ETV Bharat / state

SSLC, PUC ರಿಪೀಟರ್ಸ್‌ನ ಪರೀಕ್ಷೆ ಇಲ್ಲದೆ ಪಾಸ್ ಮಾಡಿ: ಸಚಿವರ ಮನೆ ಮುಂದೆ ವಾಟಾಳ್ ಪ್ರತಿಭಟನೆ - ವಾಟಾಳ್ ಣಾಗರಾಜ್ ಪ್ರತಿಭಟನೆ ಸುದ್ದಿ

ಎಸ್ಎಸ್ಎಲ್​ಸಿ ಹಾಗು ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಸಹ ಪಾಸ್ ಮಾಡಿ. ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗು ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪರೀಕ್ಷೆಗಳಿಲ್ಲದೆ ಪಾಸ್ ಮಾಡಬೇಕೆಂದು ವಾಟಾಳ್‌ ನಾಗರಾಜ್ ಆಗ್ರಹಿಸಿದರು.

ಮಿನಿಸ್ಟರ್ ಮನೆ ಮುಂದೆ ವಾಟಾಳ್ ಪ್ರತಿಭಟನೆ
ಮಿನಿಸ್ಟರ್ ಮನೆ ಮುಂದೆ ವಾಟಾಳ್ ಪ್ರತಿಭಟನೆ
author img

By

Published : Jun 6, 2021, 1:24 PM IST

Updated : Jun 6, 2021, 2:27 PM IST

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಈ ನಡುವೆ ಎಸ್ಎಸ್ಎಲ್​ಸಿ, ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟಿಸಿದರು.

ಸಚಿವರ ಮನೆ ಮುಂದೆ ವಾಟಾಳ್ ಪ್ರತಿಭಟನೆ

ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಮುಂದೆ ಮುಷ್ಕರ ನಡೆಸಿದ ಅವರು, ಪಿಯುಸಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪಾಸ್ ಮಾಡಿದ್ದೀರಿ. ಎಸ್ಎಸ್ಎಲ್​ಸಿ ಮಕ್ಕಳಿಗೆ ಬೇರೇ ಆರೋಗ್ಯ ಇದೆಯೇ? ಎಸ್ಎಸ್ಎಲ್​ಸಿ ಹಾಗು ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಸಹ ಪಾಸ್ ಮಾಡಿ. ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಹಾಗು ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನ ಪರೀಕ್ಷೆಗಳಿಲ್ಲದೆ ಪಾಸ್ ಮಾಡಬೇಕೆಂದು ಆಗ್ರಹಿಸಿದರು.

ನನ್ನೊಬ್ಬನಿಗೆ ಎಷ್ಟು ಮಂದಿ ಪೊಲೀಸರಾ?:

ಇನ್ನು ಸಚಿವರ ಮನೆ ಮುಂದೆ ಪ್ರತಿಭಟಿಸಲು ಹೋಗಿದ್ದ ವಾಟಾಳ್ ನಾಗರಾಜ್ ಅವರಿಗೆ ಶಾಕ್ ಆಯ್ತು. ಕಾರಣ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಅವರು ಒಬ್ಬರೇ, ಆದರೆ ಅವರಿಗಾಗಿ ಬಂದಿದ್ದು ಒಂದ್ ಇಡೀ ಪೊಲೀಸ್ ತಂಡ. ಇದನ್ನ ಕಂಡ ವಾಟಾಳ್ ನಗುತ್ತಲೇ, "ನನ್ನೊಬ್ಬನಿಗಾಗಿ ಇಷ್ಟು ಮಂದಿ ಪೊಲೀಸರು ಬರುವ ಅವಶ್ಯಕತೆ ಇಲ್ಲ, ಇದೇನು ಹುಡುಕಾಟವೇ ಅಂತ ಕಾಲೆಳೆದರು‌‌. ನಾನು ಸಚಿವರ ಮನೆ ಮುಂದೆ ಚಳುವಳಿ ಮಾಡ್ತಿನಿ ಅಷ್ಟೇ ಮನೆಯೊಳಗೆ ಹೋಗಲ್ಲ. ಇಷ್ಟೊಂದು ಮಂದಿ ಬಂದ್ದೀರಿ ನೋಡಿ ಖುಷಿ ಆಯ್ತು ಬಿಡಿ" ಅಂತ ಅಂದರು.

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಉಲ್ಬಣಗೊಂಡ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಈ ನಡುವೆ ಎಸ್ಎಸ್ಎಲ್​ಸಿ, ದ್ವಿತೀಯ ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟಿಸಿದರು.

ಸಚಿವರ ಮನೆ ಮುಂದೆ ವಾಟಾಳ್ ಪ್ರತಿಭಟನೆ

ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿವಾಸದ ಮುಂದೆ ಮುಷ್ಕರ ನಡೆಸಿದ ಅವರು, ಪಿಯುಸಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪಾಸ್ ಮಾಡಿದ್ದೀರಿ. ಎಸ್ಎಸ್ಎಲ್​ಸಿ ಮಕ್ಕಳಿಗೆ ಬೇರೇ ಆರೋಗ್ಯ ಇದೆಯೇ? ಎಸ್ಎಸ್ಎಲ್​ಸಿ ಹಾಗು ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಸಹ ಪಾಸ್ ಮಾಡಿ. ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಆರೋಗ್ಯದ ಹಿತ ದೃಷ್ಟಿಯಿಂದ ಹಾಗು ಪಿಯುಸಿ ರಿಪೀಟರ್ಸ್ ವಿದ್ಯಾರ್ಥಿಗಳನ್ನ ಪರೀಕ್ಷೆಗಳಿಲ್ಲದೆ ಪಾಸ್ ಮಾಡಬೇಕೆಂದು ಆಗ್ರಹಿಸಿದರು.

ನನ್ನೊಬ್ಬನಿಗೆ ಎಷ್ಟು ಮಂದಿ ಪೊಲೀಸರಾ?:

ಇನ್ನು ಸಚಿವರ ಮನೆ ಮುಂದೆ ಪ್ರತಿಭಟಿಸಲು ಹೋಗಿದ್ದ ವಾಟಾಳ್ ನಾಗರಾಜ್ ಅವರಿಗೆ ಶಾಕ್ ಆಯ್ತು. ಕಾರಣ, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಅವರು ಒಬ್ಬರೇ, ಆದರೆ ಅವರಿಗಾಗಿ ಬಂದಿದ್ದು ಒಂದ್ ಇಡೀ ಪೊಲೀಸ್ ತಂಡ. ಇದನ್ನ ಕಂಡ ವಾಟಾಳ್ ನಗುತ್ತಲೇ, "ನನ್ನೊಬ್ಬನಿಗಾಗಿ ಇಷ್ಟು ಮಂದಿ ಪೊಲೀಸರು ಬರುವ ಅವಶ್ಯಕತೆ ಇಲ್ಲ, ಇದೇನು ಹುಡುಕಾಟವೇ ಅಂತ ಕಾಲೆಳೆದರು‌‌. ನಾನು ಸಚಿವರ ಮನೆ ಮುಂದೆ ಚಳುವಳಿ ಮಾಡ್ತಿನಿ ಅಷ್ಟೇ ಮನೆಯೊಳಗೆ ಹೋಗಲ್ಲ. ಇಷ್ಟೊಂದು ಮಂದಿ ಬಂದ್ದೀರಿ ನೋಡಿ ಖುಷಿ ಆಯ್ತು ಬಿಡಿ" ಅಂತ ಅಂದರು.

Last Updated : Jun 6, 2021, 2:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.