ETV Bharat / state

ಪ್ರಕಾಶ ಹುಕ್ಕೇರಿಯಿಂದ ಮಾನವೀಯ ಕಾರ್ಯ; ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ವೆಚ್ಚ ನೀಡಿದ ಮಾಜಿ ಸಚಿವ - ex minister shown his minister's Humanity

ಮಾರ್ಗಮಧ್ಯೆ ಅಪಘಾತಕ್ಕೀಡಾಗಿ ನರಳುತ್ತಿದ್ದ ವ್ಯಕ್ತಿ ಹಾಗೂ ಆತನ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಲ್ಲದೇ ಅವರ ಚಿಕಿತ್ಸೆಗೆಂದು 10 ಸಾವಿರ ರೂಪಾಯಿ ನೀಡಿ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಮಾನವೀಯತೆ ತೋರ್ಪಡಿಸಿದ್ದಾರೆ.

prakash hukkeri helps to those injured in  accident
ಮಾಜಿ ಮಿನಿಸ್ಟರ್​ ಮಾನವೀಯ ಕಾರ್ಯ
author img

By

Published : Jan 8, 2021, 5:34 PM IST

ಬೆಳಗಾವಿ: ಅಪಘಾತಗೊಂಡು ರಸ್ತೆ ಮೇಲೆ ಬಿದ್ದಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡುವ ಜೊತೆಗೆ ಚಿಕಿತ್ಸೆ ವೆಚ್ಚಕ್ಕೆ 10 ಸಾವಿರ ರೂಪಾಯಿ ಹಣ ನೀಡಿ ಪ್ರಕಾಶ ಹುಕ್ಕೇರಿ ಮಾನವೀಯತೆ ಮೆರೆದಿದ್ದಾರೆ.

ಮಾಜಿ ಮಿನಿಸ್ಟರ್​ ಮಾನವೀಯ ಕಾರ್ಯ

ಮಾಜಿ ಸಚಿವ ಪ್ರಕಾಶ ಹುಕ್ಕೇರಿ ತಮ್ಮ ಸ್ವಂತ ವಾಹನದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಯಾರೋ ಅಪಘಾತಕ್ಕೀಡಾಗಿ ರಸ್ತೆ ಮೇಲೆ ಬಿದ್ದು ವಿಲವಿಲನೇ ಒದ್ದಾಡುತ್ತಿದ್ದರು. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಳಿ ಅಪಘಾತದಿಂದ ನರಳುತ್ತಿದ್ದ ಗಾಯಾಳುಗಳನ್ನು ಸಚಿವರು ಗಮನಿಸಿದ್ದಾರೆ. ತಕ್ಷಣವೇ ತಮ್ಮ ವಾಹನದಿಂದ ಕೆಳಗಿಳಿದ ಪ್ರಕಾಶ ಹುಕ್ಕೇರಿ ಆ್ಯಂಬುಲೆನ್ಸ್​ಗೆ ಫೋನ್ ಮಾಡಿದ್ದಾರೆ.

ಬಳಿಕ ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಹಾಗೂ ಆತನಿಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಅಲ್ಲದೇ ಚಿಕಿತ್ಸಾ ವೆಚ್ಚಕ್ಕೆ 10 ಸಾವಿರ ಧನ ಸಹಾಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣ ಬೇಕಾದ್ರೆ ಆಪ್ತ ಸಹಾಯಕನನ್ನು ಸಂಪರ್ಕಿಸುವಂತೆಯೂ ತಿಳಿಸಿದ್ದಾರೆ. ಪ್ರಕಾಶ ಹುಕ್ಕೇರಿಯವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಕ್ರಮವಾಗಿ ಗಡಿ ಪ್ರವೇಶಿಸಿದ್ದ 15 ಇರಾನಿ ಮೀನುಗಾರರ ಬಿಡುಗಡೆಗೊಳಿಸಿದ ಹೈಕೋರ್ಟ್

ಬೆಳಗಾವಿ: ಅಪಘಾತಗೊಂಡು ರಸ್ತೆ ಮೇಲೆ ಬಿದ್ದಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡುವ ಜೊತೆಗೆ ಚಿಕಿತ್ಸೆ ವೆಚ್ಚಕ್ಕೆ 10 ಸಾವಿರ ರೂಪಾಯಿ ಹಣ ನೀಡಿ ಪ್ರಕಾಶ ಹುಕ್ಕೇರಿ ಮಾನವೀಯತೆ ಮೆರೆದಿದ್ದಾರೆ.

ಮಾಜಿ ಮಿನಿಸ್ಟರ್​ ಮಾನವೀಯ ಕಾರ್ಯ

ಮಾಜಿ ಸಚಿವ ಪ್ರಕಾಶ ಹುಕ್ಕೇರಿ ತಮ್ಮ ಸ್ವಂತ ವಾಹನದಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಯಾರೋ ಅಪಘಾತಕ್ಕೀಡಾಗಿ ರಸ್ತೆ ಮೇಲೆ ಬಿದ್ದು ವಿಲವಿಲನೇ ಒದ್ದಾಡುತ್ತಿದ್ದರು. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ ಬಳಿ ಅಪಘಾತದಿಂದ ನರಳುತ್ತಿದ್ದ ಗಾಯಾಳುಗಳನ್ನು ಸಚಿವರು ಗಮನಿಸಿದ್ದಾರೆ. ತಕ್ಷಣವೇ ತಮ್ಮ ವಾಹನದಿಂದ ಕೆಳಗಿಳಿದ ಪ್ರಕಾಶ ಹುಕ್ಕೇರಿ ಆ್ಯಂಬುಲೆನ್ಸ್​ಗೆ ಫೋನ್ ಮಾಡಿದ್ದಾರೆ.

ಬಳಿಕ ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಹಾಗೂ ಆತನಿಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ. ಅಲ್ಲದೇ ಚಿಕಿತ್ಸಾ ವೆಚ್ಚಕ್ಕೆ 10 ಸಾವಿರ ಧನ ಸಹಾಯ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣ ಬೇಕಾದ್ರೆ ಆಪ್ತ ಸಹಾಯಕನನ್ನು ಸಂಪರ್ಕಿಸುವಂತೆಯೂ ತಿಳಿಸಿದ್ದಾರೆ. ಪ್ರಕಾಶ ಹುಕ್ಕೇರಿಯವರ ಮಾನವೀಯತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಕ್ರಮವಾಗಿ ಗಡಿ ಪ್ರವೇಶಿಸಿದ್ದ 15 ಇರಾನಿ ಮೀನುಗಾರರ ಬಿಡುಗಡೆಗೊಳಿಸಿದ ಹೈಕೋರ್ಟ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.