ETV Bharat / state

ಮೀಸಲಾತಿ ವಿಚಾರ: ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಸಿದ್ದರಾಮಯ್ಯ

author img

By

Published : Dec 27, 2022, 1:35 PM IST

Updated : Dec 27, 2022, 1:45 PM IST

ಬಿಜೆಪಿ ಸರ್ಕಾರಕ್ಕೆ ಎಸ್​ಟಿ ಎಸ್​ಸಿ ಪಂಗಡದ ಮೇಲೆ ಕಾಳಜಿ ಇಲ್ಲ ಎಂದು ಆರೋಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ - ಚುನಾವಣೆಗೋಸ್ಕರ ಮೀಸಲಾತಿ ತಂದಿದ್ದಾರೆ.

Leader of Opposition Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರ ಮೇಲೆ ಯಾವುದೇ ಕಾಳಜಿ ಇಲ್ಲ. ಅವರಿಗೆ ಮೀಸಲಾತಿ ತಂದಿರುವುದು ಕೇವಲ ಚುನಾವಣೆ ಉದ್ದೇಶಕ್ಕಾಗಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನಸಭೆಯಲ್ಲಿ ಎಸ್​​ಸಿ ಎಸ್​​​ಟಿ ಮೀಸಲಾತಿ ವಿದಾಯಕ ಅನುಮೋದನೆಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಇಂದು ವಿಧಾನಸಭೆಯಲ್ಲಿ ಎಸ್ಸಿ- ಎಸ್‌ಟಿ ತಿದ್ದುಪಡಿ ವಿಧೇಯಕ ಅನುಮೋದನೆಗೊಂಡಿದೆ. ಎಸ್ ಸಿ ಸಮುದಾಯದವರಿಗೆ ಶೇಕಡ 15 ರಿಂದ 17ಕ್ಕೆ ಹಾಗೂ ಎಸ್‌ಟಿ ಸಮುದಾಯಕ್ಕೆ ಶೇಕಡ 3 ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಶೇಕಡ 24 ರಷ್ಟು ಮೀಸಲಾತಿ ಸಿಗಬೇಕು. ಈ ಪ್ರಸ್ತಾವವನ್ನು ನಾನು ಈ ಹಿಂದೆಯೇ ಮಾಡಿದ್ದು, ಚುನಾವಣೆ ಹಿನ್ನೆಲೆ ಪ್ರಸ್ತಾಪ ಮಾಡಿದ್ದೆ. ಈಗ ಬಿಜೆಪಿ ಸರ್ಕಾರ ಇದನ್ನು ಅನುಮೋದನೆಗೆ ತಂದಿದ್ದು, ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಒಂಬತ್ತನೇ ಶೆಡ್ಯೂಲ್ ಗೆ ಸೇರ್ಪಡೆ ಮಾಡಬೇಕಿತ್ತು, ಆದರೆ ಮಾಡಿಲ್ಲ. ಕೇಂದ್ರದ ಸಮಾಜ ಕಲ್ಯಾಣ ಇಲಾಖೆ ಕ್ಯಾಬಿನೆಟ್ ಹಾಗೂ ರಾಜ್ಯ ಖಾತೆಯ ಸಚಿವರುಗಳು ಈಗಾಗಲೇ ತಿಳಿಸಿದ್ದು, ಇಂದಿರಾ ಸಹನೆ ಪ್ರಕರಣದಲ್ಲಿ ಶೇಕಡ 50ಕ್ಕೆ ಫೀಲ್ ಮಾಡಲಾಗಿದ್ದು ಇದಕ್ಕಿಂತ ಹೆಚ್ಚು ಮಾಡುವ ಪ್ರಸ್ತಾಪ ನಮಗೆ ಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರದ ತಯಾರಿ: ಇವತ್ತು ಹೈ ವೋಲ್ಟೇಜ್ ಸಭೆ

ಇದುವರೆಗೂ ಮನವಿಯನ್ನೇ ಸಲ್ಲಿಸಿಲ್ಲ: ಅಲ್ಲಿಗೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಇದುವರೆಗೂ ಮನವಿಯನ್ನೇ ಸಲ್ಲಿಸಿಲ್ಲ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ. 2022 ರ ಅಕ್ಟೊಬರ್​ 23 ರಂದು ಕಾಯ್ದೆಗೆ ಆರ್ಡಿನೆನ್ಸ್ ಮಾಡಿ ಆದೇಶ ಹೊರಡಿಸಿದ್ದು, 2022 ರ ನವೆಂಬರ್ 1 ಕ್ಕೆ. ಆದೇಶ ಹೊರಡಿಸಿದ ಎರಡು ತಿಂಗಳವರೆಗೂ ರಾಜ್ಯ ಸರ್ಕಾರ ನಿದ್ದೆ ಹೊಡೆಯುತ್ತಿದೆಯಾ? ಇದರಿಂದಾಗಿ ಇವರಿಗೆ ಎಸ್ ಸಿ ಎಸ್ ಟಿ ಸಮುದಾಯದವರ ಬಗ್ಗೆ ಬದ್ಧತೆ ಹಾಗೂ ಕಾಳಜಿ ಇಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ನಿಜವಾದ ಕಾಳಜಿ ಇಲ್ಲ: ಕೇವಲ ಚುನಾವಣೆಗೋಸ್ಕರ ಈ ರೀತಿಯ ಕಾರ್ಯ ಮಾಡಿರುವುದು ಸಾಬೀತಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಿಜವಾದ ಬದ್ಧತೆ ಇದ್ದರೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಇದನ್ನು ಕೊಂಡೊಯ್ದು ಪಾರ್ಲಿಮೆಂಟ್ ನಲ್ಲಿ ಈ ವಿಷಯವನ್ನು ಇರಿಸಿ ಸಂವಿಧಾನಕ್ಕೆ ಸೇರ್ಪಡೆ ಮಾಡಿಸಿ 9ನೇ ಶೆಡ್ಯೂಲ್ ಗೆ ಸೇರಿಸುವ ಕೆಲಸವನ್ನು ಮಾಡಬೇಕಿತ್ತು. ಈ ಕಾರ್ಯ ಆಗದ ಹಿನ್ನೆಲೆ ಸರ್ಕಾರಕ್ಕೆ ನಿಜವಾದ ಕಾಳಜಿ ಇಲ್ಲ ಎಂಬ ಸಂಶಯ ಮೇಲ್ನೋಟಕ್ಕೆ ಕಾಡುತ್ತದೆ ಎಂದರು.

ಇದನ್ನೂ ಓದಿ: 8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ,

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರ ಮೇಲೆ ಯಾವುದೇ ಕಾಳಜಿ ಇಲ್ಲ. ಅವರಿಗೆ ಮೀಸಲಾತಿ ತಂದಿರುವುದು ಕೇವಲ ಚುನಾವಣೆ ಉದ್ದೇಶಕ್ಕಾಗಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ವಿಧಾನಸಭೆಯಲ್ಲಿ ಎಸ್​​ಸಿ ಎಸ್​​​ಟಿ ಮೀಸಲಾತಿ ವಿದಾಯಕ ಅನುಮೋದನೆಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಇಂದು ವಿಧಾನಸಭೆಯಲ್ಲಿ ಎಸ್ಸಿ- ಎಸ್‌ಟಿ ತಿದ್ದುಪಡಿ ವಿಧೇಯಕ ಅನುಮೋದನೆಗೊಂಡಿದೆ. ಎಸ್ ಸಿ ಸಮುದಾಯದವರಿಗೆ ಶೇಕಡ 15 ರಿಂದ 17ಕ್ಕೆ ಹಾಗೂ ಎಸ್‌ಟಿ ಸಮುದಾಯಕ್ಕೆ ಶೇಕಡ 3 ರಿಂದ 7ಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಶೇಕಡ 24 ರಷ್ಟು ಮೀಸಲಾತಿ ಸಿಗಬೇಕು. ಈ ಪ್ರಸ್ತಾವವನ್ನು ನಾನು ಈ ಹಿಂದೆಯೇ ಮಾಡಿದ್ದು, ಚುನಾವಣೆ ಹಿನ್ನೆಲೆ ಪ್ರಸ್ತಾಪ ಮಾಡಿದ್ದೆ. ಈಗ ಬಿಜೆಪಿ ಸರ್ಕಾರ ಇದನ್ನು ಅನುಮೋದನೆಗೆ ತಂದಿದ್ದು, ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಒಂಬತ್ತನೇ ಶೆಡ್ಯೂಲ್ ಗೆ ಸೇರ್ಪಡೆ ಮಾಡಬೇಕಿತ್ತು, ಆದರೆ ಮಾಡಿಲ್ಲ. ಕೇಂದ್ರದ ಸಮಾಜ ಕಲ್ಯಾಣ ಇಲಾಖೆ ಕ್ಯಾಬಿನೆಟ್ ಹಾಗೂ ರಾಜ್ಯ ಖಾತೆಯ ಸಚಿವರುಗಳು ಈಗಾಗಲೇ ತಿಳಿಸಿದ್ದು, ಇಂದಿರಾ ಸಹನೆ ಪ್ರಕರಣದಲ್ಲಿ ಶೇಕಡ 50ಕ್ಕೆ ಫೀಲ್ ಮಾಡಲಾಗಿದ್ದು ಇದಕ್ಕಿಂತ ಹೆಚ್ಚು ಮಾಡುವ ಪ್ರಸ್ತಾಪ ನಮಗೆ ಬಂದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಭರದ ತಯಾರಿ: ಇವತ್ತು ಹೈ ವೋಲ್ಟೇಜ್ ಸಭೆ

ಇದುವರೆಗೂ ಮನವಿಯನ್ನೇ ಸಲ್ಲಿಸಿಲ್ಲ: ಅಲ್ಲಿಗೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡುವಂತೆ ಕೇಂದ್ರಕ್ಕೆ ಇದುವರೆಗೂ ಮನವಿಯನ್ನೇ ಸಲ್ಲಿಸಿಲ್ಲ ಎನ್ನುವುದು ಸಾಬೀತಾಗಿದೆ ಎಂದಿದ್ದಾರೆ. 2022 ರ ಅಕ್ಟೊಬರ್​ 23 ರಂದು ಕಾಯ್ದೆಗೆ ಆರ್ಡಿನೆನ್ಸ್ ಮಾಡಿ ಆದೇಶ ಹೊರಡಿಸಿದ್ದು, 2022 ರ ನವೆಂಬರ್ 1 ಕ್ಕೆ. ಆದೇಶ ಹೊರಡಿಸಿದ ಎರಡು ತಿಂಗಳವರೆಗೂ ರಾಜ್ಯ ಸರ್ಕಾರ ನಿದ್ದೆ ಹೊಡೆಯುತ್ತಿದೆಯಾ? ಇದರಿಂದಾಗಿ ಇವರಿಗೆ ಎಸ್ ಸಿ ಎಸ್ ಟಿ ಸಮುದಾಯದವರ ಬಗ್ಗೆ ಬದ್ಧತೆ ಹಾಗೂ ಕಾಳಜಿ ಇಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಆರೋಪಿಸಿದರು.

ಸರ್ಕಾರಕ್ಕೆ ನಿಜವಾದ ಕಾಳಜಿ ಇಲ್ಲ: ಕೇವಲ ಚುನಾವಣೆಗೋಸ್ಕರ ಈ ರೀತಿಯ ಕಾರ್ಯ ಮಾಡಿರುವುದು ಸಾಬೀತಾಗುತ್ತದೆ. ರಾಜ್ಯ ಸರ್ಕಾರಕ್ಕೆ ನಿಜವಾದ ಬದ್ಧತೆ ಇದ್ದರೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಇದನ್ನು ಕೊಂಡೊಯ್ದು ಪಾರ್ಲಿಮೆಂಟ್ ನಲ್ಲಿ ಈ ವಿಷಯವನ್ನು ಇರಿಸಿ ಸಂವಿಧಾನಕ್ಕೆ ಸೇರ್ಪಡೆ ಮಾಡಿಸಿ 9ನೇ ಶೆಡ್ಯೂಲ್ ಗೆ ಸೇರಿಸುವ ಕೆಲಸವನ್ನು ಮಾಡಬೇಕಿತ್ತು. ಈ ಕಾರ್ಯ ಆಗದ ಹಿನ್ನೆಲೆ ಸರ್ಕಾರಕ್ಕೆ ನಿಜವಾದ ಕಾಳಜಿ ಇಲ್ಲ ಎಂಬ ಸಂಶಯ ಮೇಲ್ನೋಟಕ್ಕೆ ಕಾಡುತ್ತದೆ ಎಂದರು.

ಇದನ್ನೂ ಓದಿ: 8001.12 ಕೋಟಿ ರೂ. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜು ವಿಧಾನಸಭೆಯಲ್ಲಿ ಮಂಡನೆ,

Last Updated : Dec 27, 2022, 1:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.