ETV Bharat / state

5* ಹೋಟೆಲ್​​ನಿಂದ ರಾಜಕೀಯ ಮಾಡಿದ್ದ ಕುಮಾರಸ್ವಾಮಿ.. ನಳೀನ್​ ಕುಮಾರ್​ ಟೀಕೆ

author img

By

Published : Nov 27, 2019, 3:27 PM IST

ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಕಚೇರಿಯಿಂದ ಆಡಳಿತ ನಡೆಸದೆ ಫೈವ್​ ಸ್ಟಾರ್​​ ಹೋಟೆಲ್​ನಿಂದ ರಾಜಕೀಯ ಮಾಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ಕುಮಾರ್ ಕಟೀಲ್​ ಟೀಕಿಸಿದರು.

Karnataka political development
ನಳೀನ್​ ಕುಮಾರ್​ ಮತಯಾಚನೆ

ಚಿಕ್ಕೋಡಿ: ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಕಚೇರಿಯಿಂದ ಆಡಳಿತ ನಡೆಸಿಲ್ಲ. ಫೈವ್​ ಸ್ಟಾರ್​​ ಹೋಟೆಲ್​ನಿಂದ ರಾಜಕೀಯ ಮಾಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ಕುಮಾರ್ ಕಟೀಲ್​ ಹೇಳಿದರು.

ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಮಂಗಸೂಳಿ ಗ್ರಾಮದ ಸಮಾವೇಶದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿದ್ದ ಸಚಿವರು ವಿಧಾನಸಭೆಯಿಂದ ಆಡಳಿತ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಬೇಡಿಕೊಂಡರೂ ಅನುದಾನ ನೀಡಿರಲಿಲ್ಲ. ಶಾಸಕರ ಭೇಟಿಗೆ ಒಂದಿಷ್ಟು ಸಮಯವನ್ನು ಮೀಸಲಿಡುತ್ತಿರಲಿಲ್ಲ. ಇದಕ್ಕೆ ಬೇಸತ್ತು 17 ಶಾಸಕರು ರಾಜೀನಾಮೆ ಕೊಟ್ಟರು ಎಂದು ಆರೋಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್​ ಕಟೀಲ್‌..

ರಾಜ್ಯದ ಇತಿಹಾಸದಲ್ಲಿ ಅಭಿವೃದ್ಧಿಗಾಗಿ 30-40 ಸಾವಿರ ಮತಗಳ ಅಂತರದಿಂದ ಗೆದ್ದ ಶಾಸಕರು ಅಧಿಕಾರದಲ್ಲಿದ್ದ ಪಕ್ಷವನ್ನೇ ತ್ಯಜಿಸಿದ್ದರು. ಶ್ರೀಮಂತ ಪಾಟೀಲರು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಶ್ರೀಮಂತ ಪಾಟೀಲರು ಈಗಾಗಲೇ ಗೆದ್ದಾಗಿದೆ. ನಿಮ್ಮ ಕ್ಷೇತ್ರಕ್ಕೆ ಮಂತ್ರಿಯಾಗಿ ಬರುತ್ತಾರೆ. ಕಾಂಗ್ರೆಸ್‌ ಎಲ್ಲ ಹಿರಿಯರು ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದರ ಪರಿಣಾಮ ಒಬ್ಬಂಟಿಯಾಗಿದ್ದಾರೆ. ಕಾಂಗ್ರೆಸ್​​ನ ಎಲ್ಲ ಕಾರ್ಯಕರ್ತರು ಬಿಜೆಪಿಯತ್ತ ಬರುತ್ತಿದ್ದಾರೆ. ನೀವು ಶ್ರೀಮಂತ ಪಾಟೀಲರನ್ನು ಗೆಲ್ಲಿಸಿ ಕೊಡುವುದು ನಿಮ್ಮ ಕೆಲಸ ಎಂದು ಹೇಳಿದರು.

ಚಿಕ್ಕೋಡಿ: ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಕಚೇರಿಯಿಂದ ಆಡಳಿತ ನಡೆಸಿಲ್ಲ. ಫೈವ್​ ಸ್ಟಾರ್​​ ಹೋಟೆಲ್​ನಿಂದ ರಾಜಕೀಯ ಮಾಡಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ಕುಮಾರ್ ಕಟೀಲ್​ ಹೇಳಿದರು.

ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಮಂಗಸೂಳಿ ಗ್ರಾಮದ ಸಮಾವೇಶದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿದ್ದ ಸಚಿವರು ವಿಧಾನಸಭೆಯಿಂದ ಆಡಳಿತ ನಡೆಸಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಬೇಡಿಕೊಂಡರೂ ಅನುದಾನ ನೀಡಿರಲಿಲ್ಲ. ಶಾಸಕರ ಭೇಟಿಗೆ ಒಂದಿಷ್ಟು ಸಮಯವನ್ನು ಮೀಸಲಿಡುತ್ತಿರಲಿಲ್ಲ. ಇದಕ್ಕೆ ಬೇಸತ್ತು 17 ಶಾಸಕರು ರಾಜೀನಾಮೆ ಕೊಟ್ಟರು ಎಂದು ಆರೋಪಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್​ ಕಟೀಲ್‌..

ರಾಜ್ಯದ ಇತಿಹಾಸದಲ್ಲಿ ಅಭಿವೃದ್ಧಿಗಾಗಿ 30-40 ಸಾವಿರ ಮತಗಳ ಅಂತರದಿಂದ ಗೆದ್ದ ಶಾಸಕರು ಅಧಿಕಾರದಲ್ಲಿದ್ದ ಪಕ್ಷವನ್ನೇ ತ್ಯಜಿಸಿದ್ದರು. ಶ್ರೀಮಂತ ಪಾಟೀಲರು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಶ್ರೀಮಂತ ಪಾಟೀಲರು ಈಗಾಗಲೇ ಗೆದ್ದಾಗಿದೆ. ನಿಮ್ಮ ಕ್ಷೇತ್ರಕ್ಕೆ ಮಂತ್ರಿಯಾಗಿ ಬರುತ್ತಾರೆ. ಕಾಂಗ್ರೆಸ್‌ ಎಲ್ಲ ಹಿರಿಯರು ಸಿದ್ದರಾಮಯ್ಯ ಅವರಿಗೆ ಕೈಕೊಟ್ಟಿದ್ದರ ಪರಿಣಾಮ ಒಬ್ಬಂಟಿಯಾಗಿದ್ದಾರೆ. ಕಾಂಗ್ರೆಸ್​​ನ ಎಲ್ಲ ಕಾರ್ಯಕರ್ತರು ಬಿಜೆಪಿಯತ್ತ ಬರುತ್ತಿದ್ದಾರೆ. ನೀವು ಶ್ರೀಮಂತ ಪಾಟೀಲರನ್ನು ಗೆಲ್ಲಿಸಿ ಕೊಡುವುದು ನಿಮ್ಮ ಕೆಲಸ ಎಂದು ಹೇಳಿದರು.

Intro:ಕುಮಾರಸ್ವಾಮಿ five star ಹೋಟೆಲ್ ನಿಂದ ರಾಜಕೀಯ ಮಾಡಿದ್ದಾರೆ : ನಳಿನಕುಮಾರ ಕಟೀಲBody:

ಚಿಕ್ಕೋಡಿ :

ಯಾವ ಮಂತ್ರಿಗಳು ವಿಧಾನಸಭೆಯಿಂದ ಆಡಳಿತ ನಡೆಸಬೇಕೊ ಅವರು ಅಲ್ಲಿಂದ ಆಡಳಿತ ನಡೆಸಿಲ್ಲ, ಮುಖ್ಯಮಂತ್ರಿ ಕಛೇರಿಯಿಂದ ಆಡಳಿತ ನಡೆಸಿಲ್ಲ ಬದಲಾಗಿ five star ಹೋಟೆಲ್ ನಿಂದ ಕುಮಾರಸ್ವಾಮಿ ಅವರು ರಾಜಕೀಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಹೇಳಿದರು

ಕಾಗವಾಡ ವಿಧಾನಸಭಾ ಮತಕ್ಷೇತ್ರದ ಮಂಗಸೂಳಿ ಗ್ರಾಮದ ಸಮಾವೇಶದಲ್ಲಿ ಮಾತನಾಡಿದ ಅವರು ಅಭಿವೃದ್ಧಿಗೆ ಅನುದಾನ ನೀಡಿ ಎಂದು ಕೇಳಿದರೂ ಅನುದಾನ ನೀಡಿಲ್ಲ, ಶಾಸಕರಿಗೆ ಬೇಟಿಯಾಗಲೂ ಪರಮೀಶನ ಕೊಟಿಲ್ಲ ಇದರಿಂದ ಬೆಸತ್ತು 17 ಶಾಸಕರು ಇಂದು ರಾಜೀನಾಮೆ ನೀಡಿದ್ದಾರೆ.

ರಾಜ್ಯದ ಮೊದಲ ಇತಿಹಾಸದಲ್ಲಿ ಅಭಿವೃದ್ಧಿಗೊಸ್ಕರ 30, 40 ಸಾವಿರ ಅಂತರದಿಂದ ಗೆದ್ದವರು ಅಧಿಕಾರದಲ್ಲಿರುವ ಪಾರ್ಟಿಯನ್ನು ತಿರಸ್ಕರಿಸಿ ವಿರೋಧ ಪಕ್ಷಕ್ಕೆ ಹೋಗಿದ್ದರೆ ಅದು 17 ಶಾಸಕರು ತ್ಯಾಗ ಮಾಡಿದ್ದಾರೆ. ಶ್ರೀಮಂತ ಪಾಟೀಲರು ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ, ತನ್ನ ಕ್ಷೇತ್ರ ಅಭಿವೃದಿಗೊಸ್ಕರ ರಾಜೀನಾಮೆ ನೀಡಿದ್ದಾರೆ. ಈ ಉಪ ಚುನಾವಣೆಯಲ್ಲಿ 15 ಬಿಜೆಪಿ ಅಭ್ಯರ್ಥಿಗಳು ವಿಜಯಶಾಲಿ ಆಗುತ್ತಾರೆ. ಶ್ರೀಮಂತ ಪಾಟೀಲರು ನಿಮ್ಮ ಕ್ಷೇತ್ರಕ್ಕೆ ಮಂತ್ರಿಯಾಗಿ ಬರುತ್ತಾರೆ. ಸಿದ್ದರಾಮಯ್ಯ ‌ಮುಂದಿನ ದಿನಗಳಲ್ಲಿ ನಿರುದ್ಯೋಗರಾಗಿತ್ತಾರೆ, ರಾಜ್ಯದಲ್ಲಿ ಒಬ್ಬಂಟಿಯಾಗಿದ್ದಾರೆ, ಕಾಂಗ್ರೆಸ್‌ ಎಲ್ಲ ಹಿರಿಯರು ಅವರಿಗೆ ಕೈಕೊಟ್ಟಿದ್ದಾರೆ. ಕಾಂಗ್ರೆಸ್‌ ಗೆ ಅಭ್ಯರ್ಥಿಗಳು ಸಿಗುತ್ತಿಲ್ಲ, ಕಾಂಗ್ರೆಸ್‌ ಎಲ್ಲ ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿದ್ದಾರೆ. ನೀವು ಶ್ರೀಮಂತ ಪಾಟೀಲ ಅವರನ್ನು ಗೆಲ್ಲಿಸಿ ಕೊಡುವುದು ನಿಮ್ಮ ಕೆಲಸ ಎಂದು ಹೇಳಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.