ಅಥಣಿ : ಇತ್ತೀಚೆಗೆ ಆಕ್ಸಿಜನ್ ಕೊರತೆ ನೀಗಿಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದ್ದು, ಇದಕ್ಕೆ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಹೇಳಿಕೆ ಖಂಡಿಸಿ ಅಥಣಿಯಿಂದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ದೂರು ಸಲ್ಲಿಸಲಾಗಿದೆ.
![complaint-against-to-ct-ravi-](https://etvbharatimages.akamaized.net/etvbharat/prod-images/kn-ath-01-19-ct-ravi-virudd-complete-av-kac10006_19052021145752_1905f_1621416472_508.jpg)
ಓದಿ: ನ್ಯಾಯಾಂಗದ ವಿರುದ್ಧ ಸಿಟಿ ರವಿ, ಡಿವಿಎಸ್ ಟೀಕೆ: ಬೆಂಗಳೂರು ವಕೀಲರ ಸಂಘ ಆಕ್ಷೇಪ
ಉಚ್ಚ ನ್ಯಾಯಾಲಯ, ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಕೆಲವು ವಿಷಯಗಳಲ್ಲಿ ಸೂಚನೆ ನೀಡಿತ್ತು. ಈ ಸೂಚನೆ ಸೂಕ್ತವೆಂದು ಸರ್ವೋನ್ನತ ನ್ಯಾಯಾಲಯ ಎತ್ತಿ ಹಿಡಿದಿತ್ತು.
ಆದರೆ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಉದ್ದೇಶ ಪೂರ್ವಕವಾಗಿ ದುರುದ್ದೇಶದಿಂದ ನ್ಯಾಯಾಧೀಶರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು.
![complaint-against-to-ct-ravi-](https://etvbharatimages.akamaized.net/etvbharat/prod-images/kn-ath-01-19-ct-ravi-virudd-complete-av-kac10006_19052021145752_1905f_1621416472_81.jpg)
ಸಿ.ಟಿ. ರವಿ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಇಬ್ಬರು ಚುನಾವಣೆ ಪ್ರತಿನಿಧಿಗಳ ಮೇಲೆ ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಇಮೇಲ್ ಮೂಲಕ ವೃತ್ತಿಯಲ್ಲಿ ವಕೀಲನಾಗಿರುವ ಭೀಮನಗೌಡ ಪರಗೊಂಡ ಎಂಬುವರು ದೂರು ಸಲ್ಲಿಸಿದ್ದಾರೆ.
![complaint-against-to-ct-ravi-](https://etvbharatimages.akamaized.net/etvbharat/prod-images/kn-ath-01-19-ct-ravi-virudd-complete-av-kac10006_19052021145752_1905f_1621416472_399.jpg)