ETV Bharat / state

ಸೇನೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ಹೊಟ್ಟೆ ನೋವಿನಿಂದ ಸಾವನ್ನಪ್ಪಿದ ಮಂಗಸೂಳಿಯ ಯೋಧ - ಸುನೀಲ ಸದಾಶಿವ ಖಿಲಾರೆ ಸಾವು

ಭಾರತೀಯ ಸೇನೆಯಲ್ಲಿ ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಂಗಸೂಳಿಯ ಯೋಧನೋರ್ವ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

warrior
ಮಂಗಸೂಳಿಯ ಯೋಧ
author img

By

Published : Jul 3, 2020, 2:37 PM IST

ಚಿಕ್ಕೋಡಿ: ಅಸ್ಸೋಂ ಗಡಿಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಗಸೂಳಿಯ ಯೋಧನೋರ್ವ ಹೊಟ್ಟೆನೋವು ತಾಳಲಾರದೆ ಗುಹವಾಟಿಯ ಆರ್ಮಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ.

ಹುತಾತ್ಮ ಯೋಧ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಸುನೀಲ ಸದಾಶಿವ ಖಿಲಾರೆ (36). ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕೊರೊನಾ ಹೆಮ್ಮಾರಿ ಹಿನ್ನೆಲೆ, ಕಳೆದ 3 ತಿಂಗಳುಗಳಿಂದ ಮಂಗಸೂಳಿ ಗ್ರಾಮದಲ್ಲಿದ್ದರು. ಜೂ.02 ರಂದು ಅಸ್ಸೋಂಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಹುತಾತ್ಮ ಯೋಧ ಸುನೀಲ್ ಖಿಲಾರೆ ಅವರ ಪಾರ್ಥಿವ ಶರೀರ ಶನಿವಾರ ಸಂಜೆ ಮಂಗಸೂಳಿ ಗ್ರಾಮಕ್ಕೆ ತಲುಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇನ್ನು ಹುತಾತ್ಮ ಯೋಧನ ತಂದೆ ಸದಾಶಿವ ಖಿಲಾರೆ ಅವರು ಕೂಡ ಯೋಧರಾಗಿ ನಿವೃತ್ತರಾಗಿದ್ದು, ಇವರ ಸಹೋದರ ರಾಮಚಂದ್ರ ಸದಾಶಿವ ಖಿಲಾರೆ ಇವರು ಗುಜರಾತಿನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುತಾತ್ಮ ಯೋಧ ತಂದೆ-ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಚಿಕ್ಕೋಡಿ: ಅಸ್ಸೋಂ ಗಡಿಯಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಗಸೂಳಿಯ ಯೋಧನೋರ್ವ ಹೊಟ್ಟೆನೋವು ತಾಳಲಾರದೆ ಗುಹವಾಟಿಯ ಆರ್ಮಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ.

ಹುತಾತ್ಮ ಯೋಧ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಸುನೀಲ ಸದಾಶಿವ ಖಿಲಾರೆ (36). ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕೊರೊನಾ ಹೆಮ್ಮಾರಿ ಹಿನ್ನೆಲೆ, ಕಳೆದ 3 ತಿಂಗಳುಗಳಿಂದ ಮಂಗಸೂಳಿ ಗ್ರಾಮದಲ್ಲಿದ್ದರು. ಜೂ.02 ರಂದು ಅಸ್ಸೋಂಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ಹುತಾತ್ಮ ಯೋಧ ಸುನೀಲ್ ಖಿಲಾರೆ ಅವರ ಪಾರ್ಥಿವ ಶರೀರ ಶನಿವಾರ ಸಂಜೆ ಮಂಗಸೂಳಿ ಗ್ರಾಮಕ್ಕೆ ತಲುಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇನ್ನು ಹುತಾತ್ಮ ಯೋಧನ ತಂದೆ ಸದಾಶಿವ ಖಿಲಾರೆ ಅವರು ಕೂಡ ಯೋಧರಾಗಿ ನಿವೃತ್ತರಾಗಿದ್ದು, ಇವರ ಸಹೋದರ ರಾಮಚಂದ್ರ ಸದಾಶಿವ ಖಿಲಾರೆ ಇವರು ಗುಜರಾತಿನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುತಾತ್ಮ ಯೋಧ ತಂದೆ-ತಾಯಿ, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.