ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ರೋಡ್ ಶೋ ಮೊಟಕುಗೊಳಿಸಿ ನಗರದ ಯುಕೆ -27 ಹೋಟೆಲ್ಗೆ ಮರಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಪ್ರಚಾರಾರ್ಥ ಸಿಎಂ ರೋಡ್ ಶೋ ನಡೆಸುತ್ತಿದ್ದರು. ಬೆಳಗಾವಿಯ ದಕ್ಷಿಣ ವಿಧಾನಸಭೆ ಕ್ಷೇತ್ರದ ಶಿವಾಜಿ ಉದ್ಯಾನವನದಿಂದ ಆರಂಭವಾಗಿದ್ದ ರೋಡ್ ಶೋ ಮಹಾತ್ಮಪುಲೆ ರಸ್ತೆಯವರೆಗೆ ನಡೆಯಿತು. ಈ ವೇಳೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸಿಎಂ ರೋಡ್ ಶೋ ಮೊಟಕುಗೊಳಿಸಿದರು.
ನಂತರ ಸಿಎಂ ಯಡಿಯೂರಪ್ಪ ದಿಢೀರ್ ಯುಕೆ 27 ಹೋಟೆಲ್ಗೆ ಮರಳಿ ಬಂದರು. ಸಿಎಂ ಯಡಿಯೂರಪ್ಪಗೆ ಖಾಸಗಿ ಆಸ್ಪತ್ರೆ ವೈದ್ಯರಿಂದ ತಪಾಸಣೆ ಸಾಧ್ಯತೆ ಇದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಸಚಿವ ಜಗದೀಶ್ ಶೆಟ್ಟರ್ ರೋಡ್ ಶೋ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಆಮ್ಲಜನಕ ಸಂಪರ್ಕ ಕಡಿತಗೊಳಿಸಿದ ವಾರ್ಡ್ ಬಾಯ್: ಕೆಲವೇ ಕ್ಷಣಗಳಲ್ಲಿ ಕೊರೊನಾ ರೋಗಿ ಸಾವು