ಬೆಳಗಾವಿ: ಜಾಮೀನು ಮಂಜೂರಾದ ಹಿನ್ನೆಲೆ ಸಿಆರ್ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಹಿಂಡಲಗಾ ಜೈಲಿನಿಂದ ಬಿಡುಗಡೆ ಆದರು. ಜಿಲ್ಲೆಯ ಖಾನಾಪುರ ತಾಲೂಕಿನ ತೋರಾವಿ ಗ್ರಾಮದಲ್ಲಿರುವ ಸಿಆರ್ಪಿಎಫ್ ಕಮಾಂಡರ್ ಸೆಂಟರ್ಗೆ ಯೋಧನನ್ನು ಹಿರಿಯ ಅಧಿಕಾರಿಗಳು ಕರೆದೊಯ್ದರು.
ಇದನ್ನೂ ಓದಿ: ಚಿಕ್ಕೋಡಿ ಯೋಧನ ಬಂಧನ: ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಪೊಲೀಸರಿಗೆ ಸಿಆರ್ಪಿಎಫ್ ಎಡಿಜಿಪಿ ಪತ್ರ
ಏ. 23ರಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಕರ್ತವ್ಯನಿರತ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಆರೋದಡಿ ಸಿಆರ್ಪಿಎಫ್ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ರನ್ನು ಸದಲಗಾ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದರು. ಅಲ್ಲದೇ ಕೈಗೆ ಕೋಳ ತೊಡಿಸಿ ಠಾಣೆಯಲ್ಲಿ ಕೂಡಿಸಲಾಗಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ವಿರೋಧ ಚರ್ಚೆ ಹುಟ್ಟುಹಾಕಿತ್ತು.
ಇದನ್ನೂ ಓದಿ: ಯೋಧನ ಬಂಧನ ಪ್ರಕರಣ: ಚಿಕ್ಕೋಡಿ ಡಿವೈಎಸ್ಪಿ ಕಚೇರಿಗೆ ಸಿಆರ್ಪಿಎಫ್ ಅಧಿಕಾರಿಗಳ ಭೇಟಿ
ಬಳಿಕ ಚಿಕ್ಕೋಡಿ ನ್ಯಾಯಾಲಯ ಯೋಧ ಸಚಿನ್ ಸಾವಂತ್ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಹೀಗಾಗಿ ಸಿಆರ್ಪಿಎಫ್ ಯೋದನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆ ತರಲಾಗಿತ್ತು. ಇಂದು ಚಿಕ್ಕೋಡಿ ಜೆಎಂಎಫ್ಸಿ ನ್ಯಾಯಾಲಯ ಬೆಳಗ್ಗೆ ಯೋಧನಿಗೆ ಜಾಮೀನು ಮಂಜೂರು ಮಾಡಿತ್ತು. ಹೀಗಾಗಿ ಜಾಮೀನು ಪ್ರತಿಯೊಂದಿಗೆ ಸಿಆರ್ಪಿಎಫ್ ಹಿರಿಯ ಅಧಿಕಾರಿಗಳು ಹಿಂಡಲಗಾ ಜೈಲಿಗೆ ಆಗಮಿಸಿದ್ದರು.
ಜಾಮೀನು ಪ್ರತಿಯ ಪರಿಶೀಲನೆ ಬಳಿಕ ಯೋಧನನ್ನು ಸಿಆರ್ಪಿಎಫ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಬಳಿಕ ಸಿಆರ್ಪಿಎಫ್ ಅಧಿಕಾರಿಗಳ ವಾಹನದಲ್ಲಿ ಕೋಬ್ರಾ ಕಮಾಂಡೋ ಸಚಿನ್ ಸಾವಂತ್ ಅವರನ್ನು ಕರೆದೊಯ್ಯಲಾಯಿತು.