ETV Bharat / state

ಅಫ್ಘಾನಿಸ್ಥಾನದಲ್ಲಿ ಅಪಘಾತಕ್ಕೀಡಾದ ಇಂಜಿನಿಯರ್ ಏರ್ ಆಂಬ್ಯುಲೆನ್ಸ್ ಮೂಲಕ ಸ್ವದೇಶಕ್ಕೆ ಶಿಫ್ಟ್​ - ಅಫ್ಘಾನಿಸ್ಥಾನದಲ್ಲಿ ಅನಾರೋಗ್ಯಕ್ಕಿಡಾದ ಯುವಕ

ಅಫ್ಘಾನಿಸ್ಥಾನದಲ್ಲಿ ರಸ್ತೆ ಅಪಘಾತಕ್ಕೀಡಾಗಿದ್ದ ಭಾರತದ ಇಂಜಿನಿಯರ್​ ಒಬ್ಬರನ್ನು ಮಂಡ್ಯದ ವೈದ್ಯರ ನೆರವಿನಿಂದ ಏರ್ ಆಂಬ್ಯುಲೆನ್ಸ್ ಮೂಲಕ ಸ್ವದೇಶಕ್ಕೆ ಕರೆತರಲಾಗಿದೆ.

youth  iling  in Afghanistan: returned  by air ambulance
ಅಫ್ಘಾನಿಸ್ಥಾನದಲ್ಲಿ ಆನಾರೋಗ್ಯಕ್ಕಿಡಾದ ಯುವಕ: ಏರ್ ಅಂಬುಲೆನ್ಸ್ ಮೂಲಕ ಸ್ವದೇಶಕ್ಕೆ ವಾಪಸ್
author img

By

Published : Apr 22, 2020, 8:39 PM IST

ಹೈದರಾಬಾದ್/ಬೆಂಗಳೂರು: ಅಫ್ಘಾನಿಸ್ಥಾನದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹೈದರಾಬಾದ್​ ಮೂಲದ ಇಂಜಿನಿಯರ್​ ಒಬ್ಬರನ್ನು ಮಂಡ್ಯದ ವೈದ್ಯರ ನೆರವಿನಿಂದ ಭಾರತಕ್ಕೆ ಏರ್ ಆಂಬ್ಯುಲೆನ್ಸ್ ಮೂಲಕ ಕರೆತರಲಾಗಿದೆ.

ಅಫ್ಘಾನಿಸ್ಥಾನದಲ್ಲಿ ಅಪಘಾತಕ್ಕೀಡಾಗಿದ್ದ ಇಂಜಿನಿಯರ್​, ಏರ್ ಆಂಬ್ಯುಲೆನ್ಸ್ ಮೂಲಕ ಹೈದರಾಬಾದ್​ಗೆ ಶಿಫ್ಟ್​

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಏರ್ ಆಂಬ್ಯುಲೆನ್ಸ್ ಮೂಲಕ ವಿದೇಶದಿಂದ ರೋಗಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಲಾಕ್​ಡೌನ್​ ನಡುವೆಯೂ ಇಂಜಿನಿಯರ್​ ಅವರನ್ನು ಕರೆತಂದು ಹೈದರಾಬಾದ್​ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಐ ಕಾಟ್ ಸಂಸ್ಥೆಯ ಏರ್ ಆಂಬ್ಯುಲೆನ್ಸ್ ಮೂಲಕ ಅಫ್ಘಾನಿಸ್ಥಾನದ ಬಾಗ್ರಾಂವ್​ ಏರ್​ಬೇಸ್ ನಿಂದ ಐ ಕಾಟ್ ಮುಖ್ಯಸ್ಥರಾದ ಡಾ. ಶಾಲಿನಿ ನಲ್ವಾಡ್ ಮತ್ತು ಡಾ. ರಾಹುಲ್ ಸಿಂಗ್ ಸರ್ದಾರ್ ನೇತೃತ್ವದಲ್ಲಿ ಹೈದರಾಬಾದ್​ಗೆ ಸ್ಥಳಾಂತರಿಸಲಾಗಿದೆ.

ಸತತ ಆರು ದಿನಗಳ ಪರಿಶ್ರಮದಿಂದ, ಕೇಂದ್ರ ಗೃಹ ಇಲಾಖೆ, ಆರೋಗ್ಯ ಇಲಾಖೆ, ವಿದೇಶಾಂಗ ಇಲಾಖೆ‌ ಸೇರಿ ಐಡು ಇಲಾಖೆಯೊಂದಿಗೆ ಸಂಪರ್ಕ ಸಾಧಿಸಲಾಗಿತ್ತು. ಒಬ್ಬ ಇಂಜಿನಿಯರ್​ಗೆ ವೈದ್ಯರು ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಲಾಕ್ ಡೌನ್ ಇರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಂಡು ರೋಗಿಯನ್ನು ಅಫ್ಘಾನಿಸ್ಥಾನದಿಂದ ಸ್ಥಳಾಂತರಿಸಲಾಗಿದೆ ಎಂದು ಐ ಕಾಟ್​ ಮುಖ್ಯಸ್ಥರಾದ ಡಾ. ಶಾಲಿನಿ ನಲ್ವಾಡ್​ ಮಾಹಿತಿ ನೀಡಿದ್ದಾರೆ.

ಹೈದರಾಬಾದ್/ಬೆಂಗಳೂರು: ಅಫ್ಘಾನಿಸ್ಥಾನದಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಹೈದರಾಬಾದ್​ ಮೂಲದ ಇಂಜಿನಿಯರ್​ ಒಬ್ಬರನ್ನು ಮಂಡ್ಯದ ವೈದ್ಯರ ನೆರವಿನಿಂದ ಭಾರತಕ್ಕೆ ಏರ್ ಆಂಬ್ಯುಲೆನ್ಸ್ ಮೂಲಕ ಕರೆತರಲಾಗಿದೆ.

ಅಫ್ಘಾನಿಸ್ಥಾನದಲ್ಲಿ ಅಪಘಾತಕ್ಕೀಡಾಗಿದ್ದ ಇಂಜಿನಿಯರ್​, ಏರ್ ಆಂಬ್ಯುಲೆನ್ಸ್ ಮೂಲಕ ಹೈದರಾಬಾದ್​ಗೆ ಶಿಫ್ಟ್​

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಏರ್ ಆಂಬ್ಯುಲೆನ್ಸ್ ಮೂಲಕ ವಿದೇಶದಿಂದ ರೋಗಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಲಾಕ್​ಡೌನ್​ ನಡುವೆಯೂ ಇಂಜಿನಿಯರ್​ ಅವರನ್ನು ಕರೆತಂದು ಹೈದರಾಬಾದ್​ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಐ ಕಾಟ್ ಸಂಸ್ಥೆಯ ಏರ್ ಆಂಬ್ಯುಲೆನ್ಸ್ ಮೂಲಕ ಅಫ್ಘಾನಿಸ್ಥಾನದ ಬಾಗ್ರಾಂವ್​ ಏರ್​ಬೇಸ್ ನಿಂದ ಐ ಕಾಟ್ ಮುಖ್ಯಸ್ಥರಾದ ಡಾ. ಶಾಲಿನಿ ನಲ್ವಾಡ್ ಮತ್ತು ಡಾ. ರಾಹುಲ್ ಸಿಂಗ್ ಸರ್ದಾರ್ ನೇತೃತ್ವದಲ್ಲಿ ಹೈದರಾಬಾದ್​ಗೆ ಸ್ಥಳಾಂತರಿಸಲಾಗಿದೆ.

ಸತತ ಆರು ದಿನಗಳ ಪರಿಶ್ರಮದಿಂದ, ಕೇಂದ್ರ ಗೃಹ ಇಲಾಖೆ, ಆರೋಗ್ಯ ಇಲಾಖೆ, ವಿದೇಶಾಂಗ ಇಲಾಖೆ‌ ಸೇರಿ ಐಡು ಇಲಾಖೆಯೊಂದಿಗೆ ಸಂಪರ್ಕ ಸಾಧಿಸಲಾಗಿತ್ತು. ಒಬ್ಬ ಇಂಜಿನಿಯರ್​ಗೆ ವೈದ್ಯರು ಸಹಾಯ ಹಸ್ತ ಚಾಚಿದ್ದಾರೆ. ಸದ್ಯ ಲಾಕ್ ಡೌನ್ ಇರುವುದರಿಂದ ಮುಂಜಾಗ್ರತಾ ಕ್ರಮ ಕೈಗೊಂಡು ರೋಗಿಯನ್ನು ಅಫ್ಘಾನಿಸ್ಥಾನದಿಂದ ಸ್ಥಳಾಂತರಿಸಲಾಗಿದೆ ಎಂದು ಐ ಕಾಟ್​ ಮುಖ್ಯಸ್ಥರಾದ ಡಾ. ಶಾಲಿನಿ ನಲ್ವಾಡ್​ ಮಾಹಿತಿ ನೀಡಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.