ETV Bharat / state

ವಿಶ್ವ ಆರ್ಥಿಕ ಹಿಂಜರಿತ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲ್ಲ: ಅರ್ಥಶಾಸ್ತ್ರಜ್ಞ ವೈದ್ಯನಾಥನ್ ಅಭಿಮತ - World-economic recession

ಆರ್ಥಿಕ ಹಿಂಜರಿತ ಇಡೀ ವಿಶ್ವದಲ್ಲಿ ಆಗುತ್ತಿದ್ದು, ಭಾರತದ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಐಐಎಂ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ವೈದ್ಯನಾಥನ್ ಎಫ್​​ಕೆಸಿಸಿಐನಲ್ಲಿ ಹೇಳಿದ್ದಾರೆ.

ಐಐಎಂ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ವೈದ್ಯನಾಥನ್
author img

By

Published : Nov 21, 2019, 9:48 PM IST

ಬೆಂಗಳೂರು: ಆರ್ಥಿಕ ಹಿಂಜರಿತ ಇಡೀ ವಿಶ್ವದಲ್ಲಿ ಆಗುತ್ತಿದ್ದು, ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುವುದಿಲ್ಲ. ಕಡಿಮೆ ಸೂಚ್ಯಾಂಕಗಳು ಕೇವಲ ತ್ರೈಮಾಸಿಕ ವರದಿ ಮಾತ್ರ ಎಂದು ಐಐಎಂ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ವೈದ್ಯನಾಥನ್ ಎಫ್​​ಕೆಸಿಸಿಐನಲ್ಲಿ ಹೇಳಿದ್ದಾರೆ.

1999 ರಲ್ಲಿ ಈಶಾನ್ಯ ಏಷ್ಯಾ ಕಂಡದಲ್ಲಿ ಆರ್ಥಿಕ ಹಿಂಜರಿತ ಆಗಿತ್ತು. 2005- 06 ರ ಮದ್ಯ ಲ್ಯಾಟಿನ್ ಅಮೆರಿಕನ್​ನಲ್ಲಿ ಆರ್ಥಿಕ ಹಿಂಜರಿತ ಆಗಿತ್ತು. 7 ವರ್ಷಗಳಿಂದ ಗ್ರೀಸ್, ಜರ್ಮನಿ ಹಾಗೂ ಇನ್ನಿತರ ಯುರೋಪಿಯನ್ ರಾಷ್ಟ್ರಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಇದಕ್ಕೆ ವಿಶ್ವ ಆರ್ಥಿಕ ಹಿಂಜರಿತ ಎನ್ನಲಾಗಿದೆ ಎಂದು ಅರ್ಥಶಾಸ್ತ್ರಜ್ಞ ವೈದ್ಯನಾಥನ್ ವಿವರಿಸಿದರು.

ಜಿ- 7 ರಾಷ್ಟ್ರಗಳು ಆರ್ಥಿಕವಾಗಿ ಕುಸಿತ ಕಾಣುತ್ತಿದ್ದು, ವಿಶ್ವ ಜಿಡಿಪಿಯಲ್ಲಿ ಜಿ 7 ಪಾಲು 50.97ರಿಂದ 36.25 ಕುಸಿದಿದೆ. ಇನ್ನೊಂದು ಕಡೆ ಜಿ-7 ಅಲ್ಲದ ರಾಷ್ಟ್ರಗಳ ಜಿಡಿಪಿ ಪಾಲು ಶೇಕಡಾ 35.97 ರಿಂದ 52 ಕ್ಕೆ ಏರಿಕೆ ಆಗಿದೆ. ಇದು ಭಾರತಕ್ಕೆ ಲಾಭದಾಯಕ ಎಂದು ವಿವರಿಸಿದರು.

ಐಐಎಂ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ವೈದ್ಯನಾಥನ್

ಮುಂಬರುವ ವರ್ಷಗಳಲ್ಲಿ ಬ್ರಿಟನ್ ರಾಷ್ಟ್ರ ನಮ್ಮ ದೇಶದ ಬಳಿ ಬಂದು ಆರ್ಥಿಕ ಸಹಾಯಕ್ಕೆ ಕೈಚಾಚುತ್ತದೆ. ಬ್ರಿಟನ್, ಯೂರೋಪ್ ಖಂಡದಿಂದ ಹೊರಬಂದರೆ ಈ ರೀತಿ ಆಗುವುದು ಖಚಿತ ಎಂದು ವೈದ್ಯನಾಥನ್ ಭವಿಷ್ಯ ನುಡಿದರು.

ಹಣ ಉಳಿತಾಯ:

ಭಾರತ ಹಾಗೂ ಚೀನಾ ಶೇಕಡಾ 30 ರಷ್ಟು ಉಳಿತಾಯ ಇದೆ. ಜಿ-7 ರಾಷ್ಟ್ರಗಳು ಶೇ 7 ರಷ್ಟು ಉಳಿತಾಯ ಮಾಡುತ್ತವೆ. ಶೇ 50ರಷ್ಟು ಭಾರತದ ಆರ್ಥಿಕತೆ ಪಾರ್ಟ್ನರ್ ಹಾಗೂ ಮಾಲೀಕತ್ವದ ವ್ಯವಹಾರಗಳ ಮೇಲೆ ನಿಂತಿದೆ. ಇದನ್ನ ಅಸಂಘಟಿತ ಎಂದು ಕರೆಯಲಾಗಿದೆ ಇದು ವಿಷಾದಕರ ಎಂದರು. ಒಬ್ಬ ಭಾರತೀಯ ನಾಗರಿಕ ವರ್ಷಕ್ಕೆ ಸರಾಸರಿ ಶೇ 20ರಷ್ಟು ಅವನ ಜೀವನದ ದುಡಿಮೆಯನ್ನು ಲಂಚವಾಗಿ ನೀಡುತ್ತಾನೆ ಎಂದು ವೈದ್ಯನಾಥನ್ ವಿಷಾದ ವ್ಯಕ್ತಪಡಿಸಿದರು. ಭಾರತದ ಗೃಹಿಣಿಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ, ಇದೆ ನಮ್ಮ ದೇಶದ ಆರ್ಥಿಕತೆಯ ಶಕ್ತಿ ಎಂದೂ ಕೊಂಡಾಡಿದರು.

ಶಿಕ್ಷಣ ದುಬಾರಿಯಾಗಿದೆ:

ಬ್ಯಾಂಕ್​ಗಳು ಉನ್ನತ ಶಿಕ್ಷಣಕ್ಕೆ ಸಾಲ ನೀಡುವುದಿಲ್ಲ. ಆದ್ರೆ ಮನೆಯ 2ನೇ ಅಥವಾ 3ನೇ ಮಹಡಿಗೆ ಲೋನ್ ಕೊಡುತ್ತವೆ ಎಂದು ಹೇಳುವ ಮೂಲಕ ಬ್ಯಾಂಕ್​ಗಳ ಕುರಿತು ಹಾಸ್ಯವನ್ನೂ ಮಾಡಿದರು.

ಬದಲಾವಣೆಗಳು:

ಆದಾಯ ತೆರಿಗೆಯನ್ನು ಸಡಿಲಗೊಳಿಸಬೇಕು, ಟ್ಯಾಕ್ಸ್ ಹೊರೆಗಳಿಂದ ಹೊರಬರಬೇಕು. ಶಾಪ್ ಅಂಡ್ ಎಷ್ಟಾಬ್ಲಿಶ್​​ ಮೆಂಟ್ ಆಕ್ಟ್ ನಂತ ನಿಯಮಗಳನ್ನು ತೆಗೆದು ಹಾಕಬೇಕು. ಇದರಿಂದ ವ್ಯಾಪಾರ ವಹಿವಾಟು ಸಲಿಸಾಗುತ್ತದೆ ಎಂದರು.

ಬೆಂಗಳೂರು: ಆರ್ಥಿಕ ಹಿಂಜರಿತ ಇಡೀ ವಿಶ್ವದಲ್ಲಿ ಆಗುತ್ತಿದ್ದು, ಭಾರತದ ಮೇಲೆ ಯಾವ ರೀತಿ ಪರಿಣಾಮ ಬೀರುವುದಿಲ್ಲ. ಕಡಿಮೆ ಸೂಚ್ಯಾಂಕಗಳು ಕೇವಲ ತ್ರೈಮಾಸಿಕ ವರದಿ ಮಾತ್ರ ಎಂದು ಐಐಎಂ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ವೈದ್ಯನಾಥನ್ ಎಫ್​​ಕೆಸಿಸಿಐನಲ್ಲಿ ಹೇಳಿದ್ದಾರೆ.

1999 ರಲ್ಲಿ ಈಶಾನ್ಯ ಏಷ್ಯಾ ಕಂಡದಲ್ಲಿ ಆರ್ಥಿಕ ಹಿಂಜರಿತ ಆಗಿತ್ತು. 2005- 06 ರ ಮದ್ಯ ಲ್ಯಾಟಿನ್ ಅಮೆರಿಕನ್​ನಲ್ಲಿ ಆರ್ಥಿಕ ಹಿಂಜರಿತ ಆಗಿತ್ತು. 7 ವರ್ಷಗಳಿಂದ ಗ್ರೀಸ್, ಜರ್ಮನಿ ಹಾಗೂ ಇನ್ನಿತರ ಯುರೋಪಿಯನ್ ರಾಷ್ಟ್ರಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿವೆ. ಇದಕ್ಕೆ ವಿಶ್ವ ಆರ್ಥಿಕ ಹಿಂಜರಿತ ಎನ್ನಲಾಗಿದೆ ಎಂದು ಅರ್ಥಶಾಸ್ತ್ರಜ್ಞ ವೈದ್ಯನಾಥನ್ ವಿವರಿಸಿದರು.

ಜಿ- 7 ರಾಷ್ಟ್ರಗಳು ಆರ್ಥಿಕವಾಗಿ ಕುಸಿತ ಕಾಣುತ್ತಿದ್ದು, ವಿಶ್ವ ಜಿಡಿಪಿಯಲ್ಲಿ ಜಿ 7 ಪಾಲು 50.97ರಿಂದ 36.25 ಕುಸಿದಿದೆ. ಇನ್ನೊಂದು ಕಡೆ ಜಿ-7 ಅಲ್ಲದ ರಾಷ್ಟ್ರಗಳ ಜಿಡಿಪಿ ಪಾಲು ಶೇಕಡಾ 35.97 ರಿಂದ 52 ಕ್ಕೆ ಏರಿಕೆ ಆಗಿದೆ. ಇದು ಭಾರತಕ್ಕೆ ಲಾಭದಾಯಕ ಎಂದು ವಿವರಿಸಿದರು.

ಐಐಎಂ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ವೈದ್ಯನಾಥನ್

ಮುಂಬರುವ ವರ್ಷಗಳಲ್ಲಿ ಬ್ರಿಟನ್ ರಾಷ್ಟ್ರ ನಮ್ಮ ದೇಶದ ಬಳಿ ಬಂದು ಆರ್ಥಿಕ ಸಹಾಯಕ್ಕೆ ಕೈಚಾಚುತ್ತದೆ. ಬ್ರಿಟನ್, ಯೂರೋಪ್ ಖಂಡದಿಂದ ಹೊರಬಂದರೆ ಈ ರೀತಿ ಆಗುವುದು ಖಚಿತ ಎಂದು ವೈದ್ಯನಾಥನ್ ಭವಿಷ್ಯ ನುಡಿದರು.

ಹಣ ಉಳಿತಾಯ:

ಭಾರತ ಹಾಗೂ ಚೀನಾ ಶೇಕಡಾ 30 ರಷ್ಟು ಉಳಿತಾಯ ಇದೆ. ಜಿ-7 ರಾಷ್ಟ್ರಗಳು ಶೇ 7 ರಷ್ಟು ಉಳಿತಾಯ ಮಾಡುತ್ತವೆ. ಶೇ 50ರಷ್ಟು ಭಾರತದ ಆರ್ಥಿಕತೆ ಪಾರ್ಟ್ನರ್ ಹಾಗೂ ಮಾಲೀಕತ್ವದ ವ್ಯವಹಾರಗಳ ಮೇಲೆ ನಿಂತಿದೆ. ಇದನ್ನ ಅಸಂಘಟಿತ ಎಂದು ಕರೆಯಲಾಗಿದೆ ಇದು ವಿಷಾದಕರ ಎಂದರು. ಒಬ್ಬ ಭಾರತೀಯ ನಾಗರಿಕ ವರ್ಷಕ್ಕೆ ಸರಾಸರಿ ಶೇ 20ರಷ್ಟು ಅವನ ಜೀವನದ ದುಡಿಮೆಯನ್ನು ಲಂಚವಾಗಿ ನೀಡುತ್ತಾನೆ ಎಂದು ವೈದ್ಯನಾಥನ್ ವಿಷಾದ ವ್ಯಕ್ತಪಡಿಸಿದರು. ಭಾರತದ ಗೃಹಿಣಿಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ, ಇದೆ ನಮ್ಮ ದೇಶದ ಆರ್ಥಿಕತೆಯ ಶಕ್ತಿ ಎಂದೂ ಕೊಂಡಾಡಿದರು.

ಶಿಕ್ಷಣ ದುಬಾರಿಯಾಗಿದೆ:

ಬ್ಯಾಂಕ್​ಗಳು ಉನ್ನತ ಶಿಕ್ಷಣಕ್ಕೆ ಸಾಲ ನೀಡುವುದಿಲ್ಲ. ಆದ್ರೆ ಮನೆಯ 2ನೇ ಅಥವಾ 3ನೇ ಮಹಡಿಗೆ ಲೋನ್ ಕೊಡುತ್ತವೆ ಎಂದು ಹೇಳುವ ಮೂಲಕ ಬ್ಯಾಂಕ್​ಗಳ ಕುರಿತು ಹಾಸ್ಯವನ್ನೂ ಮಾಡಿದರು.

ಬದಲಾವಣೆಗಳು:

ಆದಾಯ ತೆರಿಗೆಯನ್ನು ಸಡಿಲಗೊಳಿಸಬೇಕು, ಟ್ಯಾಕ್ಸ್ ಹೊರೆಗಳಿಂದ ಹೊರಬರಬೇಕು. ಶಾಪ್ ಅಂಡ್ ಎಷ್ಟಾಬ್ಲಿಶ್​​ ಮೆಂಟ್ ಆಕ್ಟ್ ನಂತ ನಿಯಮಗಳನ್ನು ತೆಗೆದು ಹಾಕಬೇಕು. ಇದರಿಂದ ವ್ಯಾಪಾರ ವಹಿವಾಟು ಸಲಿಸಾಗುತ್ತದೆ ಎಂದರು.

Intro:Body:ವಿಶ್ವ ಮಟ್ಟದ ಆರ್ಥಿಕ ಹಿಂಜರಿತ ಭಾರತಕ್ಕೆ ಯಾವುದೇ ಪರಿಣಾಮ ಒರುವುದಿಲ್ಲ : ಅರ್ಥಶಾಸ್ತ್ರಜ್ಞಾ ವೈದ್ಯನಾಥನ್

ಬೆಂಗಳೂರು: ಆರ್ಥಿಕ ಹಿಂಜರಿತ ಇಡೀ ವಿಶ್ವದಲ್ಲಿ ಆಗುತ್ತಿದ್ದು ಭಾರತದ ಮೇಲೆ ಯಾವ ರೀತಿ ಪರಿಣಾಮಗಳು ಬೀರುವುದಿಲ್ಲ, ಕಡಿಮೆ ಸುಚ್ಯಾಂಕಗಳು ಕೇವಲ ತ್ರೈಮಾಸಿಕ ವರದಿ ಮಾತ್ರ ಎಂದು ಐಐಎಂ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕ ವೈದ್ಯನಾಥನ್ ಎಫ್ ಕೆ ಸಿ ಸಿ ಐನಲ್ಲಿ ಹೇಳಿದರು.


1999 ರಲ್ಲಿ ಈಶಾನ್ಯ ಏಷಿಯಾ ಕಂಡದಲ್ಲಿ ಆರ್ಥಿಕ ಹಿಂಜರಿತ ಆಗಿತ್ತು.2005 06 ರ ಮದ್ಯ ಲ್ಯಾಟಿನ್ ಅಮೆರಿಕನ್ ಆರ್ಥಿಕ ಹಿಂಜರಿತ ಆಗಿತ್ತು, 7 ವರ್ಷಗಳಿಂದ ಗ್ರೀಸ್, ಜರ್ಮನಿ ಹಾಗೂ ಇನ್ನಿತರ ಯುರೋಪಿಯನ್ ರಾಷ್ಟ್ರಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿದೆ ಇದಕ್ಕೆ ವಿಶ್ವ ಆರ್ಥಿಕ ಹಿಂಜರಿತ ಎನ್ನಲಾಗಿದೆ ಎಂದು ಅರ್ಥಶಾಸ್ತ್ರಜ್ಞಾ ವೈದ್ಯನಾಥನ್ ವಿವರಿಸಿದರು.

ಜಿ 7 ರಾಷ್ಟ್ರಗಳು ಆರ್ಥಿಕವಾಗಿ ಬಿಳುತ್ತಿದು ವಿಶ್ವ ಜಿಡಿಪಿಯಲ್ಲಿ ಜಿ 7 ಪಾಲು 50.97ರಿಂದ 36.25 ಕುಸಿದಿದೆ. ಇನ್ನೊಂದು ಕಡೆ ಜಿ7 ಅಲ್ಲದ ರಾಷ್ಟ್ರಗಳು ಶೇಕಡ 35.97 ರಿಂದ 52 ಶೇಕದಕ್ಕೆ ಏರಿಕೆ ಆಗಿದೆ. ಇದು ಭಾರತಕ್ಕೆ ಲಾಭದಾಯಕ ಎಂದು ವಿವರಿಸಿದರು

ಮುಂಬರುವ ವರ್ಷಗಳಲ್ಲಿ ಬ್ರಿಟನ್ ರಾಷ್ಟ್ರ ನಮ್ಮ ದೇಶದ ಬಳಿ ಬಂದು ಆರ್ಥಿಕ ಸಹಾಯಕ್ಕೆ ಕೈಚಾಚುತ್ತಾರೆ. ಬ್ರಿಟನ್ ಯೂರೋಪ್ ಖಂಡದಿಂದ ಹೊರಬಂದರೆ ಈ ರೀತಿ ಆಗುವುದು ಖಚಿತ ಎಂದು ವೈದ್ಯನಾಥನ್ ಭವಿಷ್ಯ ನುಡಿದರು.

ಹಣ ಉಳಿತಾಯ:
ಭಾರತ ಹಾಗೂ ಚೀನಾ ಶೇಕಡ 30 ರಷ್ಟು ಉಳಿತಾಯ ಇದೆ.ಜಿ7 ರಾಷ್ಟ್ರಗಳು 7% ಅಷ್ಟೇ ಉಳಿತಾಯ ಮಾಡುತ್ತಾರೆ.
50% ಭಾರತದ ಆರ್ಥಿಕತೆ ಪಾರ್ಟ್ನರ್ ಹಾಗೂ ಮಾಲೀಕತ್ವದ ವ್ಯವಹಾರಗಳ ಮೇಲೆ ನಿಂತಿದೆ. ಇದನ್ನ ಅಸಂಘಟಿತ ಎಂದು ಕರೆಯಲಾಗಿದೆ ಇದು ವಿಷಾದಕರ ಎಂದರು. ಒಬ್ಬ ಭಾರತೀಯ ನಾಗರಿಕ ವರ್ಷಕ್ಕೆ ಸರಾಸರಿ 20% ಅವನ ಜೀವನದ ದುಡಿಮೆಯನ್ನು ಲಂಚವಾಗಿ ನೀಡುತ್ತಾನೆ ಎಂದು ವೈದ್ಯನಾಥನ್ ಹೇಳಿದರು.
ನಮ್ಮ ಭಾರತದ ಗೃಹಿಣಿಯರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ, ಇದೆ ನಮ್ಮ ದೇಶದ ಆರ್ಥಿಕ ಶಕ್ತಿ ಕಾಪಾಡುತ್ತದೆ.

ಶಿಕ್ಷಣ ದುಭಾರಿಯಾಗಿದೆ
ಬ್ಯಾಂಕ್ ಗಳು ಉನ್ನತ ಶಿಕ್ಷಣಕ್ಕೆ ಸಾಲ ನೀಡುವುದಿಲ್ಲ, ಇದು ಮನೆಯ 2ನೆ ಅಥವಾ 3ನೆ ಮಹಡಿಗೆ ಲೋನ್ ಕೊಡಲಾಗುವುದು ಎಂದಹಾಗೆ ಎಂದು ಹಾಸ್ಯಮಾಡಿದರು.


ಬದಲಾವಣೆಗಳು:
ಆದಾಯ ತೆರಿಗೆಯನ್ನು ಸಡಿಲಗೊಳಿಸಬೇಕು,
ಟ್ಯಾಕ್ಸ್ ಹೊರೆಗಳಿಂದ ಹೊರೆಬರಬೇಕು, ಶಾಪ್ ಅಂಡ್ ಎಷ್ಟಾಬಲಿಶ್ ಮೆಂಟ್ ಆಕ್ಟ್ ನಂತ ನಿಯಮಗಳನ್ನು ತೆಗೆಯಬೇಕು. ಇದರಿಂದ ವ್ಯಾಪಾರ ವಹಿವಾಟು ಸಲಿಸಾಗುತ್ತದೆ ಎಂದರು.


ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಎಫ್ ಕೆ ಸಿ ಸಿ ಐ ಅಧ್ಯಕ್ಷ ಸಿ ಆರ್ ಜನಾರ್ಧನ್, ವಿಶ್ವೇಶ್ವರಯ್ಯ ಅರ್ಥಶಾಸ್ತ್ರ ಕೇಂದ್ರದ ಅಧ್ಯಕ್ಷ ಡಿ ಮುರಳೀಧರ್ ಹಾಗೂ ಎಫ್ ಕೆ ಸಿ ಸಿ ಐ ಸದಸ್ಯರು ಉಪಸ್ಥಿತರಿದ್ದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.