ETV Bharat / state

ಬೆಳಗಾವಿಯಲ್ಲಿ ಕುಡಿಯುವ ನೀರಿನ ಕೊರತೆ: ರಕ್ಕಸಕೊಪ್ಪ ಜಲಾಶಯಕ್ಕೆ ಶಾಸಕ ಅನಿಲ್​ ಬೆನಕೆ ಭೇಟಿ

ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಶಾಸಕ ಅನೀಲ್ ಬೆನಕೆ. ನಗರಕ್ಕೆ ಹೇಗೆ ನೀರು ಸರಬರಾಜು ಮಾಡುಬಹುದೆಂದು ಯೋಜನೆ.

author img

By

Published : May 13, 2019, 6:06 PM IST

ಶಾಸಕ ಅನೀಲ್ ಬೆನಕೆ

ಬೆಳಗಾವಿ : ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬೆಳಗಾವಿ ಶಾಸಕ ಅನಿಲ್ ಬೆನಕೆ ರಕ್ಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯುತ್ತಿರುವ ಶಾಸಕ ಅನೀಲ್ ಬೆನಕೆ

ಬೆಳಗಾವಿ ಜಿಲ್ಲೆಯ ಪ್ರಮುಖ ನೀರಿನ ಮೂಲವೇ ರಕ್ಕಸಕೊಪ್ಪ ಜಲಾಶಯವಾಗಿದ್ದು, ಅದೀಗ ಬರಿದಾಗಿದೆ. ಇರುವ ನೀರಿನಲ್ಲಿ ನಗರಕ್ಕೆ ಎಷ್ಟು ದಿನ ನೀರು ಸರಬರಾಜು ಮಾಡಬಹುದು ಎಂದು ಶಾಸಕರು ನೀರಾವರಿ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡಿದ್ದಾರೆ.

ನಂತರ ಮಾತನಾಡಿದ ಬೆನಕೆ, ಸದ್ಯ ಜಲಾಶಯದಲ್ಲಿ ಇರುವ ನೀರಿನ ಮಟ್ಟ ಕಡಿಮೆಯಾಗಿದ್ದು. ಬರುವ ಜೂನ್ ವರೆಗೆ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಬಹುದು. ಅಕಸ್ಮಾತ್ ಮಳೆಯಾಗದೇ ಇದ್ದರೆ ನೀರು ಸಿಗುವುದು ಕಷ್ಟ ಎಂದರು.

ಪ್ರತಿ ವರ್ಷವೂ ಬೇಸಿಗೆಯಲ್ಲಿ ಬೆಳಗಾವಿ ನಗರಕ್ಕೆ ನೀರಿನ ಅಭಾವ ಕಂಡುಬರುತ್ತದೆ. ಈ ಬಾರಿ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಅಭಾವ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಳಗಾವಿ : ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬೆಳಗಾವಿ ಶಾಸಕ ಅನಿಲ್ ಬೆನಕೆ ರಕ್ಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಅಧಿಕಾರಿಗಳೊಂದಿಗೆ ಮಾಹಿತಿ ಪಡೆಯುತ್ತಿರುವ ಶಾಸಕ ಅನೀಲ್ ಬೆನಕೆ

ಬೆಳಗಾವಿ ಜಿಲ್ಲೆಯ ಪ್ರಮುಖ ನೀರಿನ ಮೂಲವೇ ರಕ್ಕಸಕೊಪ್ಪ ಜಲಾಶಯವಾಗಿದ್ದು, ಅದೀಗ ಬರಿದಾಗಿದೆ. ಇರುವ ನೀರಿನಲ್ಲಿ ನಗರಕ್ಕೆ ಎಷ್ಟು ದಿನ ನೀರು ಸರಬರಾಜು ಮಾಡಬಹುದು ಎಂದು ಶಾಸಕರು ನೀರಾವರಿ ಅಧಿಕಾರಿಗಳ ಜೊತೆ ಮಾಹಿತಿ ಪಡೆದುಕೊಂಡಿದ್ದಾರೆ.

ನಂತರ ಮಾತನಾಡಿದ ಬೆನಕೆ, ಸದ್ಯ ಜಲಾಶಯದಲ್ಲಿ ಇರುವ ನೀರಿನ ಮಟ್ಟ ಕಡಿಮೆಯಾಗಿದ್ದು. ಬರುವ ಜೂನ್ ವರೆಗೆ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಬಹುದು. ಅಕಸ್ಮಾತ್ ಮಳೆಯಾಗದೇ ಇದ್ದರೆ ನೀರು ಸಿಗುವುದು ಕಷ್ಟ ಎಂದರು.

ಪ್ರತಿ ವರ್ಷವೂ ಬೇಸಿಗೆಯಲ್ಲಿ ಬೆಳಗಾವಿ ನಗರಕ್ಕೆ ನೀರಿನ ಅಭಾವ ಕಂಡುಬರುತ್ತದೆ. ಈ ಬಾರಿ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಅಭಾವ ಕಂಡುಬರುವ ಸಾಧ್ಯತೆ ಇದೆ ಎನ್ನಲಾಗಿದೆ.

Intro:ಕುಡಿಯುವ ನೀರಿನ ಅಭಾವ : ರಕ್ಕಸಕೊಪ್ಪ ಜಲಾಶಯಕ್ಕೆ ಶಾಸಕರ ಭೇಟಿ

ಬೆಳಗಾವಿ : ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬೆಳಗಾವಿ ಶಾಸಕ ಅನೀಲ್ ಬೆನಕೆ ರಕ್ಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.


Body:ಬೆಳಗಾವಿ ಜಿಲ್ಲೆಯ ನಿರಿನ ಮೂಲವೆ ಈವರಕ್ಕಸಕೊಪ್ಪ ಜಲಾಶಯ ಈಗ ಅದು ಬರಿದಾಗಿದ್ದು ಇರುವ ನೀರಿನಲ್ಲಿ ನಗರಕ್ಕೆ ಎಷ್ಟು ದಿನ ನೀರು ಸರಬರಾಜು ಮಾಡಬಹುದು ಎಂದು ಶಾಸಕರು ನೀರಾವರಿ ಅಧಿಕಾರಿಗಳ ಮಾಹಿತಿ ಪಡೆದರು.

ನಂತರ ಮಾತನಾಡಿದ ಬೆಳಗಾವಿ ಶಾಸಕ ಅನೀಲ್ ಬೆನಕೆ. ಸಧ್ಯ ಜಲಾಶಯದಲ್ಲಿ ಇರುವ ನೀರಿನ ಮಟ್ಟ ಕಡಿಮೆಯಾಗಿದ್ದು. ಬರುವ ಜೂನ್ ವರೆಗೆ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಬಹುದು. ಅಕಸ್ಮಾತ್ತಾಗಿ ಮಳೆಯಾಗದೇ ಇದ್ದರೆ ನೀರು ಸಿಗುವುದು ಕಷ್ಟ ಎಂದರು.


Conclusion:ಪ್ರತಿ ವರ್ಷವೂ ಬೇಸಿಗೆಯಲ್ಲಿ ಬೆಳಗಾವಿ ನಗರಕ್ಕೆ ನೀರಿನ ಅಭಾವ ಕಂಡುಬರುತ್ತದೆ. ಈ ಬಾರಿ ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಪ್ರಮಾನ ಕಡಿಮೆಯಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಅಭಾವ ಕಂಡುಬರುವ ಸಾಧ್ಯತೆ ಇದೇ ಎನ್ನಲಾಗಿದೆ.

ವಿನಾಯಕ ಮಠಪತಿ
ಬೆಳಗಾವಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.