ETV Bharat / state

ಪೇದೆ ಮೇಲೆ ಹಲ್ಲೆ ಪ್ರಕರಣ: ಹಿಂಡಲಗಾ ಜೈಲಿನಿಂದ ಸಿಆರ್​​ಪಿಎಫ್​​ ಯೋಧನ ಬಿಡುಗಡೆ - CRPF Soldier Released From Hindalga Jail

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಇತ್ತೀಚೆಗೆ ನಡೆದಿದ್ದ ಸಿಆರ್​​ಪಿಎಫ್ ಯೋಧ ಹಾಗೂ ಪೊಲೀಸರ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಯೋಧ ಸಚಿನ್ ಸಾವಂತರನ್ನು ಇಂದು‌ ಹಿಂಡಲಗಾ ಜೈಲಿನಿಂದ ಬಿಡುಗಡೆ ಮಾಡಲಾಯಿತು.

CRPF Soldier Released From Hindalga Jail After clash
ಹಿಂಡಲಗಾ ಜೈಲಿನಿಂದ ಸಿಆರ್​​ಪಿಎಫ್​ ಯೋಧನ ಬಿಡುಗಡೆ
author img

By

Published : Apr 28, 2020, 6:16 PM IST

ಬೆಳಗಾವಿ: ಜಾಮೀನು ಮಂಜೂರಾದ ಹಿನ್ನೆಲೆ ಸಿಆರ್​​ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಹಿಂಡಲಗಾ ಜೈಲಿನಿಂದ ಬಿಡುಗಡೆ ಆದರು. ಜಿಲ್ಲೆಯ ಖಾನಾಪುರ ತಾಲೂಕಿನ ತೋರಾವಿ ಗ್ರಾಮದಲ್ಲಿರುವ ಸಿಆರ್​​ಪಿಎಫ್ ಕಮಾಂಡರ್​ ಸೆಂಟರ್​​ಗೆ ಯೋಧನನ್ನು ಹಿರಿಯ ಅಧಿಕಾರಿಗಳು ಕರೆದೊಯ್ದರು.

ಇದನ್ನೂ ಓದಿ: ಚಿಕ್ಕೋಡಿ ಯೋಧನ ಬಂಧನ: ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಸಿಆರ್​ಪಿಎಫ್​​ ಎಡಿಜಿಪಿ ಪತ್ರ

ಏ. 23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಆರೋದಡಿ ಸಿಆರ್​​ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್​​ರನ್ನು ಸದಲಗಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೇ ಕೈಗೆ ಕೋಳ ತೊಡಿಸಿ ಠಾಣೆಯಲ್ಲಿ ಕೂಡಿಸಲಾಗಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧ ಚರ್ಚೆ ಹುಟ್ಟುಹಾಕಿತ್ತು.

ಇದನ್ನೂ ಓದಿ: ಯೋಧನ ಬಂಧನ ಪ್ರಕರಣ: ಚಿಕ್ಕೋಡಿ ಡಿವೈಎಸ್​​​ಪಿ ಕಚೇರಿಗೆ ಸಿಆರ್​​ಪಿಎಫ್ ಅಧಿಕಾರಿಗಳ ಭೇಟಿ

ಬಳಿಕ ಚಿಕ್ಕೋಡಿ ನ್ಯಾಯಾಲಯ ಯೋಧ ಸಚಿನ್ ಸಾವಂತ್​​​ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೀಗಾಗಿ ಸಿಆರ್​​ಪಿಎಫ್ ಯೋದನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆ ತರಲಾಗಿತ್ತು. ಇಂದು ಚಿಕ್ಕೋಡಿ ಜೆಎಂಎಫ್​ಸಿ ನ್ಯಾಯಾಲಯ ಬೆಳಗ್ಗೆ ಯೋಧನಿಗೆ ಜಾಮೀನು‌ ಮಂಜೂರು ಮಾಡಿತ್ತು. ಹೀಗಾಗಿ ಜಾಮೀನು ಪ್ರತಿಯೊಂದಿಗೆ ಸಿಆರ್​​ಪಿಎಫ್ ಹಿರಿಯ ಅಧಿಕಾರಿಗಳು ಹಿಂಡಲಗಾ ಜೈಲಿಗೆ ಆಗಮಿಸಿದ್ದರು.

ಹಿಂಡಲಗಾ ಜೈಲಿನಿಂದ ಸಿಆರ್​​ಪಿಎಫ್​ ಯೋಧನ ಬಿಡುಗಡೆ

ಜಾಮೀನು ಪ್ರತಿಯ ಪರಿಶೀಲನೆ ಬಳಿಕ ಯೋಧನನ್ನು ಸಿಆರ್​​ಪಿಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ ಸಿಆರ್​​ಪಿಎಫ್ ಅಧಿಕಾರಿಗಳ ವಾಹನದಲ್ಲಿ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಅವರನ್ನು ಕರೆದೊಯ್ಯಲಾಯಿತು.

ಬೆಳಗಾವಿ: ಜಾಮೀನು ಮಂಜೂರಾದ ಹಿನ್ನೆಲೆ ಸಿಆರ್​​ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಹಿಂಡಲಗಾ ಜೈಲಿನಿಂದ ಬಿಡುಗಡೆ ಆದರು. ಜಿಲ್ಲೆಯ ಖಾನಾಪುರ ತಾಲೂಕಿನ ತೋರಾವಿ ಗ್ರಾಮದಲ್ಲಿರುವ ಸಿಆರ್​​ಪಿಎಫ್ ಕಮಾಂಡರ್​ ಸೆಂಟರ್​​ಗೆ ಯೋಧನನ್ನು ಹಿರಿಯ ಅಧಿಕಾರಿಗಳು ಕರೆದೊಯ್ದರು.

ಇದನ್ನೂ ಓದಿ: ಚಿಕ್ಕೋಡಿ ಯೋಧನ ಬಂಧನ: ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಸಿಆರ್​ಪಿಎಫ್​​ ಎಡಿಜಿಪಿ ಪತ್ರ

ಏ. 23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಆರೋದಡಿ ಸಿಆರ್​​ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್​​ರನ್ನು ಸದಲಗಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೇ ಕೈಗೆ ಕೋಳ ತೊಡಿಸಿ ಠಾಣೆಯಲ್ಲಿ ಕೂಡಿಸಲಾಗಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧ ಚರ್ಚೆ ಹುಟ್ಟುಹಾಕಿತ್ತು.

ಇದನ್ನೂ ಓದಿ: ಯೋಧನ ಬಂಧನ ಪ್ರಕರಣ: ಚಿಕ್ಕೋಡಿ ಡಿವೈಎಸ್​​​ಪಿ ಕಚೇರಿಗೆ ಸಿಆರ್​​ಪಿಎಫ್ ಅಧಿಕಾರಿಗಳ ಭೇಟಿ

ಬಳಿಕ ಚಿಕ್ಕೋಡಿ ನ್ಯಾಯಾಲಯ ಯೋಧ ಸಚಿನ್ ಸಾವಂತ್​​​ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೀಗಾಗಿ ಸಿಆರ್​​ಪಿಎಫ್ ಯೋದನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆ ತರಲಾಗಿತ್ತು. ಇಂದು ಚಿಕ್ಕೋಡಿ ಜೆಎಂಎಫ್​ಸಿ ನ್ಯಾಯಾಲಯ ಬೆಳಗ್ಗೆ ಯೋಧನಿಗೆ ಜಾಮೀನು‌ ಮಂಜೂರು ಮಾಡಿತ್ತು. ಹೀಗಾಗಿ ಜಾಮೀನು ಪ್ರತಿಯೊಂದಿಗೆ ಸಿಆರ್​​ಪಿಎಫ್ ಹಿರಿಯ ಅಧಿಕಾರಿಗಳು ಹಿಂಡಲಗಾ ಜೈಲಿಗೆ ಆಗಮಿಸಿದ್ದರು.

ಹಿಂಡಲಗಾ ಜೈಲಿನಿಂದ ಸಿಆರ್​​ಪಿಎಫ್​ ಯೋಧನ ಬಿಡುಗಡೆ

ಜಾಮೀನು ಪ್ರತಿಯ ಪರಿಶೀಲನೆ ಬಳಿಕ ಯೋಧನನ್ನು ಸಿಆರ್​​ಪಿಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ ಸಿಆರ್​​ಪಿಎಫ್ ಅಧಿಕಾರಿಗಳ ವಾಹನದಲ್ಲಿ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಅವರನ್ನು ಕರೆದೊಯ್ಯಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.