ETV Bharat / state

ಸಾಲ ನೀಡಲು ನಕಾರ: ತಹಶೀಲ್ದಾರ್​ ಮುಂದೆ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಮುಂದಾಗ ರೈತ

author img

By

Published : Sep 22, 2020, 1:18 PM IST

ಹಾರೂಗೇರಿ ಪಿಕೆಪಿಎಸ್ ಬ್ಯಾಂಕ್‌ನ ಸಿಬ್ಬಂದಿಗಳು ಸಾಲ ನೀಡುತ್ತಿಲ್ಲ ಎಂದು ಆರೋಪಿಸಿ ರೈತ ಲಕ್ಷ್ಮಣ ತಿಪ್ಪಣ್ಣ ವಡಗೋಲೆ‌ ತಹಶೀಲ್ದಾರ್​ ಮುಂದೆ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಮುಂದಾದ ಘಟನೆ ನಡೆದಿದೆ.

ತಹಶೀಲ್ದಾರ್​ ಮುಂದೆ ಅಳಲು ತೋಡಿಕೊಂಡ ರೈತ
ತಹಶೀಲ್ದಾರ್​ ಮುಂದೆ ಅಳಲು ತೋಡಿಕೊಂಡ ರೈತ

ಚಿಕ್ಕೋಡಿ: ಹಾರೂಗೇರಿ ಪಿಕೆಪಿಎಸ್ ಬ್ಯಾಂಕ್‌ನ ಸಿಬ್ಬಂದಿ ಬೆಳೆ ಸಾಲ ಕೊಡುತ್ತಿಲ್ಲ. ಮುಚ್ಚಿ ಹೋದ ಬ್ಯಾಂಕ್​ನಿಂದ ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡಿ ಎಂದು ಕಾಡುತ್ತಿದ್ದಾರೆ ಎಂದು ಆರೋಪಿಸಿ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರೈತ ಲಕ್ಷ್ಮಣ ತಿಪ್ಪಣ್ಣ ವಡಗೋಲೆ‌ ತಹಶೀಲ್ದಾರ್​ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಕಳೆದ 25 ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಷಡಕ್ಷರಿ ಬ್ಯಾಂಕ್​ನಲ್ಲಿ ಅಲಖನೂರ ಗ್ರಾಮದ ರೈತ ಲಕ್ಷ್ಮಣ ಅವರು ಸಾಲ ಪಡೆದುಕೊಂಡಿದ್ದರು. ಆದರೆ ಆ ಬ್ಯಾಂಕ್​ ಮುಚ್ಚಿ 20 ವರ್ಷಗಳೇ ಕಳೆದಿವೆ. ಮುಚ್ಚಿ ಹೋದ ಬ್ಯಾಂಕ್​ನಿಂದ ಸಾಲದ ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡಿ ಎಂದು ಹಾರೂಗೇರಿ ಪಿಕೆಪಿಎಸ್ ಬ್ಯಾಂಕ್​ ಸಿಬ್ಬಂದಿ ಕಾಡುತ್ತಿದ್ದಾರೆ. ಈ ಕ್ಲಿಯರನ್ಸ್ ಸರ್ಟಿಫಿಕೇಟ್ ಇಲ್ಲದೇ ಎರಡು ಲಕ್ಷ ಸಾಲವೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಸರ್ಕಾರ ಮಾಡಿದ ಸಾಲಮನ್ನಾದಲ್ಲಿ ನನ್ನ ಸಾಲ ಮನ್ನಾ ಆಗಿಲ್ಲ. ಹೀಗಾಗಿ ನನಗೆ ಎರಡು ಲಕ್ಷ ಸಾಲ ಬೇಕಾಗಿದ್ದು, ಅದನ್ನು ನೀಡಲು ಬ್ಯಾಂಕ್​ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ‌. ಈಗ ನನಗೆ ಸಾಲದ ಅವಶ್ಯಕತೆ ಇದೆ, ನನ್ನ ಜಮೀನಿನ ಮೇಲೆ ಬೆಳೆ ಸಾಲ ಕೊಡಿ ಎಂದು ಹಾರೂಗೇರಿ ಪಿಕೆಪಿಎಸ್ ಬಳಿ ಕೇಳಿದರೆ ಕ್ಲಿಯರೆನ್ಸ್​ ಸರ್ಟಿಫಿಕೇಟ್ ಕೇಳುತ್ತಿದ್ದಾರೆ ಎಂದು ರಾಯಬಾಗ ಗ್ರೇಡ್ - 2 ತಹಶೀಲ್ದಾರ ಪರಮಾನಂದ ಮಂಗಸೂಳಿ ಅವರ ಬಳಿ ರೈತ ಅಳಲು ತೋಡಿಕೊಂಡಿದ್ದಾರೆ.

ಈ ಸಾಲದ ವಿಚಾರವಾಗಿ ರಾಷ್ಟ್ರಪತಿಗಳಿಗೆ, ಸ್ಥಳೀಯ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ. ಅದಕ್ಕಾಗಿ ಬೇಸತ್ತು ನಾನು ವಿಷ ಕುಡಿಯಲು ಮುಂದಾಗಿದ್ದೇನೆ ಎಂದು ಎಚ್ಚರಿಕೆ ನೀಡಿದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಯಬಾಗ ಗ್ರೇಡ್ - 2 ತಹಶೀಲ್ದಾರ ಪರಮಾನಂದ ಮಂಗಸೂಳಿ‌, ಪಿಕೆಪಿಎಸ್ ಬ್ಯಾಂಕ್​ ಸಿಬ್ಬಂದಿ ಜೊತೆ ಚರ್ಚಿಸಿದ್ದೇನೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ನಮಗೆ ಸ್ವಲ್ಪ ಕಾಲಾವಕಾಶ ನೀಡಿ. ನಾನೂ ಇದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಿಮಗೆ ನ್ಯಾಯ ಕೊಡಿಸುತ್ತೇನೆ ಎಂದು ರೈತನಿಗೆ ಭರವಸೆ ನೀಡಿದ್ರು.

ಚಿಕ್ಕೋಡಿ: ಹಾರೂಗೇರಿ ಪಿಕೆಪಿಎಸ್ ಬ್ಯಾಂಕ್‌ನ ಸಿಬ್ಬಂದಿ ಬೆಳೆ ಸಾಲ ಕೊಡುತ್ತಿಲ್ಲ. ಮುಚ್ಚಿ ಹೋದ ಬ್ಯಾಂಕ್​ನಿಂದ ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡಿ ಎಂದು ಕಾಡುತ್ತಿದ್ದಾರೆ ಎಂದು ಆರೋಪಿಸಿ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರೈತ ಲಕ್ಷ್ಮಣ ತಿಪ್ಪಣ್ಣ ವಡಗೋಲೆ‌ ತಹಶೀಲ್ದಾರ್​ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಕಳೆದ 25 ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಷಡಕ್ಷರಿ ಬ್ಯಾಂಕ್​ನಲ್ಲಿ ಅಲಖನೂರ ಗ್ರಾಮದ ರೈತ ಲಕ್ಷ್ಮಣ ಅವರು ಸಾಲ ಪಡೆದುಕೊಂಡಿದ್ದರು. ಆದರೆ ಆ ಬ್ಯಾಂಕ್​ ಮುಚ್ಚಿ 20 ವರ್ಷಗಳೇ ಕಳೆದಿವೆ. ಮುಚ್ಚಿ ಹೋದ ಬ್ಯಾಂಕ್​ನಿಂದ ಸಾಲದ ಕ್ಲಿಯರನ್ಸ್ ಸರ್ಟಿಫಿಕೇಟ್ ನೀಡಿ ಎಂದು ಹಾರೂಗೇರಿ ಪಿಕೆಪಿಎಸ್ ಬ್ಯಾಂಕ್​ ಸಿಬ್ಬಂದಿ ಕಾಡುತ್ತಿದ್ದಾರೆ. ಈ ಕ್ಲಿಯರನ್ಸ್ ಸರ್ಟಿಫಿಕೇಟ್ ಇಲ್ಲದೇ ಎರಡು ಲಕ್ಷ ಸಾಲವೂ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಸರ್ಕಾರ ಮಾಡಿದ ಸಾಲಮನ್ನಾದಲ್ಲಿ ನನ್ನ ಸಾಲ ಮನ್ನಾ ಆಗಿಲ್ಲ. ಹೀಗಾಗಿ ನನಗೆ ಎರಡು ಲಕ್ಷ ಸಾಲ ಬೇಕಾಗಿದ್ದು, ಅದನ್ನು ನೀಡಲು ಬ್ಯಾಂಕ್​ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ‌. ಈಗ ನನಗೆ ಸಾಲದ ಅವಶ್ಯಕತೆ ಇದೆ, ನನ್ನ ಜಮೀನಿನ ಮೇಲೆ ಬೆಳೆ ಸಾಲ ಕೊಡಿ ಎಂದು ಹಾರೂಗೇರಿ ಪಿಕೆಪಿಎಸ್ ಬಳಿ ಕೇಳಿದರೆ ಕ್ಲಿಯರೆನ್ಸ್​ ಸರ್ಟಿಫಿಕೇಟ್ ಕೇಳುತ್ತಿದ್ದಾರೆ ಎಂದು ರಾಯಬಾಗ ಗ್ರೇಡ್ - 2 ತಹಶೀಲ್ದಾರ ಪರಮಾನಂದ ಮಂಗಸೂಳಿ ಅವರ ಬಳಿ ರೈತ ಅಳಲು ತೋಡಿಕೊಂಡಿದ್ದಾರೆ.

ಈ ಸಾಲದ ವಿಚಾರವಾಗಿ ರಾಷ್ಟ್ರಪತಿಗಳಿಗೆ, ಸ್ಥಳೀಯ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ. ಅದಕ್ಕಾಗಿ ಬೇಸತ್ತು ನಾನು ವಿಷ ಕುಡಿಯಲು ಮುಂದಾಗಿದ್ದೇನೆ ಎಂದು ಎಚ್ಚರಿಕೆ ನೀಡಿದರು.

ಈ ವಿಚಾರವಾಗಿ ಪ್ರತಿಕ್ರಿಯಿಸಿದ ರಾಯಬಾಗ ಗ್ರೇಡ್ - 2 ತಹಶೀಲ್ದಾರ ಪರಮಾನಂದ ಮಂಗಸೂಳಿ‌, ಪಿಕೆಪಿಎಸ್ ಬ್ಯಾಂಕ್​ ಸಿಬ್ಬಂದಿ ಜೊತೆ ಚರ್ಚಿಸಿದ್ದೇನೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು. ನಮಗೆ ಸ್ವಲ್ಪ ಕಾಲಾವಕಾಶ ನೀಡಿ. ನಾನೂ ಇದರ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ನಿಮಗೆ ನ್ಯಾಯ ಕೊಡಿಸುತ್ತೇನೆ ಎಂದು ರೈತನಿಗೆ ಭರವಸೆ ನೀಡಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.