ETV Bharat / state

ಸಿಡಿ ಕೇಸ್​: ನಾಳೆ ಎಸ್​ಐಟಿ ಮುಂದೆ ವಿಚಾರಣೆಗೆ ಹಾಜರಾಗ್ತಾರಾ ಮಾಜಿ ಸಚಿವ?

author img

By

Published : Apr 1, 2021, 6:56 PM IST

ಸಿಡಿ ಪ್ರಕರಣ ಸಂಬಂಧ ಅಜ್ಞಾತ ಸ್ಥಳದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ವಿಶೇಷ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತಾರಾ? ಇಲ್ಲವಾ? ಎಂಬ ಅನುಮಾನ ಶುರುವಾಗಿದೆ‌‌‌.

ramesh jarakiholi
ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ಸಂಬಂಧ ಅಜ್ಞಾತ ಸ್ಥಳದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ವಿಶೇಷ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತಾರಾ? ಇಲ್ಲವಾ? ಎಂಬ ಅನುಮಾನ ಶುರುವಾಗಿದೆ‌‌‌.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ ದೂರಿನ ಮೇರೆಗೆ ಈಗಾಗಲೇ ಮೂರು ಬಾರಿ ತನಿಖಾಧಿಕಾರಿಗಳ ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗಿದ್ದರು. ವಿಚಾರಣೆ ವೇಳೆ ಮಾಜಿ ಸಚಿವ ಜಾರಕಿಹೊಳಿಗೆ ಕೇಳಿದ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲು ವಕೀಲರೊಂದಿಗೆ ಚರ್ಚಿಸಿ ಹೇಳಿಕೆ ನೀಡಲು ಕಾಲಾವಕಾಶ ಕೋರಿದ್ದರು‌‌.‌ ಇದರಂತೆ ನಾಲ್ಕು ದಿನಗಳ ಅವಕಾಶ ನೀಡಿದ್ದ ಎಸ್ಐಟಿ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.‌ ಸದ್ಯ ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾಗ್ತಿರುವ ಜಾರಕಿಹೊಳಿ ಶುಕ್ರವಾರ ವಿಚಾರಣೆ ಹಾಜರಾಗಬೇಕಿದೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ನಕಲಿ ಸಿಡಿ ಎಂದು ಸರ್ಮಥಿಸಿಕೊಳ್ಳುತ್ತಿರುವ ರಮೇಶ್​ ಜಾರಕಿಹೊಳಿ ಶುಕ್ರವಾರ ವಿಚಾರಣೆಗೆ ಹಾಜರಾದರೆ ಯುವತಿ ನೀಡಿರುವ ಹೇಳಿಕೆಗಳನ್ನು ಆಧರಿಸಿ ತನಿಖಾಧಿಕಾರಿಗಳು ಪ್ರಶ್ನಿಸಲಿದ್ದಾರೆ. ಸಿಆರ್ ಪಿಸಿ 164 ಹಾಗೂ 161ನಡಿ ನ್ಯಾಯಾಧೀಶರ ಹಾಗೂ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಜಾರಕಿಹೊಳಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವರು, ಇದೀಗ ಕಾನೂನು ತಜ್ಞರ ಅಭಿಪ್ರಾಯ ಪಡೆದು ತೆರೆಮರೆಯಲ್ಲಿ‌ ಜಾಮೀನು ಅರ್ಜಿ ಸಲ್ಲಿಸಲು ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ‌‌.

ಮಾಜಿ ಸಚಿವರಿಗೆ ಮಗ್ಗಲ ಮುಳ್ಳಾಗುತ್ತಾ ಯುವತಿ ಹೇಳಿಕೆ?

ಮೂರು ಬಾರಿ ವಿಚಾರಣೆಗೆ ಜಾರಕಿಹೊಳಿ ಹಾಜರಾದಾಗ ಯುವತಿ ವಿಡಿಯೋ ಹೇಳಿಕೆ ಹಾಗೂ ಎಫ್ಐಆರ್ ಪ್ರತಿ ಬಿಟ್ಟು ಯಾವುದೇ ಸಾಕ್ಷ್ಯ ಎಸ್ಐಟಿ ಬಳಿ ಇರಲಿಲ್ಲ. ಸದ್ಯ ಯುವತಿಯೇ ನೇರವಾಗಿ ನ್ಯಾಯಾಧೀಶರ ಮುಂದೆ ಸೆಕ್ಷನ್​ 164ರ ಅಡಿ ಹೇಳಿಕೆ ನೀಡಿದ್ದಾಳೆ. 161ರಡಿ ತನಿಖಾಧಿಕಾರಿ ಮುಂದೆಯೂ ಹೇಳಿಕೆಯನ್ನ ನೀಡಿ 300ಕ್ಕೂ ಅಧಿಕ ಸ್ಕ್ರೀನ್ ಶಾಟ್ ಡಾಕ್ಯುಮೆಂಟ್ ಕೊಟ್ಟಿದ್ದಾಳೆ ಎನ್ನಲಾಗ್ತಿದೆ.

ಮಾಜಿ ಸಚಿವರು ಕರೆ ಮಾಡಿದ್ದಾರೆ ಎನ್ನಲಾದ ವಾಟ್ಸಾಪ್ ಕಾಲ್, ವಿಡಿಯೋ ಕಾಲ್ ಸ್ಕ್ರೀನ್ ಶಾಟ್ಸ್ ಹಾಗೂ ಕೆಲವೊಂದು ಜ್ಯುವೆಲ್ಲರಿ ಗಿಫ್ಟ್ ಬಿಲ್ ಗಳನ್ನು ತನಿಖಾಧಿಕಾರಿಗೆ ಯುವತಿ ನೀಡಿದ್ದು, ಇವೆಲ್ಲಾ ಸಾಕ್ಷ್ಯಾಧಾರಗಳ‌ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ರಮೇಶ್​ ಜಾರಕಿಹೊಳಿ ಅವರನ್ನು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ಡಿಕೆಶಿ ರಾಜೀನಾಮೆಗೆ ಲಖನ್ ಜಾರಕಿಹೊಳಿ ಆಗ್ರಹ

ಈ ಹಿಂದೆ ಕೇಳಿದ ಎಲ್ಲ ಪ್ರಶ್ನೆಗಳಿಗೂ ಗೊತ್ತಿಲ್ಲ, ವಕೀಲರನ್ನ ಕೇಳಿ ಹೇಳುತ್ತೇನೆ. ಅದು ನಾನಲ್ಲ, ಅದು ನಕಲಿ ಸಿಡಿ. ಯುವತಿ ಯಾರು ಅಂತಾನೇ ಗೊತ್ತಿಲ್ಲ ಅಂದಿದ್ದ ಮಾಜಿ ಸಚಿವ ಶುಕ್ರವಾರ ವಿಚಾರಣೆಗೆ ಬಂದರೆ ತನಿಖಾಧಿಕರಿಗಳ ಪ್ರಶ್ನೆಗಳಿಗೆ ಹೇಗೆ ಉತ್ತರಿಸಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ‌.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ಸಂಬಂಧ ಅಜ್ಞಾತ ಸ್ಥಳದಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಾಳೆ ವಿಶೇಷ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತಾರಾ? ಇಲ್ಲವಾ? ಎಂಬ ಅನುಮಾನ ಶುರುವಾಗಿದೆ‌‌‌.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ ದೂರಿನ ಮೇರೆಗೆ ಈಗಾಗಲೇ ಮೂರು ಬಾರಿ ತನಿಖಾಧಿಕಾರಿಗಳ ವಿಚಾರಣೆಗೆ ರಮೇಶ್ ಜಾರಕಿಹೊಳಿ ಹಾಜರಾಗಿದ್ದರು. ವಿಚಾರಣೆ ವೇಳೆ ಮಾಜಿ ಸಚಿವ ಜಾರಕಿಹೊಳಿಗೆ ಕೇಳಿದ ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಲು ವಕೀಲರೊಂದಿಗೆ ಚರ್ಚಿಸಿ ಹೇಳಿಕೆ ನೀಡಲು ಕಾಲಾವಕಾಶ ಕೋರಿದ್ದರು‌‌.‌ ಇದರಂತೆ ನಾಲ್ಕು ದಿನಗಳ ಅವಕಾಶ ನೀಡಿದ್ದ ಎಸ್ಐಟಿ ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.‌ ಸದ್ಯ ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾಗ್ತಿರುವ ಜಾರಕಿಹೊಳಿ ಶುಕ್ರವಾರ ವಿಚಾರಣೆ ಹಾಜರಾಗಬೇಕಿದೆ.

ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ನಕಲಿ ಸಿಡಿ ಎಂದು ಸರ್ಮಥಿಸಿಕೊಳ್ಳುತ್ತಿರುವ ರಮೇಶ್​ ಜಾರಕಿಹೊಳಿ ಶುಕ್ರವಾರ ವಿಚಾರಣೆಗೆ ಹಾಜರಾದರೆ ಯುವತಿ ನೀಡಿರುವ ಹೇಳಿಕೆಗಳನ್ನು ಆಧರಿಸಿ ತನಿಖಾಧಿಕಾರಿಗಳು ಪ್ರಶ್ನಿಸಲಿದ್ದಾರೆ. ಸಿಆರ್ ಪಿಸಿ 164 ಹಾಗೂ 161ನಡಿ ನ್ಯಾಯಾಧೀಶರ ಹಾಗೂ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಜಾರಕಿಹೊಳಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವರು, ಇದೀಗ ಕಾನೂನು ತಜ್ಞರ ಅಭಿಪ್ರಾಯ ಪಡೆದು ತೆರೆಮರೆಯಲ್ಲಿ‌ ಜಾಮೀನು ಅರ್ಜಿ ಸಲ್ಲಿಸಲು ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ‌‌.

ಮಾಜಿ ಸಚಿವರಿಗೆ ಮಗ್ಗಲ ಮುಳ್ಳಾಗುತ್ತಾ ಯುವತಿ ಹೇಳಿಕೆ?

ಮೂರು ಬಾರಿ ವಿಚಾರಣೆಗೆ ಜಾರಕಿಹೊಳಿ ಹಾಜರಾದಾಗ ಯುವತಿ ವಿಡಿಯೋ ಹೇಳಿಕೆ ಹಾಗೂ ಎಫ್ಐಆರ್ ಪ್ರತಿ ಬಿಟ್ಟು ಯಾವುದೇ ಸಾಕ್ಷ್ಯ ಎಸ್ಐಟಿ ಬಳಿ ಇರಲಿಲ್ಲ. ಸದ್ಯ ಯುವತಿಯೇ ನೇರವಾಗಿ ನ್ಯಾಯಾಧೀಶರ ಮುಂದೆ ಸೆಕ್ಷನ್​ 164ರ ಅಡಿ ಹೇಳಿಕೆ ನೀಡಿದ್ದಾಳೆ. 161ರಡಿ ತನಿಖಾಧಿಕಾರಿ ಮುಂದೆಯೂ ಹೇಳಿಕೆಯನ್ನ ನೀಡಿ 300ಕ್ಕೂ ಅಧಿಕ ಸ್ಕ್ರೀನ್ ಶಾಟ್ ಡಾಕ್ಯುಮೆಂಟ್ ಕೊಟ್ಟಿದ್ದಾಳೆ ಎನ್ನಲಾಗ್ತಿದೆ.

ಮಾಜಿ ಸಚಿವರು ಕರೆ ಮಾಡಿದ್ದಾರೆ ಎನ್ನಲಾದ ವಾಟ್ಸಾಪ್ ಕಾಲ್, ವಿಡಿಯೋ ಕಾಲ್ ಸ್ಕ್ರೀನ್ ಶಾಟ್ಸ್ ಹಾಗೂ ಕೆಲವೊಂದು ಜ್ಯುವೆಲ್ಲರಿ ಗಿಫ್ಟ್ ಬಿಲ್ ಗಳನ್ನು ತನಿಖಾಧಿಕಾರಿಗೆ ಯುವತಿ ನೀಡಿದ್ದು, ಇವೆಲ್ಲಾ ಸಾಕ್ಷ್ಯಾಧಾರಗಳ‌ ಆಧಾರದ ಮೇಲೆ ಎಸ್ಐಟಿ ಅಧಿಕಾರಿಗಳು ರಮೇಶ್​ ಜಾರಕಿಹೊಳಿ ಅವರನ್ನು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ಸಿಡಿ ಪ್ರಕರಣ: ಡಿಕೆಶಿ ರಾಜೀನಾಮೆಗೆ ಲಖನ್ ಜಾರಕಿಹೊಳಿ ಆಗ್ರಹ

ಈ ಹಿಂದೆ ಕೇಳಿದ ಎಲ್ಲ ಪ್ರಶ್ನೆಗಳಿಗೂ ಗೊತ್ತಿಲ್ಲ, ವಕೀಲರನ್ನ ಕೇಳಿ ಹೇಳುತ್ತೇನೆ. ಅದು ನಾನಲ್ಲ, ಅದು ನಕಲಿ ಸಿಡಿ. ಯುವತಿ ಯಾರು ಅಂತಾನೇ ಗೊತ್ತಿಲ್ಲ ಅಂದಿದ್ದ ಮಾಜಿ ಸಚಿವ ಶುಕ್ರವಾರ ವಿಚಾರಣೆಗೆ ಬಂದರೆ ತನಿಖಾಧಿಕರಿಗಳ ಪ್ರಶ್ನೆಗಳಿಗೆ ಹೇಗೆ ಉತ್ತರಿಸಲಿದ್ದಾರೆ ಎಂಬುದು ಸದ್ಯದ ಕುತೂಹಲವಾಗಿದೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.