ETV Bharat / state

ನಾವೆಲ್ಲರೂ ಒಂದಾಗಿ ಮೋದಿ ಕನಸನ್ನು ಮುರಿಯಬೇಕು: ಮಾರ್ಗರೇಟ್​​​ ಆಳ್ವಾ - etv bharat

ಧರ್ಮ, ರಾಜಕೀಯ, ಭಾಷೆಯನ್ನ ಕೆಡಿಸುತ್ತಿರುವ ಬಿಜೆಪಿಯನ್ನು ಸೋಲಿಸುವ ಮೂಲಕ ಮತ್ತೆ ಪ್ರಧಾನಿಯಾಗುವ ಆಸೆ ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ತಪ್ಪಿಸಬೇಕು ಎಂದು ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಒಗ್ಗಟ್ಟಿನ ಹೇಳಿಕೆ ನೀಡಿದ್ದಾರೆ.

ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ
author img

By

Published : Mar 13, 2019, 7:46 PM IST

ಬೆಂಗಳೂರು: ನಾವೆಲ್ಲರೂ ಒಂದಾಗಿ ಬಿಜೆಪಿಯನ್ನು ಸೋಲಿಸುವ ಮೂಲಕ ಮತ್ತೆ ಪ್ರಧಾನಿಯಾಗುವ ಆಸೆ ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಮುರಿಯಬೇಕು ಎಂದು ಕೇಂದ್ರ ಮಾಜಿಸಚಿವೆ ಮಾರ್ಗರೇಟ್ ಆಳ್ವಾ ಹೇಳಿದರು.

ಕಾಂಗ್ರೆಸ್ ಮಹಿಳಾ ಘಟಕದಿಂದ ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ಬರುವ ಚುನಾವಣೆಯಲ್ಲಿ ಧರ್ಮ, ರಾಜಕೀಯ, ಭಾಷೆಯನ್ನ ಕೆಡಿಸುತ್ತಿರುವ ಮೋದಿ, ಅನಂತ್​ಕುಮಾರ್ ಹೆಗಡೆ ಸೇರಿದಂತೆ ಬಿಜೆಪಿ ಪಕ್ಷವನ್ನು ಸೋಲಿಸಬೇಕು. ಮತ್ತೆ ಬಿಜೆಪಿ ಆಡಳಿತಕ್ಕೆ ಬಂದರೆ ಸಂವಿಧಾನವನ್ನೇ ಹಾಳು ಮಾಡುತ್ತಾರೆ. ಐದು ವರ್ಷ ಇದ್ದುಕೊಂಡು ರಾಮ ಮಂದಿರದತ್ತ ತಲೆಯೂ ಹಾಕಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮ ನೆನಪಾದನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮಹಿಳಾ ಘಟಕದಿಂದ ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸರ್ಕಾರದ ವಿರುದ್ಧ ಮಾತನಾಡಿದವರೆಲ್ಲ ರಾಷ್ಟ್ರದ್ರೋಹಿಗಳಾಗುತ್ತಾರೆ. ಮೋದಿಗೆ ಜೈ ಜೈ ಅಂದರೆ ಮಾತ್ರ ದೇಶಪ್ರೇಮಿಗಳಾ ಎಂದು ಪ್ರಶ್ನಿಸಿದ ಮಾರ್ಗರೇಟ್ ಆಳ್ವಾ, ತಮ್ಮ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡೋ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದರು.

ಬೆಂಗಳೂರು: ನಾವೆಲ್ಲರೂ ಒಂದಾಗಿ ಬಿಜೆಪಿಯನ್ನು ಸೋಲಿಸುವ ಮೂಲಕ ಮತ್ತೆ ಪ್ರಧಾನಿಯಾಗುವ ಆಸೆ ಇಟ್ಟುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಮುರಿಯಬೇಕು ಎಂದು ಕೇಂದ್ರ ಮಾಜಿಸಚಿವೆ ಮಾರ್ಗರೇಟ್ ಆಳ್ವಾ ಹೇಳಿದರು.

ಕಾಂಗ್ರೆಸ್ ಮಹಿಳಾ ಘಟಕದಿಂದ ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ಬರುವ ಚುನಾವಣೆಯಲ್ಲಿ ಧರ್ಮ, ರಾಜಕೀಯ, ಭಾಷೆಯನ್ನ ಕೆಡಿಸುತ್ತಿರುವ ಮೋದಿ, ಅನಂತ್​ಕುಮಾರ್ ಹೆಗಡೆ ಸೇರಿದಂತೆ ಬಿಜೆಪಿ ಪಕ್ಷವನ್ನು ಸೋಲಿಸಬೇಕು. ಮತ್ತೆ ಬಿಜೆಪಿ ಆಡಳಿತಕ್ಕೆ ಬಂದರೆ ಸಂವಿಧಾನವನ್ನೇ ಹಾಳು ಮಾಡುತ್ತಾರೆ. ಐದು ವರ್ಷ ಇದ್ದುಕೊಂಡು ರಾಮ ಮಂದಿರದತ್ತ ತಲೆಯೂ ಹಾಕಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮ ನೆನಪಾದನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮಹಿಳಾ ಘಟಕದಿಂದ ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸರ್ಕಾರದ ವಿರುದ್ಧ ಮಾತನಾಡಿದವರೆಲ್ಲ ರಾಷ್ಟ್ರದ್ರೋಹಿಗಳಾಗುತ್ತಾರೆ. ಮೋದಿಗೆ ಜೈ ಜೈ ಅಂದರೆ ಮಾತ್ರ ದೇಶಪ್ರೇಮಿಗಳಾ ಎಂದು ಪ್ರಶ್ನಿಸಿದ ಮಾರ್ಗರೇಟ್ ಆಳ್ವಾ, ತಮ್ಮ ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡೋ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದರು.

Intro:Body:

ಕೆಪಿಸಿಸಿ ಕಚೇರಿಯಲ್ಲಿ ಸಂಭ್ರಮದ ಮಹಿಳಾ ದಿನಾಚರಣೆ





ಬೆಂಗಳೂರು: ನಗರದ ಕೆಪಿಸಿಸಿ ಕಚೇರಿಯಲ್ಲಿ ಇಂದು ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.



ಕಾಂಗ್ರೆಸ್ ಮಹಿಳಾ ಘಟಕದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ,ಸಚಿವೆ ಜಯಮಾಲಾ, ಮೇಯರ್ ಗಂಗಾಬಿಕೆ,ಪುಷ್ಪಾ ಅಮರನಾಥ, ಮಾಜಿ ಸಚಿವೆ ರಾಣಿ ಸತೀಶ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ಸನ್ಮಾನ ಮಾಡಲಾಯಿತು.



ಸಮಾರಂಭದಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ, ನಾವೆಲ್ಲರೂ ಒಂದಾಗಿ ಬಿಜೆಪಿಯನ್ನ ಸೋಲಿಸಬೇಕು. ಅದಕ್ಕಾಗಿ ನಾವೆಲ್ಲ ಕೆಲಸ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯನ್ನ ಸೋಲಿಸಬೇಕು. ಅನಂತ್ ಕುಮಾರ್ ಹೆಗಡೆಯಂತವರನ್ನ ಸೋಲಿಸಬೇಕು. ಧರ್ಮ,ರಾಜಕೀಯ,ಭಾಷೆಯನ್ನ ಕೆಡಿಸುತ್ತಿದ್ದಾರೆ. ಮತ್ತೆ ಬಿಜೆಪಿ ಬಂದರೆ ಸಂವಿಧಾನವನ್ನೇ ಹಾಳುಮಾಡ್ತಾರೆ. ಐದು ವರ್ಷ ಇದ್ರಲ್ಲಾ ಯಾಕೆ ರಾಮಮಂದಿರ ಕಟ್ಟಲಿಲ್ಲ. ನಿಮಗೆ ಯಾಕೆ ರಾಮ ನೆನಪಿಗೆ ಬರಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಮ ನೆನಪಾದನೇ ಎಂದು ಆಕ್ರೋ ವ್ಯಕ್ತಪಡಿಸಿದರು.



ಸರ್ಕಾರದ ವಿರುದ್ಧ ಮಾತನಾಡಿದರೂ ರಾಷ್ಟ್ರದ್ರೋಹಿಗಳು. ಮೋದಿ ಜೈ ಜೈ ಅಂದರೆ ಮಾತ್ರ ದೇಶಪ್ರೇಮಿಗಳು. ಹೀಗಾಗಿ ನಾವೆಲ್ಲರೂ ಒಟ್ಟಾಗಬೇಕಿದೆ. ಬಿಜೆಪಿಯನ್ನ ಅಧಿಕಾರದಿಂದ ಕೆಳಗಿಳಿಸಬೇಕಿದೆ ಎಂದರು.



ಉತ್ತರ ಕನ್ನಡ ಬಿಡುವುದು ಬೇಡ



ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಜೆಡಿಎಸ್ ಗೆ ಬಿಟ್ಟುಕೊಡೋ ವಿಚಾರ ಮಾಜಿ ರಾಜ್ಯಪಾಲೆ  ಮಾರ್ಗರೇಟ್ ಆಳ್ವ ವಿರೋಧ ವ್ಯಕ್ತಪಡಿಸಿದರು. ಉತ್ತರ ಕನ್ನಡವನ್ನು ಬಿಟ್ಟುಕೊಡಲು ದೇಶಪಾಂಡೆ ಹಾಗೂ ನನ್ನ  ವಿರೋಧವಿದೆ. ಜೆಡಿಎಸ್ ಗೆ . ದಲ್ಲಿ  ಓಟ್  ಶೇರಿಂಗ್  ಲ್ಲ. ಕಾಂಗ್ರೆಸ್ ಗೆ ಓಟ್ ಶೇರಿಂಗ್ ಬಿಜೆಪಿಗಿಂತ ಸ್ವಲ್ಪ ಕಡಿಮೆ. ಅದಕ್ಕೆ ಕ್ಷೇತ್ರ ಬಿಟ್ಟುಕೊಡಬಾರದು ಅಂದಿದ್ದೇವೆ. ನಮ್ಮ ಅಭಿಪ್ರಾಯವನ್ನು ತಿಳಿಸಿದ್ದೇವೆ . ಬಿಟ್ಟು ಕೊಡೋದು ಬಿಡೋದು ಪಕ್ಷದ ನಿರ್ಧಾರ. ಕಾಂಗ್ರೆಸ್ ನ್ನು ಉತ್ತರ ಕನ್ನಡದಲ್ಲಿ ಮುಗಿಸಿಕೊಳ್ಳ ಬೇಕಾದರೆ ಜೆಡಿಎಸ್ ಗೆ  ಕೊಟ್ಟು ಬಿಡಿ ಎಂದು ಹೇಳಿದ್ದೇನೆ ಎಂದರು.



ವರಿಷ್ಠರ ನಿರ್ಧಾರಕ್ಕೆ ಬದ್ಧ



ಕೆಪಿಸಿಸಿಯಲ್ಲಿ ಸಚಿವೆ ಜಯಮಾಲ ಮಾತನಾಡಿ, ಪಕ್ಷದಲ್ಲಿ ಮಹಿಳೆಯರಿಗೆ ಟಿಕೇಟ್ ನೀಡುವ ವಿಚಾರ ಪ್ರಸ್ತಾಪವಾಗಿದೆ. ಪಕ್ಷದ ವರಿಷ್ಠರು ಏನು ನಿರ್ಧಾರ ಮಾಡುತ್ತಾರೊ ಅದಕ್ಕೆ ನಾವು ಬದ್ದರಾಗಿರುತ್ತೇವೆ. ತುಂಬಾ ಹೆಣ್ಣು ಮಕ್ಕಳು ಕೇಳುತ್ತಾರೆ ಜೊತೆಗೆ ಗೆಲ್ಲೊದು ಬಹಳ ಮುಖ್ಯ ಆಗುತ್ತೆ. ಇದೊಂದು ನಮಗೆ ನಿರ್ಣಾಯಕವಾದಂತ್ತದ್ದು, ನಮ್ಮ ಮೂಲ ಉದ್ದೇಶಕ್ಕೆ ಯಾವುದೇ ತೊಂದರೆ ಬರದಿದ್ದಾಗ ಗೆಲ್ಲುವ ಅಭ್ಯರ್ಥಿಗಳಿ ಟಿಕೇಟ್ ಕೊಟ್ಟೆ ಕೊಡುತ್ತಾರೆ. ಉಡುಪಿ ಚಿಕ್ಕಮಗಳೂರು ಕೂಡ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದರು.




Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.