ETV Bharat / state

ಮಹದಾಯಿ ಸಮಸ್ಯೆ ಕೇಂದ್ರ- ರಾಜ್ಯ ಸೇರಿ ಬಗೆಹರಿಸಬೇಕು:  ಉಗ್ರಪ್ಪ ಆಗ್ರಹ - ಬೆಂಗಳೂರಿನಲ್ಲಿ ನಡೆದ ಕಳಸಾ ಬಂಡೂರಿ ಹೋರಾಟ

ಕಳಸಾ ಬಂಡೂರಿ, ಮಹದಾಯಿ ಹೋರಾಟ ನ್ಯಾಯಯುತವಾದ ಬೇಡಿಕೆ. ಕೂಡಲೇ ರಾಜ್ಯಪಾಲರು ಹೋರಾಟಗಾರರನ್ನು ಭೇಟಿಯಾಗಿ, ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ
author img

By

Published : Oct 18, 2019, 3:48 PM IST

ಬೆಂಗಳೂರು: ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟ ನ್ಯಾಯಯುತವಾಗಿದೆ. ರಾಜ್ಯಪಾಲರು ಅವರ ಮನವಿ ಸ್ವೀಕರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಒತ್ತಾಯಿಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಎರಡು ದಿನಗಳಿಂದ ನಗರದ ರೇಲ್ವೆ ನಿಲ್ದಾಣದ ಬಳಿ ಅಹೋರಾತ್ರಿ ಧರಣಿ ಕುಳಿತಿರುವ ಮಹಾದಾಯಿ ಹೋರಾಟಗಾರರನ್ನು ವಿ.ಎಸ್ ಉಗ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ ಭೇಟಿ ಮಾಡಿದರು.

ಅಂತಾರಾಜ್ಯ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣ ನೀಡಿದ ತೀರ್ಪಿನಂತೆ ನೀರು ಬಳಸಿಕೊಳ್ಳುವುದು ಆಯಾ ಸರ್ಕಾರಗಳ ಜವಾಬ್ದಾರಿ. ಆದರೆ, ರಾಜ್ಯದ ಹಿತ ಕಾಪಾಡುವಲ್ಲಿ ವಿಳಂಬವಾಗುತ್ತಿದೆ ಎಂದರು.

ಇಲ್ಲಿ ಯಾವುದೇ ರಾಜಕಾರಣ ಮಾಡಲು ಬಂದಿಲ್ಲ. ತಮಿಳುನಾಡಿನಲ್ಲಿ ರೈತರ ಸಮಸ್ಯೆಗೆ ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ರಾಜ್ಯಪಾಲರು ಎಲ್ಲರೂ ಒಗ್ಗಟ್ಟಾಗಿ ಪ್ರಧಾನಿಗಳನ್ನು ಭೇಟಿಯಾಗುತ್ತಾರೆ. ಆದರೆ, ರಾಜ್ಯದಲ್ಲಿ ರೈತರು ಎಷ್ಟೇ ಹೋರಾಡಿದರೂ, ರಾಜಕೀಯ ಪಕ್ಷಗಳ ಬೆಂಬಲ ಸಿಗುವುದಿಲ್ಲ ಎಂದು ಹೋರಾಟಗಾರ ವೀರೇಶ್ ಸೊಬರದಮಠ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು: ಕಳಸಾ ಬಂಡೂರಿ ಹಾಗೂ ಮಹದಾಯಿ ಹೋರಾಟ ನ್ಯಾಯಯುತವಾಗಿದೆ. ರಾಜ್ಯಪಾಲರು ಅವರ ಮನವಿ ಸ್ವೀಕರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮಾಜಿ ಸಂಸದ ಉಗ್ರಪ್ಪ ಒತ್ತಾಯಿಸಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಎರಡು ದಿನಗಳಿಂದ ನಗರದ ರೇಲ್ವೆ ನಿಲ್ದಾಣದ ಬಳಿ ಅಹೋರಾತ್ರಿ ಧರಣಿ ಕುಳಿತಿರುವ ಮಹಾದಾಯಿ ಹೋರಾಟಗಾರರನ್ನು ವಿ.ಎಸ್ ಉಗ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ ಭೇಟಿ ಮಾಡಿದರು.

ಅಂತಾರಾಜ್ಯ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣ ನೀಡಿದ ತೀರ್ಪಿನಂತೆ ನೀರು ಬಳಸಿಕೊಳ್ಳುವುದು ಆಯಾ ಸರ್ಕಾರಗಳ ಜವಾಬ್ದಾರಿ. ಆದರೆ, ರಾಜ್ಯದ ಹಿತ ಕಾಪಾಡುವಲ್ಲಿ ವಿಳಂಬವಾಗುತ್ತಿದೆ ಎಂದರು.

ಇಲ್ಲಿ ಯಾವುದೇ ರಾಜಕಾರಣ ಮಾಡಲು ಬಂದಿಲ್ಲ. ತಮಿಳುನಾಡಿನಲ್ಲಿ ರೈತರ ಸಮಸ್ಯೆಗೆ ಆಡಳಿತ ಪಕ್ಷ, ವಿರೋಧ ಪಕ್ಷ ಹಾಗೂ ರಾಜ್ಯಪಾಲರು ಎಲ್ಲರೂ ಒಗ್ಗಟ್ಟಾಗಿ ಪ್ರಧಾನಿಗಳನ್ನು ಭೇಟಿಯಾಗುತ್ತಾರೆ. ಆದರೆ, ರಾಜ್ಯದಲ್ಲಿ ರೈತರು ಎಷ್ಟೇ ಹೋರಾಡಿದರೂ, ರಾಜಕೀಯ ಪಕ್ಷಗಳ ಬೆಂಬಲ ಸಿಗುವುದಿಲ್ಲ ಎಂದು ಹೋರಾಟಗಾರ ವೀರೇಶ್ ಸೊಬರದಮಠ ಬೇಸರ ವ್ಯಕ್ತಪಡಿಸಿದರು.

Intro:
ಮಹಾದಾಯಿ ಹೋರಾಟಗಾರರನ್ನು ಭೇಟಿ ಮಾಡಿದ ಉಗ್ರಪ್ಪ- ರಾಜ್ಯಪಾಲರನ್ನು ಭೇಟಿ ಮಾಡಿಸುವ ಭರವಸೆ

ಬೆಂಗಳೂರು- ಎರಡನೇ ದಿನದ ಅಹೋರಾತ್ರಿ ಧರಣಿ ಕುಳಿತಿರುವ ಮಹಾದಾಯಿ ಹೋರಾಟಗಾರರನ್ನು ನಗರದ ರೈಲ್ವೇ ನಿಲ್ದಾಣದ ಧರಣಿ ಸ್ಥಳಕ್ಕೆ ಬಂದು ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ, ಮಾಜಿ ಮೇಯರ್ ರಾಮಚಂದ್ರಪ್ಪ ಭೇಟಿ ಮಾಡಿದರು.
ರೈತರ ಜೊತೆ ಹತ್ತು ನಿಮಿಷಗಳ ಕಾಲ ಕುಳಿತು ಮಾತನಾಡಿದ ವಿ.ಎಸ್ ಉಗ್ರಪ್ಪ ಅವರು, ಸೌಜನ್ಯಕ್ಕಾಗಿ ಭೇಟಿ ಮಾಡಿದ್ದೇವೆ. ನಾವೂ ನಿಮ್ಮ ಜೊತೆಗಿದ್ದೇವೆ. ನಾವು ರೈತರ ಪರ ಇರಲು ಪ್ರಯತ್ನಿಸುತ್ತೇವೆ‌. ಇಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ರಾಜ್ಯಪಾಲರನ್ನು ಭೇಟಿ ಮಾಡಿಸಲು ಪ್ರಯತ್ನಿಸುತ್ತೇವೆ ಎಂದು ರೈತರಿಗೆ ಭರವಸೆ ನೀಡಿದರು.
ನಮ್ಮ ಉದ್ದೇಶ ರಾಜ್ಯಪಾಲರನ್ನು ಭೇಟಿ ಮಾಡುವುದಾಗಿದೆ. ನೀವು ರಾಜಕೀಯ ಪಕ್ಷದವರಿಂದ ಬಂದರೂ ಬೇಸರವಿಲ್ಲ‌ ಬಾರದಿದ್ದರೂ ಬೇಸರವಿಲ್ಲ ಎಂದರು. ಎಲ್ಲದೆ ತಮಿಳುನಾಡು ರಾಜ್ಯಗಳಲ್ಲಿ ರೈತರ ಸಮಸ್ಯೆಗೆ ಆಡಳಿತ ಪಕ್ಷ ವಿರೋಧ ಪಕ್ಷ ರಾಜ್ಯಪಾಲರು ಎಲ್ಲರೂ ಒಗ್ಗಟ್ಟಾಗಿ ಪ್ರಧಾನಿಗಳನ್ನು ಭೇಟಿಯಾಗ್ತಾರೆ. ಆದರೆ ರಾಜ್ಯದಲ್ಲಿ ರೈತರು ಎಷ್ಟೇ ಹೋರಾಡಿದರೂ, ರಾಜಕೀಯ ಪಕ್ಷಗಳ ಬೆಂಬಲ ಸಿಗುವುದಿಲ್ಲದು ವೀರೇಶ್ ಸೊಬರದಮಠ ಬೇಸರ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ, ವಿಎಸ್ ಉಗ್ರಪ್ಪ ಕಳಸಾ-ಬಂಡೂರಿ, ಮಹಾದಾಯಿ ಭಾಗದ ರೈತರು ನ್ಯಾಯಯುತವಾಗಿ ಹೋರಾಡುತ್ತಿದ್ದಾರೆ. ರಾಜ್ಯಪಾಲರ ಗಮನ ಸೆಳೆಯುವ ನಿಟ್ಟಿನಲ್ಲಿ ಧರಣಿ ನಡೆಸುತ್ತಿದ್ದಾರೆ. ಅಂತರರಾಜ್ಯದ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿದ ತೀರ್ಪಿನಂತೆ ನೀರು ಬಳಸಿಕೊಳ್ಳುವುದು ಆಯಾ ಸರ್ಕಾರಗಳ ಜವಾಬ್ದಾರಿ. ಆದರೆ ರಾಜ್ಯದ ಹಿತ ಕಾಪಾಡುವಲ್ಲಿ ವಿಳಂಬವಾಗುತ್ತಿದೆ ಎಂದರು.

ಆದರೆ ಮಹಾದಾಯಿ ನ್ಯಾಯಾಧಿಕರಣದ 2018 ರ ಆಗಸ್ಟ್ ತಿಂಗಳಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿದ್ದರೂ ಉತ್ತರ ಕರ್ನಾಟಕಕ್ಕೆ ನೀರು ಕೊಡಿಸುವಲ್ಲಿ ವಿಫಲವಾಗಿದೆ. ಇದೀಗ ರಾಜ್ಯ ಬಿಜೆಪಿ ಸರ್ಕಾರವೂ ವಿಫಲವಾಗಿರುವ ಹಿನ್ನಲೆ, ರೈತರು ರಾಜ್ಯಪಾಲರ ಮೊರೆ ಹೋಗಿದ್ದಾರೆ.

ಸೌಮ್ಯಶ್ರೀ..




Body:..


Conclusion:..

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.