ETV Bharat / state

ಬಿಜೆಪಿ ಟಿಕೆಟ್​ ಕೈ ತಪ್ಪಿದರೆ ಕಾಂಗ್ರೆಸ್​ಗೆ ಹಾರುವರೇ ಕಾಗೆ..?

author img

By

Published : Oct 11, 2019, 2:47 PM IST

ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಉಪಚುನಾವಣೆಗೆ ಮಾಜಿ ಶಾಸಕ ರಾಜು ಕಾಗೆ ಅವರಿಗೆ ಬಿಜೆಪಿ ಟಿಕೆಟ ಕೈತಪ್ಪಿದರೆ, ಕಾಂಗ್ರೆಸ್​ ತೆಕ್ಕೆಗೆ ತೆರಳುವ ಎಲ್ಲ ಸೂಚನೆಗಳು ಕ್ಷೇತ್ರದಲ್ಲಿ ಕಂಡು ಬರುತ್ತಿವೆ. ಅನರ್ಹ ಶಾಸಕರಿಗೆ ಬಿಜೆಪಿ ಮಣೆ ಹಾಕಿಸುವುದು ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ.

ಮಾಜಿ ಶಾಸಕಿ ರಾಜು ಕಾಗೆ

ಚಿಕ್ಕೋಡಿ: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸೋಲು ಕಂಡಿದ್ದ ರಾಜು ಕಾಗೆಯವರಿಗೆ ಈಗ ನಡೆಯುವ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಬೇಕಿತ್ತು. ಆದರೆ, ಬಿಜೆಪಿ‌ ಪಕ್ಷ ಕಾಗೆ ಬದಲಾಗಿ ಅನರ್ಹ ಶಾಸಕ ಶ್ರೀಮಂತ ಪಾಟೀಲರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕುತ್ತಿರುವುದು ಕಾಗೆಯವರ ಕೋಪಕ್ಕೆ ಕಾರಣವಾಗಿದೆ.

BJP activist  upset if by-election ticket is given to unqualified MLAs
ಮಾಜಿ ಶಾಸಕಿ ರಾಜು ಕಾಗೆ

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಕಟ್ಟಾಳು ಎನಿಸಿಕೊಂಡಿದ್ದ, ರಾಜು ಕಾಗೆ ಕೊನೆಗೂ ಕಾಂಗ್ರೆಸ್ ಕಡೆ ಮುಖ ಮಾಡುವ ಮಾತುಗಳು ಕಾಗವಾಡ ಮತಕ್ಷೇತ್ರದ‌ಲ್ಲಿ ಕೇಳಿ ಬರುತ್ತಿವೆ.

ಅನರ್ಹ ಶಾಸಕ ಶ್ರೀಮಂತ ಪಾಟೀಲ, ಇಲ್ಲವೇ ಅವರ ಮಗ ಶ್ರೀನಿವಾಸ ಪಾಟೀಲಗೆ ಟಿಕೆಟ್ ನೀಡುತ್ತಾರೆ ಎಂಬ ಉಹಾಪೋಹಗಳ ಮಧ್ಯೆ, ಬುಧವಾರ ರಾಜ್ಯ ಸರ್ಕಾರ ಮಾಜಿ ಶಾಸಕ ರಾಜು ಕಾಗೆಯವರಿಗೆ ಕಾಡಾ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದು, ಮುಂದಿನ‌ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ನೀಡದಿರುವುದು ಖಚಿತ ಪಡಿಸಿದಂತಾಗಿದೆ.

ನಾಲ್ಕು ಬಾರಿ ಶಾಸಕನಾದವರಿಗೆ ಕಾಡಾ ಅಧಿಕಾರ ಸ್ಥಾನ ಬೇಕಿಲ್ಲ ಎಂದು ಕಾಗೆ ಅವರು ತಿರಸ್ಕಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ಮೂಗಿಗೆ ತುಪ್ಪ ಸವರುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಕಾಗವಾಡ ಕ್ಷೇತ್ರದ ಸ್ಥಿತಿ ಭಿನ್ನವಾಗಿದ್ದು, ರಾಜು ಕಾಗೆ ಅವರು ಸರ್ಕಾರದ ಈ ಆದೇಶವನ್ನು ಧಿಕ್ಕರಿಸುವ ಎಲ್ಲ ಲಕ್ಷಣಗಳು ಕ್ಷೇತ್ರ ಮೂಡುತ್ತಿವೆ.

ಬಿಜೆಪಿಯ ನಡೆಯನ್ನು ಅರಿತಿರುವ ಕಾಂಗ್ರೆಸ್ ಮೊದಲಿನಿಂದಲೂ ಕಾಗವಾಡ ಹಾಗೂ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ. ಆದರೆ, ಈಗ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರಾಜು ಕಾಗೆ ಪಕ್ಷ ತ್ಯಜಿಸುವ ಬಗ್ಗೆ ಖಾತ್ರಿ ಆಗಿದ್ದು ಕಾಗವಾಡ ಇಲ್ಲವೇ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತುಗಳಿಗೆ ಪುಷ್ಟಿ ನೀಡುತ್ತಿವೆ.

ಅನರ್ಹರು ಸರ್ಕಾರ ರಚನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಪಕ್ಷ ಸಂಘಟಿಸಿದ ನಿಷ್ಟಾವಂತರ ಬೆನ್ನಿಗೆ ಚೂರಿ ಹಾಕುವುದು ಯಾವ ನ್ಯಾಯ? ಎಂಬುದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಪ್ರಶ್ನಿಯಾಗಿದೆ.

ಬಿಜೆಪಿ ಟಿಕೆಟ್ ಕೈ ತಪ್ಪಿದಲ್ಲಿ ರಾಜು ಕಾಗೆಯವರು ಕಾಂಗ್ರೆಸ್ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.

ಚಿಕ್ಕೋಡಿ: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸೋಲು ಕಂಡಿದ್ದ ರಾಜು ಕಾಗೆಯವರಿಗೆ ಈಗ ನಡೆಯುವ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಬೇಕಿತ್ತು. ಆದರೆ, ಬಿಜೆಪಿ‌ ಪಕ್ಷ ಕಾಗೆ ಬದಲಾಗಿ ಅನರ್ಹ ಶಾಸಕ ಶ್ರೀಮಂತ ಪಾಟೀಲರಿಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕುತ್ತಿರುವುದು ಕಾಗೆಯವರ ಕೋಪಕ್ಕೆ ಕಾರಣವಾಗಿದೆ.

BJP activist  upset if by-election ticket is given to unqualified MLAs
ಮಾಜಿ ಶಾಸಕಿ ರಾಜು ಕಾಗೆ

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಕಟ್ಟಾಳು ಎನಿಸಿಕೊಂಡಿದ್ದ, ರಾಜು ಕಾಗೆ ಕೊನೆಗೂ ಕಾಂಗ್ರೆಸ್ ಕಡೆ ಮುಖ ಮಾಡುವ ಮಾತುಗಳು ಕಾಗವಾಡ ಮತಕ್ಷೇತ್ರದ‌ಲ್ಲಿ ಕೇಳಿ ಬರುತ್ತಿವೆ.

ಅನರ್ಹ ಶಾಸಕ ಶ್ರೀಮಂತ ಪಾಟೀಲ, ಇಲ್ಲವೇ ಅವರ ಮಗ ಶ್ರೀನಿವಾಸ ಪಾಟೀಲಗೆ ಟಿಕೆಟ್ ನೀಡುತ್ತಾರೆ ಎಂಬ ಉಹಾಪೋಹಗಳ ಮಧ್ಯೆ, ಬುಧವಾರ ರಾಜ್ಯ ಸರ್ಕಾರ ಮಾಜಿ ಶಾಸಕ ರಾಜು ಕಾಗೆಯವರಿಗೆ ಕಾಡಾ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದು, ಮುಂದಿನ‌ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್​ ನೀಡದಿರುವುದು ಖಚಿತ ಪಡಿಸಿದಂತಾಗಿದೆ.

ನಾಲ್ಕು ಬಾರಿ ಶಾಸಕನಾದವರಿಗೆ ಕಾಡಾ ಅಧಿಕಾರ ಸ್ಥಾನ ಬೇಕಿಲ್ಲ ಎಂದು ಕಾಗೆ ಅವರು ತಿರಸ್ಕಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ಮೂಗಿಗೆ ತುಪ್ಪ ಸವರುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಅನರ್ಹ ಶಾಸಕರಿಗೆ ಟಿಕೆಟ್ ನೀಡುವ ಕುರಿತು ಕಾಗವಾಡ ಕ್ಷೇತ್ರದ ಸ್ಥಿತಿ ಭಿನ್ನವಾಗಿದ್ದು, ರಾಜು ಕಾಗೆ ಅವರು ಸರ್ಕಾರದ ಈ ಆದೇಶವನ್ನು ಧಿಕ್ಕರಿಸುವ ಎಲ್ಲ ಲಕ್ಷಣಗಳು ಕ್ಷೇತ್ರ ಮೂಡುತ್ತಿವೆ.

ಬಿಜೆಪಿಯ ನಡೆಯನ್ನು ಅರಿತಿರುವ ಕಾಂಗ್ರೆಸ್ ಮೊದಲಿನಿಂದಲೂ ಕಾಗವಾಡ ಹಾಗೂ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ. ಆದರೆ, ಈಗ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ರಾಜು ಕಾಗೆ ಪಕ್ಷ ತ್ಯಜಿಸುವ ಬಗ್ಗೆ ಖಾತ್ರಿ ಆಗಿದ್ದು ಕಾಗವಾಡ ಇಲ್ಲವೇ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತುಗಳಿಗೆ ಪುಷ್ಟಿ ನೀಡುತ್ತಿವೆ.

ಅನರ್ಹರು ಸರ್ಕಾರ ರಚನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಪಕ್ಷ ಸಂಘಟಿಸಿದ ನಿಷ್ಟಾವಂತರ ಬೆನ್ನಿಗೆ ಚೂರಿ ಹಾಕುವುದು ಯಾವ ನ್ಯಾಯ? ಎಂಬುದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಪ್ರಶ್ನಿಯಾಗಿದೆ.

ಬಿಜೆಪಿ ಟಿಕೆಟ್ ಕೈ ತಪ್ಪಿದಲ್ಲಿ ರಾಜು ಕಾಗೆಯವರು ಕಾಂಗ್ರೆಸ್ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.

Intro:ಕಾಗೆ ಚಿತ್ತ ಕಾಂಗ್ರೆಸ್ ನತ್ತ Body:

ಚಿಕ್ಕೋಡಿ :
ಸ್ಟೋರಿ

ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಸೋಲು ಕಂಡಿದ್ದ ರಾಜು ಕಾಗೆಯವರಿಗೆ ಈಗ ನಡೆಯುವ ಉಪ ಚುನಾವಣೆಯಲ್ಲಿ ಟಿಕೇಟ್ ನೀಡಬೇಕಿತ್ತು. ಆದರೆ, ಬಿಜೆಪಿ‌ ಪಕ್ಷ ಕಾಗೆ ಬದಲಾಗಿ ಅನರ್ಹ ಶಾಸಕ ಶ್ರೀಮಂತ ಪಾಟೀಲರಿಗೆ ಬಿಜೆಪಿ ಹೈ ಕಮಾಂಡ್ ಮನೆ ಹಾಕುತ್ತಿರುವುದು ಕಾಗೆಯವರ ಕೋಪಕ್ಕೆ ಕಾರಣವಾಗಿದೆ.

ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ಕಟ್ಟಾಳು ಎನಿಸಿಕೊಂಡಿದ್ದ ರಾಜು ಕಾಗೆ ಕೊನೆಗೂ ಕಾಂಗ್ರೆಸ್ ಕಡೆ ಮುಖ ಮಾಡಿರುವುದು ಖಚಿತವಾಗಬಹುದು ಎನ್ನುವ ಮಾತುಗಳು ಈಗಾಗಲೇ ಕಾಗವಾಡ ಮತಕ್ಷೇತ್ರದ‌ ತುಂಬೆಲ್ಲ ಕೇಳಿ ಬರುತ್ತಿವೆ.

ಕಾಗವಾಡ ಮತಕ್ಷೇತ್ರದಲ್ಲಿ ಬಿಜೆಪಿ‌ ಟಿಕೇಟ್ ನ್ನು ಶ್ರೀಮಂತ ಪಾಟೀಲ ಇಲ್ಲವೇ ಅವರ ಮಗ ಶ್ರೀನಿವಾಸ ಪಾಟೀಲರಿಗೆ ಟಿಕೇಟ್ ಕೊಡುತ್ತಾರೆ ಎಂಬ ಉಹಾಪೋಹಗಳ ಮಧ್ಯೆಯೇ ಬುಧವಾರ ರಾಜ್ಯ ಸರಕಾರ ಮಾಜಿ ಶಾಸಕ ರಾಜು ಕಾಗೆಯವರಿಗೆ ಕಾಡಾ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಕೊಟ್ಟಿದೆ. ಈ ಸ್ಥಾನ ಕೊಡುವುದರ ಮೂಲಕ ಮುಂದಿನ‌ ವಿಧಾನಸಭಾ ಚುನಾವಣೆಯಲ್ಲಿ ಕೈ ಕೊಡುವುದು ಖಂಡಿತ ಎನ್ನುವುದು ಎದ್ದು ಕಾಣುತ್ತಿದೆ.

ಈ ಕಾಡಾ ವಿಚಾರವಾಗಿ ಭರಮಗೌಡಾ (ರಾಜು) ಕಾಗೆ ಅವರು ನಾನು ನಾಲ್ಕು ಬಾರಿ ಶಾಸಕನಾದವನು ನಾನು ಕಾಡಾ ಅಧಿಕಾರ ಸ್ಥಾನ ಪಡೆಯಲು ಸಿದ್ದವಿಲ್ಲ ಎಂದು ಹೇಳಿ ಕಾಡಾ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದಾರೆ.

ರಾಜು ಕಾಗೆಯವರು ಈ ಹಿಂದೆ ಕಾಂಗ್ರೆಸ್ ಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದರಾದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹಾಗೂ ರಾಜ್ಯದ ಮುಖಂಡರು ಸಮಾಧಾನದಿಂದ ಇರುವಂತೆ ಸೂಚಿಸಿದ್ದರು. ಆದರೆ, ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದ ಅನರ್ಹ ಕ್ಷೇತ್ರಗಳ ಪರಾಭವಗೊಂಡ ಬಿಜೆಪಿ ಅಭ್ಯರ್ಥಿಗಳಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುವ ಮೂಲಕ ಮೂಗಿಗೆ ತುಪ್ಪ ಒರೆಸುವ ಕೆಲಸ ರಾಜ್ಯ ಸರಕಾರ ಮಾಡುತ್ತಿದೆ. ಉಳಿದ ಕ್ಷೇತ್ರಗಳಿಗಿಂತ ಕಾಗವಾಡ ಕ್ಷೇತ್ರದ ಸ್ಥಿತಿ ಭಿನ್ನವಾಗಿದ್ದು, ರಾಜು ಕಾಗೆ ಅವರು ಸರಕಾರದ ಈ ಆದೇಶವನ್ನು ಧಿಕ್ಕರಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ. 

ಬಿಜೆಪಿಯ ನಡೆಯನ್ನು ಅರಿತಿರುವ ಕಾಂಗ್ರೆಸ್ ಮೊದಲಿನಿಂದಲೂ ಕಾಗವಾಡ ಹಾಗೂ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ. ಆದರೆ, ಈಗ ಈ ಎಲ್ಲ ಬೆಳವಣಿಗೆಯಲ್ಲಿ ರಾಜು ಕಾಗೆ ಪಕ್ಷ ತ್ಯಜಿಸುವ ಬಗ್ಗೆ ಖಾತ್ರಿ ಆಗಿದ್ದು ಕಾಗವಾಡ ಇಲ್ಲವೇ ಅಥಣಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತುಗಳು ಮತ್ತೇ ಕೇಳಿ ಬರುತ್ತಿವೆ.

ಅನರ್ಹರು ಸರಕಾರ ರಚನೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಪಕ್ಷ ಸಂಘಟಿಸಿದ ನಿಷ್ಟಾವಂತರ ಬೆನ್ನಿಗೆ ಚೂರಿ ಹಾಕುವುದು ಯಾವ ನ್ಯಾಯ? ಎಂದು ಬಿಜೆಪಿ ಕಾರ್ಯಕರ್ತರೇ ಪ್ರಶ್ನಿಸುತ್ತಿದ್ದಾರೆ.

ಬಿಜೆಪಿ ಟಿಕೇಟ್ ಕೈ ತಪ್ಪಿದಲ್ಲಿ ರಾಜು ಕಾಗೆಯವರು ಕಾಂಗ್ರೆಸ್ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಕಾಗವಾಡ ಇಲ್ಲವೇ ಅಥಣಿ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಲಿದ್ದಾರೆ ಎನ್ನುವುದು ಕ್ಷೇತ್ರದಾದ್ಯಂತ ಕೇಳಿಬರುತ್ತಿರುವ ಮಾತುಗಳು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.