ಸಮಾಜದವರು ಮುಂದಾಗಿದ್ದಾರೆ.

ಅಥಣಿ ತಾಲೂಕಿನಲ್ಲಿ ಸರಿಸುಮಾರು 14,900ಕ್ಕೂ ಹೆಚ್ಚು ತಳವಾರ ಸಮುದಾಯದವರಿದ್ದಾರೆ. ಇವರೆಲ್ಲ ಮೊದಲನೇ ಹಂತವಾಗಿ 2೦೦೦ ಪತ್ರವನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಿಸಿ, ನ್ಯಾಯ ಸಿಗುವವರೆಗೆ ಚಳುವಳಿ ಮುಂದುವರೆಸುತ್ತೇವೆ ಎಂದಿದ್ದಾರೆ.

ಇದೆ ಸಂದರ್ಭದಲ್ಲಿ ಸುನಿತಾ ಈಟಿ ಮಾತನಾಡಿ, ತಳವಾರ ಸಮುದಾಯದವರ ಬಹುದಿನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದೆ. ಆದ್ರೆ ರಾಜ್ಯ ಸರ್ಕಾರ ದ್ವಂದ್ವ ನಿಲುವಿಗೆ ಬಂದಿದ್ದುಇದರಿಂದ ತಳವಾರ ಸಮುದಾಯಕ್ಕೆ ಹಿನ್ನಡೆ ಉಂಟಾಗಿದೆ ಎಂದರು.

ಇನ್ನೋರ್ವ ತಳವಾರ ಸಮಾಜದ ಮುಖಂಡ ತಮ್ಮಣ್ಣ ಶಿವಪ್ಪ ಮೀಶಿ ಮಾತನಾಡಿ, ಬಹುದಿನ ಕನಸು ಕೇಂದ್ರ ಸರ್ಕಾರ ಪರಿವಾರ_ತಳವಾರು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದೆ. ಆದ್ರೆ ರಾಜ್ಯ ಸರ್ಕಾರ ಎಸ್​ಟಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿಲ್ಲ. ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಹಲವು ಯೋಜನೆಗಳಿಂದ ಅನ್ಯಾಯವಾಗಿತ್ತಿದೆ ಎಂದರು.

ಅಥಣಿ : ಕೇಂದ್ರ ಸರ್ಕಾರ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದರು ರಾಜ್ಯ ಸರ್ಕಾರ ಎಸ್​ಟಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿಲ್ಲ ಎಂದು ಹಳ್ಳಿಯಿಂದ ದಿಲ್ಲಿವರಿಗೆ ಪತ್ರ ಚಳುವಳಿಗೆ ಮಾಡಲು ಅಥಣಿ ತಾಲೂಕಿನ ತಳವಾರ ಸಮಾಜದವರು ಮುಂದಾಗಿದ್ದಾರೆ.

ಅಥಣಿ ತಾಲೂಕಿನಲ್ಲಿ ಸರಿಸುಮಾರು 14,900ಕ್ಕೂ ಹೆಚ್ಚು ತಳವಾರ ಸಮುದಾಯದವರಿದ್ದಾರೆ. ಇವರೆಲ್ಲ ಮೊದಲನೇ ಹಂತವಾಗಿ 2೦೦೦ ಪತ್ರವನ್ನು ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳಿಸಿ, ನ್ಯಾಯ ಸಿಗುವವರೆಗೆ ಚಳುವಳಿ ಮುಂದುವರೆಸುತ್ತೇವೆ ಎಂದಿದ್ದಾರೆ.

ಇದೆ ಸಂದರ್ಭದಲ್ಲಿ ಸುನಿತಾ ಈಟಿ ಮಾತನಾಡಿ, ತಳವಾರ ಸಮುದಾಯದವರ ಬಹುದಿನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದೆ. ಆದ್ರೆ ರಾಜ್ಯ ಸರ್ಕಾರ ದ್ವಂದ್ವ ನಿಲುವಿಗೆ ಬಂದಿದ್ದುಇದರಿಂದ ತಳವಾರ ಸಮುದಾಯಕ್ಕೆ ಹಿನ್ನಡೆ ಉಂಟಾಗಿದೆ ಎಂದರು.

ಇನ್ನೋರ್ವ ತಳವಾರ ಸಮಾಜದ ಮುಖಂಡ ತಮ್ಮಣ್ಣ ಶಿವಪ್ಪ ಮೀಶಿ ಮಾತನಾಡಿ, ಬಹುದಿನ ಕನಸು ಕೇಂದ್ರ ಸರ್ಕಾರ ಪರಿವಾರ_ತಳವಾರು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಆದೇಶ ಹೊರಡಿಸಿದೆ. ಆದ್ರೆ ರಾಜ್ಯ ಸರ್ಕಾರ ಎಸ್​ಟಿ ಪ್ರಮಾಣ ಪತ್ರ ವಿತರಣೆ ಮಾಡುತ್ತಿಲ್ಲ. ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಹಲವು ಯೋಜನೆಗಳಿಂದ ಅನ್ಯಾಯವಾಗಿತ್ತಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.