ETV Bharat / state

ಕತ್ತಲಲ್ಲಿ ಪ್ರವಾಹ ಸಂತ್ರಸ್ತರ ಜೀವನ.. ಹೆಸ್ಕಾಂ ಅಧಿಕಾರಿಗಳಿಂದ ನಾಮಕೆವಾಸ್ತೇ ಕೆಲಸ..

ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕುತ್ರಾ ನದಿಗಳ ಪ್ರವಾಹದಿಂದ ಚಿಕ್ಕೋಡಿ ಜನರು ಕತ್ತಲಲ್ಲಿ ಜೀವನ ನಡೆಸುವಂತಾಗಿದೆ. ಪ್ರವಾಹಕ್ಕೆ ವಿದ್ಯುತ್‌ ಕಂಬಗಳು ಧರೆಗುರುಳಿದ ಪರಿಣಾಮ ಜನರು ನೀರಿಗಾಗಿ ಪರದಾಡುವಂತಾಗಿದೆ. ಆದರೆ, ಹೆಸ್ಕಾಂ ಅಧಿಕಾರಿಗಳು ಮಾತ್ರ ನಾಮಕಾವಸ್ತೆ ಎನ್ನುವಂತೆ ಮಂದಗತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

author img

By

Published : Sep 20, 2019, 1:27 PM IST

ಕತ್ತಲಲ್ಲಿ ಪ್ರವಾಹ ಸಂತ್ರಸ್ತರ ಜೀವನ

ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕುತ್ರಾ ನದಿಗಳ ಪ್ರವಾಹದಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ ಮತ್ತು ನಿಪ್ಪಾಣಿ ತಾಲೂಕುಗಳ 80ಕ್ಕೂ ಹೆಚ್ಚು ಗ್ರಾಮಗಳು ಹಾಳು ಕೊಂಪೆಯಂತಾಗಿ, ಕೊಳೆತು ಗಬ್ಬು ವಾಸನೆ ಬೀರುತ್ತಿವೆ.

ನದಿ ನೀರಿನ ರಭಸಕ್ಕೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ವಿದ್ಯುತ್‌ ತಂತಿಗಳಿಗೆ ರವದಿ, ಕಸಕಡ್ಡಿಗಳು ತಗುಲಿಕೊಂಡಿವೆ. ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಇಂಗಳಿ, ಚಂದೂರ, ಮಾಂಜರಿ, ಯಡೂರ ಸೇರಿದಂತೆ ವಿವಿಧ ನದೀತೀರದ ಭಾಗದಲ್ಲಿ ಈ ಪರಿಸ್ಥಿತಿ ಇದೆ. ಇಡೀ ರಾತ್ರಿ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪ್ರಸಂಗ ಎದುರಾಗಿದೆ.

ಕತ್ತಲಲ್ಲಿ ಪ್ರವಾಹ ಸಂತ್ರಸ್ತರ ಜೀವನ..

ಪಂಪ್​​​ಸೆಟ್​​​ಗಳಿಗೆ ವಿದ್ಯುತ್ ಇಲ್ಲದೆ ಜನರು ನದಿಗಳಿಗೆ ನೀರು ತರಲು ಹೋಗಬೇಕಾಗಿದೆ. ನದಿ ತೀರದ ಜನರಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮದ ರೈತರಿಗೂ ಕೂಡ ತೊಂದರೆಯಾಗುತ್ತಿದೆ. ನದಿ ತೀರದಿಂದ ಸುತ್ತಮುತ್ತಲಿನ ಗ್ರಾಮಗಳು ಪೈಪ್‌ಲೈನ್ ಮೂಲಕ ಕರೆಗಳನ್ನ ಮಾಡಿಕೊಂಡು ನೀರು ಸಂಗ್ರಹ ಮಾಡಿ ಗದ್ದೆಗಳಿಗೆ ಬಿಡುವ ವ್ಯವಸ್ಥೆ‌ ಮಾಡಿಕೊಂಡಿದ್ದಾರೆ. ಆದರೆ, ಪ್ರವಾಹ ಬಂದು ಲೈಟ್ ಕಂಬಗಳು, ಟಿಸಿಗಳು ಸಂಪೂರ್ಣ ಹಾಳಾಗಿವೆ. ಇದರ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ಮಾತ್ರ ನಾಮಕಾವಸ್ತೆ ಎನ್ನುವಂತೆ ಮಂದಗತಿಯಲ್ಲಿ ಕೆಲಸ ಮಾಡ್ತಿರೋದ್ರಿಂದ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಇದು ನದಿತೀರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ್​​​ ಇಲ್ಲದೇ ಬಹಳಷ್ಟು ತೊಂದರೆಗಳಾಗ್ತಿವೆ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ನಿರಾಶ್ರಿತರಂತೂ ಹಿಡಿಶಾಪ ಹಾಕುತ್ತಿದ್ದಾರೆ.

ಚಿಕ್ಕೋಡಿ: ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕುತ್ರಾ ನದಿಗಳ ಪ್ರವಾಹದಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ ಮತ್ತು ನಿಪ್ಪಾಣಿ ತಾಲೂಕುಗಳ 80ಕ್ಕೂ ಹೆಚ್ಚು ಗ್ರಾಮಗಳು ಹಾಳು ಕೊಂಪೆಯಂತಾಗಿ, ಕೊಳೆತು ಗಬ್ಬು ವಾಸನೆ ಬೀರುತ್ತಿವೆ.

ನದಿ ನೀರಿನ ರಭಸಕ್ಕೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ವಿದ್ಯುತ್‌ ತಂತಿಗಳಿಗೆ ರವದಿ, ಕಸಕಡ್ಡಿಗಳು ತಗುಲಿಕೊಂಡಿವೆ. ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಇಂಗಳಿ, ಚಂದೂರ, ಮಾಂಜರಿ, ಯಡೂರ ಸೇರಿದಂತೆ ವಿವಿಧ ನದೀತೀರದ ಭಾಗದಲ್ಲಿ ಈ ಪರಿಸ್ಥಿತಿ ಇದೆ. ಇಡೀ ರಾತ್ರಿ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪ್ರಸಂಗ ಎದುರಾಗಿದೆ.

ಕತ್ತಲಲ್ಲಿ ಪ್ರವಾಹ ಸಂತ್ರಸ್ತರ ಜೀವನ..

ಪಂಪ್​​​ಸೆಟ್​​​ಗಳಿಗೆ ವಿದ್ಯುತ್ ಇಲ್ಲದೆ ಜನರು ನದಿಗಳಿಗೆ ನೀರು ತರಲು ಹೋಗಬೇಕಾಗಿದೆ. ನದಿ ತೀರದ ಜನರಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮದ ರೈತರಿಗೂ ಕೂಡ ತೊಂದರೆಯಾಗುತ್ತಿದೆ. ನದಿ ತೀರದಿಂದ ಸುತ್ತಮುತ್ತಲಿನ ಗ್ರಾಮಗಳು ಪೈಪ್‌ಲೈನ್ ಮೂಲಕ ಕರೆಗಳನ್ನ ಮಾಡಿಕೊಂಡು ನೀರು ಸಂಗ್ರಹ ಮಾಡಿ ಗದ್ದೆಗಳಿಗೆ ಬಿಡುವ ವ್ಯವಸ್ಥೆ‌ ಮಾಡಿಕೊಂಡಿದ್ದಾರೆ. ಆದರೆ, ಪ್ರವಾಹ ಬಂದು ಲೈಟ್ ಕಂಬಗಳು, ಟಿಸಿಗಳು ಸಂಪೂರ್ಣ ಹಾಳಾಗಿವೆ. ಇದರ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿವೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ಮಾತ್ರ ನಾಮಕಾವಸ್ತೆ ಎನ್ನುವಂತೆ ಮಂದಗತಿಯಲ್ಲಿ ಕೆಲಸ ಮಾಡ್ತಿರೋದ್ರಿಂದ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಇದು ನದಿತೀರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ್​​​ ಇಲ್ಲದೇ ಬಹಳಷ್ಟು ತೊಂದರೆಗಳಾಗ್ತಿವೆ. ಹೆಸ್ಕಾಂ ಅಧಿಕಾರಿಗಳ ವಿರುದ್ಧ ನಿರಾಶ್ರಿತರಂತೂ ಹಿಡಿಶಾಪ ಹಾಕುತ್ತಿದ್ದಾರೆ.

Intro:ಮತ್ತೆ ಪ್ರವಾಹದ ಹೊಡೆತದಿಂದ ಸಂತ್ರಸ್ಥರು ಕತ್ತಲೆಯಲ್ಲಿ ಕಾಲ ಕಳೆಯುವಂತ ಪ್ರಸಂಗ ಎದುರಾಗಿದೆ
Body:
ಚಿಕ್ಕೋಡಿ :
ಪ್ಯಾಕೇಜ್

20 ದಿನಗಳಿಗಿಂತಲೂ ಹೆಚ್ಚು ಸಮಯ ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಗ್ರಾಮಗಳಿಗ ಹಾಳು
ಕೊಂಪೆಯಂತಾಗಿವೆ. ಮುರಿದು ಬಿದ್ದಿರುವ ಮನೆಗಳು, ಕೆಸರಿನಿಂದ ಆವೃತ್ತಗೊಂಡಿರುವ ಮನೆಗಳು, ನೀರಿನಲ್ಲಿ ನೆನೆದು ಮೊಳಕೆಯೊಡೆದ ಕಾಳುಕಡಿಗಳ ಮೂಟೆ ಕೃಷ್ಣಾರ್ಪಣಗೊಂಡು ಕೊಳೆತು ಗಬ್ಬು ವಾಸನೆ ಬೀರುತ್ತಿವೆ.

ಕೃಷ್ಣಾ ಮತ್ತು ಉಪನದಿಗಳಾದ ದೂಧಗಂಗಾ, ವೇದಗಂಗಾ, ಪಂಚಗಂಗಾ ಮತ್ತು ಚಿಕುತ್ರಾ ನದಿಗಳ ಪ್ರವಾಹದಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಚಿಕ್ಕೋಡಿ, ಅಥಣಿ, ರಾಯಬಾಗ, ಕಾಗವಾಡ ಮತ್ತು ನಿಪ್ಪಾಣಿ ತಾಲ್ಲೂಕುಗಳ 80 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕಂಡು ಬರುತ್ತಿರುವ ಚಿತ್ರಣವಿದು.

ನದಿ ನೀರಿನ ರಭಸಕ್ಕೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ವಿದ್ಯುತ್‌ ತಂತಿಗಳಿಗೆ ರವದಿ, ಕಸಕಡ್ಡಿಗಳು ತಗುಲಿಕೊಂಡಿವೆ. ನೆರೆ ಪೀಡಿತ ಗ್ರಾಮಗಳಲ್ಲಿ ವಿದ್ಯುತ್‌ ಕಡಿತಗೊಂಡಿದ್ದು, ಸಂತ್ರಸ್ತರು ತೊಂದರೆ ಪಡುತ್ತಿದ್ದಾರೆ.

ಉರುಳಿ ಬಿದ್ದಿರುವ ವಿದ್ಯುತ್ ಟಿಸಿಗಳು, ಸಂಪೂರ್ಣವಾಗಿ ನೆಲಸಮವಾಗಿರುವ ಕಂಬಗಳು ಹೌದು ಹಿಗೋಂದು ದೃಶ್ಯ ಕಂಡುಬಂದಿದ್ದು ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಇಂಗಳಿ, ಚಂದೂರ, ಮಾಂಜರಿ, ಯಡೂರ ಸೇರಿದಂತೆ ವಿವಿಧ ನದೀತೀರದ ಭಾಗದಲ್ಲಿ ಇತ್ತೀಚಿಗೆ ಭಾರಿ ಪ್ರವಾಹದದಿಂದ ವಿದ್ಯುತ್ ಕಂಬಗಳು, ಟಿ.ಸಿಗಳು ಸಂಪೂರ್ಣವಾಗಿ ನೆಲಸಮವಾಗಿವೆ. ಇದರಿಂದ ಜನರಿಗೆ ಬಹಳಷ್ಟು ಅನಾನುಕೂಲವಾಗಿವೆ. ರಾತ್ರಿ ಇಡಿ ಜನರು ಕತ್ತಲೆಯಲ್ಲಿ ಕಾಲ ಕಳೆಯಬೇಕಾದ ಪ್ರಸಂಗ ಎದುರಾಗಿದೆ.

ಪಂಪಸೇಟಗಳಿಗೆ ವಿದ್ಯುತ್ ಇಲ್ಲದೆ ಜನರು ನದಿಗಳಿಗೆ ನೀರು ತರಲು ಹೋಗಬೇಕು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ವಿದ್ಯುತ್ತಿಲ್ಲದೆ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರ ಜೊತೆಗೆ ನದಿ ತೀರದ ಜನರಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮದ ರೈತರಿಗೂ ಕೂಡಾ ತೊಂದರೆಯಾಗುತ್ತಿದೆ. ನದಿ ತೀರದಿಂದ ಸುತ್ತಮುತ್ತಲಿನ ಗ್ರಾಮಗಳು ಪೈಪ್ ಲೈನ್ ಮೂಲಕ ಕರೆ ಗಳನ್ನ ಮಾಡಿಕೊಂಡು ನೀರು ಸಂಗ್ರಹ ಮಾಡಿ ಗದ್ದೆಗಳಿಗೆ ಬೀಡುವ ವ್ಯವಸ್ಥೆ‌ ಮಾಡಿಕೊಂಡಿದ್ದಾರೆ. ಆದರೆ, ಪ್ರವಾಹ ಬಂದು ಲೈಟ್ ಕಂಬಗಳು ಟಿ.ಸಿಗಳು ಸಂಪೂರ್ಣ ಹಾಳಾಗಿವೆ. ಇದರ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಸಹಿತ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿವೆ ಎಂದು ಸ್ಥಳೀಯರು ಅರೋಪಿಸುತ್ತಿದ್ದಾರೆ.

ಹೆಸ್ಕಾಂ ಅಧಿಕಾರಿಗಳು ಮಾತ್ರ ನಾಮಕಾವಸ್ತೆ ಎನ್ನುವಂತೆ ಮಂದಗತಿಯಲ್ಲಿ ಕೆಲಸವನ್ನು ಪ್ರಾರಂಭಿಸಿದರೂ ಕೂಡಾ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಇದರಿಂದ ಬೃಹತ್ ಪ್ರಮಾಣದಲ್ಲಿ ಉರುಳಿದ ಟಿ.ಸಿಗಳು, ಕಂಬಗಳು ಹೊಸದಾಗಿ ಕುಡಿಸಲು ಪ್ರಾರಂಭಿಸಿದ್ದಾರೆ. ಆದರೆ, ಪ್ರವಾಹ ಕಡಿಮೆಯಾಗಿ ಸರಿಸುಮಾರು 2 ತಿಂಗಳು ಕಳೆದರೂ ವೇಗವಾಗಿ ಕೆಲಸಮಾಡಲು ಹೆಸ್ಕಾಂ ಅಧಿಕಾರಿಗಳು ಮುಂದಾಗುತ್ತಿಲ್ಲ.

ಇದು ನದಿತೀರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯುತ ಇಲ್ಲದೇ ಬಹಳಷ್ಟು ಜನರಿಗೆ ಭಾರಿ ಪ್ರಮಾಣದ ತೊಂದರೆಗಳು ಆಗುತ್ತಿದ್ದು, ಇದರಿಂದ ಹೆಸ್ಕಾಂ ಅಧಿಕಾರಿಗಳ ವಿರುದ್ದ ನಿರಾಶ್ರಿತರು ಬೇಸತ್ತು ಹೋಗಿದ್ದಾರೆ. ಈ ಕುರಿತಂತೆ ಹೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಬೆಂಗಳೂರಿನಿಂದ ಮಂಗಳೂರಿನಿಂದ ಒಂದು ತಂಡ ಬರುತ್ತಿದೆ ಬೇಗನೆ ಕೆಲಸವನ್ನು ಪ್ರಾರಂಭಿಸುತ್ತವೆ ಎನ್ನುತ್ತಾರೆ.

ಒಟ್ಟಿನಲ್ಲಿ ಪ್ರವಾಹ ಕಡಿಮೆಯಾದರೂ ವಿದ್ಯುತ್ ಇಲ್ಲದೆ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು. ಹೆಸ್ಕಾಂ ಅಧಿಕಾರಿಗಳು ಬೇಗನೆ ಕಾಮಗಾರಿಯನ್ನು ಮುಗಿಸಿ ಜನರಿಗೆ ಯಾವಾಗ ಕರೆಂಟ ನೀಡುತ್ತಾರೋ ಎಂದು ಕಾದು ನೋಡಬೇಕಿದೆ.

ಬೈಟ್ 1 : ಕಲ್ಲಪ್ಪ ಬೊರಗಾಂವೆ - ರೈತ - ಬಿಳಿ ಅಂಗಿ ಹಾಕಿಕೊಂಡಿದ್ದಾರೆ

ಬೈಟ್ 2 : ಪ್ರವೀಣ ಕಾಳೇಲಿ - ರೈತ - ಕೊಳೆಯಾದ ಟೀಶರ್ಟ ಹಾಕಿಕೊಂಡಿದ್ದಾರೆ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.