ETV Bharat / state

ಆಳುವವರೆ ಹೀಗೆ ಮಾಡಿದ್ರೆ ಹೇಗೆ?... ಸೀಟ್​ ಬೆಲ್ಟ್​ ಹಾಕದೆ ಕಾನೂನು ಉಲ್ಲಂಘಿಸಿದ ಸಿಎಂ, ಡಿಸಿಎಂ

ಸಿಎಂ ಬಿ.ಎಸ್​ ಯಡಿಯೂರಪ್ಪ ಮತ್ತು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ್​ ಸವದಿ ಅವರು ಕಾರಿನಲ್ಲಿ ಸೀಟ್​ ಬೆಲ್ಟ್ ಧರಿಸದೇ ಪ್ರಯಾಣ ಬೆಳಸಿ ಮೋಟಾರು ವಾಹನ ಕಾಯ್ದೆ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ.

author img

By

Published : Oct 5, 2019, 11:38 AM IST

ಸಿಎಂ-ಡಿಸಿಎಂ

ಅಥಣಿ : ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ್​ ಸವದಿ ಸಾರ್ವಜನಿಕವಾಗಿಯೇ ಮೋಟಾರು ವಾಹನ ಕಾಯ್ದೆ ಕಾನೂನನ್ನು ಉಲ್ಲಂಘಿಸಿರುವ ಘಟನೆ ಅಥಣಿಯಲ್ಲಿ ನಡೆದಿದೆ.

ಸೀಟ್​ ಬೆಲ್ಟ್​ ಧರಿಸದೇ ಪ್ರಯಾಣ ಮಾಡಿದ ಸಿಎಂ ಡಿಸಿಎಂ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಹಾಗೂ ಡಿಸಿಎಂ ಸವದಿ ಕಾರ್ಯಕ್ರಮ ಮುಗಿಸಿ ಮರಳಿ ಬಾಗಲಕೋಟೆ ಕಡೆ ಪ್ರಯಾಣ ಬೆಳಸುವಾಗ ಕಾರಿನಲ್ಲಿ ಸೀಟ್ ​ಬೆಲ್ಟ್ ಧರಿಸದೇ ಪ್ರಯಾಣ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಮೇಲೆ ಜನಸಾಮಾನ್ಯರು ದಂಡ ಕೇಳಿಯೇ ಗಾಡಿಯೇರಲು ಭಯಪಡುತ್ತಿದ್ದಾರೆ. ಅಂತದ್ರಲ್ಲಿ ನಮ್ಮನ್ನು ಆಳುವ ನಾಯಕರೇ ಹಿಂಗೆ ಮಾಡಿದ್ರೆ ಹೆಂಗೆ ಎಂಬ ಪ್ರಶ್ನೆಯಾಗಿದೆ. ಇದನ್ನ ಗಮನಿಸಿದರೆ ಉಳ್ಳವರಿಗೊಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನು ಎಂಬಂತಾಗಿದೆ.

ಅದರಲ್ಲೂ ಮಾನ್ಯ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೇ ಮೋಟಾರು ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಅದು ಕೂಡ ಪೋಲಿಸ್ ಸಮ್ಮುಖದಲ್ಲೇ ನಡೆದಿದ್ದು, ಅದೇಷ್ಟೋ ದಂಡ ವಿಧಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

ಅಥಣಿ : ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ್​ ಸವದಿ ಸಾರ್ವಜನಿಕವಾಗಿಯೇ ಮೋಟಾರು ವಾಹನ ಕಾಯ್ದೆ ಕಾನೂನನ್ನು ಉಲ್ಲಂಘಿಸಿರುವ ಘಟನೆ ಅಥಣಿಯಲ್ಲಿ ನಡೆದಿದೆ.

ಸೀಟ್​ ಬೆಲ್ಟ್​ ಧರಿಸದೇ ಪ್ರಯಾಣ ಮಾಡಿದ ಸಿಎಂ ಡಿಸಿಎಂ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಹಾಗೂ ಡಿಸಿಎಂ ಸವದಿ ಕಾರ್ಯಕ್ರಮ ಮುಗಿಸಿ ಮರಳಿ ಬಾಗಲಕೋಟೆ ಕಡೆ ಪ್ರಯಾಣ ಬೆಳಸುವಾಗ ಕಾರಿನಲ್ಲಿ ಸೀಟ್ ​ಬೆಲ್ಟ್ ಧರಿಸದೇ ಪ್ರಯಾಣ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಮೇಲೆ ಜನಸಾಮಾನ್ಯರು ದಂಡ ಕೇಳಿಯೇ ಗಾಡಿಯೇರಲು ಭಯಪಡುತ್ತಿದ್ದಾರೆ. ಅಂತದ್ರಲ್ಲಿ ನಮ್ಮನ್ನು ಆಳುವ ನಾಯಕರೇ ಹಿಂಗೆ ಮಾಡಿದ್ರೆ ಹೆಂಗೆ ಎಂಬ ಪ್ರಶ್ನೆಯಾಗಿದೆ. ಇದನ್ನ ಗಮನಿಸಿದರೆ ಉಳ್ಳವರಿಗೊಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನು ಎಂಬಂತಾಗಿದೆ.

ಅದರಲ್ಲೂ ಮಾನ್ಯ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೇ ಮೋಟಾರು ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಅದು ಕೂಡ ಪೋಲಿಸ್ ಸಮ್ಮುಖದಲ್ಲೇ ನಡೆದಿದ್ದು, ಅದೇಷ್ಟೋ ದಂಡ ವಿಧಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

Intro:ಸಿಟ್ ಬೆಲ್ಟ್ ಧರಿಸದೆ ಸಿಎಂ ಮತ್ತು ಡಿಸಿಎಂ ಸಾಯಬ್ರು ಕೈ ಬಿಸುತ್ತಾ ಸಾಗಿದರು

ಒಟ್ಟಾರೆಯಾಗಿ ಉಳ್ಳವರಿಗೋಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನು ಎಂಬಂತಾಗಿದೆ..Body:ಅಥಣಿ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೃಷ್ಣಾ ನದಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಮತ್ತು ಅಹವಾಲು ಸ್ವೀಕಾರ ಸಮಾರಂಭಕ್ಕೆ ಬಂದ ಹಿನ್ನೆಲೆಯಲ್ಲಿ

ಸಿಎಂ ಯಡಿಯೂರಪ್ಪ ರವರು ಕೇಂದ್ರ ಸರಕಾರಗಳು ಮೋಟಾರು ವಾಹನ ಕಾಯ್ದೆ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಕಾನೂನಿನ ಅರಿವು ಇಲ್ಲವೇ ಎಂಬುದು ಕಾಣುತ್ತೆ

ಹೌದು ಅಥಣಿ ತಾಲೂಕಿನ ದರೂರ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋಣೆಯಲ್ಲಿ

ಅಥಣಿ ಕೃಷ್ಣಾರೈತ ಸಭಾಭವನದಲ್ಲಿ ಪೋಲಿಸರಿಂದ ಗೌರವ್ ವಂದನೆ ಸ್ವೀಕರಿಸಿದ ಬಳಿಕ

ಮರಳಿ ಬಾಗಲಕೋಟೆ ಜಿಲ್ಲೆಯಕಡೆ ಪ್ರಯಾಣ ಬೆಳೆಸಿದರು. ಸಿಟ್ ಬೆಲ್ಟ್ ಧರಿಸದೆ ಸಿಎಂ ಮತ್ತು ಡಿಸಿಎಂ ಸಾಯಬ್ರು ಕೈ ಬಿಸುತ್ತಾ ಸಾಗಿದರು

ಒಟ್ಟಾರೆಯಾಗಿ ಉಳ್ಳವರಿಗೋಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನು ಎಂಬಂತಾಗಿದೆ..

ಯಷ್ಟೋ ಜನಾ ಕೇಂದ್ರ ಸರ್ಕಾರ ರಚನೆ ಮಾಡಿರಿವ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಮೇಲೆ ದಂಡ ಕೇಳಿಯೇ ಜನ ಸಾಯುತ್ತಿದ್ದಾರೆ

ಅದರಲ್ಲು ನಮ್ಮನು ಆಳುವ ನಾಯಕರೆ ಹಿಂಗೆ ಮಾಡಿದರೆ ಹೇಗೆ ಎಂದು ಪ್ರಶ್ನೆ ಯಾಗಿದೆ....

ಅದರಲ್ಲೂ ಮಾನ್ಯ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರೂ ಮೋಟಾರು ವಾಹನ ಸಂಚಾರ ನಿಯಮ ಉಲ್ಲಂಘಿಸಿದ್ದಾರೆ ಅದು ಕುಡ ಪೋಲಿಸ್ ಸಮ್ಮುಖದಲ್ಲೇ.... ಅದೇಷ್ಟೋ ದಂಡ ವಿಧಿಸುತ್ತಾರೆ ಎಂದು ಕಾದು ನೋಡಬೇಕು,....

ಒಟ್ಟಾರೆಯಾಗಿ ಹೇಳುವುದಾದರೆ ಹಣದ ಮುಂದೆ ಯಾವ ಕಾನೂನು ನಡೆಯಲ್ಲ ಎಂಬುದು ಸಾರ್ವಜನಿಕರು ಆರೋಪಿಸಿದರು





Conclusion:ಶಿವರಾಜ್ ನೇಸರಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.