ಆನೇಕಲ್: ಕೆಲಸ ಮಾಡುವ ಸಮಯದಲ್ಲಿ ವಿದ್ಯುತ್ ತಂತಿ ಮೇಲೆ ಆಯತಪ್ಪಿ ಬಿದ್ದು ಕಟ್ಟಡ ಕೂಲಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಆನೇಕಲ್ ಉಪವಿಭಾದ ಜಿಗಣಿಯಲ್ಲಿ ನಡೆದಿದೆ.
![Wage labour died](https://etvbharatimages.akamaized.net/etvbharat/prod-images/12337472_thumjpg.jpg)
ತಮಿಳುನಾಡು ಮೂಲದ ಪುದುಕೋಟೆ ನಿವಾಸಿ ವಿಜಯ್ ಕುಮಾರ್ ಸಾವನ್ನಪ್ಪಿದ ಕಟ್ಟಡ ಕಾರ್ಮಿಕ. ಈತ ರಾಜಾಪುರದ ಶಿವಕುಮಾರ್ ಎಂಬುವವರ ಕಟ್ಟಡದ ಪ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದರು. ಈ ವೇಳೆ ಕಟ್ಟಡದ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ಮೇಲೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಹಾಗೂ ಬೆಸ್ಕಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.