ETV Bharat / state

ಜಾಮೀನು ಕೊಡಿಸಿದ ವಕೀಲರಿಗೆ ಫೀಸ್​​​​ ಕಟ್ಟಲು ಮತ್ತೆ ಕಳ್ಳತನ: ಖದೀಮರು ಅಂದರ್​​​​​!

ವಕೀಲರ ಫೀಸ್ ಕಟ್ಟಲು ಮತ್ತೆ ಕಳ್ಳತನಕ್ಕಿಳಿದ ಖದೀಮರನ್ನು ಬೆಂಗಳೂರಿನ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

author img

By

Published : Aug 2, 2019, 2:05 PM IST

thieves

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಜಾಮೀನು ಕೊಡಿಸಿದ ವಕೀಲರ ಫೀಸ್ ಕಟ್ಟಲು ಮತ್ತೆ ಕಳ್ಳತನಕ್ಕಿಳಿದ ಖದೀಮರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಸಯ್ಯದ್ ಇಮ್ರಾನ್ ಅಲಿಯಾಸ್​ ಕಾಲು, ವಸೀಮ್ ಅಕ್ರಮ್ ಅಲಿಯಾಸ್​ ಬ್ಲೇಡ್ ವಸೀಮ್ ಎಂಬುರವನ್ನು ಮನೆಗಳ್ಳತನ ಆರೋಪದ ಮೇಲೆ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳಿಬ್ಬರು ಈ ಹಿಂದೆ ಹಲವು ಕಡೆ ಮನೆಗಳ್ಳತನ ಮಾಡಿ ಜೈಲಿಗೆ ಸೇರಿದ್ರು. ಆಗ ಇವರಿಗೆ ವಕೀಲರೊಬ್ಬರು ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ್ರು. ವಕೀಲರಿಗೆ ಋಣವಾಗಿ ಫೀಸ್​ ಕಟ್ಟಲಾಗದೆ, ಇಬ್ಬರೂ ಮತ್ತೆ ಕಳ್ಳನತಕ್ಕಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೋರಮಂಗಲ, ಆಡುಗೋಡಿ, ತಿಲಕ್‌ನಗರ, ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ‌ ಮನೆಗಳ್ಳತನ ಮಾಡಿ, ಅದರಿಂದ ಬಂದ ಹಣದಲ್ಲಿಯೇ ವಕೀಲರ ಫೀಸ್​ ಕಟ್ಟಿದ್ದರು ಎಂದು ಹೇಳಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಜಾಮೀನು ಕೊಡಿಸಿದ ವಕೀಲರ ಫೀಸ್ ಕಟ್ಟಲು ಮತ್ತೆ ಕಳ್ಳತನಕ್ಕಿಳಿದ ಖದೀಮರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.

ಸಯ್ಯದ್ ಇಮ್ರಾನ್ ಅಲಿಯಾಸ್​ ಕಾಲು, ವಸೀಮ್ ಅಕ್ರಮ್ ಅಲಿಯಾಸ್​ ಬ್ಲೇಡ್ ವಸೀಮ್ ಎಂಬುರವನ್ನು ಮನೆಗಳ್ಳತನ ಆರೋಪದ ಮೇಲೆ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿಗಳಿಬ್ಬರು ಈ ಹಿಂದೆ ಹಲವು ಕಡೆ ಮನೆಗಳ್ಳತನ ಮಾಡಿ ಜೈಲಿಗೆ ಸೇರಿದ್ರು. ಆಗ ಇವರಿಗೆ ವಕೀಲರೊಬ್ಬರು ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ್ರು. ವಕೀಲರಿಗೆ ಋಣವಾಗಿ ಫೀಸ್​ ಕಟ್ಟಲಾಗದೆ, ಇಬ್ಬರೂ ಮತ್ತೆ ಕಳ್ಳನತಕ್ಕಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೋರಮಂಗಲ, ಆಡುಗೋಡಿ, ತಿಲಕ್‌ನಗರ, ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ‌ ಮನೆಗಳ್ಳತನ ಮಾಡಿ, ಅದರಿಂದ ಬಂದ ಹಣದಲ್ಲಿಯೇ ವಕೀಲರ ಫೀಸ್​ ಕಟ್ಟಿದ್ದರು ಎಂದು ಹೇಳಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

Intro:ಜಾಮೀನು ಕೊಡಿಸಿದ ವಕೀಲರ ಫೀಜ್ ಕಟ್ಟಲು ಕಳ್ಳತನನ
ಇದೀಗ ಖದೀಮರು ಪೊಲೀಸರ ಅತಿಥಿ

ಜಾಮೀನು ಕೊಡಿಸಿದ ವಕೀಲರಿಗೆ ಫೀಜ್ ಕಟ್ಟಲು ಆಗದೇ ಮನೆಗಳ್ಳತ ಮಾಡುತ್ತಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಕೋರಮಂಗಲ ಪೊಲೋಸರು ಯಶಸ್ವಿಯಾಗಿದ್ದಾರೆ.ಸಯ್ಯದ್ ಇಮ್ರಾನ್@ಕಾಲು, ವಸೀಮ್ ಅಕ್ರಮ್ @ಬ್ಲೇಡ್ ವಸೀಮ್ ಬಂಧಿತ‌ ಆರೋಪಿಗಳು

ಆರೋಪಿಗಳಿಬ್ಬರು ಸೇರಿ ಈ ಹಿಂದೆ ಹಲವು ಕಡೆ ಮನೆಗಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ರು. ಹೀಗಾಗಿ ಇವ್ರಿಗೆ
ಜಾಮೀನಿನ ಮೂಲಕ ವಕೀಲ ಆರೋಪಿಗಳನ್ನ ಬಿಡುಗಡೆ ಮಾಡಿಸಿದ್ರು.

ಹೀಗಾಗಿ ಕಳ್ಳತನ ಪ್ರಕರಣಗಳಲ್ಲಿ ಜಾಮೀನು ಕೊಡಿಸಿದ್ದ ವಕೀಲರಿಗೆ ಫೀಜ್ ಕಟ್ಟಲಾಗದೇ ಒದ್ದಾಡುತ್ತಿದ್ದ ಆರೋಪಿಗಳು ಕಷ್ಟದಲ್ಲಿದ್ದಾಗ ಕೈ ಹಿಡಿದ ವಕೀಲರ ಋಣ ತಿರಿಸಿಲು ಮತ್ತೆ ಹಳೆ ಚಾಳಿ ಮುಂದುವರಿಸಿ ಖದೀಮರು ಕೋರಮಂಗಲ,ಆಡುಗೋಡಿ,ತಿಲಕ್‌ನಗರ ,ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ‌ ಮನೆಗಳ್ಳತನ ಮಾಡಿ ಕಳ್ಳತನದಲ್ಲಿ ಸಿಕ್ಕಾ ಚಿನ್ನಾಭರಣ ಮಾರಿ ವಕೀಲರ ಫೀಜ್ ಕಟ್ಟಿ ಉಳಿದ ಹಣ ತಮ್ಮ ದುಶ್ಚಟಗಳಿಗೆ ಬಳಿಸಿಕೊಂಡಿದ್ದಾರೆ..

ಇದೀಗ ಖಚಿತ ಮಾಹಿತಿ ಮೇರೆಗೆ ಕೋರಮಂಗಲ ಪೊಲಿಸರು ಬಂಧಿಸಿ‌ 6ಕ್ಕೂ ಹೆಚ್ಚು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದ ಕಳ್ಳತನ ಪ್ರಕರಣ ಪತ್ತೆ‌ಮಾಡಿ 8ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ಜಪ್ತಿ ಮಾಡಿ ಕೋರಮಂಗಲ‌ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.Body:KN_BNG_03_HOMATHEFT_7204498Conclusion:ಜಾಮೀನು ಕೊಡಿಸಿದ ವಕೀಲರ ಫೀಜ್ ಕಟ್ಟಲು ಕಳ್ಳತನನ
ಇದೀಗ ಖದೀಮರು ಪೊಲೀಸರ ಅತಿಥಿ

ಜಾಮೀನು ಕೊಡಿಸಿದ ವಕೀಲರಿಗೆ ಫೀಜ್ ಕಟ್ಟಲು ಆಗದೇ ಮನೆಗಳ್ಳತ ಮಾಡುತ್ತಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಕೋರಮಂಗಲ ಪೊಲೋಸರು ಯಶಸ್ವಿಯಾಗಿದ್ದಾರೆ.ಸಯ್ಯದ್ ಇಮ್ರಾನ್@ಕಾಲು, ವಸೀಮ್ ಅಕ್ರಮ್ @ಬ್ಲೇಡ್ ವಸೀಮ್ ಬಂಧಿತ‌ ಆರೋಪಿಗಳು

ಆರೋಪಿಗಳಿಬ್ಬರು ಸೇರಿ ಈ ಹಿಂದೆ ಹಲವು ಕಡೆ ಮನೆಗಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ರು. ಹೀಗಾಗಿ ಇವ್ರಿಗೆ
ಜಾಮೀನಿನ ಮೂಲಕ ವಕೀಲ ಆರೋಪಿಗಳನ್ನ ಬಿಡುಗಡೆ ಮಾಡಿಸಿದ್ರು.

ಹೀಗಾಗಿ ಕಳ್ಳತನ ಪ್ರಕರಣಗಳಲ್ಲಿ ಜಾಮೀನು ಕೊಡಿಸಿದ್ದ ವಕೀಲರಿಗೆ ಫೀಜ್ ಕಟ್ಟಲಾಗದೇ ಒದ್ದಾಡುತ್ತಿದ್ದ ಆರೋಪಿಗಳು ಕಷ್ಟದಲ್ಲಿದ್ದಾಗ ಕೈ ಹಿಡಿದ ವಕೀಲರ ಋಣ ತಿರಿಸಿಲು ಮತ್ತೆ ಹಳೆ ಚಾಳಿ ಮುಂದುವರಿಸಿ ಖದೀಮರು ಕೋರಮಂಗಲ,ಆಡುಗೋಡಿ,ತಿಲಕ್‌ನಗರ ,ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ‌ ಮನೆಗಳ್ಳತನ ಮಾಡಿ ಕಳ್ಳತನದಲ್ಲಿ ಸಿಕ್ಕಾ ಚಿನ್ನಾಭರಣ ಮಾರಿ ವಕೀಲರ ಫೀಜ್ ಕಟ್ಟಿ ಉಳಿದ ಹಣ ತಮ್ಮ ದುಶ್ಚಟಗಳಿಗೆ ಬಳಿಸಿಕೊಂಡಿದ್ದಾರೆ..

ಇದೀಗ ಖಚಿತ ಮಾಹಿತಿ ಮೇರೆಗೆ ಕೋರಮಂಗಲ ಪೊಲಿಸರು ಬಂಧಿಸಿ‌ 6ಕ್ಕೂ ಹೆಚ್ಚು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದ ಕಳ್ಳತನ ಪ್ರಕರಣ ಪತ್ತೆ‌ಮಾಡಿ 8ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ಜಪ್ತಿ ಮಾಡಿ ಕೋರಮಂಗಲ‌ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.