ETV Bharat / state

ಹೆಲ್ಮೆಟ್ ಹಾಕಿಲ್ಲ ಅಂದ್ರೆ 'ಹೆಲ್- ಮೇಟ್' : ಸಿಲಿಕಾನ್ ಸಿಟಿ ಪೋಲಿಸರ ಹೊಸ ಪ್ರಯೋಗ

ಸಿಲಿಕಾನ್ ಸಿಟಿಯಲ್ಲಿ ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ನೇತೃತ್ವದ ತಂಡ ಕವನ ಹಾಗೂ ಗಾದೆ ಮಾತಿನ ಮೂಲಕ ಅರಿವು ಮೂಡಿಸಿ ಅಪಘಾತ ಪ್ರಕರಣ ನಿಯಂತ್ರಿಸಲು ಮುಂದಾಗಿದ್ದಾರೆ.

author img

By

Published : Mar 11, 2019, 12:43 PM IST

ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಿಲಿಕಾನ್ ಸಿಟಿ ಪೋಲಿಸರ ಕವನದ ಮೂಲಕ ಜಾಗೃತಿ ಮೂಡಿಸುತ್ತಿರುವುದು

ಬೆಂಗಳೂರು : ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅಂತ ಮೈಕ್​ನಲ್ಲಿ ಹೇಳಿ ಟ್ರಾಫಿಕ್ ಪೊಲೀಸರಿಗೆ ಸಾಕಾಗಿದೆ ಅನಿಸುತ್ತೆ. ಅದಕ್ಕೆ ಅವರು ಮತ್ತೊಂದು ರೀತಿಯ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದಾರೆ.

ವಾಹನ ಚಾಲಕರಿಗೆ ಮಾತಿನ ಪೆಟ್ಟು ಬಿದ್ದಿಲ್ಲವೆಂದು ಗಾದೆಯ ಪೆಟ್ಟು ನೀಡಲು ಮಂದಾಗಿರುವ ಸಿಲಿಕಾನ್ ಸಿಟಿ ಪೊಲೀಸರು, ಕವನದ ಮೂಲಕ ಅರಿವು ಮೂಡಿಸಲು ಮುಂದಾಗಿದ್ದಾರೆ. ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸುವ ಸಲುವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಅಂತ ಎಷ್ಟು ಬಾರಿ ಹೇಳಿದರೂ ಜನ ಸುಧಾರಿಸುತ್ತಿಲ್ಲ. ಹೀಗಾಗಿ ಟ್ರಾಫಿಕ್ ಡಿಪಾರ್ಟ್ ಮೆಂಟ್ ಹೊಸ ಜಾಗೃತಿಗೆ ಮುಂದಾಗಿದೆ.

Bangalore
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಿಲಿಕಾನ್ ಸಿಟಿ ಪೋಲಿಸರ ಕವನದ ಮೂಲಕ ಜಾಗೃತಿ ಮೂಡಿಸುತ್ತಿರುವುದು

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗ್ತಿದ್ದಂತೆ ಅಪಘಾತ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ಅದರಲ್ಲೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿ ಅಪಘಾತಕ್ಕೆ ಈಡಾಗುತ್ತಿದ್ದಾರೆ. ಪ್ರತಿದಿನ ಹಲವಾರು ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಟ್ರಾಫಿಕ್ ಪೊಲೀಸರು ಗಾದೆ ಮತ್ತು ಕವನಶೈಲಿಯ ಬರಹದ ಫಲಕಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

Bangalore
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಿಲಿಕಾನ್ ಸಿಟಿ ಪೋಲಿಸರ ಕವನದ ಮೂಲಕ ಜಾಗೃತಿ ಮೂಡಿಸುತ್ತಿರುವುದು

ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ನೇತೃತ್ವದ ತಂಡ ಕವನ ಹಾಗೂ ಗಾದೆ ಬರಹದ ಫಲಕಗಳ ಮೂಲಕ ಅರಿವು ಮೂಡಿಸಿ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಮುಂದಾಗಿದ್ದಾರೆ. "ಹೆಲ್ಮೆಟ್ ಧರಿಸು ಹಿಂದೆ ಕುಳಿತವರಿಗೂ ಹಾಕಿಸು, ಪೊಲೀಸರು ನೋಡಲಿ ಅಂತಲ್ಲ. ಮೆದುಳಿಗೆ ಏಟು ಬಿದ್ದರೆ ಸ್ಟೆಪ್ನಿ ಇಲ್ಲ' ಹೀಗೆ ನಾನಾ ಕವನಗಳನ್ನ ಬರೆದು ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನು ಇದಿಷ್ಟೇ ಅಲ್ಲದೆ, ಹೆಲ್ಮೆಟ್ ಎಷ್ಟು ಪ್ರಾಮುಖ್ಯತೆ ಅನ್ನೋದನ್ನು ತಂದೆ -ಮಗನ ಸಂಭಾಷಣೆಯ ರೀತಿಯಲ್ಲಿ ಹೇಳಿ, 'ಹೆಲ್ಮೆಟ್ ಹಾಕಿಲ್ಲ ಅಂದ್ರೆ ಹೆಲ್- ಮೇಟ್' ಅನ್ನೋ ಬರಹದೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಬೆಂಗಳೂರು : ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಅಂತ ಮೈಕ್​ನಲ್ಲಿ ಹೇಳಿ ಟ್ರಾಫಿಕ್ ಪೊಲೀಸರಿಗೆ ಸಾಕಾಗಿದೆ ಅನಿಸುತ್ತೆ. ಅದಕ್ಕೆ ಅವರು ಮತ್ತೊಂದು ರೀತಿಯ ವಿಶಿಷ್ಟ ಪ್ರಯೋಗಕ್ಕೆ ಮುಂದಾಗಿದ್ದಾರೆ.

ವಾಹನ ಚಾಲಕರಿಗೆ ಮಾತಿನ ಪೆಟ್ಟು ಬಿದ್ದಿಲ್ಲವೆಂದು ಗಾದೆಯ ಪೆಟ್ಟು ನೀಡಲು ಮಂದಾಗಿರುವ ಸಿಲಿಕಾನ್ ಸಿಟಿ ಪೊಲೀಸರು, ಕವನದ ಮೂಲಕ ಅರಿವು ಮೂಡಿಸಲು ಮುಂದಾಗಿದ್ದಾರೆ. ಟ್ರಾಫಿಕ್ ಪೊಲೀಸರು ಜಾಗೃತಿ ಮೂಡಿಸುವ ಸಲುವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಅಂತ ಎಷ್ಟು ಬಾರಿ ಹೇಳಿದರೂ ಜನ ಸುಧಾರಿಸುತ್ತಿಲ್ಲ. ಹೀಗಾಗಿ ಟ್ರಾಫಿಕ್ ಡಿಪಾರ್ಟ್ ಮೆಂಟ್ ಹೊಸ ಜಾಗೃತಿಗೆ ಮುಂದಾಗಿದೆ.

Bangalore
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಿಲಿಕಾನ್ ಸಿಟಿ ಪೋಲಿಸರ ಕವನದ ಮೂಲಕ ಜಾಗೃತಿ ಮೂಡಿಸುತ್ತಿರುವುದು

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗ್ತಿದ್ದಂತೆ ಅಪಘಾತ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ. ಅದರಲ್ಲೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿ ಅಪಘಾತಕ್ಕೆ ಈಡಾಗುತ್ತಿದ್ದಾರೆ. ಪ್ರತಿದಿನ ಹಲವಾರು ಪ್ರಕರಣಗಳು ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಟ್ರಾಫಿಕ್ ಪೊಲೀಸರು ಗಾದೆ ಮತ್ತು ಕವನಶೈಲಿಯ ಬರಹದ ಫಲಕಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

Bangalore
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಸಿಲಿಕಾನ್ ಸಿಟಿ ಪೋಲಿಸರ ಕವನದ ಮೂಲಕ ಜಾಗೃತಿ ಮೂಡಿಸುತ್ತಿರುವುದು

ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ನೇತೃತ್ವದ ತಂಡ ಕವನ ಹಾಗೂ ಗಾದೆ ಬರಹದ ಫಲಕಗಳ ಮೂಲಕ ಅರಿವು ಮೂಡಿಸಿ ಅಪಘಾತ ಪ್ರಕರಣಗಳನ್ನು ನಿಯಂತ್ರಿಸಲು ಮುಂದಾಗಿದ್ದಾರೆ. "ಹೆಲ್ಮೆಟ್ ಧರಿಸು ಹಿಂದೆ ಕುಳಿತವರಿಗೂ ಹಾಕಿಸು, ಪೊಲೀಸರು ನೋಡಲಿ ಅಂತಲ್ಲ. ಮೆದುಳಿಗೆ ಏಟು ಬಿದ್ದರೆ ಸ್ಟೆಪ್ನಿ ಇಲ್ಲ' ಹೀಗೆ ನಾನಾ ಕವನಗಳನ್ನ ಬರೆದು ಜಾಗೃತಿ ಮೂಡಿಸುತ್ತಿದ್ದಾರೆ.

ಇನ್ನು ಇದಿಷ್ಟೇ ಅಲ್ಲದೆ, ಹೆಲ್ಮೆಟ್ ಎಷ್ಟು ಪ್ರಾಮುಖ್ಯತೆ ಅನ್ನೋದನ್ನು ತಂದೆ -ಮಗನ ಸಂಭಾಷಣೆಯ ರೀತಿಯಲ್ಲಿ ಹೇಳಿ, 'ಹೆಲ್ಮೆಟ್ ಹಾಕಿಲ್ಲ ಅಂದ್ರೆ ಹೆಲ್- ಮೇಟ್' ಅನ್ನೋ ಬರಹದೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

KN_BNg_02_11_ TRaFiC_7204498_bhavya

ಭವ್ಯ ಶಿಬರೂರು

https://www.facebook.com/464946996873402/posts/2350833531618063/


ಗಾದೆ ಮಾತಿನ ಮೂಲಕ ಜಾಗೃತಿಗೆ ಮುಂದಾದ ಪೊಲೀಸರು
ಕವನದ ಮೂಲಕ ಅರಿವು ಮೂಡಿಸಲು ಹೊರಟ ಟ್ರಾಫಿಕ್ ಡಿಪಾರ್ಟ್ ಮೆಂಟ್

ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಈ ಪದ ಎಷ್ಟು ಬಾರಿ ಕೇಳಿರಲ್ಲ ಹೇಳಿ ಎಲ್ಲಾ ಟ್ರಾಫಿಕ್ ಪೊಲೀಸ್ರು ಜಾಗೃತಿ ಮೂಡಿಸುವ ಸಲುವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿ ಅಂತ  ಹೇಳಿದ್ರು ಕೂಡ ನಮ್ ಮಂದಿ ಸುಧಾರಿಸ್ತಿಲ್ಲ ಹೀಗಾಗಿ ಟ್ರಾಫಿಕ್ ಡಿಪಾರ್ಟ್ ಮೆಂಟ್ ಹೊಸ ಜಾಗೃತಿಗೆ ಮುಂದಾಗಿದೆ ಸಿಲಿಕಾನ್ ಸಿಟಿಲಿ ವಾಹನ ಸಂಖ್ಯೆ ಹೆಚ್ಚಾಗ್ತಿದ್ದಂತೆ ಅಪಘಾತ ಪ್ರಕರಣಗಳೂ ಕೂಡ ಹೆಚ್ಚಾಗ್ತಿದೆ ಅದ್ರಲ್ಲೂ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿ ಅಪಘಾತಕ್ಕೆ ಮುಂದಾಗ್ತಿರುವ ಅದೇಷ್ಟೋ ಪ್ರಕರಣಗಳು ಕಾಣ ಸಿಗುತ್ವೆ ಆದ್ರೆ ಇದಕ್ಕೆ ಸಂಬಂಧಪಟ್ಟ ಹಾಗೆ ಟ್ರಾಫಿಕ್ ಪೊಲೀಸರು ಕೂಡ ಜಾನಪದ ಶೈಲಿಯಲ್ಲಿ ಕೆಲ ಹೋರ್ಡಿಂಗ್ಸ್ ಮೂಲಕ ಜಾಗೃತಿ ಮೂಡಿಸ್ತಿದ್ರು ಸದ್ಯ ಗಾದೆ ಮಾತಿನ ಮೂಲಕ ಜಾಗೃತಿ ಮೂಡಿಸಲು ಪೊಲೀಸರು ಮುಂದಾಗಿದ್ದಾರೆ.ಇನ್ನೂ ಟು ವ್ಹೀಲರ್ ನಲ್ಲಿ ಹೋಗುವ ಮಂದಿಗೆ ಎಷ್ಟೇ ಹೇಳಿದ್ರು ಕೂಡ ಹೆಲ್ಮೆಟ್ ಧರಿಸದೆ ಹೋಗೋದ್ರಿಂದ ಖುದ್ದು ಟ್ರಾಫಿಕ್ ನ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ನೇತೃತ್ವದಲ್ಲಿ ಕೆಲ ಪೊಲೀಸರು ಕವನ ಹಾಗೂ ಗಾದೆ ಮಾತಿನ ಮೂಲಕ ಅರಿವು ಮೂಡಿಸಿ ಅಪಘಾತ ಪ್ರಕರಣ ತಡೆಗಟ್ಟಲು ಸಹಕಾರಿ ಆಗ್ತಿದ್ದಾರೆ. "ಹೆಲ್ಮೆಟ್ ಧರಿಸು ಹಿಂದೆ ಕೂತವರಿಗೂ ಹಾಕಿಸು ಪೊಲೀಸರು ನೋಡಲಿ ಅಂತಲ್ಲ ಮೆದುಳಿಗೆ ಏಟು ಬಿದ್ದರೆ ಸ್ಟೆಪ್ನಿ ಇಲ್ಲ ಸಂಚಾರಿ ಹೀಗೆ ನಾನಾ ಕವನಗಳನ್ನ ಬರೆದು ಜಾಗೃತಿ ಮೂಡಿಸ್ತಿದ್ದಾರೆ. ಇನ್ನೂ ಇದಿಷ್ಟೇ ಅಲ್ಲದೆ, ಹೆಲ್ಮೆಟ್ ಎಷ್ಟು ಪ್ರಾಮುಖ್ಯತೆ ಅನ್ನೋದನ್ನ ತಂದೆ ಮಗನ್ ಕಾನ್ವರ್ಸೇಷನ್ ರೀತಿಯಲ್ಲಿ ಹೇಳಿ ಹೆಲ್ಮೆಟ್ ಹಾಕಿಲ್ಲ ಅಂದ್ರೆ ಹೆಲ್- ಮೇಟ್ ಅನ್ನೋ ಗಾದೆ ಮಾತನ್ನ ಬಳಸಿ ಸೋಷಿಯಲ್ ಮೀಡಿಯಾದಲ್ಲಿ  ಜಾಗೃತಿ ಮೂಡಿಸ್ತಿದ್ದಾರೆ.ಒಟ್ನಲ್ಲಿ ಟ್ರಾಫಿಕ್ ಪೊಲೀಸರು ಅಪಘಾತ ಪ್ರಕರಣವನ್ನ ತಡೆಗಟ್ಟೋಕೆ ಜೊತೆಗೆ ಅದರಿಂದ ಕೆಲ ಜನರ ಪ್ರಾಣ ಉಳಿಸೋಕೆ ಹೊರಟಿರೋದು ಸಂತಸದ ವಿಚಯ ಆದ್ರೆ ವಿಷಯ ಅಂದ್ರೆ ಜಾಗೃತಿ ಮೂಡಿಸೋದು ಮುಖ್ಯ ಅಲ್ಲ.. ಅದನ್ನ ಪಾಲಿಸಿ ಪೊಲೀಸರಿಗೆ ಸಹಕಾರ ನೀಡೋದು ಕೂಡ ಸಾರ್ವಜನಿಕರ ಕರ್ತವ್ಯ..ಇನ್ನಾದ್ರು ಹೆಲ್ಮೆಟ್ ಧರಿಸಿ ನಿಮ್ಮ ಪ್ರಾಣ ಉಳಿಸಿಕೊಳ್ಳೋದ್ರ ಜೊತೆಗೆ ಬೇರೆಯವರ ಪ್ರಾಣವನ್ನೂ ರಕ್ಷಿಸಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.