ETV Bharat / state

ಗಾಯದ ಮೇಲೆ ಬರೆ ಎಳೆದ ವರುಣ... ಅಥಣಿ ಜನರು ತತ್ತರ

author img

By

Published : Oct 21, 2019, 5:15 PM IST

ಅಥಣಿ ತಾಲೂಕಿನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ. ಇನ್ನು ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿಹೋಗಿವೆ. ಕೃಷ್ಣಾ ನದಿ ಪ್ರವಾಹದಿಂದಾಗಿ ಹಾಳಾಗಿದ್ದ ಪರಿಸ್ಥಿತಿ ಸುಧಾರಿಸುವ ಮುನ್ನವೇ ಮತ್ತೊಮ್ಮೆ ಮಳೆ ಅಬ್ಬರಿಸಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಥಣಿಯಲ್ಲಿ ಮತ್ತೆ ಜಲ ಕಂಟಕ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಗಿಡ, ನಾಟಿ ಮಾಡಿರುವ ಕಬ್ಬು ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ.

ತಾಲೂಕಿನಲ್ಲಿ ನಿನ್ನೆ ರಾತ್ರಿ ಸುಮಾರು 10ಗಂಟೆಗೆ ಪ್ರಾರಂಭವಾಗಿದ್ದ ಮಳೆ ನಸುಕಿನ ಜಾವ 5ಗಂಟೆವರೆಗೆ ಅಬ್ಬರಿಸಿತು. ಪರಿಣಾಮವಾಗಿ ಅಥಣಿ ತಾಲೂಕಿನ ಹಳ್ಳಕೊಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಯಲ್ಲಮ್ಮವಾಡಿಯ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ.

ಅಥಣಿಯಲ್ಲಿ ಮತ್ತೆ ಜಲ ಕಂಟಕ

ಇನ್ನು, ಅಥಣಿ ಮತ್ತು ಜಮಖಂಡಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಝುಂಜರವಾಡ-ತುಬಚಿ ರಸ್ತೆ ಮಾರ್ಗ, ಮಳೆ ನೀರಿನಿಂದ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಪರದಾಡುವಂತಾಗಿತ್ತು.

ಕೆಲವು ಗ್ರಾಮಗಳಲ್ಲಿ ದನದ ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ ನೀರಿನಲ್ಲಿ ಮುಳುಗುತ್ತಿದ್ದ ದನ ಕರುಗಳನ್ನು ರಕ್ಷಿಸಲಾಗಿದೆ. ಮಳೆಯ ರಭಸಕ್ಕೆ ರೈತರ ಬೆಳೆಗಳು ಕೊಚ್ಚಿ ಹೋಗಿವೆ.

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ, ಮೆಣಸಿನಗಿಡ, ನಾಟಿ ಮಾಡಿರುವ ಕಬ್ಬು ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ.

ತಾಲೂಕಿನಲ್ಲಿ ನಿನ್ನೆ ರಾತ್ರಿ ಸುಮಾರು 10ಗಂಟೆಗೆ ಪ್ರಾರಂಭವಾಗಿದ್ದ ಮಳೆ ನಸುಕಿನ ಜಾವ 5ಗಂಟೆವರೆಗೆ ಅಬ್ಬರಿಸಿತು. ಪರಿಣಾಮವಾಗಿ ಅಥಣಿ ತಾಲೂಕಿನ ಹಳ್ಳಕೊಳ್ಳದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಯಲ್ಲಮ್ಮವಾಡಿಯ ಸುಕ್ಷೇತ್ರ ಯಲ್ಲಮ್ಮ ದೇವಸ್ಥಾನ ಜಲಾವೃತವಾಗಿದೆ.

ಅಥಣಿಯಲ್ಲಿ ಮತ್ತೆ ಜಲ ಕಂಟಕ

ಇನ್ನು, ಅಥಣಿ ಮತ್ತು ಜಮಖಂಡಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಝುಂಜರವಾಡ-ತುಬಚಿ ರಸ್ತೆ ಮಾರ್ಗ, ಮಳೆ ನೀರಿನಿಂದ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತವಾಗಿದೆ. ಇಡೀ ರಾತ್ರಿ ಸುರಿದ ಮಳೆಗೆ ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಪರದಾಡುವಂತಾಗಿತ್ತು.

ಕೆಲವು ಗ್ರಾಮಗಳಲ್ಲಿ ದನದ ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ ನೀರಿನಲ್ಲಿ ಮುಳುಗುತ್ತಿದ್ದ ದನ ಕರುಗಳನ್ನು ರಕ್ಷಿಸಲಾಗಿದೆ. ಮಳೆಯ ರಭಸಕ್ಕೆ ರೈತರ ಬೆಳೆಗಳು ಕೊಚ್ಚಿ ಹೋಗಿವೆ.

Intro:ಅಥಣಿಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ, ಯಲ್ಲಮ್ಮ ವಾಡಿ ಸುಕ್ಷೇತ್ರ ಜಲಾವೃತ, ಅಥಣಿ ಜಮಖಂಡಿ ರಸ್ತೆ ಸಂಪರ್ಕ ಕಡಿತ, ಹಾಗೂ ನೂರಾರು ಎಕರೆ ಬೆಳೆ ಹಾನಿ ಮತ್ತು ನೀರಿನಲ್ಲಿ ಮುಳುಗಿದ ದನಕರುಗಳುBody:ಅಥಣಿ:

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಈರುಳ್ಳಿ,ಮೆಣಸಿನಗಿಡ,ನಾಟಿ ಮಾಡಿರುವ ಕಬ್ಬು, ಹಾಗೂ ಇನ್ನಿತರ ಬೆಳೆಗಳು ಸಂಪೂರ್ಣ ಹಾಳಾಗಿವೆ.

ಅಥಣಿ ತಾಲೂಕಿನಲ್ಲಿ ಸರಿ ಸುಮಾರು ೧೦ಗಂಟೆಗೆ ಪ್ರಾರಂಭವಾದ ಮಳೆ ನಸುಕಿನ ಜಾವ ೫ಗಂಟೆ ೩೦ ನಿಮಿಷ ವರಗೆ ಧಾರಾಕಾರವಾಗಿ ಸುರಿದ ಮಳೆ ಪರಿಣಾಮವಾಗಿ ಅಥಣಿ ತಾಲೂಕಿನ ಹಳ್ಳ ಕೋಳ್ಳ ದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದ ,ಪರಿಣಾಮ ಅಥಣಿ ತಾಲೂಕಿನ ಯಲ್ಲಮವಾಡಿಯ ಸುಕ್ಷೇತ್ರ ಯಲ್ಲಮ ದೇವಸ್ಥಾನ ಜಲಾವೃತಗೊಂಡಿದೆ.

ಇನ್ನು ಅಥಣಿ ಮತ್ತು ಜಮಖಂಡಿ ತಾಲೂಕಿಗೆ ಸಂಪರ್ಕ ಕಲ್ಪಿಸುವ ಝುಂಜರವಾಡ_ತುಬಚಿ ರಸ್ತೆ ಮಾರ್ಗ,ಮಳೆ ನೀರಿನಿಂದ ಜಲಾವೃತಗೊಂಡಿದ್ದು ರಸ್ತೆ ಸಂಪರ್ಕ ಕಡಿತ ಆಗಿದೆ.

ರಾತ್ರಿ ಇಡಿ ಸುರಿದ ಭಾರಿ ಮಳೆಗೆ ಕೆಲವು ರೈತರ ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ರಾತ್ರಿ ವೇಳೆ ದಿಕ್ಕು ಕಾಣದೆ ಪರದಾಡುವಂತಾಗಿದೆ, ಹಾಗೂ ಜನಜೀವನ ಅಸ್ತವ್ಯಸ್ತವಾಗಿದೆ.

ಯಲ್ಲಿ ನೋಡಿದ್ರು ಅಲ್ಲಿ ಮಳೆ ನೀರು ಅಥಣಿ ತಾಲೂಕಿನ ಕೆಲವು ಗ್ರಾಮದಲ್ಲಿ ದನದಗಳ ಕೊಟ್ಟಿಗೆಯಲ್ಲಿ ನುಗ್ಗಿದ ನೀರಿನ ಪ್ರಮಾಣ ಹೆಚ್ಚು ಇರುವುದರಿಂದ ನೀರಿನಲ್ಲಿ ಮುಳುಗುತ್ತಿರುವ ದನ ಕರುಗಳನ್ನು ರಕ್ಷಣೆ ಮಾಡಿ ಹೋರಗೆ ತೆಗೆದ ರೈತರು.

ಮಳೆಯ ರಭಸಕ್ಕೆ ಕೊಚ್ಚಿಹೋದ ರೈತರ ಬೆಳೆಗಳು ಅಥಣಿ ತಾಲುಕು ಕೃಷ್ಣಾ ನದಿ ಪ್ರವಾಹದಿಂದ ತತ್ತರಿಸಿತ್ತು, ಅದನ್ನು ಮೆರೆಯುವ ಮುನ್ನ ಮತ್ತೆ ಮಳೆಯ ನೀರಿನಿಂದ ಪ್ರವಾಹದ ರೀತಿ ಭಾಸವಾಗುತ್ತಿದೆ....


Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.