ETV Bharat / state

ಅನ್ನದಾತನ ಆಕ್ರೋಶಕ್ಕೆ ಕಾರಣವಾದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ... ಅಷ್ಟಕ್ಕೂ ಏನಿದೆ ಅದರಲ್ಲಿ?

author img

By

Published : Jun 10, 2019, 5:39 PM IST

Updated : Jun 10, 2019, 7:46 PM IST

ಕೇಂದ್ರದಲ್ಲಿ ಯುಪಿಎ ಸರ್ಕಾರ 2014ರಲ್ಲಿ ರೈತರಿಗೆ ಅನುಕೂಲವಾಗಲೆಂದು ದುಪ್ಪಟ್ಟು ಪರಿಹಾರ ನೀಡುವ, ಜನಾಭಿಪ್ರಾಯಕ್ಕೆ ಆದ್ಯತೆ ನೀಡುವ ಭೂ ಸ್ವಾಧೀನ, ನ್ಯಾಯಯುತ ನಷ್ಟ ಪರಿಹಾರದ ಹಕ್ಕು, ಪುನರ್ವಸತಿ, ಪುನರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಧಿನಿಯಮ-2013ನ್ನು ಜಾರಿಗೆ ತಂದಿತ್ತು.

ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ

ಬೆಂಗಳೂರು: ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಇದೀಗ ರೈತರ ಕಣ್ಣು ಕೆಂಪಾಗಿಸಿದ್ದು, ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಮೈತ್ರಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರೈತರ ಕೆಂಗಣ್ಣಿಗೆ ಗುರಿಯಾಗಲು ಕಾರಣವೇನು?

ಕೇಂದ್ರದಲ್ಲಿ ಯುಪಿಎ ಸರ್ಕಾರ 2014ರಲ್ಲಿ ರೈತರಿಗೆ ಅನುಕೂಲವಾಗಲೆಂದು ದುಪ್ಪಟ್ಟು ಪರಿಹಾರ ನೀಡುವ, ಜನಾಭಿಪ್ರಾಯಕ್ಕೆ ಆದ್ಯತೆ ನೀಡುವ ಭೂ ಸ್ವಾಧೀನ ಅಧಿನಿಯಮ-2013ನ್ನು ಜಾರಿಗೆ ತಂದಿತ್ತು.

ರೈತ ಸ್ನೇಹಿಯಾಗಿದ್ದ ಈ ಮೂಲ ಕಾಯ್ದೆಗೆ ತಿದ್ದುಪಡಿ ತಂದಿರುವ ಮೈತ್ರಿ ಸರ್ಕಾರ, ಫೆ. 13, 2019ರ ಬಜೆಟ್ ಅಧಿವೇಶನದಲ್ಲಿ ಯಾವುದೇ ಚರ್ಚೆಗಳಲಿಲ್ಲದೆ ಗದ್ದಲದ ನಡುವೆ 'ಭೂ ಸ್ವಾಧೀನ (ಕರ್ನಾಟಕ ತಿದ್ದುಪಡಿ) ವಿಧೇಯಕ-2019'ನ್ನು ಅಂಗೀಕರಿಸಿತ್ತು.

ಸದನದಲ್ಲಿ ಅಂಗೀಕರಿಸಿದ ತಿದ್ದುಪಡಿ ವಿಧೇಯಕವನ್ನು ಸದ್ಯ ರಾಷ್ಟ್ರಪತಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ. ರೈತರ ಹಿತಾಸಕ್ತಿಗೆ ಮಾರಕವಾಗಿರುವ ಈ ಭೂ ಸ್ವಾಧೀನ ತಿದ್ದುಪಡಿ‌ ಕಾಯ್ದೆ ರೈತ ಹೋರಾಟಗಾರರನ್ನು ಬೀದಿಗಿಳಿಯುವಂತೆ ಮಾಡಿದೆ.

ತಿದ್ದುಪಡಿ ತರಲು ಸರ್ಕಾರ ಕೊಟ್ಟ ಕಾರಣ

  • ಗುಜರಾತ್, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸರ್ಕಾರಗಳು ತಮಗೆ ಅನುವಾಗುವಂತೆ ಮೂಲ ಭೂ ಸ್ವಾಧೀನ ಕಾಯ್ದೆ-2013ಕ್ಕೆ ಕೆಲ ತಿದ್ದುಪಡಿಗಳನ್ನು ತಂದಿವೆ
  • ಮೂಲಭೂತ ಸೌಕರ್ಯ ಯೋಜನೆ, ರಾಷ್ಟ್ರೀಯ ಹೆದ್ದಾರಿ ಯೋಜನೆ, ಕುಡಿಯುವ ನೀರಿನ ಯೋಜನೆ, ಇತರ ಬೃಹತ್ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಮೂಲ‌ ಭೂ ಸ್ವಾಧೀನ ಕಾಯ್ದೆ ಅಡ್ಡಿ
  • ರಾಜ್ಯದಲ್ಲಿ ಹಲವು ಪ್ರಮುಖ ಯೋಜನೆಗಳಿಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಮೂಲ‌ ಅಧಿನಿಯಮ‌ ತೊಂದರೆ
  • ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭೂ ಸ್ವಾಧೀನಕ್ಕೆ ಅನುವಾಗಲು ಕಾಯ್ದೆಗೆ ತಿದ್ದುಪಡಿ


ಕೇಂದ್ರದ ಮೂಲ ಅಧಿನಿಯಮದಲ್ಲಿ ಏನಿದೆ?

  • ಯಾವುದೇ ಯೋಜನೆಗಳ ಭೂ ಸ್ವಾಧೀನಕ್ಕಾಗಿ ಶೇ. 80ರಷ್ಟು ಜನರ ಸಮ್ಮತಿ ಅಗತ್ಯ.
  • ಯೋಜನೆಯಿಂದ ಸಮುದಾಯ, ಪರಿಸರದ ಮೇಲಾಗುವ ದುಷ್ಪರಿಣಾಮದ ಪೂರ್ವಭಾವಿ ಅಂದಾಜು ಸಲ್ಲಿಸಬೇಕು.
  • ಸ್ವಾಧೀನ‌ಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡಬೇಕು.
  • ನೀರಾವರಿ ಭೂಮಿ, ಬಹು ಬೆಳೆ ಭೂಮಿ ಸ್ವಾಧೀನ ಮಾಡುವಂತಿಲ್ಲ‌.
  • ಯೋಜನೆಗೆ ಬೇಕಾದಷ್ಟೇ ಭೂ ಸ್ವಾಧೀನ ಮಾಡಬೇಕು.
  • ಐದು ವರ್ಷದೊಳಗೆ ಭೂಮಿಯನ್ನು ಅದೇ ಉದ್ದೇಶಕ್ಕೆ ಬಳಸದಿದ್ದರೆ ರೈತರಿಗೆ ಭೂಮಿ ವಾಪಸ್​​.


ರಾಜ್ಯ ಸರ್ಕಾರದ ತಿದ್ದುಪಡಿ ಕಾಯ್ದೆಯಲ್ಲೇನಿದೆ?

  • ರಾಷ್ಟ್ರೀಯ ಭದ್ರತೆ, ಮೂಲ ಸೌಕರ್ಯ, ನೀರಾವರಿ, ಕುಡಿಯುವ ನೀರು, ಕೈಗಾರಿಕೆ, ವಸತಿ ಇತರ ಬೃಹತ್ ಯೋಜನೆಗಳಿಗೆ ಭೂ ಪರಿಹಾರ ಕಾಯ್ದೆ ಅನ್ವಯಿಸಲ್ಲ.
  • ಈ ವಿನಾಯಿತಿಯಿಂದ ರೈತರಿಗೆ ಭೂ ಪರಿಹಾರವಾಗಿ ಮಾರುಕಟ್ಟೆ ಬೆಲೆಯ ದುಪ್ಪಟ್ಟು ಪರಿಹಾರ ಸಿಗುವುದಿಲ್ಲ. ಮಾರ್ಗಸೂಚಿ ದರದಲ್ಲಿ ಪರಿಹಾರ ಸಿಗಲಿದೆ.
  • ಗೃಹ ಮಂಡಳಿ, ಹೆದ್ದಾರಿ, ಕೈಗಾರಿಕೆ, ವಸತಿ ಹಾಗೂ ನಿವೇಶನ ಯೋಜನೆಗಳಿಗಾಗಿ ರಾಜ್ಯದ ಆರು ವಿವಿಧ ಕಾಯ್ದೆಗಳಡಿ ಸ್ವಾಧೀನ ಪಡಿಸುವ ಭೂಮಿಗಳಿಗೆ ಕೇಂದ್ರದ ಭೂ ಸ್ವಾಧೀನ ಕಾಯ್ದೆ ಅನ್ವಯಿಸಲ್ಲ.
  • ಕೇಂದ್ರದ ಕಾಯ್ದೆಯಲ್ಲಿ ಪುನರ್ವಸತಿ, ಪುನರ್ವ್ಯವಸ್ಥೆ ಕಡ್ಡಾಯವಾಗಿದ್ದರೆ, ತಿದ್ದುಪಡಿ ಕಾಯ್ದೆಯಲ್ಲಿ ಅದರ ಬದಲಿಗೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ನಿರ್ಧರಿಸುವ ಇಡುಗಂಟು (ಇಂತಿಷ್ಟು ಮೊತ್ತ) ಪಾವತಿಸಬಹುದಾಗಿದೆ.
  • ಭೂಮಿಯನ್ನು ಐದು ವರ್ಷದೊಳಗೆ ಬಳಸದಿದ್ದರೆ ಭೂ ಮಾಲೀಕನಿಗೆ ವಾಪಾಸು ಕೊಡುವ ನಿಯಮಕ್ಕೆ ತಿದ್ದುಪಡಿ. ಯೋಜನೆ ಜಾರಿಗೆ ನಿರ್ದಿಷ್ಟಪಡಿಸಿದ ಅವಧಿ ಎಂದು‌ ಮಾರ್ಪಾಡು.
  • ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರ.

ಬೆಂಗಳೂರು: ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಇದೀಗ ರೈತರ ಕಣ್ಣು ಕೆಂಪಾಗಿಸಿದ್ದು, ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಮೈತ್ರಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರೈತರ ಕೆಂಗಣ್ಣಿಗೆ ಗುರಿಯಾಗಲು ಕಾರಣವೇನು?

ಕೇಂದ್ರದಲ್ಲಿ ಯುಪಿಎ ಸರ್ಕಾರ 2014ರಲ್ಲಿ ರೈತರಿಗೆ ಅನುಕೂಲವಾಗಲೆಂದು ದುಪ್ಪಟ್ಟು ಪರಿಹಾರ ನೀಡುವ, ಜನಾಭಿಪ್ರಾಯಕ್ಕೆ ಆದ್ಯತೆ ನೀಡುವ ಭೂ ಸ್ವಾಧೀನ ಅಧಿನಿಯಮ-2013ನ್ನು ಜಾರಿಗೆ ತಂದಿತ್ತು.

ರೈತ ಸ್ನೇಹಿಯಾಗಿದ್ದ ಈ ಮೂಲ ಕಾಯ್ದೆಗೆ ತಿದ್ದುಪಡಿ ತಂದಿರುವ ಮೈತ್ರಿ ಸರ್ಕಾರ, ಫೆ. 13, 2019ರ ಬಜೆಟ್ ಅಧಿವೇಶನದಲ್ಲಿ ಯಾವುದೇ ಚರ್ಚೆಗಳಲಿಲ್ಲದೆ ಗದ್ದಲದ ನಡುವೆ 'ಭೂ ಸ್ವಾಧೀನ (ಕರ್ನಾಟಕ ತಿದ್ದುಪಡಿ) ವಿಧೇಯಕ-2019'ನ್ನು ಅಂಗೀಕರಿಸಿತ್ತು.

ಸದನದಲ್ಲಿ ಅಂಗೀಕರಿಸಿದ ತಿದ್ದುಪಡಿ ವಿಧೇಯಕವನ್ನು ಸದ್ಯ ರಾಷ್ಟ್ರಪತಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ. ರೈತರ ಹಿತಾಸಕ್ತಿಗೆ ಮಾರಕವಾಗಿರುವ ಈ ಭೂ ಸ್ವಾಧೀನ ತಿದ್ದುಪಡಿ‌ ಕಾಯ್ದೆ ರೈತ ಹೋರಾಟಗಾರರನ್ನು ಬೀದಿಗಿಳಿಯುವಂತೆ ಮಾಡಿದೆ.

ತಿದ್ದುಪಡಿ ತರಲು ಸರ್ಕಾರ ಕೊಟ್ಟ ಕಾರಣ

  • ಗುಜರಾತ್, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸರ್ಕಾರಗಳು ತಮಗೆ ಅನುವಾಗುವಂತೆ ಮೂಲ ಭೂ ಸ್ವಾಧೀನ ಕಾಯ್ದೆ-2013ಕ್ಕೆ ಕೆಲ ತಿದ್ದುಪಡಿಗಳನ್ನು ತಂದಿವೆ
  • ಮೂಲಭೂತ ಸೌಕರ್ಯ ಯೋಜನೆ, ರಾಷ್ಟ್ರೀಯ ಹೆದ್ದಾರಿ ಯೋಜನೆ, ಕುಡಿಯುವ ನೀರಿನ ಯೋಜನೆ, ಇತರ ಬೃಹತ್ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಮೂಲ‌ ಭೂ ಸ್ವಾಧೀನ ಕಾಯ್ದೆ ಅಡ್ಡಿ
  • ರಾಜ್ಯದಲ್ಲಿ ಹಲವು ಪ್ರಮುಖ ಯೋಜನೆಗಳಿಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಮೂಲ‌ ಅಧಿನಿಯಮ‌ ತೊಂದರೆ
  • ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭೂ ಸ್ವಾಧೀನಕ್ಕೆ ಅನುವಾಗಲು ಕಾಯ್ದೆಗೆ ತಿದ್ದುಪಡಿ


ಕೇಂದ್ರದ ಮೂಲ ಅಧಿನಿಯಮದಲ್ಲಿ ಏನಿದೆ?

  • ಯಾವುದೇ ಯೋಜನೆಗಳ ಭೂ ಸ್ವಾಧೀನಕ್ಕಾಗಿ ಶೇ. 80ರಷ್ಟು ಜನರ ಸಮ್ಮತಿ ಅಗತ್ಯ.
  • ಯೋಜನೆಯಿಂದ ಸಮುದಾಯ, ಪರಿಸರದ ಮೇಲಾಗುವ ದುಷ್ಪರಿಣಾಮದ ಪೂರ್ವಭಾವಿ ಅಂದಾಜು ಸಲ್ಲಿಸಬೇಕು.
  • ಸ್ವಾಧೀನ‌ಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡಬೇಕು.
  • ನೀರಾವರಿ ಭೂಮಿ, ಬಹು ಬೆಳೆ ಭೂಮಿ ಸ್ವಾಧೀನ ಮಾಡುವಂತಿಲ್ಲ‌.
  • ಯೋಜನೆಗೆ ಬೇಕಾದಷ್ಟೇ ಭೂ ಸ್ವಾಧೀನ ಮಾಡಬೇಕು.
  • ಐದು ವರ್ಷದೊಳಗೆ ಭೂಮಿಯನ್ನು ಅದೇ ಉದ್ದೇಶಕ್ಕೆ ಬಳಸದಿದ್ದರೆ ರೈತರಿಗೆ ಭೂಮಿ ವಾಪಸ್​​.


ರಾಜ್ಯ ಸರ್ಕಾರದ ತಿದ್ದುಪಡಿ ಕಾಯ್ದೆಯಲ್ಲೇನಿದೆ?

  • ರಾಷ್ಟ್ರೀಯ ಭದ್ರತೆ, ಮೂಲ ಸೌಕರ್ಯ, ನೀರಾವರಿ, ಕುಡಿಯುವ ನೀರು, ಕೈಗಾರಿಕೆ, ವಸತಿ ಇತರ ಬೃಹತ್ ಯೋಜನೆಗಳಿಗೆ ಭೂ ಪರಿಹಾರ ಕಾಯ್ದೆ ಅನ್ವಯಿಸಲ್ಲ.
  • ಈ ವಿನಾಯಿತಿಯಿಂದ ರೈತರಿಗೆ ಭೂ ಪರಿಹಾರವಾಗಿ ಮಾರುಕಟ್ಟೆ ಬೆಲೆಯ ದುಪ್ಪಟ್ಟು ಪರಿಹಾರ ಸಿಗುವುದಿಲ್ಲ. ಮಾರ್ಗಸೂಚಿ ದರದಲ್ಲಿ ಪರಿಹಾರ ಸಿಗಲಿದೆ.
  • ಗೃಹ ಮಂಡಳಿ, ಹೆದ್ದಾರಿ, ಕೈಗಾರಿಕೆ, ವಸತಿ ಹಾಗೂ ನಿವೇಶನ ಯೋಜನೆಗಳಿಗಾಗಿ ರಾಜ್ಯದ ಆರು ವಿವಿಧ ಕಾಯ್ದೆಗಳಡಿ ಸ್ವಾಧೀನ ಪಡಿಸುವ ಭೂಮಿಗಳಿಗೆ ಕೇಂದ್ರದ ಭೂ ಸ್ವಾಧೀನ ಕಾಯ್ದೆ ಅನ್ವಯಿಸಲ್ಲ.
  • ಕೇಂದ್ರದ ಕಾಯ್ದೆಯಲ್ಲಿ ಪುನರ್ವಸತಿ, ಪುನರ್ವ್ಯವಸ್ಥೆ ಕಡ್ಡಾಯವಾಗಿದ್ದರೆ, ತಿದ್ದುಪಡಿ ಕಾಯ್ದೆಯಲ್ಲಿ ಅದರ ಬದಲಿಗೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ನಿರ್ಧರಿಸುವ ಇಡುಗಂಟು (ಇಂತಿಷ್ಟು ಮೊತ್ತ) ಪಾವತಿಸಬಹುದಾಗಿದೆ.
  • ಭೂಮಿಯನ್ನು ಐದು ವರ್ಷದೊಳಗೆ ಬಳಸದಿದ್ದರೆ ಭೂ ಮಾಲೀಕನಿಗೆ ವಾಪಾಸು ಕೊಡುವ ನಿಯಮಕ್ಕೆ ತಿದ್ದುಪಡಿ. ಯೋಜನೆ ಜಾರಿಗೆ ನಿರ್ದಿಷ್ಟಪಡಿಸಿದ ಅವಧಿ ಎಂದು‌ ಮಾರ್ಪಾಡು.
  • ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರ.
Intro:Land acquisition Body:KN_BNG_03_10_LANDACQUISITION_AMENDMENTBILL_SCRIPT_VENKAT_7201951

ಅನ್ನದಾತನ ಆಕ್ರೋಶಕ್ಕೆ ಕಾರಣವಾಗಿರುವ ರಾಜ್ಯ ಸರ್ಕಾರದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆಯಲ್ಲೇನಿದೆ?

ಬೆಂಗಳೂರು: ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ಇದೀಗ ರೈತರ ಕಣ್ಣು ಕೆಂಪಾಗಿಸಿದ್ದು, ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಮೈತ್ರಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ ರೈತರ ಕೆಂಗಣ್ಣಿಗೆ ಕಾರಣ ಏನು?.

ಕೇಂದ್ರದಲ್ಲಿ ಯುಪಿಎ ಸರ್ಕಾರ 2014ರಲ್ಲಿ ರೈತರಿಗೆ ಅನುಕೂಲವಾಗಲೆಂದು, ದುಪ್ಪಟ್ಟು ಪರಿಹಾರ ನೀಡುವ, ಜನಾಭಿಪ್ರಾಯಕ್ಕೆ ಆದ್ಯತೆ ನೀಡುವ ಭೂ ಸ್ವಾಧೀನ, ನ್ಯಾಯಯುತ ನಷ್ಟ ಪರಿಹಾರದ ಹಕ್ಕು, ಪುನರ್ವಸತಿ, ಪುನರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಧಿನಿಯಮ-2013ನ್ನು ಜಾರಿಗೆ ತಂದಿತ್ತು. ರೈತ ಸ್ನೇಹಿಯಾಗಿದ್ದ ಈ ಮೂಲ ಕಾಯ್ದೆಗೆ ತಿದ್ದುಪಡಿ ತಂದಿರುವ ಮೈತ್ರಿ ಸರ್ಕಾರ ಫೆ.13, 2019ರ ಬಜೆಟ್ ಅಧಿವೇಶನದಲ್ಲಿ ಯಾವುದೇ ಚರ್ಚೆಗಳಲಿಲ್ಲದೇ, ಗದ್ದಲದ ನಡುವೆ 'ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ-2019'ನ್ನು ಅಂಗೀಕರಿಸಿತ್ತು. ಸದನದಲ್ಲಿ ಅಂಗೀಕರಿಸಿದ ತಿದ್ದುಪಡಿ ವಿಧೇಯಕವನ್ನು ಸದ್ಯ ರಾಷ್ಟ್ರಪತಿ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ. ರೈತರ ಹಿತಾಸಕ್ತಿಗೆ ಮಾರಕವಾಗಿರುವ ಈ ಭೂ ಸ್ವಾಧೀನ ತಿದ್ದುಪಡಿ‌ ಕಾಯ್ದೆ ರೈತ ಹೋರಾಟಗಾರರನ್ನು ಬೀದಿಗಿಳಿಯುವಂತೆ ಮಾಡಿದೆ.

ತಿದ್ದುಪಡಿ ತರಲು ಸರ್ಕಾರ ಕೊಟ್ಟ ಕಾರಣ:

-ಗುಜರಾತ್, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಸರ್ಕಾರಗಳು ತಮಗೆ ಅನುವಾಗುವಂತೆ ಮೂಲ ಭೂ ಸ್ವಾಧೀನ ಕಾಯ್ದೆ-2013ಗೆ ಕೆಲ ತಿದ್ದುಪಡಿಗಳನ್ನು ತಂದಿದೆ

- ಮೂಲಭೂತ ಸೌಕರ್ಯ ಯೋಜನೆ, ರಾಷ್ಟ್ರೀಯ ಹೆದ್ದಾರಿ ಯೋಜನೆ, ಕುಡಿಯುವ ನೀರಿನ ಯೋಜನೆ, ಇತರ ಬೃಹತ್ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಮೂಲ‌ ಭೂ ಸ್ವಾಧೀನ ಕಾಯ್ದೆ ಅಡ್ಡಿ

- ರಾಜ್ಯದಲ್ಲಿ ಹಲವು ಪ್ರಮುಖ ಯೋಜನೆಗಳಿಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲು ಮೂಲ‌ ಅಧಿನಿಯಮ‌ ತೊಂದರೆ

- ರಾಜ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ಭೂ ಸ್ವಾಧೀನ ಮಾಡಲು ಅನುವಾಗಲು ಕಾಯ್ದೆಗೆ ತಿದ್ದುಪಡಿ

ಕೇಂದ್ರದ ಮೂಲ ಅಧಿನಿಯಮದಲ್ಲಿ ಏನಿದೆ?:

- ಯಾವುದೇ ಯೋಜನೆಗಳ ಭೂ ಸ್ವಾಧೀನಕ್ಕಾಗಿ ಶೇ.80 ಜನರ ಸಮ್ಮತಿ ಅಗತ್ಯ

- ಯೋಜನೆಯಿಂದ ಸಮುದಾಯ, ಪರಿಸರದ ಮೇಲಾಗುವ ದುಷ್ಪರಿಣಾಮದ ಪೂರ್ವಭಾವಿ ಅಂದಾಜು ಸಲ್ಲಿಸಬೇಕು

- ಸ್ವಾಧೀನ‌ಪಡಿಸಿಕೊಂಡ ಭೂಮಿಗೆ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು ಪರಿಹಾರ ನೀಡಬೇಕು

- ನೀರಾವರಿ ಭೂಮಿ, ಬಹುಬೆಳೆ ಭೂಮಿ ಸ್ವಾಧೀನ ಮಾಡುವಂತಿಲ್ಲ‌

- ಯೋಜನೆಗೆ ಬೇಕಾದಷ್ಟೇ ಭೂ ಸ್ವಾಧೀನ ಮಾಡಬೇಕು

- ಐದು ವರ್ಷದೊಳಗೆ ಭೂಮಿಯನ್ನು ಅದೇ ಉದ್ದೇಶಕ್ಕೆ ಬಳಸದಿದ್ದರೆ ರೈತರಿಗೆ ಭೂಮಿ ವಾಪಸು

ರಾಜ್ಯ ಸರ್ಕಾರದ ತಿದ್ದುಪಡಿ ಕಾಯ್ದೆಯಲ್ಲೇನಿದೆ?:

- ರಾಷ್ಟ್ರೀಯ ಭದ್ರತೆ, ಮೂಲಸೌಕರ್ಯ, ನೀರಾವರಿ, ಕುಡಿಯುವ ನೀರು, ಕೈಗಾರಿಕೆ, ವಸತಿ, ಇತರ ಬೃಹತ್ ಯೋಜನೆಗಳಿಗೆ ಭೂ ಪರಿಹಾರ ಕಾಯ್ದೆ ಅನ್ವಯಿಸಲ್ಲ.

- ಈ ವಿನಾಯಿತಿಯಿಂದ ರೈತರಿಗೆ ಭೂ ಪರಿಹಾರವಾಗಿ ಮಾರುಕಟ್ಟೆ ಬೆಲೆಯ ದುಪ್ಪಟ್ಟು ಪರಿಹಾರ ಸಿಗುವುದಿಲ್ಲ. ಮಾರ್ಗಸೂಚಿ ದರದಲ್ಲಿ ಪರಿಹಾರ ಸಿಗಲಿದೆ.

- ಗೃಹಮಂಡಳಿ, ಹೆದ್ದಾರಿ, ಕೈಗಾರಿಕೆ, ವಸತಿ ಹಾಗೂ ನಿವೇಶನ ಯೋಜನೆಗಳಿಗಾಗಿ ರಾಜ್ಯದ ಆರು ವಿವಿಧ ಕಾಯ್ದೆಗಳಡಿ ಸ್ವಾಧೀನ ಪಡಿಸುವ ಭೂಮಿಗಳಿಗೆ ಕೇಂದ್ರದ ಭೂ ಸ್ವಾಧೀನ ಕಾಯ್ದೆ ಅನ್ವಯಿಸಲ್ಲ.

- ಕೇಂದ್ರದ ಕಾಯ್ದೆಯಲ್ಲಿ ಪುನರ್ವಸತಿ, ಪುನರ್ವ್ಯವಸ್ಥೆ ಕಡ್ಡಾಯವಾಗಿದ್ದರೆ, ತಿದ್ದುಪಡಿ ಕಾಯ್ದೆಯಲ್ಲಿ ಅದರ ಬದಲಿಗೆ ಭೂಮಿ ಕಳೆದುಕೊಂಡವರಿಗೆ ಸರ್ಕಾರ ನಿರ್ಧರಿಸುವ ಇಡುಗಂಟು (ಇಂತಿಷ್ಟು ಮೊತ್ತ) ಪಾವತಿಸಬಹುದಾಗಿದೆ.

- ಭೂಮಿಯನ್ನು ಐದು ವರ್ಷದೊಳಗೆ ಬಳಸದಿದ್ದರೆ ಭೂ ಮಾಲೀಕನಿಗೆ ವಾಪಾಸು ಕೊಡುವ ನಿಯಮಕ್ಕೆ ತಿದ್ದುಪಡಿ. ಯೋಜನೆ ಜಾರಿಗೆ ನಿರ್ದಿಷ್ಟ ಪಡಿಸಿದ ಅವಧಿ ಎಂದು‌ ಮಾರ್ಪಾಡು.

- ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರConclusion:Venkat
Last Updated : Jun 10, 2019, 7:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.